ಕಳೆದ ವಾರ ಬಿಗ್ಬಾಸ್ ಮನೆಗೆ ಎಲಿಮಿನೇಟೆಡ್ ಸ್ಪರ್ಧಿಗಳು ಆಗಮಿಮಿಸಿದ್ದರು. ಈ ಸಂದರ್ಭ ಕೆಲ ಸ್ಪರ್ಧಿಗಳು ಹೊರಗಿನ ವಿಚಾರವನ್ನು ಸ್ಪರ್ಧಿಗಳೊಂದಿಗೆ ಚರ್ಚಿಸಿದ್ದರು. ಇಶಾನಿ ಅವರು ಡ್ರೋನ್ ಪ್ರತಾಪ್ ಬಗ್ಗೆ ಕಾಮೆಂಟ್ ಮಾಡಿದ್ದರು. ರಕ್ಷಕ್ ಬುಲೆಟ್ ಕೂಡ ಕಿರಿಕ್ ಮಾಡಿದ್ದರು. ಇತ್ತ ಸ್ನೇಹಿತ್ ಹಾಗೂ ಇಶಾನಿ ಮಾತುಗಳಿಂದ ನಮ್ರತಾ ಗೌಡ ಬಹಳ ಕುಗ್ಗಿದ್ದರು. ಇದೆಲ್ಲದಕ್ಕೂ ವೀಕೆಂಡ್ ಎಪಿಸೋಡ್ನಲ್ಲಿ ಕಿಚ್ಚ ಸುದೀಪ್ ತಮ್ಮ ಮಾತಿನ ಮೂಲಕ ಬಿಸಿ ಮುಟ್ಟಿಸಿದ್ದಾರೆ.