X
ಹೋಮ್ ಚಲನಚಿತ್ರಗಳ ಒಳನೋಟ

ಸಂಗೀತಾ ಜೊತೆ ಒಂದಾದ್ರೂ ನಾಮಿನೇಷನ್ ವಿಷಯದಲ್ಲಿ ತನಿಷಾರನ್ನು ಬಿಟ್ಟುಕೊಡದ ಕಾರ್ತಿಕ್: ವೀಕ್ಷಕರ ಮೆಚ್ಚುಗೆ

Author Sowmya Bairappa | Published: Tuesday, November 28, 2023, 11:08 AM [IST]

ಬಿಗ್‌ಬಾಸ್‌ ಕನ್ನಡ ಸೀಸನ್ 10ರ ಆರಂಭದಿಂದಲೂ ಕಾರ್ತಿಕ್ ಮಹೇಶ್ ಮತ್ತು ಸಂಗೀತಾ ನಡುವೆ ಉತ್ತಮ ಸ್ನೇಹವಿತ್ತು. ನಂತರ ಕಾರಣಾಂತರಗಳಿಂದ ಇಬ್ಬರೂ ಬೇರೆಯಾದರು. ಇದೀಗ ಇಬ್ಬರು ಒಂದಾದಂತೆ ಕಾಣುತ್ತಿದ್ದು, ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ, ಕಳೆದ ವಾರ ಯಾವುದೇ ಕಟ್ಟುಪಾಡುಗಳಿಲ್ಲದೇ ಕಾರ್ತಿಕ್ ಎಲ್ಲಾ ಟಾಸ್ಕ್‌ನಲ್ಲೂ ಉತ್ತಮವಾಗಿ ಆಡಿದ್ದರು. ಇದೀಗ ಮತ್ತೆ ಸಂಗೀತಾರ ಕೈಗೊಂಬೆಯಾಗಬಹುದು ಅಂತ ಪ್ರೇಕ್ಷಕರು ಹೇಳುತ್ತಿದ್ದಾರೆ. ಆದರೆ, ಸಂಗೀತಾ ಜೊತೆ ಒಂದಾದ್ರೂ ಕೂಡ ನಾಮಿನೇಷನ್ ವಿಷಯದಲ್ಲಿ ಕಾರ್ತಿಕ್ ಸಂಗೀತಾ ಅವರನ್ನು ಬಿಟ್ಟುಕೊಟ್ಟಿಲ್ಲ. ಇದು ಹಲವರ ಮನಗೆದ್ದಿದೆ.


cover image
ತನಿಷಾರನ್ನು ಸೇಫ್ ಮಾಡುವಂತೆ ಕೇಳಿಕೊಂಡ ಕಾರ್ತಿಕ್

ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಬಿಗ್‌ಬಾಸ್‌ ಮನೆಗೆ ಎಂಟ್ರಿಕೊಟ್ಟ ಪವಿ ಪೂವಪ್ಪ ಹಾಗೂ ಅವಿನಾಶ್ ಶೆಟ್ಟಿಗೆ ಬಿಗ್‌ಬಾಸ್ ಇಬ್ಬರನ್ನು ನಾಮಿಏಷನ್‌ನಿಂದ ಬಚಾವ್ ಮಾಡುವ ಅಧಿಕಾರ ನೀಡಿದ್ದರು. ಜೊತೆಗೆ ಪ್ರತಿಯೊಬ್ಬ ಸ್ಪರ್ಧಿಗಳು ತಮಗೆ ಬೇಕಾದ ಒಬ್ಬರನ್ನು ಸೇಫ್ ಮಾಡುವಂತೆ ಅವರಿಬ್ಬರ ಬಳಿ ಕೇಳಿಕೊಳ್ಳುವಂತೆ ಸೂಚಿಸಿದ್ದರು. ಈ ವೇಳೆ ಕಾರ್ತಿಕ್ ವೈಲ್ಡ್ ಕಾರ್ಡ್ ಸ್ಪರ್ಧಿ ಅವಿನಾಶ್ ಶೆಟ್ಟಿ ಬಳಿ ತನಿಷಾ ನನ್ನ ಒಳ್ಳೆಯ ಫ್ರೆಂಡ್. ಎಲ್ಲಾ ಸಂದರ್ಭದಲ್ಲೂ ಅವಳು ನನ್ನ ಜೊತೆ ಇದ್ದಾಳೆ. ಅವಳನ್ನು ಸೇವ್ ಮಾಡಿ ಅಂತ ಕೇಳಿಕೊಂಡಿದ್ದಾರೆ. ಇದು ವೀಕ್ಷಕರ ಮೆಚ್ಚುಗೆಗೆ ಕಾರಣವಾಗಿದೆ. 

 

ಕಾರ್ತಿಕ್-ಸಂಗೀತಾ ಬಗ್ಗೆ ವಿನಯ್ ಏನಂದ್ರು?

ಕಾರ್ತಿಕ್ ಮತ್ತು ಸಂಗೀತಾ ಒಂದಾಗಿರುವುದರ ಬಗ್ಗೆ ಚರ್ಚಿಸಿದ ವಿನಯ್, ನಾನು ಕಳೆದ ವಾರವೇ ಹೇಳಿಲ್ಲವೇ? ಅವಳು ಕಾರ್ತಿಕ್‌ನನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದಳು. ಇದು ಬೇಗ ಕೊನೆಯಾಗುತ್ತೆ ಅಂತ ಹೇಳಿದ್ದೆ ಎಂದರು. ಅದಕ್ಕೆ ಅಲ್ಲೇ ಇದ್ದ ತುಕಾಲಿ ಸಂತೋಷ್, ಇಲ್ಲಿ ನಡೆಯುವ ನಾಟಕಗಳಿಗೆ ಸಾಥ್ ಕೊಟ್ಟರೆ ಬಕ್ರಾ ಆಗೋದು ನಾವೇ. ದಿನಾಲೂ ಈ ಮನೆಯಲ್ಲಿ ಬಕ್ರಾ ಕಾರ್ಯಕ್ರಮ ನಡೆಯುತ್ತದೆ. ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ನಡೆಯುತ್ತೆ. ಮಧ್ಯೆದಲ್ಲಿ ಇದ್ದವರು ಬಕ್ರಾ ಆಗುತ್ತಾರೆ ಎಂದರು. ಅದಕ್ಕೆ ವಿನಯ್, ನಾಟಕಗಳು ನಡೆಯುವಾಗ ನಾನು ಪಾಪ್‌ಕಾರ್ನ್ ತಿನ್ನುತ್ತಾ ಎಂಜಾಯ್ ಮಾಡುತ್ತೇನೆ ಎಂದು ಹೇಳಿದ್ದಾರೆ. 

ಡ್ರೋನ್ ಪ್ರತಾಪ್ ಮೇಲೆ ವಿನಯ್ ಆರೋಪ

ಬಿಗ್‌ಬಾಸ್ ಆರಂಭದಲ್ಲಿ ಡ್ರೋನ್ ಪ್ರತಾಪ್ ಮೇಲೆ ವಿನಯ್ ಕೂಗಾಡಿದ್ದರು. ನಂತರದಲ್ಲಿ ತಣ್ಣಗಾಗಿದ್ದರು. ಇದೀಗ ಏಂಟನೇ ವಾರ ಡ್ರೋನ್ ಪ್ರತಾಪ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ನಾಮಿನೇಷನ್ ಸಂದರ್ಭ 'ಡ್ರೋನ್ ಪ್ರತಾಪ್ ಅವರು ಬೇರೆಯವರನ್ನು ಕೀಳಾಗಿ ತೋರಿಸಿ, ಇಲ್ಲಿಯವರೆಗೆ ಬಂದಿದ್ದಾರೆ ಅಂತ ಆರೋಪಿಸಿದ್ದಾರೆ.  

ತುಕಾಲಿ ಸಂತೋಷ್ ಅಸಮಾಧಾನ

ಸಂಗೀತಾ ಬಗ್ಗೆ ತುಕಾಲಿ ಸಂತೋಷ್ ಅವರು ವರ್ತೂರು ಸಂತೋಷ್ ಹಾಗೂ ಡ್ರೋನ್ ಪ್ರತಾಪ್ ಬಳಿ ಮಾತನಾಡಿದ್ದಾರೆ. ಈ ವೇಳೆ ಸಂಗೀತಾ ಅವರ ಡಾಮಿನೇಟಿಂಗ್ ವರ್ತನೆ ಬಗ್ಗೆ ಅಸಮಾಧಾನ ಹೊರಹಾಕಿದ ತುಕಾಲಿ ಸಂತೋಷ್, ಸಂಗೀತಾ ಎಲಿಜಬತ್ ರಾಣಿ. ನಾವೆಲ್ಲಾ ಸೇವಕರು. ಹುಕುಂ ಅಂತ ಹೇಳಿದಾಕ್ಷಣ ನಾವೆಲ್ಲಾ ಅವರ ಮಾತನ್ನು ಕೇಳ್ಬೇಕು. ಪ್ರಜೆಗಳೇ ಊರುಬಿಟ್ಟು ತೊಲಗಿ ಅಂದಾಕ್ಷಣ ನಾವೆಲ್ಲರೂ ಗಂಟುಮೂಟೆ ಕಟ್ಟಿಕೊಂಡು, ತಲೆಮೇಲೆ ಎಕ್ಕಡ ಇಟ್ಟುಕೊಂಡು ಹೋಗುತ್ತಿರಬೇಕು. ದಿನ ಗಂಧದ ಕಡ್ಡಿ, ಕರ್ಪೂರ ಬೆಳಗಿ ಅವ್ವಾ...ತಾಯಿ ಅಂತ ಪೂಜೆ ಮಾಡಬೇಕು. ಅವರನ್ನೇ ಕೇಳಿ ಕೆಲಸ ಮಾಡಬೇಕು. ಒಬ್ಬರು ಬಾತ್‌ರೂಮ್ ತೊಳೆಯಿರಿ ಅಂತಾರೆ, ಇನ್ನೊಬ್ಬರು ಟಾಯ್ಲೆಟ್ ತೊಳಿರಿ ಅಂತಾರೆ. ಅದೆಲ್ಲ ಇಲ್ಲಿ ನಡೆಯಲ್ಲ ಅಂತ ಕಿಡಿಕಾರಿದ್ದಾರೆ.  

 

18 ಸಾವಿರ ಫಾಲೋವರ್ಸ್ ಕಳೆದುಕೊಂಡ ಸಂಗೀತಾ

ಚಾರ್ಲಿ ಬೆಡಗಿ ಸಂಗೀತಾ ಶೃಂಗೇರಿ ದೊಡ್ಮನೆಗೆ ಕಾಲಿಟ್ಟ ದಿನದಿಂದಲೂ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿತ್ತು. ಬಳೆ ವಿವಾದದ ಬಳಿಕವಂತೂ ಅವರಿಗೆ ಬೆಂಬಲ ಹೆಚ್ಚಾಗಿತ್ತು. ಆದರೆ, ಕಾರ್ತಿಕ್‌ಗೆ ತಲೆ ಬೋಳಿಸುವ ಚಾಲೆಂಜ್ ನೀಡಿದ ಬಳಿಕ ಏಕಾಏಕಿ ಅವರ ಹಿಂಬಾಲಕರ ಸಂಖ್ಯೆ ಕುಸಿದಿತ್ತು. ತಲೆ ಬೋಳಿಸುವ ಚಾಲೆಂಜ್ ನೀಡುವುದಕ್ಕೂ ಮೊದಲು ಸಂಗೀತಾಗೆ  4.49 ಹಿಂಬಾಲಕರಿದ್ದರು. ನಂತರ 4.38  ಲಕ್ಷಕ್ಕೆ ಇಳಿಕೆಯಾಗಿತ್ತು. ಇದೀಗ ಅವರ ಹಿಂಬಾಲಕರ ಸಂಖ್ಯೆ 4.31ಕ್ಕೆ ಕುಸಿದಿದ್ದು, ಅವರೆಲ್ಲಾ ಮರಳಿ ಸೇರ್ಪಡೆಯಾಗುತ್ತಾರಾ? ಕಾದು ನೋಡಬೇಕು. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+