X
ಹೋಮ್ ಚಲನಚಿತ್ರಗಳ ಒಳನೋಟ

ವೋಟಿಂಗ್‌ನಲ್ಲಿ ಎರಡನೇ ಸ್ಥಾನಕ್ಕೇರಿದ ನಮ್ರತಾ ಗೌಡ: ನನಗೆ ಟ್ರೋಲ್ ಶುರುವಾಗುತ್ತೆ ಎಂದ ಕಿಚ್ಚ ಸುದೀಪ್

Author Sowmya Bairappa | Published: Monday, December 4, 2023, 01:20 PM [IST]

ಬಿಗ್‌ಬಾಸ್‌ ಮನೆಯಲ್ಲಿ ಕಳೆದೆರಡು ವಾರಗಳಿಂದ ವೋಟಿನ ಪ್ರಕಾರ ಸ್ಪರ್ಧಿಗಳನ್ನು ಸೇಫ್ ಮಾಡಲಾಗುತ್ತಿದೆ. ಈ ವಾರ ಒಟ್ಟು ಎಂಟು ಸ್ಪರ್ಧಿಗಳು ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದರು. ಭಾನುವಾರ ಎಲಿಮಿನೇಷ್‌ನ ಕೊನೆಯ ಹಂತದಲ್ಲಿ ಸ್ನೇಹಿತ್ ಹಾಗೂ ಮೈಕಲ್ ಉಳಿದುಕೊಂಡಿದ್ದರು. ಅವರನ್ನು ಕಿಚ್ಚ ಸುದೀಪ್ ಇದೇ ಮೊದಲ ಬಾರಿಗೆ ತಮ್ಮ ವಿಶೇಷ ಅಧಿಕಾರ ಬಳಸಿ ಅವರಿಬ್ಬರನ್ನು ಉಳಿಸಿಕೊಂಡಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಇದೇ ವಿಚಾರ ಟ್ರೋಲ್ ಕೂಡ ಆಗಿದೆ.


cover image
ಸುದೀಪ್ ನಿರ್ಧಾರದ ಬಗ್ಗೆ ಟೀಕೆ

ಬಿಗ್‌ಬಾಸ್ ಶೋ ಒಂದಲ್ಲಾ ಒಂದು ಕಾರಣಕ್ಕೆ ಟ್ರೋಲ್ ಆಗುತ್ತಲೇ ಇರುತ್ತದೆ. ಕಳೆದ ಸಂಚಿಕೆಯಲ್ಲಿ ಸುದೀಪ್ ತಮಗಿರುವ ವಿಶೇಷ ಅಧಿಕಾರ ಬಳಸಿ ಮೈಕಲ್ ಮತ್ತು ಸ್ನೇಹಿತ್ ಅವರನ್ನು ಸೇವ್ ಮಾಡಿದ್ದರು. ಇದನ್ನು ಅನೇಕರು ಟೀಕೆ ಮಾಡಿದ್ದಾರೆ. ಸುದೀಪ್ ನಿರ್ಧಾರ ಸರಿಯಿಲ್ಲ ಅಂತ ಅನೇಕರು ಹೇಳಿದ್ದಾರೆ. ಈ ವಿಚಾರದಲ್ಲಿ ತಮ್ಮನ್ನು ಟ್ರೋಲ್ ಮಾಡಲಾಗುತ್ತೆ ಅಂತ ಸುದೀಪ್‌ಗೆ ಮೊದಲೇ ಗೊತ್ತಾಗಿತ್ತು. ಹೀಗಾಗಿ, ಈ ಬಗ್ಗೆ ವೇದಿಕೆ ಮೇಲೆ ಮಾತನಾಡಿದ್ದರು.

 

ನನಗೆ ಸರಿ ಅನಿಸಿದ್ದನ್ನು ಮಾಡಿದ್ದೇನೆ

ತಮ್ಮ ನಿರ್ಧಾರದ ಬಗ್ಗೆ ಮಾತನಾಡಿದ್ದ ಸುದೀಪ್, ನನಗೆ ಈ ವಿಶೇಷ ಅಧಿಕಾರ ಇತ್ತು. ಆದರೆ, ಅದನ್ನು ಈವರೆಗೂ ಬಳಸಿರಲಿಲ್ಲ. ಇದನ್ನು ಬಳಸೋದು ಯಾವಾಗಲೂ ಸರಿ ಅನಿಸಿರಲಿಲ್ಲ. ನಿಮ್ಮಲ್ಲಿ ಒಬ್ಬರು ಎಲಿಮಿನೇಟ್ ಆಗಲೇಬೇಕಿತ್ತು. ಇದು ಮನೆಯವರಿಗೆ ಅನ್ಯಾಯ ಎಂದೆನಿಸಿರಬಹುದು. ಆದರೆ, ನನಗೆ ಸರಿ ಅನಿಸಿದ್ದನ್ನು ಮಾಡಿದ್ದೇನೆ. ನನ್ನ ಈ ನಿರ್ಧಾರಕ್ಕೆ ಜನ ಟ್ರೋಲ್ ಮಾಡುತ್ತಾರೆ ಎಂದಿದ್ದರು. 

ಈ ಬಾರಿ ಹೆಚ್ಚು ಮತ ಪಡೆದ ನಮ್ರತಾ

ಎಂಟನೇ ವಾರ ವರ್ತೂರು ಸಂತೋಷ್ ಅತಿಹೆಚ್ಚು ವೋಟ್ ಪಡೆಯುವ ಮೂಲಕ ಮೊದಲು ಸೇಫ್ ಆದರು. ವರ್ತೂರು ಸಂತೋಷ್ ನಂತರದಲ್ಲಿ ವೀಕ್ಷಕರಿಂದ ಹೆಚ್ಚು ಪ್ರೀತಿ ಪಡೆದ ಸ್ಪರ್ಧಿ ನಮ್ರತಾ. ನಮ್ರತಾ ಕಳೆದ ವಾರಕ್ಕಿಂತ ಈ ಬಾರಿ ಹೆಚ್ಚು ವೋಟ್‌ಗಳನ್ನು ಪಡೆದು ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ. ಆದರೆ, ಏಳನೇ ವಾರ ಅತಿಹೆಚ್ಚು ಮತಗಳನ್ನು ಪಡೆದು ಮೊದಲ ಸ್ಥಾನದಲ್ಲಿದ್ದ ಡ್ರೋನ್ ಪ್ರತಾಪ್ ಈ ಬಾರಿ ಮೂರನೇ ಸ್ಥಾನ ಪಡೆಯುವ ಮೂಲಕ ಎಲಿಮಿನೇಷನ್‌ನಿಂದ ಪಾರಾಗಿದ್ದಾರೆ. 

ವೀಕ್ಷಕರ ಬೇಸರ

ಇನ್ನು ನೈಜೀರಿಯನ್ ಕನ್ನಡಿಗನಾಗಿರುವ ಮೈಕಲ್ ಬಿಗ್‌ಬಾಸ್‌ ಮನೆಗೆ ಕಾಲಿಟ್ಟಾಗಿನಿಂದಲೂ ಎಲ್ಲಾ ಟಾಸ್ಕ್‌ಗಳಲ್ಲೂ ಉತ್ತಮವಾಗಿ ಆಡುತ್ತಿದ್ದಾರೆ. ಹಿಂದೆ-ಮುಂದೆ ಮಾತನಾಡದೇ ಎಲ್ಲರೊಂದಿಗೆ ಚೆನ್ನಾಗಿ ಮಾತನಾಡುತ್ತಾರೆ. ಜೊತೆಗೆ ಕನ್ನಡ ಕಲಿತು, ಚೆನ್ನಾಗಿ ಮಾತನಾಡುತ್ತಾರೆ. ಆದರೂ ಕೂಡ ಅವರಿಗೆ ಇಷ್ಟು ಕಡಿಮೆ ಮತಗಳು ಬಂದಿರುವುದಕ್ಕೆ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. 

ಸಂಗೀತಾರನ್ನು ಇಮಿಟೇಟ್ ಮಾಡಿದ ತುಕಾಲಿ ಸಂತು

ಇನ್ನು ಇಂದಿನ ಸಂಚಿಕೆಯ ಪ್ರೋಮೋವೊಂದು ಬಿಡುಗಡೆಯಾಗಿದ್ದು, ಇದರ ಪ್ರಕಾರ ಬಿಗ್‌ಬಾಸ್ ಹೇಳಿದ ಸೂಚನೆಗಳನ್ನು ಮನೆಯ ಸದಸ್ಯರು ಪಾಲಿಸಬೇಕು. ವರ್ತೂರು ಸಂತೋಷ್ ಮತ್ತು ತುಕಾಲಿ ಸಂತೋಷ್‌ಗೆ ಕಾರ್ತಿಕ್ ಮತ್ತು ಸಂಗೀತಾರಂತೆ ವರ್ತಿಸಿ ಎಂಬ ಆದೇಶ ಬಂದಿದೆ.  ವರ್ತೂರು ಕಾರ್ತಿಕ್ ಆದರೆ, ತುಕಾಲಿ ಸಂತು ಸಂಗೀತಾ ಪಾತ್ರ ಮಾಡಿದರು. ಈ ಸಂದರ್ಭ ತುಕಾಲಿ ಸಂತು, ನಾನು ಎಲ್ಲೇ ಹೋದರೂ ಗುಂಡಿ ತೋಡಿಯೇ ಬರೋದು ಅಂತ ಸಂಗೀತಾ ಅವರನ್ನು ಇಮಿಟೇಟ್ ಮಾಡಿದ್ದು, ಇದು ಜಗಳಕ್ಕೆ ತಿರುಗುವ ಸೂಚನೆಯಿದೆ. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+