X
ಹೋಮ್ ಚಲನಚಿತ್ರಗಳ ಒಳನೋಟ

ಐಶ್ವರ್ಯ ಸಾಲಿಮಠ to ಲಾವಣ್ಯ: ಸಹನಟರನ್ನು ಪ್ರೀತಿಸಿ ಮದುವೆಯಾದ ಕನ್ನಡ ಕಿರುತೆರೆ ನಟಿಯರಿವರು!

Author Sowmya Bairappa | Published: Monday, July 22, 2024, 12:50 PM [IST]

ಕಿರುತೆರೆ ನಟ-ನಟಿಯರು ತಮ್ಮ ಧಾರವಾಹಿ ಸೆಟ್‌ಗಳಲ್ಲಿ ಸಾಕಷ್ಟು ಸಮಯವನ್ನು ಒಟ್ಟಿಗೆ ಕಳೆಯುತ್ತಾರೆ. ಹೀಗಾಗಿ, ಅವರು ಒಬ್ಬರನೊಬ್ಬರು ಅರಿತುಕೊಳ್ಳಲು ಬಹಳಷ್ಟು ಸಮಯ ಸಿಗುತ್ತದೆ. ಪರಸ್ಪರ ಸ್ನೇಹಿತರಾಗುತ್ತಾರೆ. ಈ ಸ್ನೇಹ ಕೊನೆಗೆ ಪ್ರೀತಿಗೆ ತಿರುಗಿ ಸಹ ನಟರು ಮದುವೆಯಾದ ಅನೇಕ ಉದಾಹರಣೆಗಳಿವೆ. ಹೀಗೆ ತಮ್ಮ ಸೀರಿಯಲ್‌ನ ನಟರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ-ನಟಿಯರ ಮಾಹಿತಿ ಇಲ್ಲಿದೆ.


cover image
ಲಾವಣ್ಯ & ಶಶಿಧರ್ ಹೆಗ್ಡೆ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಪೂರ್ಣಿ ಪಾತ್ರದ ಮೂಲಕ ಪ್ರೇಕ್ಷಕರ ಮನಗೆದ್ದ ಲಾವಣ್ಯ ಹಾಗೂ ಅಮೃತಧಾರೆ ಸೀರಿಯಲ್‌ನ ಜೀವ ಪಾತ್ರಧಾರಿ ಶಶಿಧರ್ ಹೆಗ್ಡೆ ರಿಯಲ್ ಲೈಫ್ ಕಪಲ್. ಇವರಿಬ್ಬರು ರಾಜಾ-ರಾಣಿ ಧಾರಾವಾಹಿ ಮೂಲಕ ಪರಿಚಯವಾಗಿ, ನಂತರ ಪ್ರೀತಿಸಲು ಶುರು ಮಾಡಿದರು. ರಾಜಾ-ರಾಣಿ ಧಾರಾವಾಹಿಯಲ್ಲಿ ಪ್ರಮುಖ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಇದಷ್ಟೇ ಅಲ್ಲದೇ, ಸಹವಾಸ ದೋಷ ಎಂಬ ಕಿರುಚಿತ್ರದಲ್ಲೂ ಒಟ್ಟಿಗೆ ನಟಿಸಿದ್ದರು. ನಾಲ್ಕು ವರ್ಷಗಳಿಂದ ಪ್ರೀತಿಸಿತ್ತಿದ್ದ ಈ ಜೋಡಿ, ಮನೆಯವರನ್ನು ಒಪ್ಪಿಸಿ ಕುಟುಂಬದ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು.

ಐಶ್ವರ್ಯ ಸಾಲಿಮಠ & ವಿನಯ್

ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಸೀರಿಯಲ್‌ನಲ್ಲಿ ವೈಶಾಖ ಎಂಬ ನೆಗೆಟಿವ್ ಪಾತ್ರದ ಮೂಲಕ ಗಮನ ಸೆಳೆಯುತ್ತಿರುವ ನಟಿ ಐಶ್ವರ್ಯ ಸಾಲಿಮಠ ಹಾಗೂ ವಿನಯ್, ಈ ಹಿಂದೆ 'ಮಹಾಸತಿ' ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ದರು. ಅಲ್ಲಿಂದಲೇ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ಬಳಿಕ ಸ್ನೇಹ ಪ್ರೀತಿಗೆ ತಿರುಗಿ, ಕುಟುಂಬಸ್ಥರ ಸಮ್ಮತಿ ಮೇರೆಗೆ 2022ರಲ್ಲಿ ಈ ಜೋಡಿ ಮದುವೆಯಾಗಿತ್ತು. 

ಅಮೃತಾ & ರಘು

ಕೆಂಡಸಂಪಿಗೆ ಸೀರಿಯಲ್‌ನಲ್ಲಿ ಸಾಧನಾ ಪಾತ್ರ ಮಾಡುತ್ತಿರುವ ಅಮೃತಾ ಹಾಗೂ ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ಸಾಕೇತ್ ಪಾತ್ರದ ಮೂಲಕ ಗಮನ ಸೆಳೆದ ರಘು ಅವರದ್ದು ಲವ್ ಮ್ಯಾರೇಜ್. ಈ ಜೋಡಿ ಮಿಸ್ಟರ್ ಅಂಡ್ ಮಿಸಸ್ ರಂಗೇಗೌಡ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿತ್ತು.  ಈ ಧಾರವಾಹಿ ಮುಗಿಯುವಷ್ಟರಲ್ಲಿ ಇವರಿಬ್ಬರು ಪ್ರೀತಿಸುತ್ತಿದ್ದರು. ಆನಂತರ 2019ರಲ್ಲಿ ಸಪ್ತಪದಿ ತುಳಿದ ಈ ಜೋಡಿಗೆ ಒಂದು ಮುದ್ದಾದ ಹೆಣ್ಣು ಮಗುವಿದೆ.  

ಸುಶ್ಮಿತಾ & ಜಗ್ಗಪ್ಪ

ಮಜಾಭಾರತ ರಿಯಾಲಿಟಿ ಶೋ ಖ್ಯಾತಿಯ ಸುಶ್ಮಿತಾ ಹಾಗೂ ಜಗ್ಗಪ್ಪ ಕನ್ನಡ ಕಿರುತೆರೆಯಲ್ಲಿ ತಮ್ಮ ಕಾಮಿಡಿಯಿಂದಲೇ ಸಾಕಷ್ಟು ಹೆಸರು ಮಾಡಿದ್ದಾರೆ. ರಿಯಾಲಿಟಿ ಶೋನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ಈ ಜೋಡಿ 2023ರಲ್ಲಿ ಪ್ರೀತಿಸಿ ಮದುವೆಯಾಗಿತ್ತು. ಸುಶ್ಮಿತಾ ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಮೀ ಸೀರಿಯಲ್‌ನಲ್ಲಿ ಫೋಷಕ ಪಾತ್ರ ಮಾಡ್ತಿದ್ದಾರೆ. 

ಚಂದನ್ ಕುಮಾರ್-ಕವಿತಾ ಗೌಡ

ಕಿರುತೆರೆಯ ಯಶಸ್ವಿ ಧಾರಾವಾಹಿ 'ಲಕ್ಷ್ಮಿ ಬಾರಮ್ಮ'ದಲ್ಲಿ ಚಂದು ಮತ್ತು ಚಿನ್ನು ಪಾತ್ರಗಳಲ್ಲಿ ಅಭಿನಯಿಸಿ ಕರ್ನಾಟಕ ಮನೆಮಾತಾದವರು  ಚಂದನ್ ಕುಮಾರ್ ಹಾಗೂ ಕವಿತಾ ಗೌಡ . ಲಕ್ಷ್ಮಿ ಬಾರಮ್ಮದಲ್ಲಿ ಒಟ್ಟಿಗೆ ನಟಿಸಿದ್ದ ಇವರಿಬ್ಬರ ನಡುವೆ ಪ್ರೀತಿ ಮೂಡಿತ್ತು. ಹಲವು ವರ್ಷಗಳ ಕಾಲ ತಮ್ಮ ಪ್ರೀತಿಯ ವಿಚಾರ ಗುಟ್ಟಾಗಿಟ್ಟಿದ್ದ ಈ ಜೋಡಿ, 2021ರ ಮೇ 14ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಸದ್ಯ ಇವರಿಬ್ಬರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.  


ದೀಪಿಕಾ & ಆಕರ್ಷ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಈ ಹಿಂದೆ ಪ್ರಸಾರವಾಗಿದ್ದ ಕುಲವಧು ಧಾರಾವಾಹಿಯಲ್ಲಿ ದೀಪಿಕಾ ಹಾಗೂ ಆಕರ್ಷ್ ಒಟ್ಟಿಗೆ ನಟಿಸಿದ್ದರು.  ಈ ವೇಳೆ ಇಬ್ಬರ ನಡುವೆ ಪ್ರೀತಿ ಮೊಳಕೆಯೊಡೆದಿತ್ತು. ನಂತರ ಕುಟುಂಬದ ಒಪ್ಪಿಗೆಯೊಂದಿಗೆ ಈ ಜೋಡಿ ವಿವಾಹವಾಗಿತ್ತು.  







 ಸಾಗರ್ ಪುರಾಣಿಕ್ & ದೀಪ

ಕನ್ನಡ ಕಿರುತೆರೆಯಲ್ಲಿ ದೊಡ್ಡ ಹೆಸರು ಮಾಡಿರುವ ನಟ ಸುನೀಲ್ ಪುರಾಣಿಕ್ ಅವರ ಮಗ ಸಾಗರ್ ಪುರಾಣಿಕ್. ಮಹಾಸತಿ ಧಾರಾವಾಹಿಯನ್ನು ಸುನಿಲ್ ಪುರಾಣಿಕ್ ನಿರ್ಮಾಣ ಮಾಡಿದ್ದರು. ಈ ಸೆಟ್‌ನಲ್ಲಿ ಸಾಗರ್ ಪುರಾಣಿಕ್ ಹಾಗೂ ದೀಪ ಭೇಟಿಯಾಗಿದ್ದರಂತೆ. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದು ಆ ಸ್ನೇಹ ಪ್ರೀತಿಗೆ ತಿರುಗಿತ್ತು. ಇವರಿಬ್ಬರು 2022ರ ಮೇ 18ರಂದು  ಮದುವೆಯಾಗಿತ್ತು. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+