X
ಹೋಮ್ ಚಲನಚಿತ್ರಗಳ ಒಳನೋಟ

ಬಿಗ್‌ಬಾಸ್‌ ಸೀಸನ್ 1 ಟು 11 ವಿನ್ನರ್ಸ್‌ ಹಾಗೂ ರನ್ನರ್ಸ್ ಯಾವ ಜಿಲ್ಲೆಯವರು ಗೊತ್ತಾ? ಇಲ್ಲಿದೆ ಲಿಸ್ಟ್

Author Sowmya Bairappa | Updated: Thursday, January 30, 2025, 10:01 AM [IST]

ಬಿಗ್‌ಬಾಸ್‌ ಕನ್ನಡ ಸೀಸನ್ 11 ಮುಕ್ತಾಯಗೊಂಡಿದೆ. ಬಿಗ್‌ಬಾಸ್‌ ಟ್ರೋಫಿ ಗೆಲ್ಲಬೇಕು ಎಂಬುದು ಪ್ರತಿಯೊಬ್ಬ ಸ್ಪರ್ಧಿಯ ಕನಸು. ಈ ಕನಸು ನನಸು ಮಾಡಿಕೊಳ್ಳಲು ದೊಡ್ಮನೆಯಲ್ಲಿ ಸಿಕ್ಕಾಪಟ್ಟೆ ಕಷ್ಟಪಡುತ್ತಾರೆ. ಈ ವ್ಯಕ್ತಿತ್ವದ ಆಟದಲ್ಲಿ ಅಂತಿಮವಾಗಿ ಓರ್ವ ಸ್ಪರ್ಧಿ ಕಪ್ ಗೆಲ್ಲುತ್ತಾರೆ. ಇಲ್ಲಿ ಬಿಗ್‌ಬಾಸ್‌ ಸೀಸನ್ 1 ರಿಂದ ಸೀಸನ್ 11ರ ವರೆಗೆ ವಿನ್ನರ್ಸ್‌ ಹಾಗೂ ರನ್ನರ್ಸ್ ಆದ ಸ್ಪರ್ಧಿಗಳು ಎಲ್ಲಿಯವರು ಎಂಬ ಮಾಹಿತಿಯನ್ನು ನೀಡಲಾಗಿದೆ.


cover image
ಬಿಗ್‌ಬಾಸ್‌ ಕನ್ನಡ ಸೀಸನ್ 1
1

2013ರಲ್ಲಿ  ಆರಂಭವಾಗಿದ್ದ ಬಿಗ್‌ಬಾಸ್‌ ಕನ್ನಡ ಸೀಸನ್ 1ರಲ್ಲಿ ಕನ್ನಡ ಸಿನಿಮಾರಂಗದ  ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ವಿಜೇತರಾಗಿದ್ದರು. ಇವರ ಮೂಲತಃ ಬೆಂಗಳೂರಿನವರೇ. ಇನ್ನು  ಸೀಸನ್ ಒಂದರಲ್ಲಿ ಅರುಣ್ ಸಾಗರ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಇವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರು.

ಬಿಗ್‌ಬಾಸ್‌ ಸೀಸನ್ 2
2

2014ರಲ್ಲಿ ನಡೆದಿದ್ದ ಬಿಗ್‌ಬಾಸ್‌ ಸೀಸನ್ 2ರಲ್ಲಿ ನಿರೂಪಕ ಅಕುಲ್ ಬಾಲಾಜಿ ಗೆಲುವು ತಮ್ಮದಾಗಿಸಿಕೊಂಡಿದ್ದರು. ಆಂಧ್ರಪ್ರದೇಶದ ಕಡಪ ಜಿಲ್ಲೆಯ ರೈಲ್ವೆ ಕೋಡೂರಿನಲ್ಲಿ ಜನಿಸಿದ ಅಕುಲ್ ಬಾಲಾಜಿ, ಹದಿನಾರನೇ ವಯಸ್ಸಿನಲ್ಲಿಯೇ ಬೆಂಗಳೂರಿಗೆ ಬಂದರು. ತೆಲುಗು ಇವರ ಮಾತೃಭಾಷೆಯಾದರೂ ಕನ್ನಡಿಗರಾಗಿ ಗುರುತಿಸಿಕೊಂಡಿದ್ದಾರೆ. ಸೃಜನ್ ಲೋಕೇಶ್ ಎರಡನೇ ಸೀಸಸ್‌ನ ರನ್ನರ್ ಅಪ್ ಆಗಿದ್ದು, ಇವರು ಕೂಡ ಬೆಂಗಳೂರಿನವೇ ಆಗಿದ್ದಾರೆ.

ಬಿಗ್‌ಬಾಸ್‌ ಸೀಸನ್ 3
3

ಬಿಗ್‌ಬಾಸ್‌ ಸೀಸನ್ 3ರಲ್ಲಿ ಕನ್ನಡ ಜನಪ್ರಿಯ ನಟಿ ಶ್ರುತಿ ವಿಜಯಶಾಲಿಯಾಗಿದ್ದರು. ಇವರು ಬೆಂಗಳೂರಿನವರೇ ಆಗಿದ್ದಾರೆ. ಮೂರನೇ ಸೀಸನ್‌ನಲ್ಲಿ ನಟ ಚಂದನ್ ಕುಮಾರ್ ರನ್ನರ್ ಆಪ್ ಆಗಿದ್ದರು. ಚಂದನ್ ಮೂಲತಃ ಸಾಂಸ್ಕೃತಿಕ ನಗರಿ ಮೈಸೂರಿನವರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ.


ಬಿಗ್‌ಬಾಸ್‌ ಸೀಸನ್ 4
4

2016-17ರಲ್ಲಿ ಜರುಗಿದ ಬಿಗ್‌ಬಾಸ್‌ ಸೀಸನ್ 4ರಲ್ಲಿ ಒಳ್ಳೆ ಹುಡುಗ ಪ್ರಥಮ್ ಟ್ರೋಫಿ ಗೆದ್ದಿದ್ದರು. ಕಿರಿಕ್ ಕೀರ್ತಿ ರನ್ನರ್ ಅಪ್ ಆಗಿದ್ದರು. ಪ್ರಥಮ್ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನರಾಗಿದ್ದು, ಕಿರಿಕ್ ಕೀರ್ತಿ ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟದವರಾಗಿದ್ದಾರೆ.

ಬಿಗ್‌ಬಾಸ್ ಸೀಸನ್ 5
5

ಬಿಗ್‌ಬಾಸ್ ಸೀಸನ್ 5ರಲ್ಲಿ ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ವಿನ್ನರ್ ಆಗಿದ್ದರು.  ಚಂದನ್ ಶೆಟ್ಟಿ ಮೂಲತಃ ಹಾಸನ ಜಿಲ್ಲೆಯ ಶಾಂತಿಗ್ರಾಮದವರಾಗಿದ್ದಾರೆ. ಇನ್ನು ಬಿಗ್‌ಬಾಸ್ ಸೀಸನ್ 5ರ ರನ್ನರ್ ಅಪ್ ದಿವಾಕರ್. ಇವರು ಮೂಲತಃ ಬೆಂಗಳೂರಿನರಾಗಿದ್ದಾರೆ.

ಬಿಗ್‌ಬಾಸ್ ಸೀಸನ್ 6
6

2018-19ರಲ್ಲಿ ನಡೆದ ಬಿಗ್‌ಬಾಸ್ ಸೀಸನ್ 6ರಲ್ಲಿ ಆಧುನಿಕ ಮಾದರಿ ರೈತ ಶಶಿಕುಮಾರ್ ವಿಜೇತರಾಗಿದ್ದರು. ನವೀನ್ ಸಜ್ಜು ಸೀಸನ್ 6ನ ರನ್ನರ್ ಅಪ್ ಆಗಿದ್ದರು. ಆಧುನಿಕ ಮಾದರಿ ರೈತ ಅಂತ ಖ್ಯಾತಿ ಪಡೆದಿರುವ ಶಶಿಕುಮಾರ್ ಚಿಕ್ಕಬಳ್ಳಾಪುರದ ಚಿಂತಾಮಣಿ ಮೂಲದವರು. ನವೀನ್ ಸಜ್ಜು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬಳ್ಳೆಕೆರೆಯವರು.

ಬಿಗ್‌ಬಾಸ್‌ ಸೀಸನ್ 7
7

2019-20ರಲ್ಲಿ ನಡೆದಿದ್ದ  ಬಿಗ್‌ಬಾಸ್‌ ಸೀಸನ್ 7ರಲ್ಲಿ ಶೈನ್ ಶೆಟ್ಟಿ ಗೆಲುವು ತಮ್ಮದಾಗಿಸಿಕೊಂಡಿದ್ದರು. ಹಾಸ್ಯ ನಟ ಕುರಿ ಪ್ರತಾಪ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಶೈನ್ ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರದವರಾಗಿದ್ದು, ಕುರಿ ಪ್ರತಾಪ್ ಸಾಂಸ್ಕೃತಿಕ ನಗರಿ ಮೈಸೂರಿನವರಾಗಿದ್ದಾರೆ.

ಬಿಗ್‌ಬಾಸ್‌ ಸೀಸನ್ 8
8

2022ರಲ್ಲಿ ಜರುಗಿದ್ದ ಬಿಗ್‌ಬಾಸ್‌ ಸೀಸನ್ 8ರಲ್ಲಿ ಮಜಾಭಾರತ ಖ್ಯಾತಿಯ ಹಾಸ್ಯ ಕಲಾವಿದ ಮಂಜು ಪಾವಗಡ ಗೆಲುವು ಸಾಧಿಸಿದ್ದರು. ಬೈಕರ್ ಅರವಿಂದ್ ರನ್ನರ್ ಅಪ್ ಆಗಿದ್ದರು. ಮಂಜು ಮೂಲತಃ ತುಮಕೂರು ಜಿಲ್ಲೆಯ ಪಾವಗಡದವರಾಗಿದ್ದು, ಅರವಿಂದ್ ಉಡುಪಿಯವರಾಗಿದ್ದಾರೆ.

ಬಿಗ್‌ಬಾಸ್ ಸೀಸನ್ 9
9

ಬಿಗ್‌ಬಾಸ್ ಒಟಿಟಿ ಸೀಸನ್ 1ರಲ್ಲಿ ಭಾಗವಹಿಸಿದ್ದ ನಟ ರೂಪೇಶ್ ಶೆಟ್ಟಿ, ವಿನ್ನರ್‌ ಆಗಿ ಹೊರಹೊಮ್ಮಿದ್ದರು. ಈ ಮೂಲಕ ಸೀಸನ್ 9ಕ್ಕೆ ಆಯ್ಕೆಯಾಗಿದ್ದರು. ಬಿಗ್‌ಬಾಸ್ ಸೀಸನ್ 9ರಲ್ಲೂ ವಿನ್ನರ್ ಆಗಿ ಹೊರಹೊಮ್ಮಿದ ಇವರು, ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಾಳದವರು. ಈ ಸೀಸನ್‌ ರನ್ನರ್ ರಾಕೇಶ್ ಅಡಿಗ. ಇವರು ಬೆಂಗಳೂರಿನವರೇ ಆಗಿದ್ದಾರೆ.

ಬಿಗ್ ಬಾಸ್‌‌ ಸೀಸನ್ 10
10

2023-2024ನೇ ಸಾಲಿನಲ್ಲಿ ನಡೆದ ಬಿಗ್ ಬಾಸ್‌‌ ಸೀಸನ್ 10ರಲ್ಲಿ ಕಾರ್ತಿಕ್ ಮಹೇಶ್ ವಿಜೇತರಾಗಿ ಹೊರಹೊಮ್ಮಿದ್ದರು. ಡ್ರೋನ್ ಪ್ರತಾಪ್ ರನ್ನರ್ ಅಪ್ ಆಗಿದ್ದರು. ಕಾರ್ತಿಕ್ ಸಾಂಸ್ಕೃತಿಕ ನಗರಿ ಮೈಸೂರಿನವರಾಗಿದ್ದು, ಪ್ರತಾಪ್ ಸಕ್ಕರೆ ನಾಡು ಮಂಡ್ಯ ಜಿಲ್ಲೆಯವರು.

ಬಿಗ್‌ಬಾಸ್‌ ಕನ್ನಡ ಸೀಸನ್ 11
11

ಇತ್ತೀಚೆಗೆ ಮುಕ್ತಾಯಗೊಂಡ ಬಿಗ್‌ಬಾಸ್‌ ಕನ್ನಡ ಸೀಸನ್ 11ರ ವಿನ್ನರ್ ಹಳ್ಳಿ ಹೈದ ಹನುಮಂತ ಲಮಾಣಿ. ಇವರು ಮೂಲತಃ ಹಾವೇರಿ ಜಿಲ್ಲೆಯ ಚಿಲ್ಲೂರು ಬಡ್ನಿ ಗ್ರಾಮದವರು. ಈ ಸೀಸಸ್‌ನ ರನ್ನರ್ ಅಪ್ ತ್ರಿವಿಕ್ರಮ್ ಅವರು ತುಮಕೂರು ಜಿಲ್ಲೆಯ ಗುಬ್ಬಿಯವರಾಗಿದ್ದಾರೆ.





Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+