X
ಹೋಮ್ ಚಲನಚಿತ್ರಗಳ ಒಳನೋಟ

ಹಲವು ಪ್ರಥಮಗಳಿಗೆ ಸಾಕ್ಷಿಯಾಗಿರುವ ಬಿಗ್‌ಬಾಸ್‌ ಕನ್ನಡ ಸೀಸನ್ 10: ಇಲ್ಲಿದೆ ಮಾಹಿತಿ.

Author Sowmya Bairappa | Published: Sunday, December 3, 2023, 09:37 AM [IST]

ಈ ಬಾರಿಯ ಬಿಗ್‌ಬಾಸ್ ಮನೆ ಸಾಕಷ್ಟು ವಿಷಯಗಳಿಂದ ಗಮನ ಸೆಳೆಯುತ್ತಿದೆ. ಬಿಗ್‌ಬಾಸ್ ಕನ್ನಡ ಸೀಸನ್ ೧೦ರ ಮನೆ ದೇಶದ ಅತಿದೊಡ್ಡ ಬಿಗ್‌ಬಾಸ್ ಮನೆ ಎಂಬ ಖ್ಯಾತಿಯನ್ನೂ ಪಡೆದಿದೆ. ಜೊತೆಗೆ ಬಿಗ್‌ಬಾಸ್‌ ಕನ್ನಡ ಇತಿಹಾಸದಲ್ಲಿ ನಡೆಯದ ಹಲವು ಘಟನೆಗಳು ಈ ಬಾರಿ ದೊಡ್ಮನೆಯಲ್ಲಿ ನಡೆದಿವೆ. ಆ ಘಟನೆಗಳು ಯಾವವು ಎಂಬ ವಿವರ ಇಲ್ಲಿದೆ.


cover image
ವಸ್ತುವಿಗೆ ಕಿಚ್ಚನ ಚಪ್ಪಾಳೆ

ಪ್ರತಿ ಸೀಸನ್‌ನಲ್ಲೂ ಪ್ರತಿ ವಾರಾಂತ್ಯದಲ್ಲಿ ಸುದೀಪ್ ಆವರು 'ಕಿಚ್ಚನ ಚಪ್ಪಾಳೆ' ನೀಡುತ್ತಾರೆ. ಇಡೀ ವಾರದಲ್ಲಿ ಯಾರು ಅತ್ಯುತ್ತಮ ಪರ್ಫಾಮೆನ್ಸ್ ನೀಡುತ್ತಾರೋ ಅವರಿಗೆ ಈ ಚಪ್ಪಾಳೆ ನೀಡುತ್ತಾರೆ. ಮನೆಯ ಒಳಗಿರುವ ಸ್ಪರ್ಧಿಗಳು ಕಿಚ್ಚನ ಚಪ್ಪಾಳೆ ಪಡೆಯಲು ಸಾಕಷ್ಟು ಪ್ರಯತ್ನಿಸುತ್ತಾರೆ. ಆದರೆ, ಆ ಚಪ್ಪಾಳೆ ಪಡೆಯೋದು ಸುಲಭದ ಕೆಲಸವಲ್ಲ. ಈ ಸೀಸನ್‌ನ ವಿಶೇಷವೆಂದರೆ ಇದೇ ಮೊದಲನೇ ಬಾರಿಗೆ ವಸ್ತುವೊಂದಕ್ಕೆ ಕಿಚ್ಚನ ಚಪ್ಪಾಳೆ ನೀಡಲಾಗಿತ್ತು. ಬಿಗ್‌ಬಾಸ್ ಆರಂಭದಲ್ಲಿ ವಿನಯ್ ಟಾಸ್ಕ್‌ ವೇಳೆ ಪದೇ ಪದೇ ಬಳೆ ವಿಷಯ ಪ್ರಸ್ತಾಪಿಸಿದ್ದರು. ಇದಕ್ಕೆ ಸಂಗೀತಾ ಬಳೆ ಹಾಕಿಕೊಂಡಿದ್ದೇನೆ ನೋಡು ಅಂತ ಕೈ ಎತ್ತಿ ತೋರಿಸಿದ್ದರು. ವಿನಯ್ ಹೇಳಿಕೆಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. ವಾರಾಂತ್ಯದಲ್ಲಿ ಈ ವಿಷಯ ಚರ್ಚೆಯಾಗಿತ್ತು. ಜೊತೆಗೆ ಬಳೆಗೆ ಕಿಚ್ಚನ ಚಪ್ಪಾಳೆ ಸಿಕ್ಕಿತ್ತು. 

 

ಜೈಲಿಗೆ ಹೋದ ಸ್ಪರ್ಧಿ

ವರ್ತೂರು ಸಂತೋಷ್ ಅವರು ಬಿಗ್‌ಬಾಸ್‌ ಮನೆಗೆ ಹೋಗುವಾಗ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದರು.  ಈ ಸಂಬಂಧ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ಬಿಗ್‌ಬಾಸ್ ಮನೆಗೆ ತೆರಳಿ ಅವರನ್ನು ಅರೆಸ್ಟ್ ಮಾಡಿದ್ದರು. ಒಂದು ವಾರ ಜೈಲಿನಲ್ಲಿದ್ದ ವರ್ತೂರು ಸಂತೋಷ್ ದೊಡ್ಮನೆಗೆ ವಾಪಾಸ್ ಆಗಿದ್ದರು. ಬಿಗ್‌ಬಾಸ್ ಮನೆಯೊಳಗೆ ಒಬ್ಬ ವ್ಯಕ್ತಿ ಅರೆಸ್ಟ್ ಆಗಿದ್ದು ಇದೇ ಮೊದಲಾಗಿತ್ತು. 

 

ಉತ್ತಮ ಸ್ಥಾನ ಅದಲು-ಬದಲು

ಪ್ರತಿವಾರ ಬಿಗ್‌ಬಾಸ್‌ ಮನೆಯ ಸದಸ್ಯರಿಗೆ ಉತ್ತಮ ಹಾಗೂ ಕಳಪೆ ಪಟ್ಟ ನೀಡಲಾಗುತ್ತದೆ. ಕೆಲ ವಾರಗಳ ಹಿಂದೆ ಕೆಲ ಸ್ಪರ್ಧಿಗಳು, ಉತ್ತಮಕ್ಕೆ ವಿನಯ್ ಅವರ ಹೆಸರನ್ನೇ ತೆಗೆದುಕೊಳ್ಳಲು ಆರಂಭಿಸಿದ್ದರು. ಒಂದು ವಾರ ವಿನಯ್ ಉತ್ತಮ ಪ್ರದರ್ಶನ ನೀಡದಿದ್ದರೂ ಅವರಿಗೆ ಉತ್ತಮ ಅಂತ ನೀಡಿದ್ದರು. ಈ ಬಗ್ಗೆ ವೀಕೆಂಡ್‌ನಲ್ಲಿ ಸುದೀಪ್ ಪ್ರಶ್ನೆ ಮಾಡಿದ್ದರು. ಜೊತೆಗೆ ಯೋಚಿಸಿ ರೀ ವೋಟ್ ಮಾಡುವಂತೆ ತಿಳಿಸಿದ್ದರು. ನಂತರ ವಿನಯ್ ಅವರಿಂದ ಉತ್ತಮ ಪಟ್ಟ ಸ್ನೇಹಿತ್‌ಗೆ ವರ್ಗಾವಣೆಯಾಗಿತ್ತು. 

 

ಜೈಲಿನಿಂದ ಎಸ್ಕೇಪ್

ಬಿಗ್‌ಬಾಸ್‌ ಮನೆಯಲ್ಲಿ ಕಳಪೆ ನೀಡಿದ ಓರ್ವ ಸ್ಪರ್ಧಿಯನ್ನು ಪ್ರತಿವಾರ ಜೈಲಿಗೆ ಕಳುಹಿಸಲಾಗುತ್ತೆ. ಸೀಸನ್‌ ಒಂದರಿಂದಲೂ ಇದು ನಡೆದುಕೊಂಡು ಬರುತ್ತಿದೆ. ಆದರೆ, ಇದೇ ಮೊದಲ ಬಾರಿಗೆ ಸ್ಪರ್ಧಿಯೊಬ್ಬರು ಬಿಗ್‌ಬಾಸ್‌ ಜೈಲಿನಿಂದ ಎಸ್ಕೇಪ್ ಆಗಿದ್ದರು. ಕಳಪೆ ಪಟ್ಟ ಹೊತ್ತು ಜೈಲು ಸೇರಿದ್ದ ವರ್ತೂರು ಸಂತೋಷ್, ಮಧ್ಯರಾತ್ರಿ ಕಂಬಿಯಿಂದ ನುಸುಳಿ ಹೊರಬಂದಿದ್ದರು. ಈ ಮೂಲಕ ಇತಿಹಾಸ ಸೃಷ್ಟಿ ಮಾಡಿದ್ದರು. ಇದರ ಜೊತೆಗೆ ಕಳಪೆ ಪಟ್ಟ ಪಡೆಯದೇ ವ್ಯಕ್ತಿಯೊಬ್ಬರು ಜೈಲು ಪ್ರವೇಶಿಸಿದ್ದು ಕೂಡ ಇದೇ ಮೊದಲು. 

ಕ್ಯಾಪ್ಟನ್ ಎಲಿಮಿನೇಟ್

ಕ್ಯಾಪ್ಟನ್‌ ಟಾಸ್ಕ್‌ನಲ್ಲಿ ಗೆದ್ದ ವಾರ ಇಮ್ಯೂನಿಟಿ ಸಿಗುವುದಿಲ್ಲ.  ಆ ಅಧಿಕಾರ ಸಿಗೋದು ಮುಂದಿನ ವಾರಕ್ಕೆ. ಕ್ಯಾಪ್ಟನ್ ಆದ ಮರುವಾರ ಆ ಸ್ಪರ್ಧಿ ನಾಮಿನೇಷನ್‌ನಿಂದ ಬಚಾವ್ ಆಗುತ್ತಾರೆ. ಕ್ಯಾಪ್ಟನ್‌ಗೆ ಆಯ್ಕೆಯಾದ ವಾರ ಅವರು ನಾಮಿನೇಟ್ ಆಗಿದ್ದಾರೆ ಎಲಿಮಿನೇಷನ್‌ನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಸೀಸನ್ ಒಂದರಿಂದ ಕ್ಯಾಪ್ಟನ್ ಆದ ಯಾರೋಬ್ಬರು ಬಿಗ್‌ಬಾಸ್‌ ಮನೆಯಿಂದ ಎಲಿಮಿನೇಟ್ ಆಗಿರಲಿಲ್ಲ. ಆದರೆ, ಈ ಬಾರಿ ಆ ಘಟನೆ ನಡೆಯಿತು. ಕ್ಯಾಪ್ಟನ್ ಆಗಿದ್ದ ನೀತು ಎಲಿಮಿನೇಟ್‌ ಆಗಿ ಹೊರಬಂದರು. ಜೊತೆಗೆ ತಮ್ಮ ಅಧಿಕಾರವನ್ನು ಮೈಕಲ್‌ಗೆ ಹಸ್ತಾಂತರ ಮಾಡಿದರು.

ಟಿಆರ್‌ಪಿ

ಈ ಬಾರಿಯ ಬಿಗ್‌ಬಾಸ್‌ ಸೀಸನ್ ೧೦ಕ್ಕೆ ಸಿಕ್ಕಿರುವ ಟಿಆರ್‌ಪಿ ಹಿಂದಿನ ಯಾವುದೇ ಸೀಸನ್‌ನಲ್ಲೂ ಸಿಕ್ಕಿಲ್ಲ. ಹಳೆಯ ಎಲ್ಲಾ ಸೀಸನ್‌ನ ದಾಖಲೆಯನ್ನು ಈ ಸೀಸನ್ ಬ್ರೇಕ್ ಮಾಡಿದೆ. ಬಿಗ್‌ಬಾಸ್‌ ಮುಗಿಯಲು ಇನ್ನೂ ೩೦ಕ್ಕೂ ಹೆಚ್ಚು ದಿನಗಳು ಬಾಕಿಯಿದ್ದು, ಮುಂದೆ ಯಾವೆಲ್ಲಾ ದಾಖಲೆಗಳು ಸೃಷ್ಟಿಯಾಗುತ್ತೆ ಎಂಬುದನ್ನು ಕಾದು ನೋಡಬೇಕು. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+