X
ಹೋಮ್ ಚಲನಚಿತ್ರಗಳ ಒಳನೋಟ

ಆರ್ಯವರ್ಧನ್ ಟು ವಿನಯ್ ಗೌಡ: ಮಾತಿನ ಮೇಲೆ ಕಂಟ್ರೋಲ್ ತಪ್ಪಿ ಕಾಂಟ್ರವರ್ಸಿ ಮಾಡಿಕೊಂಡ ಬಿಗ್‌ಬಾಸ್ ಸ್ಪರ್ಧಿಗಳಿವರು!

Author Sowmya Bairappa | Updated: Wednesday, December 20, 2023, 06:09 PM [IST]

ನಾವಾಡುವ ಮಾತು ಕೇಳಿಸಿಕೊಳ್ಳುವವರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಅರಿತು ಮಾತನಾಡಬೇಕಾಗುತ್ತದೆ. ಸೆಲೆಬ್ರಿಟಿಗಳ ವಿಷಯಕ್ಕೆ ಬಂದರೆ ಅವರು ಮಾತನಾಡುವಾಗ ಹೆಚ್ಚು ನಿಗಾ ವಹಿಸಬೇಕಾಗುತ್ತದೆ. ಯಾಕೆಂದರೆ, ಅವರು ಬಾಯತಪ್ಪಿ ಮಾತನಾಡುವ ಕೆಲ ವಿಷಯಗಳು ವಿವಾದಕ್ಕೆ ಕಾರಣವಾಗುತ್ತದೆ. ಅನೇಕ ನಟ-ನಟಿಯರು ಮಾತಿನ ಮೇಲೆ ಕಂಟ್ರೋಲ್ ತಪ್ಪಿ ಕಾಂಟ್ರವರ್ಸಿ ಮಾಡಿಕೊಂಡು ಸುದ್ದಿಯಾಗಿದ್ದಾರೆ. ಇಲ್ಲಿ ಕಂಟ್ರೋಲ್ ತಪ್ಪಿ ಮಾತನಾಡಿ ವಿವಾದ ಮಾಡಿಕೊಂಡ ಕನ್ನಡ ಬಿಗ್‌ಬಾಸ್ ಸ್ಪರ್ಧಿಗಳ ಪಟ್ಟಿಯನ್ನು ನೀಡಲಾಗಿದೆ.


cover image
ಆರ್ಯವರ್ಧನ್ (ಸಂಖ್ಯಾಶಾಸ್ತ್ರಜ್ಞ)

ಬಿಗ್‌ಬಾಸ್ ಅವರಿಗೆ ಅನುಪಮಾ ಗೌಡ ಮನೆಗೆ ಬರಲಿ ಅನ್ನೋ ಆಸೆಯಿತ್ತು. ಇದು ಮ್ಯಾಚ್ ಫಿಕ್ಸಿಂಗ್ ಅಂತ ಆರ್ಯವರ್ಧನ್ ಗುರೂಜಿ ಹೇಳಿದ್ದರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದನ್ನು ಕೇಳಿ ಕಿಚ್ಚ ಸುದೀಪ್ ತಾಳೆ ಕಳೆದಕೊಂಡು ಆರ್ಯವರ್ಧನ್ ಅವರ ಮೇಲೆ ಕೂಗಾಡಿದ್ದರು. 

ಉದಯ್ ಸೂರ್ಯ (ವಿವೇಕ್)

ಸಾನ್ಯಾ ಅಯ್ಯರ್, ಜಸ್ವಂತ್, ರೂಪೇಶ್ ಶೆಟ್ಟಿ ಕ್ಲೋಸ್ ಆಗಿ ಇರುವುದರ ಬಗ್ಗೆ ಉದಯ್ ಸೂರ್ಯ ಮಾತನಾಡಿದ್ದರು. ಕ್ಯಾಮರಾ ಇಲ್ಲದಿದ್ದರೆ ಬೇರೆಯ ನಡೆಯುತ್ತಿತ್ತು ಎಂದಿದ್ದರು. ಇದು ದೊಡ್ಡ ವಿವಾದವನ್ನು ಶುರು ಮಾಡಿತ್ತು. ನಂದಿನಿ ಇದ್ದಾಗ ಜಶ್ವಂತ್ ಒಂದು ತರ ಇರುತ್ತಾನೆ. ಅವಳು ಇಲ್ಲದಾಗ ಸಾನ್ಯಾ ಬಳಿ ಇನ್ನೊಂದು ತರ ಇರುತ್ತಾನೆ. ಕ್ಯಾಮರಾ ಇಲ್ಲದಿದ್ದರೆ ಬೇರೆ ತರ ಆಗ್ತಿತ್ತು ಎಂದಿದ್ದರು. ಇದಲ್ಲದೇ ಒಳುಡುಪಿನ ಬಗ್ಗೆಯೂ ಚೈತ್ರಾ ಹಳ್ಳಿಕೇರಿ ಅವರ ಬಳಿ ಮಾತನಾಡಿದ್ದರು. ಇದು ಚೈತ್ರಾಗೆ ಇಷ್ಟವಾಗಿರಲಿಲ್ಲ. ಈ ಬಗ್ಗೆ ವಿರೋಧ ವ್ಯಕ್ತವಾಗಿತ್ತು. 

ವಿನಯ್ ಗೌಡ (ನಟ)

ಬಿಗ್‌ಬಾಸ್ ಮನೆಯಲ್ಲಿ ವಿನಯ್ ಗೌಡ ಪದೇ ಪದೇ ಬಳೆ ವಿಷಯ ಪ್ರಸ್ತಾಪಿಸುವ ಮೂಲಕ ಹಲವು ಜನರ ಆಕ್ರೋಶಕ್ಕೆ ಕಾರಣವಾಗಿದ್ದರು. ವಿನಯ್‌ ಅವರು ಕಾರ್ತಿಕ್‌ಗೆ ಬಳೆಗಳ ರಾಜ ಎಂದಿದ್ದರು. ಜೊತೆಗೆ ನನ್ನ ಹೆಂಡತಿಗೆ ಹೇಳಿ ಒಂದಿಷ್ಟು ಬಳೆ ತರಿಸಿಕೊಳ್ಳಬೇಕು. ಇಲ್ಲಿ ಕೆಲವರಿಗೆ (ಕಾರ್ತಿಕ್ ಕಡೆ ಸನ್ನೆ ಮಾಡುತ್ತಾ) ಸೂಟ್ ಆಗುತ್ತೆ. ಅದ್ನಾ ಹಾಕಿದಾಗ ಸೌಂಡ್ ಚೆನ್ನಾಗಿ ಬರುತ್ತೆ ಅಂದಿದ್ದರು. ಜೊತೆಗೆ ಟಾಸ್ಕ್‌ ವೇಳೆ ಗಂಡಸು ಥರ ಆಡು, ಬಳೆಗಳನ್ನು ಹಾಕಿಕೊಂಡು ಹೆಂಗಸು ಥರ ಆಡೋದಲ್ಲ ಅಂತಲೂ ವಿನಯ್ ಹೇಳಿದ್ದರು. ವಿನಯ್ ಪದೇ ಪದೇ ಬಳೆ ಅಂತ ಉಲ್ಲೇಖ ಮಾಡುತ್ತಿರುವುದನ್ನು ವೀಕ್ಷಕರು ಖಂಡಿಸಿದ್ದರು.  ಬಳೆ ಅಂತ ವಿನಯ್ ಉಲ್ಲೇಖ ಮಾಡುತ್ತಿರುವುದರ ಅರ್ಥವೇನು? ವೀಕ್ ಇರುವವರು ಮಾತ್ರ ಬಳೆ ಹಾಕಿಕೊಳ್ಳುವುದಕ್ಕೆ ಲಾಯಕ್ಕಾ? ವಿನಯ್ ಕಾರ್ತಿಕ್‌ನ ಲೇವಡಿ ಮಾಡ್ತಿರೋದಾ ಅಥವಾ ಹೆಂಗಸರನ್ನು ಕೈಲಾಗದವರು ಅಂತ ಲೇವಡಿ ಮಾಡ್ತಿರೋದಾ ಅಂತ ಕಟುವಾಗಿ ಟೀಕಿಸಿದ್ದರು. 

 

ರಕ್ಷಕ್ ಬುಲೆಟ್

ಬಿಗ್‌ಬಾಸ್ ಮನೆಯ ಕನ್ನಡ ಚಿತ್ರರಂಗದ ಹಾಸ್ಯನಟ ಬುಲೆಟ್ ಪ್ರಕಾಶ್ ಮಗ ರಕ್ಷಕ್ ಅವರು ಡ್ರೋನ್‌ ಪ್ರತಾಪ್‌ಗೆ ಗೂಬೆ ಅಂತ ಕರೆದಿದ್ದರು. ಈ ಬಗ್ಗೆ ಪ್ರತಾಪ್ ಪ್ರಸ್ನಿಸಿದಾಗ ಮತ್ತೊಮ್ಮೆ ಕರೆಯುತ್ತೇನೆ ಏನಿವಾಗ ಅಂದಿದ್ದರು. ವಾರಾಂತ್ಯದಲ್ಲಿ ಸುದೀಪ್ ಅವರು ರಕ್ಷಕ್‌ನನ್ನು ತರಾಟೆಗೆ ತೆಗೆದುಕೊಂಡಿದ್ದರು.

ರೂಪೇಶ್ ಶೆಟ್ಟಿ

ರೂಪೇಶ್ ಶೆಟ್ಟಿಯವರು ಬಿಗ್‌ಬಾಸ್‌ ಒಟಿಟಿ ಸೀಸನ್ 1ರಲ್ಲಿ ನಾನು ಗಡಿನಾಡು ಕನ್ನಡಿಗ ಅಂತ ಹೇಳಿಕೆ ನೀಡಿದ್ದರು. ಇದು ಹೊರಗಡೆ ವಿವಾದವನ್ನು ಸೃಷ್ಟಿಸಿತ್ತು. ತುಳುನಾಡಿನಲ್ಲಿ ಖ್ಯಾತಿ ಗಳಿಸಿರುವ ರೂಪೇಶ್ ಗಡಿನಾಡ ಕನ್ನಡಿಗ ಅಂತ ಹೇಳಿಕೆ ನೀಡಿದ್ದು, ತುಳುವರ ಆಕ್ರೋಶಕ್ಕೆ ಕಾರಣವಾಗಿತ್ತು. ಕನ್ನಡ ಮತ್ತು ತಾಯಿಯ ಬಗ್ಗೆ ಮಾತನಾಡುವ ಸಂಧರ್ಭದಲ್ಲಿ ರೂಪೇಶ್ ಶೆಟ್ಟಿ, ನಾನು ಗಡಿನಾಡ ಕನ್ನಡಿಗ ಎಂದು ಹೇಳಿದ್ದರು.

 

ಕಾರ್ತಿಕ್ ಮಹೇಶ್

ಬಿಗ್‌ಬಾಸ್ ಮನೆಯಲ್ಲಿ ಕಾರ್ತಿಕ್ ಮಹೇಶ್ ಚಪ್ಪಾಳೆ ತಟ್ಟಿ ಜಗಳ ಮಾಡಿದ್ದರು. ಇದರಿಂದ ನಮ್ಮ ಸಮಾಜಕ್ಕೆ ಅವಮಾನವಾಗಿದೆ ಎಂದು ಕೆಲ ಮಂಗಳಮುಖಿಯರು ವಿರೋಧ ವ್ಯಕ್ತಪಡಿಸಿದ್ದರು. ವಿನಯ್ ಗೌಡ ಕೂಡ ಕಾರ್ತಿಕ್ ಜಗಳವಾಡುವಾಗ ಅಸಭ್ಯ ಪದಗಳನ್ನು ಬಳಸಿದ್ದಾರೆ ಅಂತ ಆರೋಪಿಸಿದ್ದರು. ಆದರೆ, ಕಾರ್ತಿಕ್ ಈ ಆರೋಪ ತಳ್ಳಿ ಹಾಕಿದ್ದರು.

 

ನಮ್ರತಾ ಗೌಡ

ಬಿಗ್‌ಬಾಸ್‌ ಸೀಸನ್ 10ರ ಸ್ಪರ್ಧಿ ನಮ್ರತಾ ಗೌಡ ಕೂಡ ಜಗಳವಾಡುವಾಗ ಅಸಭ್ಯ ಪದ ಬಳಸಿ ಬೀಪ್ ಹಾಕಿಸಿಕೊಂಡಿದ್ದರು. ಹೆಣ್ಮಕ್ಕಳಿಗೆ ಗೌರವ ಕೊಡಬೇಕು ಎಂಬ ನಮ್ರತಾ, ಸಂಗೀತಾ ಮತ್ತು ತನಿಷಾ ಅವರಿಗೆ 'ಕಿತ್ತೋದವಳು' ಎನ್ನುವ ಪದ ಬಳಸಿದ್ದರು.  ಬೇರೆಯವರಿಂದ ಗೌರವವನ್ನ ಡಿಮ್ಯಾಂಡ್ ಮಾಡುವ ನಮ್ರತಾ, ತಾವೂ ಬೇರೆಯವರಿಗೆ ರೆಸ್ಪೆಕ್ಟ್ ಕೊಡಬೇಕಲ್ವಾ? ಅಂತ ವೀಕ್ಷಕರು ಖಂಡಿಸಿದ್ದರು.

ಪ್ರಶಾಂತ್ ಸಂಬರಗಿ

ಬಿಗ್‌ ಬಾಸ್ ಕನ್ನಡ ಸೀಸನ್ 9ರಲ್ಲಿ ಪ್ರಶಾಂತ್ ಸಂಬರಗಿ ಹಾಗೂ ರೂಪೇಶ್ ರಾಜಣ್ಣ ಯಾವುದಾದರೂ ಒಂದು ವಿಷಯಕ್ಕೆ ಪದೇ ಪದೇ ಜಗಳವಾಡುತ್ತಿದ್ದರು. ಒಂದು ದಿನ ಟಾಸ್ಕ್ ಆಡುವಾ ಪ್ರಶಾಂತ್ ಸಂಬರಗಿ, ಕನ್ನಡಪರ ಹೋರಾಟಗಾರರು ರೋಲ್‌ ಕಾಲ್ ಗಿರಾಕಿಗಳು. ಬರೀ ದುಡ್ಡು ಮಾಡ್ತಾರೆ ಎಂದಿದ್ದರು. ಇದರಿಂದ ಸಿಟ್ಟಾದ ಕನ್ನಡಪರ ಹೋರಾಟಗಾರರು, ದೊಡ್ಮನೆ ಮುಂದೆ ಪ್ರತಿಭಟನೆ ನಡೆಸಿದ್ದರು. ಬಳಿಕ ಪ್ರಶಾಂತ್ ಸಂಬರಗಿ ಕನ್ನಡಪರ ಹೋರಾಟಗಾರರ ಕ್ಷಮೆ ಕೇಳಿದ್ದರು. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+