ಬಿಗ್ಬಾಸ್ ಕನ್ನಡ ಸೀಸನ್ ೧೦ರ ಸ್ಪರ್ಧಿಯಾಗಿ ಬಂದಿದ್ದ ವರ್ತೂರು ಸಂತೋಷ್, ಅರ್ಧದಲ್ಲೇ ಕಾರ್ಯಕ್ರಮದಿಂದ ಹೊರಬರುವ ನಿರ್ಧಾರ ಮಾಡಿದ್ದಾರೆ. ಐದನೇ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದ ವರ್ತೂರು ಅವರನ್ನು ಪ್ರೇಕ್ಷಕರು ಲಕ್ಷಾಂತರ ವೋಟ್ಗಳನ್ನು ನೀಡಿ ಸೇಫ್ ಮಾಡಿದ್ದಾರೆ. ಆದರೂ ಕೂಡ ನಾನು ಹೋಗಲೇಬೇಕು ಎನ್ನುತ್ತಿರುವ ವರ್ತೂರು ಸಂತೋಷ್ ನಿರ್ಧಾರ ವೀಕ್ಷಕರ ಜೊತೆಗೆ ಸುದೀಪ್ಗೂ ಬೇಸರ ಮೂಡಿಸಿದೆ.