X
ಹೋಮ್ ಚಲನಚಿತ್ರಗಳ ಒಳನೋಟ

ಪ್ರೀತಿಯಿಂದ ಇದ್ದು ಬಂದವರಿಗೆ ಥ್ಯಾಂಕ್ಸ, ಘನಕಾರ್ಯ ಮಾಡಿದವರಿಗೆ ಗಾಡ್ ಬ್ಲೇಸ್ ಯುವರ್ ಸೋಲ್ಸ್: ಮಾಜಿ ಸ್ಪರ್ಧಿಗಳಿಗೆ ಸುದೀಪ್ ಛೀಮಾರಿ

Author Sowmya Bairappa | Published: Monday, January 22, 2024, 11:27 AM [IST]

ಕಳೆದ ವಾರ ಬಿಗ್‌ಬಾಸ್ ಮನೆಗೆ ಎಲಿಮಿನೇಟೆಡ್ ಸ್ಪರ್ಧಿಗಳು ಆಗಮಿಮಿಸಿದ್ದರು. ಈ ಸಂದರ್ಭ ಕೆಲ ಸ್ಪರ್ಧಿಗಳು ಹೊರಗಿನ ವಿಚಾರವನ್ನು ಸ್ಪರ್ಧಿಗಳೊಂದಿಗೆ ಚರ್ಚಿಸಿದ್ದರು. ಇಶಾನಿ ಅವರು ಡ್ರೋನ್ ಪ್ರತಾಪ್‌ ಬಗ್ಗೆ ಕಾಮೆಂಟ್ ಮಾಡಿದ್ದರು. ರಕ್ಷಕ್ ಬುಲೆಟ್ ಕೂಡ ಕಿರಿಕ್ ಮಾಡಿದ್ದರು. ಇತ್ತ ಸ್ನೇಹಿತ್ ಹಾಗೂ ಇಶಾನಿ ಮಾತುಗಳಿಂದ ನಮ್ರತಾ ಗೌಡ ಬಹಳ ಕುಗ್ಗಿದ್ದರು. ಇದೆಲ್ಲದಕ್ಕೂ ವೀಕೆಂಡ್ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ತಮ್ಮ ಮಾತಿನ ಮೂಲಕ ಬಿಸಿ ಮುಟ್ಟಿಸಿದ್ದಾರೆ.


cover image
ಇಶಾನಿ ಕೌಂಟರ್ ಕೊಟ್ಟ ಕಿಚ್ಚ

ದೊಡ್ಮನೆಗೆ ರೀ ಎಂಟ್ರಿಕೊಟ್ಟಿದ್ದ ಇಶಾನಿ, ಕಾಗೆ ಗೊತ್ತಿಲ್ಲವಾ? ಕಾಗೆ ಕಕ್ಕಾ ಮಾಡಿಬಿಟ್ಟು ಎಲ್ಲಾ ಕಡೆ ಹೋಗ್ತಾನೆ ಇದೆ. ಸಿಂಪಥಿ ಕಾರ್ಡ್ ಯೂಸ್ ಮಾಡಿ. ಉಳ್ಕೊಂಡಿದ್ದೇ ಅದರಿಂದ ಅಲ್ವಾ? ಕಾಗೆ ಕಾ... ಕಾ.. ಅಂತಿದೆ ಅಂತ ಡ್ರೋನ್ ಪ್ರತಾಪ್‌ ಬಗ್ಗೆ ಕಾಮೆಂಟ್ ಮಾಡಿದ್ದರು. ವೀಕೆಂಡ್ ಎಲಿಸೋಡ್‌ನಲ್ಲಿ ಈ ಬಗ್ಗೆ ಮಾತನಾಡಿದ ಸುದೀಪ್, ಹಾಯ್ ಇಶಾನಿ..ನೀವು ನೋಡ್ತೀದ್ದೀರಾ ಅಂತ ಭಾವಿಸುತ್ತೇನೆ. ಕಾಗೆ ಕಕ್ಕಾ ಮಾಡಿಕೊಂಡು ಓಡಾಡುತ್ತಿದೆ. ಸಿಂಥಿಯಿಂದ ಗೆದ್ದುಕೊಂಡು ಬಂದಿದೆ ಅಂತೀರಿ. ವಾವ್ ಇಶಾನಿ..! ನಿಮ್ಮ ಈ ಸಾಹಿತ್ಯ ನನಗೆ ಬಹಳ ಇಷ್ಟವಾಯ್ತು. ಕಾಗೆ ಕಕ್ಕಾ ಮಾಡುತ್ತಿರುವುದು ಕಾಣುತ್ತಿದೆ. ಆದರೆ, ಕಾಗೆ ಇನ್ನೂ ಮನೆಯೊಳಗೆ ಇದೆ ಅನ್ನೋದು ನಿಮಗೆ ಕಾಣ್ತಿಲ್ವಾ? ಪ್ರತಾಪ್ ಗೆದ್ದು ಉಳ್ಕೊಂಡಿದ್ದಾರೆ ಅಂತ ತಿರುಗೇಟು ನೀಡಿದ್ದಾರೆ. 

 

ಕೆದಕಿ ಬರುತ್ತಿದ್ದರೆ ಉತ್ತರ ಕೊಡೋಕೆ ಪ್ರಯತ್ನ ಪಡಿ

ಇದೇ ವೇಳೆ ಪ್ರತಾಪ್ ನಿಮಗೆ ಉತ್ತರ ಕೊಡೋಕೆ ಬರಲ್ವಾ? ಅಂತ ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರತಾಪ್ ಗೆಸ್ಟ್ ಅಂತ ಸುಮ್ಮನಿದ್ದೆ ಸರ್ ಅಂತ ಹೇಳಿದಾಗ, ನಿಮಗೊಂದು ಮಾತು ಹೇಳ್ತೀನಿ ಕೇಳಿ. ನಾನು ತುಂಬಾ ಹಂಬಲ್, ವೆರಿ ಹ್ಯೂಮನ್. ಆದರೆ, ಅದು ನನ್ನ ಕ್ಯಾರೆಕ್ಟರ್ ಅಲ್ಲ. ಅದು ಗೆಸ್ಚರ್. ಯಾರಿಗೆ ಹೋಗಬೇಕೋ ಅವರಿಗೆ ಮಾತ್ರ ಹೋಗಬೇಕು. ಗೌರವಕ್ಕೆ ಅರ್ಹ ಇಲ್ಲದಿರೋರಿಂದ ದೂರ ಇರೋಕೆ ಪ್ರಯತ್ನಪಡಿ. ಕೆದಕಿ ಕೆದಕಿ ಬರುತ್ತಿದ್ದರೆ ಉತ್ತರ ಕೊಡೋಕೆ ಪ್ರಯತ್ನ ಪಡಿ. ನಿವ್ಯಾರೂ ಇಲ್ಲಿಯವರೆಗೂ ಏನೂ ಮಾಡದೇ ಬಂದಿಲ್ಲ. ಇದು ತಲೆಯಲ್ಲಿರಲಿ ಎಂದರು. 

 

ಯಾರೂ ನೋಟೀಸ್ ಮಾಡದ್ದನ್ನ ನೀವು ಮಾಡಿದ್ದೀರಾ

ಕೊನೆಗೆ ಈಗಲಾದರೂ ಉತ್ತರ ಕೊಡಿ. ಪಾಪ ಕಾಗೆ ಕಕ್ಕಾ ಅಂತ ಹೇಳಿಬಿಟ್ಟು ಹೋದರು ನಿಮಗೆ. ಯಾರೂ ನೋಟೀಸ್ ಮಾಡದ ನನ್ನ ಕ್ಕಕ್ಕಾ ನೀವಾದರೂ ನೋಡಿದ್ರಿ. ಅದು ನಿಮ್ಮ ಕಣ್ಣಿಗೆ ಬೀಳಬೇಕು ಅಂತ ಮಾಡಿರುವ ಕ್ಕಕ್ಕಾನಾ? ಅಂತ ಪ್ರತಾಪ್‌ಗೆ ಸುದೀಪ್ ಹೇಳಿಕೊಟ್ಟರು. ಆಗ ಪ್ರತಾಪ್, ಯಾರೂ ನೋಟೀಸ್ ಮಾಡದ್ದನ್ನ ನೀವು ಮಾಡಿದ್ದೀರಾ. ನಿಮಗೆ ಒಳ್ಳೆಯದಾಗಲಿ ಅಂತ ಹೇಳಿದರು. ಆಗ ಸುದೀಪ್ ಕಕ್ಕಾಗೆ ಜೈ ಅಂತ ಹೇಳಿದರು. 

ರಕ್ಷಕ್ ಮೇಲೆ ನಟ ಸುದೀಪ್ ಗರಂ

ಈ ಹಿಂದೆ ಒಮ್ಮೆ ಡ್ರೋನ್ ಪ್ರತಾಪ್ ಎಲಿಮಿನೇಟ್​ಆದವರ ಬೆಡ್‌ ಶೀಟ್‌ಗಳು ವಿನಯ್​ಅವರ ಬೆಡ್​ಸೇರುತ್ತಿವೆ ಎಂದಿದ್ದರು. ಈ ಹೇಳಿಕೆಯನ್ನು ಇಟ್ಟುಕೊಂಡು ರಕ್ಷಕ್​ ಮತ್ತೆ ಮನೆಯೊಳಗೆ ಹೋದಾಗ ಕಿರಿಕ್ ಮಾಡಿದ್ದರು. ಇದು ಹಲವರ ಬೇಸರಕ್ಕೆ ಕಾರಣವಾಗಿತ್ತು. ಇದೇ ವಿಚಾರದ ಬಗ್ಗೆ ಮಾತನಾಡಿದ ಸುದೀಪ್, ಇನ್ನೊಂದು ಬ್ಯಾಂಕೆಟ್ ಬರುತ್ತೆ. ರಕ್ಷಕ್ ಅವರದ್ದು. ರಕ್ಷಕ್ ಅಲ್ವಾ? ಆ ಕಂಟೆಸ್ಟೆಂಟ್ ಹೆಸರು? ವಯಸ್ಸು ೧೧,೧೨ ಇರಬೇಕು ಅಲ್ವಾ? ಎಷ್ಟು ಇಪ್ಪತ್ತೆರಡಾ? ನಿಮ್ಮ ತಂದೆ ದೊಡ್ಡ ಹೆಸರು ಮಾಡಿದ್ದಾರೆ. ಬುಲೆಟ್ ಪ್ರಕಾಶ್ ಅವರ ಮಗನಾಗಿ ಹೆಸರು ಉಳಿಸಿಕೊಳ್ಳಿ. ಸಮಾಜ ನಿಮಗೆ ಕೊಡುವ ಗೌರವವನ್ನು ದುರುಪಯೋಗಪಡಿಸಿಕೊಳ್ಳಬೇಡಿ. ನೀವು ಮನೆಯಿಂದ ಹೊರಗಡೆ ಹೋಗಿ ಸಂದರ್ಶನಗಳಲ್ಲಿ ಬಿಗ್‌ಬಾಸ್‌ ಬಗ್ಗೆ ಮಾತನಾಡಿರೋದನ್ನು ಕೇಳಿದ್ದೇವೆ. ಚೆನ್ನಾಗಿಟ್ಟಿರಲಿ ದೇವರು ನಿಮ್ಮನ್ನ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. 

ಪಾಪ ಅವರ ಮುಖ ಚಿಕ್ಕದಾಗಯ್ತು

ನಮ್ರತಾ ಜೊತೆ ಮಾತನಾಡಿದ ಸುದೀಪ್, ನಿಮ್ಮ ಸ್ಟ್ರೇಟ್ ಫಾರ್ವರ್ಡ್‌ನೆಸ್ ನನಗೆ ಬಹಳ ಇಷ್ಟವಾಯಿತು. ಎಷ್ಟು ಜನರನ್ನ ಗೆಲ್ಲಿಸ್ತೀರಾ ಸ್ನೇಹಿತ್ ಅಂತ ಹೇಳಿದಾಗ ಪಾಪ ಅವರ ಮುಖ ಚಿಕ್ಕದಾಗೋಯ್ತು. ಏನು ನಡೆಯುತ್ತಿದೆ ಹೊರಗೆ? ಹೊರಗಡೆ ಏನಾದರೂ ನಡೆದು ಅಸಹ್ಯವಾಗಿದ್ದರೆ, ನಾನು ಈ ಹಿಂದಿಯೇ ಹೇಳಿದ್ದೀನಿ. ನಾವಲ್ಲಿ ಸುಮ್ಮನೆ ಇರ್ತೀವಾ? ಇದನ್ನು ನಿಮಗೆ ಸಂಗೀತಾ ಕೂಡ ಹೇಳಿದರು ಅಂತ ಹೇಳಿದ್ರು. ಆಗ ನಮ್ರತಾ ಪ್ರತಿದಿನ ಹೊರಗೆ ನಿಮಗಾಗಿ ಫೈಟ್ ಮಾಡ್ತಿದ್ದೀನಿ ಅಂತ ಸ್ನೇಹಿತ್ ಹೇಳಿದ್ರು ಸರ್ ಎಂದಾಗ, ಫೈಟ್ ಯುದ್ಧ ನಡೆದರೆ..! ಬಿಗ್‌ಬಾಸ್‌ ವೇದಿಕೆಯಿಂದ ನಾವು ನಿಮ್ಮನ್ನ ಹಾಳಾಗೋಕೆ ಬಿಡಲ್ಲ ಅಂದ್ಮೇಲೆ ಈ ಯುದ್ಧ ಯಾರ ಮೇಲೆ, ಯಾರಿಂದ ಅಂತ ಹೇಳಿದರೆ ನಾವೇನು ತಪ್ಪು ಮಾಡ್ತಿದ್ದೀವಿ ಅಂತ ಕಲಿತು ನಾವು ಸರಿ ಹೋಗ್ತಿವಿ ಅಂತ ಪ್ರತಿಕ್ರಿಯೆ ಕೊಟ್ಟರು. 

 

ಟಾಪ್‌ 5ನಲ್ಲಿ ನಿನಗೆ ಚಾನ್ಸ್ ಇಲ್ಲ

ಈ ಸಂದರ್ಭ ನಮ್ರತಾ ಇಲ್ಲ ಸರ್.. ಟಾಪ್‌ 5ನಲ್ಲಿ ನಿನಗೆ ಚಾನ್ಸ್ ಇಲ್ಲ. ಆಟವನ್ನ ಹಾಳು ಮಾಡಿಕೊಂಡಿದ್ಯಾ ಅಂತ ಹೇಳಿದ್ರು. ಅಗ ಸುದೀಪ್, ನನಗೂ ಸಾವಿರ ಜನ ಬಂದು ಹೇಳಬಹುದು. ನೀವು ಎಷ್ಟೇ ಚೆನ್ನಾಗಿ ಮಾಡಿದ್ರೂ ನೀವು ರಜನಿಕಾಂತ್ ಆಗೋಕೆ ಆಗಲ್ಲ, ರಾಜ್‌ಕುಮಾರ್ ಆಗೋಕೆ ಆಗಲ್ಲ. ವಿಷ್ಣುವರ್ಧನ್ ಆಗೋಕೆ ಆಗಲ್ಲ, ಅಂಬರೀಶ್ ಆಗೋಕೆ ಆಗಲ್ಲ ಅಂತ. ನನಗೆ ಯಾರೂ ಆಗೋಕೆ ಆಗಲ್ಲ. ನನಗೆ ಎಲ್ಲರ ಆರ್ಶೀವಾದವಿದ್ದರೆ ಸಾಕು. ನಾನೇನಾಗಬೇಕೋ ಅದಾಗಿದ್ದೀನಿ. ಟಾಪ್‌ 5ನಲ್ಲಿ ಇಲ್ಲಾಂದ್ರೆ ಟಾಪ್ 7ನಲ್ಲಿ ಇದ್ದೀರಾ ಅಲ್ವಾ? ಅಂತ ಕೇಳಿದರು. ನಿಮಗೆ ಒಳ್ಳೆಯದ್ದು ಬಯಸೋರು ನಿಮ್ಮ ಪೇರೆಂಟ್ಸ್, ಫ್ಯಾನ್ಸ್ ಮತ್ತು ಫ್ರೆಂಡ್ಸ್. ಮೊದಲು ಇವರ ಮೇಲೆ ನಂಬಿಕೆ ಇಡಿ ಅಂತ ಕಿವಿಮಾತು ಹೇಳಿದರು.  

ಕಾರ್ತಿಕ್ ನೀವು ಯಾವಾಗ ಇಷ್ಟು ವೀಕ್ ಆದ್ರಿ?

ಇದೇ ವಿಚಾರವಾಗಿ ಕಾರ್ತಿಕ್ ಜೊತೆ ಮಾತನಾಡಿದ ಸುದೀಪ್.. ಕಾರ್ತಿಕ್ ಅವರೇ ನೀವು ಯಾವಾಗ ಇಷ್ಟು ವೀಕ್ ಆದ್ರಿ? ಯಾವುದೂ ಅಗ್ಲಿ ಆಗಿಲ್ಲ ಅನ್ನೋತನಕ ನಾವ್ಯಾರೂ ಬಾಗಿಲು ತಟ್ಟೋದಿಲ್ಲ. ತಟ್ಟಿಲ್ಲ ಅಂದ್ರೆ ಅಗ್ಲಿ ಆಗಿಲ್ಲ ಅಂತ ಅರ್ಥ, ಬಂದು ಹೇಳಿದವರು ನಿಮ್ಮ ಅಪ್ಪ, ಅಮ್ಮ, ಮಾವ, ಫ್ಯಾಮಿಲಿನಾ? ನೀವೆಲ್ಲಾ ಹೊರಗೆ ಹಾಕಿರುವ ಸ್ಪರ್ಧಿಗಳು. ಇದನ್ನೆಲ್ಲಾ ನೋಡಿ ನಾನು ಟೆರಿಬಲಿ ಅಪ್‌ಸೆಟ್‌ ಆಗಿದ್ದೀನಿ. ಒಂದು ಕಥೆ ತಗೊಂಡ್ರೆ ಇಡೀ ಸಿನಿಮಾದಲ್ಲಿ ಕ್ಲೈಮ್ಯಾಕ್ಸ್ ಹತ್ತತ್ರ ಬರ್ತಿದ್ದಂಗೆ ಅಥವಾ ಹೀರೋಯಿನ್‌ಗೆ ಸಿಕ್ಕಾಪಟ್ಟೆ ತೊಂದರೆಗಳು ಬರ್ತವೆ. ಅದನ್ನ ದಾಟಿ ಗೆಲ್ಲುತ್ತಿದ್ದಂತೆಯೇ ಕ್ಲೈಮ್ಯಾಕ್ಸ್. ತೊಂದರೆ ಬರ್ತಿದೆ ಅಂದ್ರೆ, ಕ್ಲೈಮ್ಯಾಕ್ಸ್ ಹತ್ತಿರ ಬಂತು ಅಂತ ಅರ್ಥ ಎಂದರು. 

 

ಮಾಜಿ ಸ್ಫರ್ದಿಗಳಿಗೆ ಛೀಮಾರಿ

ಇದೇ ವೇಳೆ ಸುದೀಪ್ ಮಾಜಿ ಸ್ಪರ್ಧಿಗಳಿಗೆ ಛೀಮಾರಿ ಹಾಕಿದರು. ಒಳಗಡೆ ಹೋಗಿ ಪ್ರೀತಿಯಿಂದ ಇದ್ದು ಬಂದವರಿಗೆ ಥ್ಯಾಂಕ್ಸ. ಇನ್ನೂ ಕೆಲವರು ಮನೆಯೊಳಗೆ ಹೋಗಿ ಘನಕಾರ್ಯ ಮಾಡಿಕೊಂಡು ಬಂದವರಿಗೆ ಗಾಡ್ ಬ್ಲೇಸ್ ಯುವರ್ ಸೋಲ್ಸ್ ಅಂತ ಹೇಳಿದರು. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+