X
ಹೋಮ್ ಚಲನಚಿತ್ರಗಳ ಒಳನೋಟ

ತಲೆಯಲ್ಲಿ ಸೆನ್ಸ್ ಇದೆಯಾ ಅಂತ ಅವಾಜ್ ಹಾಕಿದ ಮೋಕ್ಷಿತಾ: ಕಣ್ಣೀರಿಟ್ಟ ಧನರಾಜ್

Author Sowmya Bairappa | Published: Thursday, November 7, 2024, 10:59 AM [IST]

ಬಿಗ್‌ಬಾಸ್ ಕನ್ನಡ ಸೀಸನ್ 11ರ 38ನೇ ದಿನ ಸ್ಪರ್ಧಿಗಳಿಗೆ ಜೋಡಿ ಹಕ್ಕಿ ಹಾಗೂ ನಿಲ್ಲೇ ನಿಲ್ಲೇ ಕಾವೇರಿ ಟಾಸ್ಕ್‌ಗಳನ್ನು ನೀಡಲಾಗಿತ್ತು. ಈ ಟಾಸ್ಕ್‌ನಲ್ಲಿ ಎಲ್ಲಾ ತಂಡಗಳು ತಮ್ಮ ಶಕ್ತಿ ಹಾಗೂ ಚಾಣಾಕ್ಷತನ ಬಳಸಿ ಒಳ್ಳೆಯ ಪ್ರದರ್ಶನ ನೀಡಿದವು. ಟಾಸ್ಕ ವೇಳೆ ಕೆಲ ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ ನಡೆದರೆ, ಇನ್ನು ಕೆಲವರಿಗೆ ಗಾಯಗಳಾಗಿವೆ. ಇಲ್ಲಿ ಕಳೆದ ಸಂಚಿಕೆಯಲ್ಲಿ ದೊಡ್ಮನೆಯಲ್ಲಿ ಏನೇನಾಯ್ತು? ಇಂದಿನ ಸಂಚಿಕೆಯಲ್ಲಿ ಏನಿರಲಿದೆ ಎಂಬ ಮಾಹಿತಿ ನೀಡಲಾಗಿದೆ.


cover image
ಜೋಡಿ ಹಕ್ಕಿ ಟಾಸ್ಕ್

ಜೋಡಿ ಹಕ್ಕಿ ಟಾಸ್ಕ್‌ನ ಅನುಸಾರ, ಕೆಂಪು, ಹಸಿರು, ನೀಲಿ ಹಾಗೂ ಹಳದಿ ತಂಡದ ಇಬ್ಬಿಬ್ಬರು ಬಂದು ಬಿಗ್‌ಬಾಸ್ ಕೇಳುವ ದೊಡ್ಮನೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ನೀಡಬೇಕಿತ್ತು. ಇದರಲ್ಲಿ ಶಿಶಿರ್ ನೇತೃತ್ವದ ಹಳದಿ ತಂಡದವರು ಗೆದ್ದು, ಪನಿಷ್‌ಮೆಂಟ್ ಕಾರ್ಡ್‌ ಬಳಸಿದರು. ಕ್ಯಾಪ್ಟನ್ ಹನುಮಂತು ಆಯ್ಕೆಯ ಪ್ರಕಾರ ಮಂಜು ನಾಯಕತ್ವದ ಹಸಿರು ಟೀಂ ಅವರ ಸೇವೆ ಮಾಡಬೇಕಿತ್ತು. ಅದರಂತೆ ಹಸಿರು ತಂಡದ ಭವ್ಯಾ ಹುಡುಗನ ವೇಷ ಮತ್ತು ಗೋಲ್ಡ್ ಸುರೇಶ್, ಉಗ್ರಂ ಮಂಜು ಹುಡುಗಿಯ ವೇಷ ತೊಟ್ಟು ಮನೋರಂಜನೆ ನೀಡಿದರು. 


 ನಿಲ್ಲೇ ನಿಲ್ಲೇ ಕಾವೇರಿ

ಎರಡನೇ ಟಾಸ್ಕ್ 'ನಿಲ್ಲೇ ನಿಲ್ಲೇ ಕಾವೇರಿ' ಕೊಂಚ ಕಠಿಣವಾಗಿತ್ತು. ಇದರ ಪ್ರಕಾರ, ಗಾರ್ಡನ್ ಏರಿಯಾದಲ್ಲಿ ಆಯಾ ತಂಡಗಳಿಗೆ ಮೀಸಲಾದ ನಾಲ್ಕು ಡ್ರಮ್‌ಗಳನ್ನು ಇಡಲಾಗಿತ್ತು. ಪ್ರತಿ ಟೀಂನ ಇಬ್ಬರು ಆ ಡ್ರಮ್‌ ನೀಡು ಖಾಲಿಯಾಗದಂತೆ ಕಾಪಾಡಿಕೊಂಡರೆ, ಇನ್ನೋರ್ವ ಬೇರೆ ತಂಡದ ಡ್ರಮ್‌ನಲ್ಲಿದ್ದ ನೀರನ್ನು ಖಾಲಿ ಮಾಡಬೇಕಿತ್ತು. ಅಂತಿಮವಾಗಿ ಯಾರ ಡ್ರಮ್‌ನಲ್ಲಿ ನೀರು ಹೆಚ್ಚಿರುತ್ತೋ, ಆ ಟೀಮ್ ಗೆಲ್ಲುತ್ತದೆ. ಈ ಟಾಸ್ಕ್‌ ಅನ್ನು ಮೂರು ಸುತ್ತುಗಳಲ್ಲಿ ಆಡಿಸಲಾಯಿತು. ಈ ಟಾಸ್ಕ್‌ನಲ್ಲಿ ಉಗ್ರಂ ಮಂಜು ಅವರ ಹಸಿರು ತಂಡ ಗೆಲುವು ಸಾಧಿಸಿತು. 

ಗೋಲ್ಡ್ ಸುರೇಶ್‌ಗೆ ಗಂಭೀರ ಗಾಯ

ನಿಲ್ಲೇ ನಿಲ್ಲೇ ಕಾವೇರಿ ಚಟುವಟಿಕೆ ವೇಳೆ ನೀರಿನ ಡ್ರಮ್ ಸುರೇಶ್ ಅವರ ಕಾಲಿನ ಮೇಲೆ ಬಿದ್ದಿದೆ. ಇದರಿಂದಾಗಿ ಅವರು ನೆಲಮೇಲೆ ಬೊದ್ದು ಹೊರಳಾಡಿದ್ದಾರೆ. ಅಷ್ಟೇ ಅಲ್ಲ, 'ನನ್ನ ಕಾಲು ಮುರಿದೇ ಹೋಯ್ತು' ಅಂತ ಗೋಳಾಡಿದ್ದಾರೆ. ಕೂಡಲೇ ಅವರನ್ನು ಕನ್‌ಫೆಷನ್ ರೂಮ್‌ಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿಂದ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ನಂತರ ಸುರೇಶ್ ಕಾಲು ಮುರಿದಿದೆ ಎನ್ನುವ ಭಯದಲ್ಲಿದ್ದ ಸ್ಪರ್ಧಿಗಳಿಗೆ ಬಿಗ್‌ಬಾಸ್ ಗುಡ್‌ನ್ಯೂಸ್ ನೀಡಿದರು. 'ಸುರೇಶ್‌ಗೆ ಗಂಭೀರ ಗಾಯಗಳಾಗಿಲ್ಲ ಎಂದು ವೈದ್ಯರು ತಿಳಿಸಿರುವುದಾಗಿ' ಮಾಹಿತಿ ನೀಡಿದರು. 

ಕ್ಯಾಪ್ಟನ್ಸಿ ಓಟದಿಂದ ಹೊರಗುಳಿದ ಸ್ಪರ್ಧಿಗಳು

ಟಾಸ್ಕ್‌ನಲ್ಲಿ ಗೆದ್ದ ಕಾರಣ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಭಾಗಿಯಾಗುವ ಅವಕಾಶ ಮಂಜು, ಭವ್ಯಾ ಹಾಗೂ ಗೋಲ್ಡ್ ಸುರೇಶ್‌ಗೆ ಸಿಕ್ಕಿದೆ. ಆದರೆ, ಸೋತ ತಂಡಗಳಿಂದ ಒಬ್ಬೊಬ್ಬರನ್ನು ಈ ಟಾಸ್ಕ್‌ನಿಂದ ಹೊರಗಿಡುವ ಅವಕಾಶವನ್ನು ಬಿಗ್‌ಬಾಸ್ ಕ್ಯಾಪ್ಟನ್ ಹನುಮಂತುಗೆ ನೀಡಿದರು. ಜೊತೆಗೆ ಸೂಕ್ತ ಕಾರಣ ನೀಡುವಂತೆ ತಿಳಿಸಿದರು. ಕೆಲ ಸಮಯ ಯೋಚನೆ ಮಾಡಿದ ಹನುಮಂತ, ಐಶ್ವರ್ಯಾ, ಗೌತಮಿ ಹಾಗೂ ಚೈತ್ರಾ ಅವರನ್ನು ಕ್ಯಾಪ್ಟನ್ಸಿ ಓಟದಿಂದ ಹೊರಗಿಟ್ಟರು. ಈ ಮೂರು ನಿಲ್ಲೇ ನಿಲ್ಲೇ ಕಾವೇರಿ ಟಾಸ್ಕ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲಿಲ್ಲ ಎಂಬ ಕಾರಣ ನೀಡಿದರು. ಇಂದಿನ ಸಂಚಿಕೆಯಲ್ಲಿ ಕ್ಯಾಪ್ಟನ್ ಯಾರಾಗ್ತರೆಂದು ತಿಳಿಯಲಿದೆ.

ಕಣ್ಣೀರಿಟ್ಟ ಧನರಾಜ್

ದೊಡ್ಮನೆಯಲ್ಲೀಗ ಕ್ಯಾಪ್ಟನ್ ಪಟ್ಟಕ್ಕಾಗಿ ಕಿತ್ತಾಟ ಶುರುವಾಗಿದೆ. ಐಶ್ವರ್ಯಾ, ಗೌತಮಿ ಹಾಗೂ ಚೈತ್ರಾ ಈಗಾಗಲೇ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಬಿದ್ದಿದ್ದು, ಮತ್ತಿಬ್ಬರನ್ನು ಹೊರಗಿಡುವ ಸಂದರ್ಭ ಬಂದಿದ್ದು, ಬಹುತೇಕರು ಧನರಾಜ್ ಟಾರ್ಗೆಟ್ ಮಾಡಿದ್ದಾರೆ. ಅವರಿಗೆ ಎಲ್ಲವನ್ನು ಎದುರಿಸಿ ಮಾತನಾಡಲು ಧೈರ್ಯ ಬರುತ್ತಿಲ್ಲ. ತಲೆಯಲ್ಲಿ ಸೆನ್ಸ್ ಇದೆಯಾ? ಅಂತ ಮೋಕ್ಷಿತಾ ಅವಾಜ್ ಹಾಕಿದ್ದಾರೆ. ಅದಕ್ಕೆ ಭಯಪಡುವ ಧನರಾಜ್ ಈಗಿಲ್ಲ ಎಂದು ಧೈರ್ಯದಿಂದ ಹೇಳಿದ ಧನರಾಜ್, ಆಪ್ತರ ಬಳಿ ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ. 


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+