X
ಹೋಮ್ ಚಲನಚಿತ್ರಗಳ ಒಳನೋಟ

ಮನಸ್ಸು ಬದಲಾಯಿಸದ ವರ್ತೂರು ಸಂತೋಷ್: ವೀಕ್ಷಕರಿಗೆ ಕ್ಷೇಮೆ ಕೇಳಿದ ಕಿಚ್ಚ ಸುದೀಪ್

Author Sowmya Bairappa | Published: Monday, November 13, 2023, 12:59 PM [IST]

ಬಿಗ್‌ಬಾಸ್ ಕನ್ನಡ ಸೀಸನ್ ೧೦ರ ಸ್ಪರ್ಧಿಯಾಗಿ ಬಂದಿದ್ದ ವರ್ತೂರು ಸಂತೋಷ್, ಅರ್ಧದಲ್ಲೇ ಕಾರ್ಯಕ್ರಮದಿಂದ ಹೊರಬರುವ ನಿರ್ಧಾರ ಮಾಡಿದ್ದಾರೆ. ಐದನೇ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದ ವರ್ತೂರು ಅವರನ್ನು ಪ್ರೇಕ್ಷಕರು ಲಕ್ಷಾಂತರ ವೋಟ್‌ಗಳನ್ನು ನೀಡಿ ಸೇಫ್ ಮಾಡಿದ್ದಾರೆ. ಆದರೂ ಕೂಡ ನಾನು ಹೋಗಲೇಬೇಕು ಎನ್ನುತ್ತಿರುವ ವರ್ತೂರು ಸಂತೋಷ್ ನಿರ್ಧಾರ ವೀಕ್ಷಕರ ಜೊತೆಗೆ ಸುದೀಪ್‌ಗೂ ಬೇಸರ ಮೂಡಿಸಿದೆ.


cover image
ವರ್ತೂರು ಸಂತೋಷ್  ಕಣ್ಣೀರು

ಐದನೇ ವಾರ ಬಿಗ್‌ಬಾಸ್‌ ಮನೆಯಿಂದ ಹೊರಹೋಗಲು 10ಮಂದಿ ನಾಮಿನೇಟ್ ಆಗಿದ್ದರು. ಈ ಪೈಕಿ ಒಬ್ಬೊಬ್ಬರಾಗಿಯೇ ಸೇಫ್ ಆಗುತ್ತಾ ಕೊನಡಯಲ್ಲಿ ವರ್ತೂರು ಸಂತೋಷ್, ಇಶಾನಿ ಹಾಗೂ ನೀತು ಉಳಿದುಕೊಂಡಿದ್ದರು. ಆದರೆ, ಸಂತೋಷ್ ಅವರನ್ನು ವೀಕ್ಷಕರು ವೋಟ್ ಹಾಕಿ ಸೇವ್ ಮಾಡಿದ್ದರು. ಆದರೂ ಕೂಡ ಸಂತೋಷ್ ಹೊರಗಡೆ ಒಂದು ಘಟನೆ ನಡೀತು. ಅದರಿಂದ ಹೊರಗಡೆ ಬಂದು ಗೇಮ್‌ ಮೇಲೆ ಗಮನ ಹರಿಸಲು ಆಗುತ್ತಿಲ್ಲ. ನಾನು ಹೊರಗಡೆ ಇರಬೇಕು ಅಂತ ಇಷ್ಟಪಡುತ್ತೇನೆ ಎಂದಿದ್ದಾರೆ. ಅದಕ್ಕೆ ಸುದೀಪ್, ವರ್ತೂರು ಅವರೇ ನಿಮಗೆ 34,15,472  ಮತಗಳು ಬಂದಿವೆ. ನಿಮ್ಮವರು ಹಾಗೂ ನಿಮ್ಮ ಕುಟುಂಬದವರೆಲ್ಲರೂ ಆರಾಮಗಿದ್ದಾರೆ. ಹೊರಗಡೆ ಯಾವ ಸಮಸ್ಯೆಯೂ ಇಲ್ಲ ಎಂದು ಅವರನ್ನು ಕನ್ವಿನ್ಸ್ ಮಾಡಿದ್ದಾರೆ. ಆದರೂ ಮನಸ್ಸು ಬದಲಿಸದ ವರ್ತೂರು, ನನಗೆ ಆಗ್ತಿಲ್ಲ ಅಣ್ಣ ಅಂತ ಕಣ್ಣೀರು ಹಾಕಿದ್ದಾರೆ. ಇದರಿಂದ ಬೇಸರಗೊಂಡ ಸುದೀಪ್ ಜನಗಳ ವಿರುದ್ಧವಾಗಿ ನಾನು ಹೋಗಿಲ್ಲ, ಹೋಗೋದು ಇಲ್ಲ ಎಂದು ಹೊರನಡೆದಿದ್ದಾರೆ. 

ನನ್ನ ಜೊತೆ ನಿಂತವರನ್ನು ಬಿಟ್ಟು, ನಾನಿಲ್ಲಿ ಸೇಫ್ ಆಗಿದ್ದೀನಿ

ಜನರಿಂದಲೇ ನಾನು ಈ ಮಟ್ಟಕ್ಕೆ ಬಂದಿದ್ದೇನೆ. ಅವರೇ ನನ್ನನ್ನು ಇಲ್ಲಿಗೆ ಕಳುಹಿಸಿದ್ದಾರೆ. ಅವರಿಗೆ ಧನ್ಯವಾದಗಳು. ಆದರೆ, ನನಗೆ ಇಲ್ಲಿರಲು ಆಗುತ್ತಿಲ್ಲ. ನಾನು ಬಿಗ್‌ಬಾಸ್‌ ಮನೆಗೆ ಮೊದಲು ಬಂದಾಗ ಇದ್ದ ಮನಸ್ಥಿತಿಗೂ, ಹೊರಗೆ ಹೋಗಿ ಬಂದಾಗ ಇರುವ ಮಸ್ಥಿತಿಗೂ ಸಾಕಷ್ಟು ವ್ಯತ್ಯಾಸವಾಗಿದೆ. ಹೊರಗಡೆ ಒಂದು ಘಟನೆ ನಡೆದ ನಂತರ ಇಲ್ಲಿಗೆ ಬಂದು ಆಡುವುದಕ್ಕೆ ಆಗುತ್ತಿಲ್ಲ. ನನ್ನ ಜೊತೆಗೆ ನಿಂತವರನ್ನು ಹೊರಗಡೆ ಬಿಟ್ಟು, ಇಲ್ಲಿ ಬಂದು ನಾನು ಸೇಫ್ ಆಗಿದ್ದೀನಿ ಅಂತ ನನಗೆ ಅನಿಸುತ್ತಿದೆ ಎಂದರು. 

 

ಕಿಚ್ಚನ ಕ್ಷಮೆ

ಸುದೀಪ್ ಅವರು ಎಷ್ಟೇ ಮನವೊಲಿಸಿದರೂ ವರ್ತೂರು ಸಂತೋಷ್ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿಲ್ಲ. ಇದರಿಂದ ಬೇಸರಗೊಂಡ ಕಿಚ್ಚ, ನಾಲ್ಕೈದು ಬಾರಿ ನಿಮ್ಮ ಕೊನೇ ನಿರ್ಧಾರವೇನು? ಅಂತ ಕೇಳಿದರು. ಆದರೂ ವರ್ತೂರು ಸಂತೋಷ್ ತಮ್ಮ ನಿಧಾರ ಬದಲಿಸದ ಕಾರಣ ಅವರಿಗೆ ವೋಟ್ ಹಾಕಿದ ವೀಕ್ಷಕರಿಗೆ ಸುದೀಪ್ ಕ್ಷೇಮೆ ಕೇಳಿದರು. ನಿಮಗೆಲ್ಲರಿಗೂ ನಾವು ಸದಾ ಚಿರಋಣಿ. ಈ ವೇದಿಕೆಯಲ್ಲಿ ವೋಟ್‌ಗಳಿಗೆ ಅವಮಾನ ಆಗುವುದಕ್ಕೆ ನಾನು ಬಿಡುವುದಿಲ್ಲ. ನಿಮಗೆ ನಾನು ಕ್ಷೇಮೆ ಕೇಳುತ್ತೇನೆ. ವರ್ತೂರು ಅವರೇ ಬಿಗ್‌ಬಾಸ್‌ಗೆ ಬಂದಿದ್ದಕ್ಕೆ ಥ್ಯಾಂಕ್ಯೂ. ನಿಮ್ಮಿಂದ ನಿರಾಸೆಯಾಗಿದೆ ಅಂತ ಹೇಳಿ ವೇದಿಕೆಯಿಂದ ಹೊರನಡೆದರು. 

 

ನಾನು ಟಾಸ್ಕ್ ಆಡದೆ ನೀವೂ ಗೆದ್ದು ಬಿಟ್ಟಿದ್ದೀರಾ?

ಈ ಘಟನೆ ನಡೆದ ಬಳಿಕವೂ ವರ್ತೂರು ಸಂತೋಷ್‌ರನ್ನು ಮನವೊಲಿಸಲು ಮನೆ ಮಂದಿಯೆಲ್ಲ ಯತ್ನಿಸಿದ್ದಾರೆ. ಆಗ ವರ್ತೂರು ಸಂತೋಷ್, ಯಾಕೆ ನಾನು ಟಾಸ್ಕ್ ಆಡದೆ ನೀವೂ ಗೆದ್ದು ಬಿಟ್ಟಿದ್ದೀರಾ. ಯಾವಾಗಲೂ ಅದನ್ನೇ ಹೇಳುತ್ತೀರಾ. ನಿಮ್ಮ ಜೊತೆ ನಾನು ಇರುವುದಕ್ಕೆ ಆಗಲ್ಲ ಎಂದಿದ್ದಾರೆ. ಬಳಿಕ ಸಿರಿ ಅವರ ಬಳಿ ಮಾತನಾಡುತ್ತಾ, ಇಲ್ಲಿ ಒಂದೊಂದಕ್ಕೂ ಮಾತನಾಡುವುದು. ಸಕ್ಕರೆ ತಿಂದರೂ ಮಾತನಾಡುತ್ತಾರೆ ಅಕ್ಕ. ಇವತ್ತು ಅಷ್ಟು ಲಕ್ಷ ಜನ ವೋಟ್ ಹಾಕಿದ್ದಾರೆ. ಇಲ್ಲಿಯೇ ಇದ್ದರೆ ಅವರಿಗೆ ಮತ್ತೆ ಮೋಸ ಮಾಡಿದ ಹಾಗೇ ಆಗುತ್ತೆ‌. ನನ್ನ ಆಚೆ ಕಡೆ ನೋಡಿ ಗೌರವ ಕೊಟ್ಟು ಕರೆಸಿಕೊಂಡು ಬಂದಿದ್ದಾರೆ. ಮೂರು ತಿಂಗಳು ಇದ್ದು ಬಾ ಅಂತ ಕಳುಹಿಸಿದ್ದರು. ಆದರೆ,ಇಲ್ಲಿ ಒಂದು ದಿನ ಇರುವುದಕ್ಕೂ ಆಗುತ್ತಿಲ್ಲ ಎಂದಿದ್ದಾರೆ.

 

ಸ್ಪರ್ಧಿಗಳ ಟಾರ್ಗೆಟ್

ವರ್ತೂರು ಹುಲಿ ಉಗುರು ಕೇಸ್‌ನಲ್ಲಿ ಜೈಲಿಗೆ ಹೋಗಿ ಬಂದ ಮೇಲೆ ಉಳಿದ ಸ್ಪರ್ಧಿಗಳು ಎರಡು ವಾರ ಅವರನ್ನೇ ಟಾರ್ಗೆಟ್ ಮಾಡಿದ್ದಾರೆ. ಇದು ವರ್ತೂರು ಸಂತೋಷ್ ಅವರನ್ನು ಇನ್ನಷ್ಟು ನೋತಿಸಿದೆ. ನೋವಲ್ಲಿರುವ ಸಂತೋಷ್‌ಗೆ ಸಮಾಧಾನ ಮಾಡಲು ಇಂದು ಭಾಗ್ಯಲಕ್ಷ್ಮೀ ಸೀರಿಯಲ್‌ನ ಭಾಗ್ಯಾ ಬಂದಿದ್ದಾರೆ. ವರ್ತೂರು ಸಂತೋಷ್‌ರನ್ನು  ತಮ್ಮನಂತೆ ಪಕ್ಕದಲ್ಲಿ ಕೂರಿಸಿಕೊಂಡು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದು, ಈಗಲಾದರೂ ಅವರ ಮನಸ್ಸು ಬದಲಾಗಲಿದ್ಯಾ ಎಂಬುದನ್ನು ಕಾದು ನೋಡಬೇಕು. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+