ಬಿಗ್ಬಾಸ್ ಕನ್ನಡ ಸೀಸನ್ 11 ಆರಂಭವಾಗಿ ಕೇವಲ ನಾಲ್ಕು ದಿನಗಳು ಕಳೆದಿದ್ದು, ದೊಡ್ಡ ಹಂಗಾಮವೇ ಸೃಷ್ಟಿಯಾಗಿದೆ. ಲಾಯರ್ ಜಗದೀಶ್ ಹೈಡ್ರಾಮಾಕ್ಕೆ ದೊಡ್ಮನೆ ಅಕ್ಷರಶಃ ರಣರಂಗವಾಗಿದ್ದು, ಸ್ಪರ್ಧಿಗಳೆಲ್ಲಾ ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದರಿಂದಾಗಿ ರೊಚ್ಚಿಗೆದ್ದ ಲಾಯರ್ ಜಗದೀಶ್ ನಾನು ಬಿಗ್ಬಾಸ್ನ ಎಕ್ಸ್ಪೋಸ್ ಮಾಡ್ತೀನಿ, ನಮ್ಮನ್ನು ಎದುರು ಹಾಕಿಕೊಂಡು ಕರ್ನಾಟದಲ್ಲಿ ಬಿಗ್ಬಾಸ್ ಓಡುಸ್ತೀರಾ ಎಂದು ಸವಾಲು ಹಾಕಿದ್ದಾರೆ. ಇಲ್ಲಿ ಬಿಗ್ಬಾಸ್ ಮನೆಯಲ್ಲಿ 3ನೇ ದಿನ ಏನೆಲ್ಲಾ ಆಯ್ತು ಎಂಬ ಮಾಹಿತಿ ನೀಡಲಾಗಿದೆ.