X
ಹೋಮ್ ಚಲನಚಿತ್ರಗಳ ಒಳನೋಟ

ಸ್ನೇಹಿತ್ ಮಾತಿನಿಂದ ರೋಸಿ ಕಣ್ಣೀರು ಹಾಕಿದ ನಮ್ರತಾ: ಇತ್ತ ನೊಂದವರ ಗುಂಪಿನ ನಾಯಕನಾದ ಕಾರ್ತಿಕ್

Author Sowmya Bairappa | Published: Thursday, November 23, 2023, 01:30 PM [IST]

ಸದ್ಯ ಬಿಗ್‌ಬಾಸ್ ಮನೆಯಲ್ಲಿ ವರ್ತೂರು ಸಂತೋಷ್ ಆಕ್ಟಿವ್ ಆಗಿದ್ದಾರೆ. ಎಲ್ಲಾ ಟಾಸ್ಕ್‌ಗಳಲ್ಲೂ ಉತ್ತಮವಾಗಿ ಆಡುತ್ತಿದ್ದಾರೆ. ಕಳೆದ ಸಂಚಿಕೆಯಲ್ಲಿ ವರ್ತೂರು ಕಾಗೆ ಮತ್ತು ಕೋಗೊಲೆ ಕಥೆ ಹೇಳಿದ್ದಾರೆ. ಇದನ್ನು ಕೇಳಿದ ಕಾರ್ತಿಕ್ ಮಹೇಶ್‌ಗೆ ಸಿಕ್ಕಾಪಟ್ಟೆ ಗೊಂದಲ ಉಂಟಾಗಿದೆ. ಇತ್ತ ಸ್ನೇಹಿತ್ ವರ್ತನೆಯಿಂದ ರೋಸಿ, ನಮ್ರತಾ ಗೌಡ ಕಣ್ಣೀರು ಹಾಕಿದ್ದಾರೆ.


cover image
ವರ್ತೂರು ಸಂತೋಷ್ ಕಥೆ

ಕೋಗಿಲೆ ತನ್ನ ಮೊಟ್ಟೆಯನ್ನು ತೆಗೆದು ಕಾಗೆಯ ಗೂಡಲ್ಲಿಡುತ್ತದೆ. ಕಾಗೆ ಕಾವು ಕೊಟ್ಟು ಮರಿ ಮಾಡುತ್ತೆ. ಆ ಮರಿಯನ್ನು ಕಾಗೆಯೇ ದೊಡ್ಡ ಮಾಡುತ್ತೆ. ಆನಂತರದಲ್ಲಿ ಅದಕ್ಕೆ ನಿಜ ವಿಚಾರ ತಿಳಿಯುತ್ತೆ ಅಂತ ಕಾರ್ತಿಕ್ ಬಳಿ ಕಥೆ ಹೇಳಿದ್ದಾರೆ. ಇದನ್ನು ಕೇಳಿದ ಕಾರ್ತಿಕ್‌ಗೆ ಗೊಂದಲ ಉಂಟಾಗಿದ್ದು, ಸಂತೋಷ್ ತಮ್ಮನ್ನೇ ಉದ್ದೇಶಿಸಿ ಹೇಳಿದ ಕಥೆ ಅಂತ ಗೊತ್ತಾಗಿದೆ. ತಕ್ಷಣ ಅವರು ಇಲ್ಲಿ ಕಾಗೆ ಯಾರು? ಕೋಗಿಲೆ ಯಾರು ಅಂತ ಪ್ರಶ್ನೆ ಮಾಡಿದ್ದಾರೆ. 

 

ಸ್ನೇಹಿತ್‌ ಮಾತಿಗೆ ಕಣ್ಣೀರಿಟ್ಟ ನಮ್ರತಾ

ಬಿಗ್‌ಬಾಸ್ ಮನೆಯಲ್ಲಿ ಸ್ನೇಹಿತ್ ಅವರು ನಮ್ರತಾ ಅವರ ಜೊತೆ ಆಪ್ತತೆ ಬೆಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದು ಹಲವು ಬಾರಿ ನಮ್ರತಾಗೆ ಇರಿಟೇಷನ್ ಅನಿಸುತ್ತೆ. ಈ ಬಗ್ಗೆ ಅವರು ನೇರವಾಗಿ ಹೇಳಿದ್ದಿದೆ.. ಆದರೂ ಸ್ನೇಹಿತ್ ಅದನ್ನು ಮುಂದುವರೆಸುತ್ತಿದ್ದಾರೆ. ಇದೀಗ ಈ ವಿಷಯಕ್ಕೆ ನಮ್ರತಾ ಕಣ್ಣೀರು ಹಾಕುವ ಹಂತ ತಲುಪಿದೆ. ಸ್ಮೈಲ್ ಮಾಡ್ಕೊಂಡು ಎಲ್ಲರನ್ನೂ ಚಿಲ್ಲಾಗಿ ಗೆದುಕೊಳ್ಳುತ್ತಿದ್ದೇನೆ ಎಂದ ಮಾತ್ರಕ್ಕೆ ಎಲ್ಲವೂ ಸರಿಯಿದೆ ಎಂದಲ್ಲ ಎಂದು ನಮ್ರತಾ ಹೇಳಿದ್ದಾರೆ. ಅದಕ್ಕೆ ಸ್ನೇಹಿತ್, ನಾನು ಮಾತನಾಡುವುದನ್ನು ನಿಲ್ಲಿಸಬೇಕೆ? ನಿಮ್ಮಿಂದ ದೂರ ಹೋಗಲೇ ಅಂತ ಪ್ರಶ್ನಿಸಿದ್ದಾರೆ. ಅದಕ್ಕೆ ನಮ್ರತಾ, ನಿಮಗೆ ಬೇಕಾದಾಗ ನೀವು ಮಾತು ನಿಲ್ಲಿಸಬಹುದು. ನಿಮಗೆ ಬೇಕಾದಾಗ ನೀವು ಬ್ಲೇಮ್ ಮಾಡಬಹುದು. ಮೊದಲ ದಿನದಿಂದಲೂ ಇದನ್ನೂ ಮಾಡ್ತಿದ್ದೀರಿ ಅಂತ ಬೇಸರ ಹೊರಹಾಕಿದರು. 

 

ಒಂದು ತಿಂಗಳಲ್ಲಿ ಇದೆಲ್ಲಾ ಆಗಬೇಕು ಅಂದ್ರೆ ಆಗಲ್ಲ

ನಾವು ಒಬ್ಬರಿಗೊಬ್ಬರು ಹರ್ಟ್ ಮಾಡಿಕೊಳ್ಳುತ್ತಿದ್ದೇವೆ. ಕಾರ್ತುಕ್ ಹಾಗೂ ಸಂಗೀತಾ ಸಂಬಂಧದ ರೀತಿ ಟಾಕ್ಸಿಕ್ ಆಗುವ ಮೊದಲು ನಾವು ಇದನ್ನು ಸ್ಟಾಪ್ ಮಾಡಬೇಕು. ನಿಮಗೆ ನಿಜಕ್ಕೂ ಏನು ಬೇಕು ಎಂದು ನಮ್ರತಾ ಪ್ರಶ್ನಿಸಿದರು. ಅದಕ್ಕೆ ಸ್ನೇಹಿತ್, ನಿಮಗೆ ಯಾವಾಗಾದರೂ ಒನ್‌ ಸೈಡ್ ಲವ್ ಇತ್ತಾ? ಅಂತ ಮರು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ನಮ್ರತಾ, ನೀವು ನನ್ನನ್ನು ಲೈಕ್ ಮಾಡ್ತೀರಿ ಅನ್ನೋದು ಗೊತ್ತು. ನನಗೆ ಓಪನ್ ಆಗೋಕೆ ಸಮಯ ಬೇಕು. ಒಂದು ತಿಂಗಳಲ್ಲಿ ಇದೆಲ್ಲಾ ಆಗಬೇಕು ಅಂದ್ರೆ ಆಗಲ್ಲ ಅಂತ ಕಣ್ಣಲ್ಲಿ ನೀರು ತುಂಬಿಕೊಂಡರು. 

 

ನೊಂದವರ ಗುಂಪಿನ ನಾಯಕನಾದ ಕಾರ್ತಿಕ್

ಬಿಗ್‌ಬಾಸ್ ಮನೆಯಲ್ಲಿ ಸಂಗೀತಾ ಜೊತೆಗಿನ ಫ್ರೆಂಡ್‌ಶಿಪ್ ವಿಚಾರದಲ್ಲಿ ನೊಂದಿರುವ ಕಾರ್ತಿಕ್ ಅವರನ್ನು ತುಕಾಲಿ ಸಂತು ಹಾಗೂ ವರ್ತೂರು ಸಂತೋಷ್ ನೊಂದವರ ಗುಂಪಿನ ನಾಯಕನನ್ನಾಗಿ ಮಾಡಿದ್ದಾರೆ. ಈ ಹಿಂದೆ ತುಕಾಲಿ ಸಂತು, ವರ್ತೂರು ಹಾಗೂ ಪ್ರತಾಪ್ ಒಂದು ಗುಂಪು ಮಾಡಿಕೊಂಡಿದ್ದರು. ಆ ಗುಂಪಿಗೆ ಸುದೀಪ್ 'ನೊಂದವರ ಗುಂಪು' ಅಂತ ಹೆಸರಿಟ್ಟಿದ್ದರು. ಈ ಗುಂಪಿನಿಂದ ಡ್ರೋನ್ ಪ್ರತಾಪ್ ಹೊರಬಂದಿದ್ದರು. ಇದೀಗ ಕಾರ್ತಿಕ್ ಅವರನ್ನು ತಮ್ಮ ಗುಂಪಿಗೆ ಎಳೆದುಕೊಂಡಿರುವ ತುಕಾಲಿ ಸಂತು-ವರ್ತೂರು ಸಂತೋಷ್, ನಮಗಿಂತ ಜಾಸ್ತಿ ನೊಂದಿರೋದೇ ನೀನು. ನೊಂದು, ಬೆಂದು, ಬಳಲಿ ಬೆಂಡಗಿದ್ದೀಯಾ ಎಂದು ಹೇಳಿದರು. 

ಗುಂಪಿನಿಂದ ಹೊರಬಂದ ಪ್ರತಾಪ್

ಮೊದಲು ನೊಂದವರ ಗುಂಪಿನಲ್ಲಿ ತುಕಾಲಿ ಸಂತು, ವರ್ತೂರು ಸಂತೋಷ್ ಮತ್ತು ಡ್ರೋನ್ ಪ್ರತಾಪ್ ಇದ್ದರು. ಆದರೆ, ಪ್ರತಾಪ್ ಏಕಾಏಕಿ ಆ ಗುಂಪಿನಿಂದ ಹೊರ ಬಂದಿದ್ದರು. ಓಪನ್ ನಾಮಿನೇಷನ್ ಸಂದರ್ಭದಲ್ಲಿ ಎಷ್ಟೋ ಸಲ ಎಲ್ಲಾ ವಿಚಾರ ಸರಿ ಇರುತ್ತೆ. ಆದರೂ ತುಕಾಲಿ ಸಂತು ಅವರು ಇಲ್ಲದಿರುವ ವಿಚಾರವನ್ನು ಇಟ್ಟುಕೊಂಡು ಪದೇ-ಪದೇ ಎಲ್ಲರ ಮುಂದೆ ಮಾತಡ್ತಾರೆ. ಮಾತಾಡೋಕೆ ಅವಕಾಶ ಕೊಡಲ್ಲ. ಮಧ್ಯದಲ್ಲಿ ಇಂಟರಪ್ಟ್ ಮಾಡ್ತಾರೆ ಅಂತ ಹೇಳಿ ನಾಮಿನೇಟ್ ಮಾಡಿದ್ದರು. ಆ ಮೂಲಕ ಆ ಗುಂಪಿನಿಂದ ಹೊರಬಂದಿದ್ದರು.  

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+