X
ಹೋಮ್ ಚಲನಚಿತ್ರಗಳ ಒಳನೋಟ

ಲಾಯರ್ ಜಗದೀಶ್ ಆರ್ಭಟಕ್ಕೆ ಸ್ಪರ್ಧಿಗಳ ಕಣ್ಣೀರು: ಬಿಗ್‌ಬಾಸ್‌ನ ಎಕ್ಸ್‌ಪೋಸ್ ಮಾಡ್ತೀನಿ ಅಂತ ವಾರ್ನಿಂಗ್

Author Administrator | Published: Thursday, October 3, 2024, 11:13 AM [IST]

ಬಿಗ್‌ಬಾಸ್‌ ಕನ್ನಡ ಸೀಸನ್ 11 ಆರಂಭವಾಗಿ ಕೇವಲ ನಾಲ್ಕು ದಿನಗಳು ಕಳೆದಿದ್ದು, ದೊಡ್ಡ ಹಂಗಾಮವೇ ಸೃಷ್ಟಿಯಾಗಿದೆ. ಲಾಯರ್ ಜಗದೀಶ್ ಹೈಡ್ರಾಮಾಕ್ಕೆ ದೊಡ್ಮನೆ ಅಕ್ಷರಶಃ ರಣರಂಗವಾಗಿದ್ದು, ಸ್ಪರ್ಧಿಗಳೆಲ್ಲಾ ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದರಿಂದಾಗಿ ರೊಚ್ಚಿಗೆದ್ದ ಲಾಯರ್ ಜಗದೀಶ್ ನಾನು ಬಿಗ್‌ಬಾಸ್‌ನ ಎಕ್ಸ್‌ಪೋಸ್ ಮಾಡ್ತೀನಿ, ನಮ್ಮನ್ನು ಎದುರು ಹಾಕಿಕೊಂಡು ಕರ್ನಾಟದಲ್ಲಿ ಬಿಗ್‌ಬಾಸ್ ಓಡುಸ್ತೀರಾ ಎಂದು ಸವಾಲು ಹಾಕಿದ್ದಾರೆ. ಇಲ್ಲಿ ಬಿಗ್‌ಬಾಸ್‌ ಮನೆಯಲ್ಲಿ 3ನೇ ದಿನ ಏನೆಲ್ಲಾ ಆಯ್ತು ಎಂಬ ಮಾಹಿತಿ ನೀಡಲಾಗಿದೆ.


cover image
ಸ್ವರ್ಗವಾಸಿಗಳಿಗೆ ಹೊಸ ಟಾಸ್ಕ್

ಬಿಗ್‌ಬಾಸ್‌ ನಾಮಿನೇಷನ್‌ನಿಂದ ಪಾರಾಗಲು ಸ್ವರ್ಗವಾಸಿಗಳಿಗೆ  'ತಕ್ಕಡಿ ಭಾಗ್ಯ' ಎಂಬ ಟಾಸ್ಕ್ ನೀಡಿದ್ದರು. ಈ ಟಾಸ್ಕ್‌ನ ಉಸ್ತುವಾರಿಯಾಗಿ ಧನರಾಜ್ ಅವರನ್ನು ನೇಮಿಸಿದ್ದರು. ನಿಯಮದ ಪ್ರಕಾರ, ನಾಮಿನೇಟ್ ಆದ ಸ್ವರ್ಗವಾಸಿಗಳು ತಮ್ಮ ತಕ್ಕಡಿ ಮರಳಿನಿಂದ ತುಂಬದಂತೆ ಕಾಪಾಡಿಕೊಳ್ಳುತ್ತಾ, ಉಳಿದವರ ತಕ್ಕಡಿ ಮರಳಿನಿಂದ ತುಂಬಿಸಬೇಕಿತ್ತು. ಕೊನೆಯಲ್ಲಿ ಯಾರ ತಕ್ಕಡಿ ತುಂಬದೇ ಉಳಿಯುತ್ತೋ ಅವರು ಸೇಫ್.

ಧನರಾಜ್ ಜೊತೆ ಜಗದೀಶ್ ಕಿರಿಕ್

ಟಾಸ್ಕ್‌ ವೇಳೆ ತಕ್ಕಡಿಗೆ ಮರಳು ತುಂಬಿಸುವಾಗ ಜಗದೀಶ್ ತಳ್ಳಿದ್ದರಿಂದ ಯಮುನಾ ಕೆಳಗೆ ಬಿದ್ದರು. ಹೀಗಾಗಿ, ಉಸ್ತುವಾರಿ ಧನರಾಜ್ ಫೌಲ್ ಕೊಟ್ಟರು. ಜೊತೆಗೆ ಗೇಮ್‌ನಿಂದ ಜಗದೀಶ್ ಅವರನ್ನು ಆಚೆ ಹಾಕಿದರು. ಈ ಸಂದರ್ಭ ರೂಲ್ಸ್ ವಿಚಾರಕ್ಕೆ ಜಗದೀಶ್ ಕ್ಯಾತೆ ತೆಗೆದಿದ್ದು, ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಆಗ ಜಗದೀಶ್ 'ನೀನು ರೆಫರಿ ಆಗೋದಕ್ಕೆ ಫಿಟ್ ಇಲ್ಲ, ಕಂಟೆಸ್ಟಂಟ್ ಆಗೋದಕ್ಕೂ ಲಾಯಕ್ಕಿಲ್ಲ. ನಿನಗೆ ತಾಳ್ಮೆನೆ ಗೊತ್ತಿಲ್ಲ' ಅಂತ ಕೂಗಾಡಿದರು. ಅದಕ್ಕೆ ಧನರಾಜ್ ಕಾಮಿಡಿಯಾಗಿ ತಿರುಗೇಟು ಕೊಟ್ಟರು. ಆಗ ಸ್ವರ್ಗವಾಸಿಗಳು ಧನರಾಜ್‌ಗೆ ಸಫೋರ್ಟ್ ಮಾಡಿದ್ರು. ಮತ್ತೆ ಇಬ್ಬರ ನಡುವೆ ವಾಗ್ವಾದ ನಡೆದು ಧನರಾಜ್ ತಾಳ್ಮೆ ಕಳೆದುಕೊಂಡು ಜಗದೀಶ್ ಮೇಲೆ ಕೂಗಾಡಿದರು. ಅಂತಿಮವಾಗಿ ಟಾಸ್ಕ್‌ನಲ್ಲಿ ಉಗ್ರಂ ಮಂಜು ಗೆಲುವು ಸಾಧಿಸಿದರು.

ತುಕಾಲಿ ಮಾನಸ ಜೊತೆ ಕಿರಿಕ್

ಟಾಸ್ಕ್ ಮುಗಿದ ಬಳಿಕ ನರಕವಾಸಿಗಳ ಬಳಿ ತೆರಳಿದ ಜಗದೀಶ್, ಇಷ್ಟುದ್ದ ಅವ್ನೆ..ನನಗೆ ಹೊಡಿಯೋಕೆ ಬರ್ತಾನೆ. ಅವನಿರುವ ಹೈಟ್ ಏನು? ಅವನು ಮಾಡೋದೇನು ಅಂತ ಕ್ಯಾತೆ ತೆಗೆದರು. ಜೊತೆಗೆ ಪದೇ ಪದೇ ಧನರಾಜ್ ಅವರನ್ನು ಉಲ್ಲೇಖಿಸಿ ಕಾಮಿಡಿಫೀಸ್ ಎನ್ನುತ್ತಿದ್ದರು. ಇದರಿಂದ ರೊಚ್ಚಿಗೆದ್ದ ಮಾನಸ, ಹಾಗೇ ಹೇಳಬೇಡಿ. ಕಾಮಿಡಿ ಫೀಸ್ ಅಂದರೆ ವೇಸ್ಟ್ ಅಲ್ಲ. ಬೇಜಾರಿನಲ್ಲಿರುವವರಿಗೆ ನಗಿಸುತ್ತಾರೆ. ಸಾವಿರ ಜನರನ್ನು ನಗಿಸುತ್ತಾರೆ. ಎಷ್ಟು ಸಲ ಅದನ್ನು ಹೇಳ್ತಿರಾ? ನಿಮಗೆ ಫೋಕಸ್ ಆಗಬೇಕು ಅಂತ ಸುಮ್ಮನೆ ಮಾತನಾಡೋದಲ್ಲ. ಮಾರ್ಯಾದೆಗೆ ಬೆಲೆ ಕೊಟ್ಟಷ್ಟೂ ಅತಿಯಾಗಿ ಮಾತನಾಡ್ತಿದ್ದೀಯಾ. ಬಾಯಿ ಮುಚ್ಚಿಕೊಂಡು ಹೋಗಯ್ಯ. ಇವನ ಮನೆಯ ನಾಯಿನಾ ನಾನು ಅಂತ ಏಕವಚನದಲ್ಲಿ ತಿರುಗೇಟು ನೀಡಿದರು.

ಅದಕ್ಕೆ ಜಗದೀಶ್ ನಿನ್ನನ್ನು ಮೆಚ್ಚಿಸೋಕೆ ಬಂದಿಲ್ಲ. ನಿನಗೆ ಮಾರ್ಯಾದೆ ಇರೋದಕ್ಕೆ ನಮ್ಮತ್ರ ಬಿಸಿನೀರು ತೆಗೆದುಕೊಂಡಿದ್ದು. ನೀನು ಮೋಸ ಮಾಡಿದ್ದು. ಏಯ್ ಹೋಗೇ...ನಿನ್ನ ಯೋಗ್ಯತೆಗೆ ಮಾತಾಡು. ನನ್ನ ಯೋಗ್ಯತೆಗೆ ಬರಬೇಡ. ಯಾವ ಸೀಮೆ ಹೆಂಗಸು ಅವಳು ಹೋಗೆಲೇ ಅನ್ನೋಕೆ? ಅಂದರು. ಆಗ ತ್ರಿವಿಕ್ರಮ್, ಶಿಶಿರ್, ಉಗ್ರಂ ಮಂಜು, ಧರ್ಮ ಕೀರ್ತಿರಾಜ್ ರೊಚ್ಚಿಗೆದ್ದರು. ಅವೆಲ್ಲಾ ಮಾತನಾಡಬೇಡಿ, ಒಂದು ಹೆಣ್ಣಿಗೆ ರೆಸ್ಪೆಕ್ಟ್ ಕೊಡಿ ಎಂದರು. ಈ ಸಂದರ್ಭ ಜಗದೀಶ್ ಹಾಗೂ ಉಗ್ರಂ ಮಂಜು ನಡುವೆ ಜಟಾಪಟಿ ನಡೆಯಿತು.


ಕಣ್ಣೀರಿಟ್ಟ ಹಂಸ

ನಮ್ಮ ತಂಡದಲ್ಲಿದ್ದು, ನಮ್ಮ ಬೆನ್ನಿಗೆ ಚೂರಿ ಹಾಕೋದೇ ಕಂಟೆಂಟಾ? ಆಟ ಆಡೋದಕ್ಕೂ ಶಕ್ತಿಯಿಲ್ಲ ಆ ರೀತಿ ಆಗ್ತಿದೆ. ತಿಳಿಯದೇ ಮಾಡಿದ್ರೆ ಪರವಾಗಿಲ್ಲ, ಬೇಕು ಅಂತ ಮಾಡ್ತಿದ್ದಾರೆ. ನಿಜವಾಗಿಯೂ ಕಷ್ಟವಾಗ್ತಿದೆ. 100% ಕೋಡೋಕೆ ಆಗ್ತಿಲ್ಲ ಅಂತ ಬಿಗ್‌ಬಾಸ್ ಮುಂದೆ ಹಂಸ ಕಣ್ಣೀರು ಹಾಕಿದ್ದಾರೆ.


ಬಿಗ್‌ಬಾಸ್‌ನ ಎಕ್ಸ್‌ಪೋಸ್ ಮಾಡ್ತೀನಿ

ಇತ್ತ ಲಾಯರ್ ಜಗದೀಶ್ ಬಿಗ್‌ಬಾಸ್ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ನಾನು ಆಚೆ ಹೋಗಲಿ...ಈ ಬಿಗ್‌ಬಾಸ್‌ನ ಮ್ಯಾನಿಪ್ಯುಲೇಟ್ ಮಾಡಲಿಲ್ಲ ಅಂದ್ರೆ ನನ್ನ ಹೆಸರು ಜಗದೀಶ್ ಅಲ್ಲ. ಬಿಗ್‌ಬಾಸ್‌ನ ಎಕ್ಸ್‌ಪೋಸ್ ಮಾಡ್ತೀನಿ. ನಿಮ್ಮ ಕಾರ್ಯಕ್ರಮ ಹಾಳು  ಮಾಡಿಲ್ಲವೆಂದರೆ ನನ್ನ ಹೆಸರು ಬೇರೆ ಇಡು. ಐ ವಿಲ್ ಡೆಸ್ಟ್ರಾಯ್ ಯುವರ್ ಪ್ರೋಗ್ರಾಂ ಅಂತ ಕ್ಯಾಮರಾ ಮುಂದೆ ಕೈ ತೋರಿಸಿ ಬೆದರಿಕೆ ಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+