X
ಹೋಮ್ ಚಲನಚಿತ್ರಗಳ ಒಳನೋಟ

ಈ ವಾರ ದೊಡ್ಮನೆಯ ಎಲ್ಲಾ ಸದಸ್ಯರು ನಾಮಿನೇಟ್: ಹಂಸಾಗೆ ನೀನು ಮನೆಗೆ ಹೋದರೆ ನನಗೆ ಖುಷಿ ಎಂದ ಜಗದೀಶ್

Author Sowmya Bairappa | Published: Wednesday, October 9, 2024, 11:08 AM [IST]

ಬಿಗ್‌ಬಾಸ್ ಕನ್ನಡದ ಇತಿಹಾಸದಲ್ಲಿಯೇ ಮೊದಲ ಬಾರಿ ಮನೆಯ ಮೂಲ ನಿಯಮ ಮುರಿದ ಕಾರಣ ಇಡೀ ಮನೆಯನ್ನು ನಾಮಿನೇಟ್ ಮಾಡಲಾಗಿದೆ. ಜೊತೆಗೆ ಕ್ಯಾಪ್ಟನ್ ಹಂಸ ಅವರು ಪಡೆದಿದ್ದ ಇಮ್ಯೂನಿಟಿಯನ್ನು ಬಿಗ್‌ಬಾಸ್ ವಾಪಾಸ್ ಪಡೆದಿದ್ದಾರೆ.


cover image
ಬ್ಲೈಂಡ್ಸ್ ತೆಗೆದು ನೋಡಿದ ಸ್ಪರ್ಧಿಗಳು

ಗಾರ್ಡನ್ ಏರಿಯಾದಲ್ಲಿ ಟಾಸ್ಕ್‌ಗೆ ಬೇಕಾದ ತಯಾರಿ ನಡೆಸುವಾಗ ಬ್ಲೈಂಡ್ಸ್ ಹಾಕೋದು ಸಾಮಾನ್ಯ. ಬ್ಲೈಂಡ್ಸ್ ಹಾಕಿದಾಗ ಅದನ್ನು ತೆಗೆಯುವವರೆಗೂ ಯಾರೂ ಕೂಡ ಅದನ್ನು ಇಣುಕಿ ನೋಡುವಂತಿಲ್ಲ. ಆದರೆ,  ಬಿಗ್‌ಬಾಸ್ ಕನ್ನಡದ ಇತಿಹಾಸದಲ್ಲಿಯೇ ಮೊದಲ ಬಾರಿ  ಕೆಲ ನರಕವಾಸಿಗಳು ಅದನ್ನು ತೆಗೆದು, ಅಲ್ಲೇನು ನಡೆಯುತ್ತಿದೆ ಎಂಬುದನ್ನು ನೋಡಿದ್ದಾರೆ. ಶಿಶಿರ್, ಮೋಕ್ಷಿತಾ ಪೈ, ತುಕಾಲಿ ಮಾನಸ ಹಾಗೂ ಲಾಯರ್ ಜಗದೀಶ್ ಬ್ಲೈಂಡ್ಸ್ ತೆಗೆದು ನೋಡಿದ್ದಾರೆ. ತುಕಾಲಿ ಮಾನಸ, ಎಕ್ಸ್‌ಪ್ಯಾಂಡ್ ಆಗುವ ತರಹ ಸೊಂಟಕ್ಕೆ ಹಾಕುವ ಬೆಲ್ಟ್ ಇಟ್ಟಿದ್ದಾರೆ. ಓಡಿಹೋಗುವ ತರಹ ಗೇಮ್ ಇಟ್ಟಿದ್ದಾರೆ ಎಂದರು. ಅದನ್ನು ಗಮನಿಸಿದ ಭವ್ಯಾ, ಅಲ್ಲಿ ಹೋಗುವ ಹಾಗಿಲ್ಲ, ಯಾಕೆ ಹೋದ್ರಿ? ಅಂತ ಪ್ರಶ್ನಿಸಿದರು. ಆಗ ಮಾನಸ ಅಲ್ಲೇನು ಕಾಣ್ತಿಲ್ಲ ಅಂತ ಉತ್ತರಿಸಿದರೆ, ಜಗದೀಶ್ ಬಟ್ಟೆ ಚೇಂಜ್ ಮಾಡ್ತಿದ್ವಿ ಅಂತ ಸಬೂಬು ನೀಡಿದ್ರು. ಇದನ್ನು ಕ್ಯಾಪ್ಟನ್ ಗಮನಿಸಬೇಕು ಅಂತ ಭವ್ಯಾ ಹೇಳಿದಾಗ, ಹಂಸಾ ಸುಮ್ಮನೆ ಕುಳಿತಿದ್ದರು.

ಶಿಕ್ಷೆ ವಿಧಿಸಿದ ಬಿಗ್‌ಬಾಸ್

ಬ್ಲೈಂಡ್ಸ್ ಡೌನ್ ಆಗಿದ್ದಾಗ ಯಾರು ಅದರಿಂದಾಚೆ ಇಣುಕಿ ನೋಡುವಂತಿಲ್ಲ ಎಂಬುದು ಈ ಮನೆಯ ಮೂಲ ನಿಯಮ. ಈಗಷ್ಟೇ ಕೆಲ ಸದಸ್ಯರು ಆ ನಿಮಯ ಉಲ್ಲಂಘಿಸಿದ್ದಾರೆ. ಈ ವಿಚಾರ ಮನೆಯ ಕ್ಯಾಪ್ಟನ್ ಗಮನಕ್ಕೆ ಬಂದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಶೋಚನೀಯ. ನಿಮ್ಮೆಲ್ಲರ ವರ್ತನೆಯಿಂದ ಬಿಗ್‌ಬಾಸ್‌ಗೆ ಬಹಳ ನೋವಾಗಿದೆ ಎಂದರು. ಆಗ ಮನೆಯ ಸದಸ್ಯರು 'ಸಾರಿ ಬಿಗ್‌ಬಾಸ್' ಅಂತ ಕ್ಷೇಮೆ ಕೇಳಿದ್ರು. ಆಗ ಬಿಗ್‌ಬಾಸ್‌ನ, ಈ ಮನೆಯನ್ನ, ಮನೆಯ ನಿಯಮಗಳನ್ನು ಪಾಲಿಸದೇ ಇರುವವರಿಗೆ ಈ ಮನೆಯಲ್ಲಿರುವ ಯೋಗ್ಯತೆಯಿಲ್ಲ. ಈ ಕ್ಷಣದಿಂದ ಮನೆಯ ಎಲ್ಲಾ ಸದಸ್ಯರನ್ನು ನಾಮಿನೇಟ್ ಮಾಡುವುದಾಗಿ ಘೋಷಿಸಿದರು.

ಇಮ್ಯೂನಿಟಿ ಕಳೆದುಕೊಂಡ ಹಂಸ

ಜೊತೆಗೆ ಹಂಸ ಕಂಗ್ರ್ಯಾಜುಲೇಶನ್ಸ್...ಬಿಗ್‌ಬಾಸ್ ಇತಿಹಾಸದಲ್ಲಿಯೇ ಯಾವ ಕ್ಯಾಪ್ಟನ್ ಕೂಡ ತಮ್ಮ ಇಮ್ಯೂನಿಟಿ ಕಳೆದುಕೊಂಡಿರಲಿಲ್ಲ. ಈಗ ತಮಗಿರುವ ಇಮ್ಯೂನಿಟಿಯನ್ನು ಹಿಂಪಡೆದು ನಿಮ್ಮನ್ನು ನೇರ ನಾಮಿನೇಟ್ ಮಾಡಲಾಗಿದೆ. ಈ ಮನೆಯ ಕ್ಯಾಪ್ಟನ್ ಆಗಿ ನೀವೇ ಮುಂದುವರೆಯಲ್ಲಿದ್ದೀರಿ. ಕ್ಯಾಪ್ಟನ್ ಸ್ಥಾನದ ಜವಾಬ್ದಾರಿ ಮತ್ತು ನಿಯಮಗಳನ್ನು ಅರಿತುಕೊಂಡು ಮುಂದುವರೆಯಲು ಬಿಗ್‌ಬಾಸ್ ಮತ್ತೊಂದು ಅವಕಾಶ ನೀಡುತ್ತಿದ್ದಾರೆ ಎಂದರು. ಜೊತೆಗೆ ದೊಡ್ಮನೆ ನಿಯಮಗಳನ್ನು ಹಗುರವಾಗಿ ತೆಗೆದುಕೊಂಡರೆ, ಅದರ ಪರಿಣಾಮ ಭಾರವಾಗಿರುತ್ತದೆ ಅಂತ ಮನೆಯ ಸದಸ್ಯರಿಗೆ ವಾರ್ನಿಂಗ್ ಕೊಟ್ಟರು.

ಸ್ವರ್ಗವಾಸಿಗಳ ಅಸಮಾಧಾನ

ಎಲ್ಲಾ ಸದಸ್ಯರು ನಾಮಿನೇಟ್ ಆದಾಗ, ನಿಮಗೆ ರೂಲ್ಸ್ ಗೊತ್ತಿಲ್ವಾ? ಯಾಕೆ ಹೀಗೆ ಮಾಡ್ತೀರಾ? ಅಂತ ಐಶ್ವರ್ಯಾ ಸಿಂಧೋಗಿ ಮತ್ತು ಉಗ್ರಂ ಮಂಜು ಪ್ರಶ್ನಿಸಿದರು. ಆಗ ಇಲ್ಲೇ ಪ್ಯಾಂಟ್ ಬಿಚ್ಲಾ...ಇಲ್ಲೇ ಚಡ್ಡಿ ಬಿಚ್ಲಾ ಅಂತಾರೆ? ಏನು ಹೇಳೋದು ಇವರಿಗೆ. ಎಷ್ಟು ಶಿಕ್ಷೆ ಕೊಡಲಿ. ಅವರಿಗೆ ಜವಾಬ್ದಾರಿ ಇಲ್ವಾ? ಅಂತ ಜಗದೀಶ್ ವಿರುದ್ಧ ಹಂಸ ಕಿಡಿಕಾರಿದರು. ಆಗ ಉಗ್ರಂ ಮಂಜು, ನೀವು ಏನಾದ್ರೂ ಮಾಡಿಕೊಳ್ಳಿ. ಆದರೆ, ಬೇರೆಯವರಿಗೆ ತೊಂದರೆ ಕೊಡಬೇಡಿ. ನಾವು ಸೇವ್ ಆಗುವುದಕ್ಕೆ ವಾರ ಪೂರ್ತಿ ಎಷ್ಟೆಷ್ಟೋ ಕಷ್ಟ ಪಡ್ತೀವಿ. ಯಾರೋ ಮಾಡೋ ತಪ್ಪಿಗೆ ನಾವು ಅನುಭವಿಸಬೇಕು. ನಾವ್ಯಾಕೆ ನಾಮಿನೇಟ್ ಆಗ್ಬೇಕು. ಟಾಸ್ಕ್‌ಗೆ ಮಾರ್ಯಾದೆ ಕೊಡ್ಬೇಕು ಅಲ್ವಾ? ಅಂತ ಗುಡುಗಿದರು.

ನೀನು ಮನೆಗೆ ಹೋಗಬೇಕು

ತಾವು ತಪ್ಪು ಮಾಡಿದ್ದರೂ, ನೀವು ಹೇಳಬಹುದಿತ್ತಲ್ವಾ? ಅಂತ ಲಾಯರ್ ಜಗದೀಶ್ ಅವರು ಹಂಸಾಗೆ ಪ್ರಶ್ನಿಸಿದರು. ಆಗ ಹಂಸ, ಎಷ್ಟು ಅಂತ ಹೇಳೋಕೆ ಆಗುತ್ತೆ. ನಿಮಗೆ ಜವಾಬ್ದಾರಿ ಇಲ್ವಾ? ತಪ್ಪು ಮಾಡಿಯೂ ವಾದ ಮಾಡ್ತೀರಾ ಅಂತ ಸಿಟ್ಟಾದರು. ಜೊತೆಗೆ ನಾಮಿನೇಟ್ ಆಗಿರುವುದಕ್ಕೆ ವೀಕೆಂಡ್‌ನಲ್ಲಿ ಸುದೀಪ್ ಸರ್‌ನ ಫೇಸ್ ಮಾಡೋದು ಕಷ್ಟ ಎಂಬುದು ಹಂಸಾಗೆ ಟೆನ್ಷನ್ ಆಗಿತ್ತು. ಆಗ ಲಾಯರ್, ನೀನು ನಾಮಿನೇಟ್ ಆಗಬೇಕು. ಮನೆಗೆ ಹೋಗಬೇಕು. ಆಗಲೇ ನನಗೆ ಖುಷಿ ಅಂತ ಕಾಮೆಂಟ್ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+