X
ಹೋಮ್ ಚಲನಚಿತ್ರಗಳ ಒಳನೋಟ

ಸ್ಯಾಂಡಲ್‌ವುಡ್‌ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಹಿನ್ನೆಲೆ ಏನು ಗೊತ್ತಾ? ಇಲ್ಲಿದೆ ಮಾಹಿತಿ.

Author Sowmya Bairappa | Published: Saturday, February 24, 2024, 06:17 PM [IST]

ಕಾಟೇರ ಸಿನಿಮಾ 50 ದಿನ ಪೂರೈಸಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ದರ್ಶನ್ 'ಕಾಟೇರ' ಟೈಟಲ್‌ಗೆ ಸಂಬಂಧಿಸಿದಂತೆ ರಾಬರ್ಟ್ ಸಿನಿಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ಗೆ ಟಾಂಗ್ ಕೊಟ್ಟಿದ್ದರು. ಇದೇ ವಿಚಾರ ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದು, ಇಬ್ಬರ ನಡುವೆ ಮಾತಿನ ಸಮರ ನಡೆಯುತ್ತಿದೆ. ಇಲ್ಲಿ ಉಮಾಪತಿ ಶ್ರೀನಿವಾಸ್ ಯಾರು? ಅವರ ಹಿನ್ನೆಲೆ ಏನು? ಅವರು ಸಿನಿಮಾ ಇಂಡಸ್ಟ್ರಿಗೆ ಬಂದಿದ್ದು ಹೇಗೆ ಎಂಬ ಮಾಹಿತಿ ಇಲ್ಲಿದೆ.


cover image
ಉದ್ಯಮಿ ಕುಟುಂಬ

ಉಮಾಪತಿ ಶ್ರೀನಿವಾಸ್ ಬೆಂಗಳೂರಿನ ಬೊಮ್ಮನಹಳ್ಳಿ ವಲಯದ ನಿವಾಸಿ. ಸದ್ಯ ಅವರು ಎಚ್‌ಎಸ್‌ಆರ್ ಲೇಔಟ್‌ನಲ್ಲಿ ವಾಸಿಸುತ್ತಿದ್ದಾರೆ. ಉಮಾಪತಿ ಅವರದ್ದು ಮೊದಲಿನಿಂದಲೂ ಶ್ರೀಮಂತ ಕುಟುಂಬ. ಅವರ ತಂದೆ ಶ್ರೀನಿವಾಸ್ ಹಾಗೂ ತಾತ ಎಲ್ಲರೂ ಪ್ರಭಾವಿ ವ್ಯಕ್ತಿಗಳಾಗಿದ್ದವರೇ. ಆಗಿನ ಸಮಯಕ್ಕೆ ಉಮಾಪತಿ ತಂದೆ ಉತ್ತಮ ಆಸ್ತಿ ಮಾಡಿದ್ದರು. 

ಶಿಕ್ಷಣ

ಉಮಾಪತಿ ಶ್ರೀನಿವಾಸ್ ಗೌಡ 1986ರ ಜುಲೈ 7ರಂದು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯಲ್ಲಿ ಜನಿಸಿದರು. ಬಿಕಾಂ ಪದವೀಧರರಾಗಿರುವ ಇವರು ಆದಿಚುಂಚನಗಿರಿ ಶಾಲೆಯಲ್ಲಿ ಆರಂಭಿಕ ಹಾಗೂ ಬೆಂಗಳೂರಿನಲ್ಲಿ ಗೇರ್ ಇನ್ನೋವೇಟಿವ್‌ನಲ್ಲಿ ಬಿಕಾಂ ಪದವಿ ಪೂರ್ಣಗೊಳಿಸಿದರು. 

 

ಎಕರೆಗಟ್ಟಲೇ ಜಮೀನಿದೆ

ಉಮಾಪತಿ ಶ್ರೀನಿವಾಸ್ ಅವರ ಹೆಸರಿನಲ್ಲಿ ಎಕರೆಗಟ್ಟಲೇ ಜಮೀನಿದೆ. ಒಂದೊಂದು ಜಮೀನಯ 70-80 ಎಕರೆಯಿದೆ. ಎಚ್‌ಎಸ್‌ಆರ್ ಲೇಔಟ್‌ನಲ್ಲಿ 30/40 ಸೈಟ್‌ಗಳಿವೆ. ಒಂದೂವರೆ ಎಕರೆ ಪ್ರದೇಶದಲ್ಲಿ ಮನೆ ಕಟ್ಟಿಕೊಳ್ಳಲಾಗಿದೆ. ತೋಟ ಮಾಡ್ತಾರೆ. ಸ್ವಂತ ಜಮೀನಿನಲ್ಲಿ ಫಿಲಂ ಸಿಟಿ ನಿರ್ಮಾಣ ಮಾಡುತ್ತಿದ್ದಾರೆ. ಬಿಲ್ಡಿಂಗ್‌ಗಳಿವೆ, ಅದರಿಂದ ಬಾಡಿಗೆ ಬರ್ತಿದೆ. ಇದೆಲ್ಲವನ್ನು ಸ್ವತಃ ಉಮಾಪತಿ ಅವರೇ ಪ್ರೆಸ್‌ಮೀಟ್‌ನಲ್ಲಿ ಹೇಳಿಕೊಂಡಿದ್ದಾರೆ. SGB ಕ್ರಷರ್ಸ್‌ ಸಂಸ್ಥೆಯನ್ನು ಹೊಂದಿದ್ದಾರೆ. 

 

ಸ್ಯಾಂಡಲ್‌ವುಡ್ ಪ್ರವೇಶ

ಕಿಚ್ಚ ಸುದೀಪ್ ನಟನೆಯ 'ಹೆಬ್ಬುಲಿ' ಸಿನಿಮಾ ನಿರ್ಮಾಣ ಮಾಡುವುದರ ಮೂಲಕ ಉಮಾಪತಿ ಶ್ರೀನಿವಾಸ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ನಿರ್ಮಾಪಕ ರಘುನಾಥ್ ಜೊತೆ ಸೇರಿ ಉಮಾಪತಿ ಹೆಬ್ಬುಲಿ ಜಂಟಿ ನಿರ್ಮಾಣ ಮಾಡಿದರು. ಆಗಿನ್ನು ಉಮಾಪತಿಗೆ 28 ವರ್ಷ ವಯಸ್ಸು. ಮೂಲತಃ ಬಿಸಿನೆಸ್‌ಮ್ಯಾನ್ ಆಗಿದ್ದ ಉಮಾಪತಿಗೆ ಚೊಚ್ಚಲ ಸಿನಿಮಾ ಒಳ್ಳೆಯ ಗಳಿಕೆ ತಂದು ಕೊಟ್ಟಿತ್ತು.  

ರಾಬರ್ಟ್ ಸಿನಿಮಾ

ಹೆಬ್ಬುಲಿ ಚಿತ್ರದ ಬಳಿಕ ನಟ ದರ್ಶನ್ ಬಳಗ ಸೇರಿದ ಉಮಾಪತಿ, ರಾಬರ್ಟ್ ಸಿನಿಮಾ ಮಾಡಲು ಮುಂದಾದರು. ಬಹಳ ದೊಡ್ಡ ಬಜೆಟ್‌ನಲ್ಲಿ ರಾಬರ್ಟ್ ನಿರ್ಮಿಸಿದ ಉಮಾಪತಿ, ಅದಕ್ಕೆ ತಕ್ಕಂತೆಯೇ ಮೇಕಿಂಗ್, ಪ್ರಚಾರ, ಖರ್ಚು ಮಾಡಿ ಸಿನಿಮಾ ಬಿಡುಗಡೆ ಮಾಡಿದರು. ಮುಂದೆ ಮದಗಜ ಸಿನಿಮಾವನ್ನು ನಿರ್ಮಿಸಿದರು. 

ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ

'ಒಂದಲ್ಲಾ ಎರಡಲ್ಲಾ' ಎಂಬ ಚಿತ್ರಕ್ಕೆ ಉಮಾಪತಿ ಬಂಡವಾಳ ಹಾಕಿದರು. ಈ ಸಿನಿಮಾ ಲಾಭದ ಉದ್ದೇಶದಿಂದ ಮಾಡಿದಂತೆ ಅನಿಸಿಲ್ಲ. ಏಕಂದರೆ ಇದು ಮಕ್ಕಳ ಸಿನಿಮಾ. ಈ ಚಿತ್ರಕ್ಕೆ 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಏಕತೆ ಸಿನಿಮಾ ಎಂಬ ಪ್ರಶಸ್ತಿ ಲಭಿಸಿದೆ. ಅತ್ಯುತ್ತಮ ಮಕ್ಕಳ ಚಿತ್ರ ಎಂಬ ಪ್ರಶಸ್ತಿಯೂ ಸಿಕ್ಕಿದೆ. ಇನ್ನು 2018ರಲ್ಲಿ ಅತ್ಯುತ್ತಮ ಮೂರನೇ ಸಿನಿಮಾ ಕರ್ನಾಟಕ ರಾಜ್ಯ ಪ್ರಶಸ್ತಿಯೂ ಈ ಚಿತ್ರಕ್ಕೆ ದೊರತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+