X
ಹೋಮ್ ಚಲನಚಿತ್ರಗಳ ಒಳನೋಟ

ದ್ವೇಷ ಮರೆತು ಒಂದಾದ ಪ್ರತಾಪ್-ವಿನಯ್: ನಮ್ರತಾ ಜೊತೆ ಫ್ಲರ್ಟ್ ಮಾಡಿ ಜೋಕರ್ ಆದ್ರಾ ಕಾರ್ತಿಕ್?

Author Sowmya Bairappa | Published: Thursday, January 11, 2024, 11:16 AM [IST]

ಬಿಗ್‌ಬಾಸ್‌ ಮನೆಯಲ್ಲಿ ಯಾರು ಯಾವಾಗ ಸ್ನೇಹಿತರಾಗುತ್ತಾರೋ, ಯಾವಾಗ ಶತ್ರುಗಳಾಗುತ್ತಾರೆ ಎಂಬುದು ತಿಳಿಯುವುದಿಲ್ಲ. ಸ್ಪರ್ಧಿಗಳ ನಡುವೆ ಎಷ್ಟೇ ಮನಸ್ತಾಪವಿದ್ದರೂ ಅದರ ಆಯಸ್ಸು ಬಹಳ ಕಡಿಮೆಯಾಗಿರುತ್ತೆ. ಯಾಕೆಂದರೆ, ಟಾಸ್ಕ್‌ ಅಂತ ಬಂದಾಗ ಎಲ್ಲರೂ ಒಗ್ಗೂಡಬೇಕಾಗುತ್ತದೆ. ಈ ಬಾರಿ ದೊಡ್ಮನೆಯಲ್ಲಿ ದ್ವೇಷದ ಆಟ ತುಸು ಗಾಡವಾಗಿದೆ. ಅದರಲ್ಲೂ ಬಿಗ್‌ಬಾಸ್‌ ಪ್ರಾರಂಭದಿಂದಲೂ ವಿನಯ್ & ಸಂಗೀತಾ, ಪ್ರತಾಪ್ & ವಿನಯ್ ನಡುವೆ ಜಗಳಗಳು ನಡೆಯುತ್ತಲೇ ಇದ್ದವು. ಆದ್ರೀಗ ಫಿನಾಲೆ ಹಂತ ತಲುಪ್ಪುತ್ತಿದ್ದಂತೆ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ.


cover image
ದ್ವೇಷ ಮರೆತು ಒಂದಾದ ಪ್ರತಾಪ್-ವಿನಯ್

ಈ ವಾರದ ಆರಂಭದಲ್ಲಿ ಡ್ರೋನ್ ಪ್ರತಾಪ್ ಹಾಗೂ ವಿನಯ್ ನಡುವೆ ವಾಕ್ಸಮರ ನಡೆದಿತ್ತು. ವಿನಯ್ ಅವರು ಕೋಪದಲ್ಲಿ ಪ್ರತಾಪ್ ಮೇಲೆ ಅವಾಚ್ಯ ಶಬ್ಧಗಳನ್ನು ಬಳಸಿದ್ದರು. ಆದರೆ, ಕಳೆದ ಸಂಚಿಕೆಯಲ್ಲಿ ಇಬ್ಬರು ಅಕ್ಕ-ಪಕ್ಕ ಮಲಗಿಕೊಂಡು ಜೋರಾಗಿ ನಗುತ್ತಾ ಮಾತನಾಡುತ್ತಿದ್ದರು. ವಿನಯ್ ಇತರ ಸದಸ್ಯರ ಬಗ್ಗೆ ಏನೇನೋ ಜೋಕ್ ಹೇಳಿ ಪ್ರತಾಪ್‌ ಅವರನ್ನು ನಗಿಸುತ್ತಿದ್ದರು. ಪ್ರತಾಪ್ ನಾಯಕತ್ವದ ಟಾಸ್ಕ್ ಬಂದಾಗಲೂ ಸಹ ವಿನಯ್, ಪ್ರತಾಪ್ ಅವರನ್ನು ಆತ್ಮೀಯವಾಗಿ ತಬ್ಬಿಕೊಂಡು ತಮಗೆ ಅವಕಾಶ ಕೊಡುವಂತೆ ಕೇಳಿಕೊಂಡರು. ಬಳಿಕ ಟಾಸ್ಕ್ ಯಾರು ಗೆಲ್ಲುತ್ತಾರೆ ಎಂದು ಊಹಿಸುವಂತೆ ಬಿಗ್‌ಬಾಸ್‌ ಹೇಳಿದಾಗಲೂ ಸಹ ಪ್ರತಾಪ್ ಹೆಸರನ್ನೇ ತೆಗೆದುಕೊಂಡಿದ್ದರು. 

 

ಮತ್ತೆ ಚಿಗುರಿದ ಸ್ನೇಹ

ಇನ್ನು ಕಾರ್ತಿಕ್‌ ಜೊತೆ ಸ್ನೇಹ ಮುರಿದುಕೊಂಡಿದ್ದ ಸಂಗೀತಾ ಕೆಲ ವಾರಗಳಿಂದ ವಿನಯ್ ಜೊತೆ ಹೆಚ್ಚು ಆತ್ಮೀಯರಾಗಿದ್ದರು. ಆದರೆ, ಈವಾರ ಇಬ್ಬರೂ ಮತ್ತೆ ಗೆಳೆಯರಾದಂತಿದೆ,. ಇಬ್ಬರು ಸಹ ನಗುತ್ತಾ, ಪರಸ್ಪರ ಆತ್ಮೀಯ ಸ್ನೇಹಿತರಂತೆ ಮಾತನಾಡುತ್ತಾ ಇದ್ದದ್ದು ಕಂಡುಬಂತು. ಇದನ್ನೇ ನೋಡಿದ ಅಚ್ಚರಿಪಟ್ಟಿದ್ದಾರೆ.

 

'ಜೋಕರ್ ಅವನು'

ಇತ್ತೀಚೆಗೆ ನಮ್ರತಾ ಹಾಗೂ ಕಾರ್ತಿಕ್ ಹೆಚ್ಚು ಆತ್ಮೀಯರಾಗಿದ್ದಾರೆ. ನಮ್ರತಾ ತಮಗೆ ಕಾರ್ತಿಕ್ ಕಂಫರ್ಟ್ ಝೋನ್ ನೀಡಿದ್ದಾರೆ ಅಂತ ಹೇಳಿಕೊಂಡಿದ್ದಾರೆ. ಜೊತೆಗೆ ಅವರನ್ನು ಜೋಕರ್ ಅಂತಲೂ ಕರೆದಿದ್ದಾರೆ. ಈ ಬಗ್ಗೆ ವಿನಯ್ ಬಳಿ ಮಾತನಾಡಿದ ನಮ್ರತಾ, ಕಳೆದೊಂದು ವಾರದಿಂದ ಅಷ್ಟು ಸ್ಬೀಟ್ ಆಗಿ ಏಕೆ ಮಾತನಾಡುತ್ತಿದ್ದೀರಿ ಅಂತ ಕಾರ್ತಿಕ್ ಬಳಿ ಕೇಳಿದೆ. ಅವರು ನಿನ್ನ ಜೊತೆ ಸಮಯ ಕಳೆಯೋಕೆ ಖುಷಿಯಿದೆ ಅಂದರು. ಅದಕ್ಕೆ ವಿನಯ್, ಅವನು ಬರೀ ದೇಹ ಬೆಳಸಿಕೊಂಡು, ಹೂಸು ಬಿಟ್ಕೊಂಡು ಓಡಾಡ್ತಾ ಇರ್ತಾನೆ ಎಂದರು. ಆಗ ನಮ್ರತಾ, ಜೋಕರ್ ಅವನು ಎಂದಿದ್ದಾರೆ. 

 

ಫಿನಾಲೆಗೆ ಬರ್ತಾರ ಹಳ್ಳಿಕಾರ್ ಒಡೆಯ

ಈ ವಾರ ಟಿಕೆಟ್ ಟು ಫಿನಾಲೆ ಹೆಸರಿನಲ್ಲಿ ಸ್ಪರ್ಧಿಗಳಿಗೆ ವಿಭಿನ್ನ ಟಾಸ್ಕ್‌ಗಳನ್ನು ನೀಡಲಾಗುತ್ತಿದೆ. ಸ್ಪರ್ಧಿಗಳು ಆಡುವ ಟಾಸ್ಕ್ ಆಧರಿಸಿ ಅವರಿಗೆ ಪಾಯಿಂಟ್ಸ್‌ಗನ್ನು ಕೊಡಲಾಗುತ್ತಿದ್ದು, ಯಾರು ಹೆಚ್ಚು ಪಾಯಿಂಟ್ಸ್ ಪಡೆಯುತ್ತಾರೋ ಅವರು ಫಿನಾಲೆಗೆ ನೇರ ಪ್ರವೇಶ ಪಡೆಯಲಿದ್ದಾರೆ. ದೊಡ್ಮನೆಯಲ್ಲಿ ಹಲವು ಏರಿಳಿತ ಕಂಡಿರುವ ವರ್ತೂರು ಸಂತೋಷ್ ಫಿನಾಲೆಗೆ ಬರುತ್ತಿದ್ದಂತೆ ಯಾರು ಊಹಿಸದ ರೀತಿಯಲ್ಲಿ ಮುನ್ನುಗ್ಗುತ್ತಿದ್ದಾರೆ. ಎರಡೆರಡು ಟಾಸ್ಕ್ ಗೆದ್ದಿರುವ ವರ್ತೂರು ಸಂತೋಷ್, ಬುಧವಾರದ ಸಂಚಿಕೆಯಲ್ಲಿ ಒಂದು ಹಂತದಲ್ಲಿ ಹೆಚ್ಚು ಅಂಕ ಪಡೆದ ಸ್ಪರ್ಧಿಯಾಗಿದ್ದರು.

 

ವಿನಯ್ ಆಫರ್

ದೊಡ್ಮನೆಯಲ್ಲಿ ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿರುವ ವಿನಯ್ ಗೌಡ, ಯಾವುದೇ ಟಾಸ್ಕ್‌ ಆದರೂ ಮಾಡುತ್ತಾರೆ. ಈ ವಾರ ಕೆಟ್ ಟು ಫಿನಾಲೆ ಹೆಸರಿನಲ್ಲಿ ಸ್ಪರ್ಧಿಗಳಿಗೆ ವಿಭಿನ್ನ ಟಾಸ್ಕ್‌ಗಳನ್ನು ನೀಡಲಾಗುತ್ತಿದೆ. ಇದರ ಪ್ರಕಾರ, ಒಬ್ಬೊಬ್ಬರಿಗೆ ಒಂದೊಂದು ಟಾಸ್ಕ್‌ ನೀಡಲಾಗುತ್ತಿದ್ದು, ಆ ಸ್ಪರ್ಧಿ ತಮ್ಮ ಜೊತೆ ಆಡಲು ಮೂವರು ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಬೇಕು. ಈ ಸಂದರ್ಭ ಎಲ್ಲಾ ಸ್ಪರ್ಧಿಗಳ ತಮಗಿಂತ ಕಡಿಮೆ ವೀಕ್ ಇರುವ ಸದಸ್ಯರನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದು ವಿನಯ್ ಅವರಿಗೆ ಮುಳುವಾಗಿದೆ. ಹೀಗಾಗಿ, ಮನೆಯ ಸದಸ್ಯರಿಗೆ ಆಫರ್ ಒಂದನ್ನು ನೀಡಿದ್ದಾರೆ. ತನಿಷಾಗೆ ಮುದ್ಧಿಮತ್ಯೆ ಉಯೋಗಿಸಿ ಆಡುವ ಟಾಸ್ಕ್ ಬಂದಿತ್ತು. ಈ ಸಂದರ್ಭ ತಮ್ಮನ್ನು ಆಯ್ಕೆ ಮಾಡಿಕೊಂಡರೆ ಅಂಥವರಿಗೆ 100 ಪಾಯಿಂಟ್ಸ್ ಕೊಡಿಸಲು ಸಹಾಯ ಮಾಡಿ, ತಾವು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವುದಾಗಿ ಆಫರ್ ನೀಡಿದರು. ಆದರೆ, ಮ್ಯಾಚ್ ಫಿಕ್ಸಿಂಗ್ ಸಹವಾಸ ಬೇಡ ಅಂತ ಎಲ್ಲರೂ ಸುಮ್ಮನಾಗಿದ್ದಾರೆ. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+