X
ಹೋಮ್ ಚಲನಚಿತ್ರಗಳ ಒಳನೋಟ

ತಮ್ಮ ವಿಶಿಷ್ಟ ಧ್ವನಿಯಿಂದಲೇ ಗುರುತಿಸಿಕೊಂಡ ಕನ್ನಡದ ಟಾಪ್ ನಟರ ಪಟ್ಟಿ ಇಲ್ಲಿದೆ

Author Sowmya Bairappa | Updated: Friday, September 2, 2022, 10:43 AM [IST]

ಕನ್ನಡ ಚಿತ್ರರಂಗದ ಹಲವು ನಟರು ತಮ್ಮ ವಿಶಿಷ್ ಧ್ವನಿಯಿಂದಲೇ ಗುರುತಿಸಿಕೊಂಡಿದ್ದಾರೆ. ಸುದೀಪ್, ರವಿಶಂಕರ್, ಪ್ರಸಾದ್ ಶೆಟ್ಟಿ ಮತ್ತು ವಶಿಷ್ಠ ಸೇರಿದಂತೆ ತಮ್ಮ ಧ್ವನಿಯಿಂದಲೇ ಗುರುತಿಸಿಕೊಂಡಿರುವ ಟಾಪ್ ನಂತರ ಪಟ್ಟಿ ಇಲ್ಲಿದೆ.


cover image
ಸುದೀಪ್
1

'ಕಿಚ್ಚ, ಅಭಿನಯ ಚಕ್ರವರ್ತಿ' ಎಂದೇ ಖ್ಯಾತಿ ಪಡೆದಿರುವ ಸುದೀಪ್ ಬಹುಮುಖ ಹಾಗೂ ಬಹುಭಾಷಾ ನಟ. ಸುದೀಪ್ 1973ರ ಸೆಪ್ಟೆಂಬರ್ 2ರಂದು ಶಿವಮೊಗ್ಗದಲ್ಲಿ ಜನಿಸಿದರು. ಇವರ ತಂದೆ ಸಂಜೀವ್ ಮಂಜಪ್ಪ ಹಾಗೂ ತಾಯಿ ಸರೋಜಾ. ಸುದೀಪ್ ಬೆಂಗಳೂರಿನ ದಯಾನಂದ ಸಾಗರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.  ಅಂಡರ್ 17 ಹಾಗೂ ಅಂಡರ್ 19 ಕ್ರಿಕೆಟ್‌ನಲ್ಲಿ ತಮ್ಮ ಕಾಲೇಜನ್ನು ಪ್ರತಿನಿಧಿಸಿದ ಸುದೀಪ್ ಅವರಿಗೆ ...

ವಸಿಷ್ಠ ಸಿಂಹ
2

ವಶಿಷ್ಠ ಸಿಂಹ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಯುವನಟ. ತಮ್ಮ ಕಂಚಿನ ಕಂಠ ,ತೀಕ್ಷ್ಣ ನೋಟ, ಕಡಕ್ ಅಭಿನಯದಿಂದ ಗುರುತಿಸಿಕೊಂಡಿರುವ ವಶಿಷ್ಠ ಅವರ ಬಾಲ್ಯ ಕಳೆದಿದ್ದು ಮೈಸೂರಿನಲ್ಲಿ. ನಂತರ ನಾದಬ್ರಹ್ಮ ಹಂಸಲೇಖರ ಜೊತೆಗೆ ಕೆಲಸ ಮಾಡುವ ಅವಕಾಶ ದೊರೆತಾಗ ಮೈಸೂರಿನಿಂದ ಬೆಂಗಳೂರಿಗೆ ಬಂದ ಇವರು ಬಸವನಗುಡಿಯ ನ್ಯಾಷನಲ್ ಕಾಲೇಜಿನಿಂದ ಪದವಿ ಪಡೆಯುತ್ತಾರೆ.ಕೆಲಕಾಲ ಸಾಫ್ಟವೇರ್ ಕಂಪನಿಯಲ್ಲಿ ಕೆಲಸ ಮಾಡಿದ ಇವರು ನಂತರ ಕೆಲಸಕ್ಕೆ ಪೂರ್ಣವಿದಾಯ ಹೇಳಿ ...

ರವಿಶಂಕರ್ ಪಿ
3

ರವಿಶಂಕರ್ ಪಿ ದಕ್ಷಿಣ ಭಾರತದ ಜನಪ್ರಿಯ ಖಳನಟ ಹಾಗೂ ಡಬ್ಬಿಂಗ್ ಆರ್ಟಿಸ್ಟ್. 1966ರಲ್ಲಿ ನವೆಂಬರ್ 28ರಂದು ಆಂಧ್ರಪ್ರದೇಶದಲ್ಲಿ ಜನಿಸಿದ ಇವರು, ಬೆಳೆದಿದ್ದೆಲ್ಲಾ ಚೈನೈನಲ್ಲಿ.  ವೃತ್ತಿಜೀವನ 1986ರಲ್ಲಿ ಚಿತ್ರರಂಗ ಪ್ರವೇಶ ಮಾಡಿದ ರವಿಶಂಕರ್, ಕನ್ನಡ, ತೆಲುಗು, ತಮಿಳು ಭಾಷೆಯ ವಿವಿಧ ಚಿತ್ರಗಳಲ್ಲಿ ನಟಿಸುವುದರ ಜೊತೆಗೆ ನಿರ್ದೇಶನ, ಡಬ್ಬಿಂಗ್  ಆರ್ಟಿಸ್ಟ್ ಆಗಿದ್ದಾರೆ. 2009ರಲ್ಲಿ ಇವರು ಮೊದಲ ಬಾರಿ ಡಬ್ಬಿಂಗ್ ...

ಪ್ರಮೋದ್ ಶೆಟ್ಟಿ
4

ಪ್ರಮೋದ್ ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಟ. ಇವರು `ಉಳಿದವರು ಕಂಡಂತೆ' ಚಿತ್ರದಲ್ಲಿನ ನಟನೆಯಿಂದ ಪ್ರಾಮುಖ್ಯತೆಗೆ ಬಂದರು. ನಂತರ `ರಿಕ್ಕಿ' ಚಿತ್ರದಲ್ಲಿನ ನಕ್ಸಲ್ ಪಾತ್ರದಲ್ಲಿ ಮನೋಘ್ನ ಅಭಿನಯ ನೀಡಿ ಗಮನ ಸೆಳೆದರು. ಅದ್ಭುತ ಕಂಠಸಿರಿ ಹೊಂದಿರುವ ಇವರು `ಕಿರಿಕ್ ಪಾರ್ಟಿ', `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಮುಂತಾದ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರ ಪತ್ನಿ ಸುಪ್ರೀತಾ ...

ಶ್ರೀನಗರ ಕಿಟ್ಟಿ
5

ಶ್ರೀನಗರ ಕಿಟ್ಟಿ ಎಂದೇ ಪ್ರಸಿದ್ಧವಾಗಿರುವ ಕೃಷ್ಣ ಕನ್ನಡದ ಪ್ರತಿಭಾನಿತ್ವ ಚಲನಚಿತ್ರ ನಟ. ಬೆಂಗಳೂರಿನಲ್ಲಿ 1977 ಜುಲೈ 8 ಜನಿಸಿದ ಕಿಟ್ಟಿ ಬಾಲ್ಯದಿಂದಲೇ ಕಿರುತೆರೆಯಲ್ಲಿ ಬಾಲನಟನಾಗಿ ಅಭಿನಯ ಆರಂಭಿಸಿದರು.ಬಾಲನಟನಾಗಿ `ಮಲೆನಾಡಿನ ಚಿತ್ರಗಳು', `ದೊಡ್ಮನೆ',`ಕಂದನ ಕಾವ್ಯ' ಮುಂತಾದ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಇದೇ ಸಮಯದಲ್ಲಿ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದ ಕಿಟ್ಟಿ `ಕಾಡು', `ಕಪ್ಪೆ ಭಾವಿ ನಕ್ಷತ್ರ', `ಅಕ್ಕ', `ಸಂಜೆ ಮಲ್ಲಿಗೆ' ...

ಸುಚೇಂದ್ರ ಪ್ರಸಾದ್
6

ಸುಚೇಂದ್ರ ಪ್ರಸಾದ್ ಕನ್ನಡ ಚಿತ್ರರಂಗದ ಅದ್ಬುತ ಕಲಾವಿದ. ಇವರು ಒದಿದ್ದು MA.LLB. ಚಿತ್ರರಂಗಕ್ಕೆ ಬರುವ ಮುನ್ನ ರಂಗಭೂಮಿಯಲ್ಲಿದ್ದ ಇವರು ಚಿತ್ರಗಳಲ್ಲಿ ,ಕಿತುತೆರೆಯಲ್ಲಿ ನಿರ್ದೇಶನ, ನೃತ್ಯ ಸಂಯೋಜನೆ ಮಾಡುವುದರ ಜೊತೆಗೆ ನಾಟಕಗಳನ್ನು ರಚಿಸುತ್ತಿದ್ದರು. 1999 ರಲ್ಲಿ ಕುವೆಂಪುರವರ ಜನಪ್ರಿಯ ಕಾದಂಬರಿ `ಕಾನೂರು ಹೆಗ್ಗಡತಿ' ಚಿತ್ರರೂಪಕ್ಕೆ ಬಂದಾಗ ,ಅದರಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ ಸುಚೇಂದ್ರರು ಜನಪ್ರಿಯರಾದರು. ಮುಂದೆ ...

ರಾಜೇಶ್  ನಟರಂಗ
7

ರಾಜೇಶ್ ನಟರಂಗ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಟ . ತಮ್ಮ ಪ್ರಬುದ್ಧ ನಟನೆಯಿಂದ ಕಿರುತೆರೆ ಮತ್ತು ಹಿರಿತೆರೆಯಲ್ಲೂ ಛಾಪು ಮೂಡಿಸಿದ್ದಾರೆ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ರಾಜೇಶ್ ಬಸವನ ಗುಡಿಯ ನಾಷನಲ್ ಕಾಲೇಜಿನಿಂದ ಪದವಿ ಪಡೆದಿದ್ದಾರೆ. ಇಲ್ಲಿ ಓದುವಾಗ ಅಭಿನಯದ ಬಗ್ಗೆ ಆಸಕ್ತಿ ತೆಳೆದ ರಾಜೇಶ್ `ನಟರಂಗ' ಎಂಬ ರಂಗಸಂಸ್ಥೆ ಸೇರಿದರು. ಪದವಿ ನಂತರ ಕೆಲಕಾಲ ದೆಹಲಿಗೆ ತೆರಳಿದ್ದ ರಾಜೇಶ್ ನಂತರ ಮರಳಿ ಬಂದು `ಸ್ಮಶಾನ ...

ಶರತ್ ಲೋಹಿತಾಶ್ವ
8

ಶರತ್ ಲೋಹಿತಾಶ್ವ ಇವರು ಜನಿಸಿದ್ದು ತುಮಕುರು ಜಿಲ್ಲೆಯಲ್ಲಿ. ಇವರು ವಿದ್ಯಾಬ್ಯಾಸವನ್ನು ಬೆಂಗಳೂರಿನಲ್ಲಿ ಪೂರ್ಣಗೊಳಿಸಿದ್ದಾರೆ. ಮೊದಲು ಇವರು  ಡಿಡಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಚಿದಂಬರ ರಹಸ್ಯ" ಎಂಬ  ಕಿರುತೆರೆಯಲ್ಲಿ ನಟಿಸಿದ್ದಾರೆ. ನಂತರ ಇವರು ಕನ್ನಡ ಸಿನಿಮಾರಂಗಕ್ಕೆ ಪ್ರವೇಶ ಮಾಡಿ ಸಂಜು ವೆಡ್ಸ್ ಗೀತಾ, ಭೀಮ ತೀರದಲ್ಲಿ, ಸಾರಥಿ, ಕಡ್ಡಿಪುಡಿ ಸೇರಿದಂತೆ ಇನ್ನು ಹಲವು ಕನ್ನಡ ಸಿನಿಮಾಗಳಲ್ಲಿ  ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+