ಚಲನಚಿತ್ರಗಳ ಒಳನೋಟ
ಬಿಗ್ ಬಾಸ್ ಕನ್ನಡದ ಪ್ರತಿ ಸೀಸನ್ನಲ್ಲೂ ಒಂದು ಅಥವಾ ಎರಡು ಲವ್ ಸ್ಟೋರಿಗಳನ್ನು ಕಾಣಬಹುದು. ಈ ಸೀಸನ್ನಲ್ಲಿ ಧರ್ಮ ಕೀರ್ತಿರಾಜ್ ಮತ್ತು ಐಶ್ವರ್ಯಾ ಸಿಂಧೋಗಿ ನಡುವೆ ಏನೋ ನಡೀತಿದೆ ಅಂತ ಸ್ಪರ್ಧಿಗಳು ರೇಗಿಸುತ್ತಿದ್ದರು. ನರಕದಲ್ಲಿದ್ದ ರಂಜಿತ್ ಈಗ ಸ್ವರ್ಗಕ್ಕೆ ಹೋಗಿದ್ದಾರೆ. ಹೀಗಾಗಿ ನರಕದಲ್ಲಿರುವ ಅನುಷಾ ಅವರು ರಂಜಿತ್ ಹಾಗೂ ಧರ್ಮ ಜೊತೆ ಮಾತನಾಡಿದ್ರೆ, ಐಶ್ವರ್ಯ ಅವರಿಗೆ ಹೊಟ್ಟೆಕಿಚ್ಚು ಆಗುತ್ತಂತೆ. ಈ ವಿಷಯವನ್ನು ಸ್ವತಃ ಅನುಷಾ ಅವರೇ, ಚೈತ್ರಾ ಅವರ ಬಳಿ ಹೇಳಿಕೊಂಡಿದ್ದಾರೆ.