X
ಹೋಮ್ ಚಲನಚಿತ್ರಗಳ ಒಳನೋಟ

ಹಳ್ಳಿ ಜನರಿಗೆ ಮಾಟ ಮಾಡೋಕೆ, ನಾಗವಲ್ಲಿ ಥರ ನಿಮ್ಮ ಭಾಷೆ ಬದಲಾಗುತ್ತೆ: ಪ್ರತಾಪ್ ವಿರುದ್ಧ ನಮ್ರತಾ ಕಿಡಿ

Author Sowmya Bairappa | Published: Tuesday, December 19, 2023, 12:59 PM [IST]

ಕಳೆದ ಸಂಚಿಕೆಯಲ್ಲಿ 'ಬಿಗ್‌ಬಾಸ್‌' ಮನೆಯ ಸದಸ್ಯರಿಗೆ 'ಬ್ರೇಕಿಂಗ್ ನ್ಯೂಸ್' ಎಂಬ ಟಾಸ್ಕ್ ನೀಡಿದ್ದರು. ಈ ಚಟುವಟಿಕೆ ಪ್ರಕಾರ ತುಕಾಲಿ ಸಂತೋಷ್ ಹಾಗೂ ಕಾರ್ತಿಕ್ ಮಹೇಶ್ ಸುದ್ದಿ ಸಂಪಾದಕರಾಗಿದ್ದರೆ, ಪತ್ರಕರ್ತರು ಹಾಗೂ ರಿಪೋರ್ಟರ್ ಆಗಿದ್ದರು. ಈ ವೇಳೆ ನಮ್ರತಾ ಗೌಡ ಹಾಗೂ ವಿನಯ್ ಅವರು ಡ್ರೋನ್ ಪ್ರತಾಪ್ ವಿರುದ್ಧ ಆರೋಪವೊಂದನ್ನು ಮಾಡಿದ್ದಾರೆ.


cover image
ವಿನಯ್ ಆರೋಪ

'ಬ್ರೇಕಿಂಗ್ ನ್ಯೂಸ್' ಟಾಸ್ಕ್ ವೇಳೆ ಪ್ರತಾಪ್ ವಿರುದ್ಧ ಮಾತನಾಡಿದ ವಿನಯ್,ಪ್ಲೈಟ್‌ಗಳ ಬಗ್ಗೆ ಮಾಹಿತಿ ಕೊಡುತ್ತಿದ್ದವರು ಈಗ ನಮ್ಮ ಹಳ್ಳಿಯಲ್ಲಿ ನಾವು ಹೀಗೆ ಮುದ್ದೆ ಕಟ್ಟೋದು ಅಂತ ಹೇಳುವುದು. ಅಪ್ಪ-ಅವ್ವ  ಅನ್ನೋದು ಯಾರಿಗೂ ಕಾಣಿಸುತ್ತಿಲ್ಲ ಅಂದುಕೊಳ್ಳಬೇಡಿ ಎಂದಿದ್ದಾರೆ. ಅದಕ್ಕೆ ಪ್ರತಾಪ್, ನನಗೆ ಖುಷಿಯಾದಾಗ ಏನಾದರೂ ಮಾಡಬೇಕು ಅಂತ ಇರುತ್ತೆ. ನನ್ನ ದೃಷ್ಟಿಕೋನದಲ್ಲಿ ಮುದ್ದೆ ಮಾಡುತ್ತಿದ್ದೆ ಅಂತ ಉತ್ತರಿಸಿದ್ದಾರೆ. 

 

ನಾಗವಲ್ಲಿ ಥರ ನಿಮ್ಮ ಭಾಷೆ ಬದಲಾಗುತ್ತೆ

ಇನ್ನು ನಮ್ರತಾ ಮಾತನಾಡಿ, ಗ್ರಾಮೀಣ ಜನರಿಗೆ ಮಾಟ ಮಾಡೋಕೆ ನಾಗವಲ್ಲಿ ತರಹ ಆಗಾಗ ನಿಮ್ಮ ಮಂಡ್ಯ ಭಾಷೆ ಬದಲಾಗುತ್ತೆ ಅಂತ ಹೇಳಿದರು. ಅದಕ್ಕೆ ಪ್ರತಾಪ್, ನಾನು ಹಳ್ಳಿ ಭಾಷೆಯಲ್ಲೂ ಮಾತನಾಡುತ್ತೇನೆ, ಸಿಟಿ ತರಹವೂ ಮಾತನಾಡುತ್ತೇನೆ. ಹಳ್ಳಿ ಟಾಸ್ಕ್‌ನಲ್ಲಿ ಭಾಗ್ಯಶ್ರೀ ಮೇಡಂ ಕೂಡ ಇದೇ ರೀತಿ ಹೇಳಿದ್ರು. ಸೌಟು ಮುಂತಾದ ಪದಗಳನ್ನು ಬಳಸ್ತೀನಿ. ಅದರಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದರು. ಜೊತೆಗೆ ಪ್ರತಾಪ್ ೭೦ ದಿನಗಳ ಕಾಲ ನಿಮಗ್ಯಾಕೆ ಮುದ್ದೆ ಮಾಡ್ಬೇಕು ಅಂತ ಅನಿಸಿಲ್ಲ ಅಂತ ಪ್ರಶ್ನಿಸಿದ್ದಾರೆ.  

 

ನಾಮಿನೇಷನ್ ಪ್ರಕ್ರಿಯೆಯಲ್ಲೂ ಅದೇ ವಿಚಾರ

ಈ ವಾರದ ನಾಮಿನೇಷನ್‌ ಪ್ರಕ್ರಿಯೆಯಲ್ಲೂ ವಿನಯ್ ಇದೇ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಈ ವಾರ ಮಸಿ ನೀರು ಹಾಕಿ ನಾಮಿನೇಷನ್ ಮಾಡಬೇಕಿದೆ. ಈ ವೇಳೆ ಪ್ರತಾಪ್ ಹಳ್ಳಿ ವಿಚಾರ ಇಟ್ಟುಕೊಂಡು ಮಾತನಾಡುತ್ತಾರೆ ಎನ್ನುವ ಕಾರಣ ಕೊಟ್ಟು ವಿನಯ್ ನಾಮಿನೆಟ್ ಮಾಡಿದ್ದಾರೆ. 

ಮಡಕೆ ಒಡೆದಿರುವ ವಿಚಾರ

ಬ್ರೇಕಿಂಗ್ ನ್ಯೂಸ್ ಚಟುವಟಿಕೆಯಲ್ಲಿ ಕಾರ್ತಿಕ್ ಅವರು ಸಂಗೀತಾ ಫೋಟೋವಿದ್ದ ಮಡಕೆ ಒಡೆದಿರುವ ವಿಚಾರವೂ ಚರ್ಚೆಯಾಗಿದೆ. ಈ ವೇಳೆ ಕಾರ್ತಿಕ್, ನಾನು ಯಾಕೆ ಈ ರೀತಿ ಮಾಡಿದೆ ಅಂತ ಆ ಟಾಸ್ಕ್‌ನಲ್ಲೇ ಉತ್ತರ ಕೊಟ್ಟೆ. ವಿನಯ್ ಅವರಿಕೆ ಬಕೆಟ್ ಹಿಡಿದೆ ಎಂಬ ಕಾರಣಕ್ಕೆ ಮಾತ್ರ ನಾನು ಈ ರೀತಿ ಮಾಡಿಲ್ಲ ಎಂದರು. ಅದಕ್ಕೆ ಸಂಗೀತಾ ಬೆಡ್ ಮೇಲೆ ಕೂತಿದ್ದಾಗ ಯಾರು ಯಾಕೆ ಕ್ಲೋಸ್ ಆಗ್ತಿದ್ದಾರೆ ಅಂತ ಗೊತ್ತಾ? ಅಂತ ಪ್ರಶ್ನಿಸಿದಾಗ, ನಾನು ನನಗೆ ಏನು ಮಾಡಬೇಕು ಅಂತ ಗೊತ್ತಿದೆ ಅಂತ ಹೇಳ್ತೀನಿ. ಇದು ಕೂಡ ಮುಖ್ಯ ಕಾರಣ ಅಂತ ಕಾರ್ತಿಕ್ ಹೇಳಿದರು. ಅದಕ್ಕೆ ಸಂಗೀತಾ, ನಿಮ್ಮ ಜೊತೆ ಯಾರು ಯಾಕೆ ಕ್ಲೋಸ್ ಆಗ್ತಾರೆ ಎಂದು ನಾನು ಹೇಳಿದ್ದ ಮಾತು ತಪ್ಪಾಗಿರಬಹುದು. ನೀವು ನನ್ನ ಮಾತನ್ನು ತಪ್ಪಾಗಿ ತಿಳಿದುಕೊಳ್ಳುತ್ತಿರಬಹುದು. ಇದರ ಬಗ್ಗೆ ನೀವು ಆಲೋಚನೆ ಮಾಡ್ಬೇಕಿತ್ತು. ನಾನು ಆಸ್ಪತ್ರೆಗೆ ಹೋಗಿ ಬಂದಮೇಲೆ ವಿನಯ್ ಜೊತೆ ಕಾರ್ತಿಕ್ ಏಕಾಏಕಿ ಚೆನ್ನಾಗಿದ್ರೆ ನಾನು ಏನು ತಿಳಿದುಕೊಳ್ಳಬೇಕು ಎಂದರು. 

 

ಕಾರ್ತಿಕ್ ಜೀರೋ ಅಲ್ಲ

ಇತ್ತೀಚೆಗೆ ನೀವು ನನ್ನ ಜೊತೆ ಕೋಪದಿಂದ ಮಾತನಾಡ್ತೀರಾ, ಫ್ರೆಂಡ್ ಆಗಿ ಕಡಿಮೆ ನೋಡುತ್ತಿದ್ದೀರಾ? ಇದರಿಂದ ಮನಸ್ತಾಪ ಶುರುವಾಗ್ತಿದೆ ಅಲ್ವಾ ಅಂತ ಸಂಗೀತಾ ಪ್ರಶ್ನಿಸಿದರು. ಅದಕ್ಕೆ ಕಾರ್ತಿಕ್, ಕೆಲವರು ಕಾರ್ತಿಕ್‌ರಿಂದ ಸಂಗೀತಾರನ್ನು ತೆಗೆದರೆ ಜೀರೋ ಅಂತ ಹೇಳಿದ್ರು. ಅದನ್ನು ನಾನು ಸಾಬೀತುಪಡಿಸ್ತೀನಿ ಎಂದರು. ಅದಕ್ಕೆ ಸಂಗೀತಾ, ಇಲ್ಲಿ ಯಾರೂ ಜೀರೋ ಅಲ್ಲ. ನೀವು ಜೀರೋ ಅಲ್ಲ ಅಂತ ಹೇಳಿದ್ದಾರೆ. 

 

ಕ್ಷೇಮೆ ಕೇಳಿದ ಸಂಗೀತಾ

ನನ್ನ ನಿಮ್ಮ ಫ್ರೆಂಡ್‌ಶಿಪ್ ಚೆನ್ನಾಗಿತ್ತು ಅಂತ ಸಂಗೀತಾ ಹೇಳಿದಾಗ ಕಾರ್ತಿಕ್ ಇದಕ್ಕೆ ನಾನು ಅಡಿಯನ್ಸ್ ಫೋಲ್ ತೆಗೆದುಕೊಳ್ಳುತ್ತೇನೆ ಎಂದರು. ಇದಕ್ಕೆ ಸಂಗೀತಾ ವಿರೋಧ ವ್ಯಕ್ತಪಡಿಸಿ, ನೀವು ನಮ್ಮ ಸ್ನೇಹಕ್ಕೆ ಆಡಿಯೆನ್ಸ್ ಪೋಲ್ ತೆಗೆದುಕೊಳ್ಳುವುದು ಸೂಕ್ತವಲ್ಲ. ಆಡಿಯೆನ್ಸಗ ಪೋಲ್ ತೆಗೆದುಕೊಂಡರೆ ನಾವಿಬ್ಬರು ಬೇರೆಯಾಗಲಿ ಅಂಯ ಉಳಿದವರು ಬಯಸಬಹುದು. ವಿನಯ್ ವಿಚಾರಕ್ಕೆ ನಿಮಗೆ ಬಕೆಟ್ ಅಂತ ಕರೆದಿರುವುದಕ್ಕೆ ಕ್ಷೆಮೆ ಕೇಳುತ್ತೇನೆ. ಇದೊಂದು ಕಾರಣಕ್ಕೆ ಸ್ನೇಹ ಮುರಿದು ಬೀಳಬಾರದು ಎಂದರು. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+