X
ಹೋಮ್ ಚಲನಚಿತ್ರಗಳ ಒಳನೋಟ

ಕನ್ನಡ ಚಿತ್ರರಂಗದಲ್ಲಿ ಹೀರೋ ಆಗಿ ಮಿಂಚುತ್ತಿರುವ ಖಳನಾಯಕರ ಮಕ್ಕಳಿವರು!

Author Sowmya Bairappa | Updated: Tuesday, November 26, 2024, 09:49 AM [IST]

ಸಿನಿಮಾವೊಂದಕ್ಕೆ ನಾಯಕ ಎಷ್ಟು ಮುಖ್ಯವೋ, ಅಷ್ಟೇ ಖಳನಾಯಕ ಕೂಡ ಮುಖ್ಯ. ಒಂದು ಚಿತ್ರಕ್ಕೆ ಖಳನಾಯಕನ ಪಾತ್ರ ಪ್ರಬಲವಾದಷ್ಟೂ ನಾಯಕನ ಪಾತ್ರಕ್ಕೆ ತೂಕ ಹೆಚ್ಚುತ್ತದೆ. ಸಿನಿಮಾಗಳ ಗೆಲುವುಗೆ ಎಷ್ಟೋ ಬಾರಿ ವಿಲನ್‌ಗಳೇ ರಂಗೇರಿಸುವುದುಂಟು. ಕ್ಲೈಮ್ಯಾಕ್ಸ್‌ನಲ್ಲಿ ಹೀರೋಗಳಿಂದ ಒದೆ ತಿಂದು, ಒಳ್ಳೆಯದನ್ನೇ ಮಾಡಿ, ಕೆಟ್ಟದನ್ನು ದೂರವಿಡಿ ಎಂಬ ಸಂದೇಶಕ್ಕೆ ಒತ್ತಾಸೆಯಾಗಿ ನಿಲ್ಲುವವರು ಇವರೇ. ಒಂದು ಕಾಲದಲ್ಲಿ ಚಂದನವನನ್ನು ಎತ್ತರಕ್ಕೆ ಕೊಂಡೊಂಯ್ದ ಕಲಾವಿದರಲ್ಲಿ ಖಳನಾಯಕರ ಪಾತ್ರ ಬಹಳ ದೊಡ್ಡದು. ಅಂತಹ ಅನೇಕ ಕಲಾವಿದರ ಮಕ್ಕಳು ಇಂದು ಅಪ್ಪನ ಹಾದಿಯಲ್ಲೇ ನಟನೆಯಲ್ಲೇ ತೊಡಗಿಕೊಂಡಿದ್ದಾರೆ. ಇಲ್ಲಿ ಕನ್ನಡದ ಚಿತ್ರರಂಗದಲ್ಲಿ ನಾಯಕರಾಗಿ ಮಿಂಚುತ್ತಿರುವ ಖಳನಾಯಕರ ಮಕ್ಕಳ ಪಟ್ಟಿಯನ್ನು ನೀಡಲಾಗಿದೆ.


cover image
ದರ್ಶನ್
1

ಡಾ.ರಾಜ್‌ಕುಮಾರ್ ಸಿನಿಮಾಗಳಲ್ಲಿ ಖಾಯಂ ಖಳನಾಯಕರಾಗಿ ಗುರುತಿಸಿಕೊಂಡಿದ್ದ ತೂಗುದೀಪ್ ಶ್ರೀನಿವಾಸ್ ಅವರ ಹಿರಿಯ ಪುತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಚಂದನವನದ ಸ್ಟಾರ್ ನಟನಾಗಿ ಗುರುತಿಸಿಕೊಂಡಿದ್ದಾರೆ. ಲೈಟ್‌ಬಾಯ್ ಆಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ದರ್ಶನ್,  ರಾಜೇಂದ್ರ ಸಿಂಗ್ ಬಾಬು ಅವರ ದೇವರ ಮಗ, ಎಲ್ಲರ ಮನೆ ದೋಸೇನೂ ತೂತೇನೆ, ಭೂತಯ್ಯನ ಮಕ್ಕಳು, ಹರಿಶ್ಚಂದ್ರ ಸೇರಿದಂತೆ ಕೆಲ ಸಿನಿಮಾಗಳಲ್ಲಿ ಪುಟ್ಟ-ಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು. ಆಗ ಅವರಿಗೆ ಈ ಚಿಕ್ಕ ಪಾತ್ರಗಳು ಸಿಗುವುದೂ ಕಷ್ಟವಾಗಿತ್ತು. ಆದ್ರೀಗ ಕನ್ನಡ ಚಿತ್ರರಂಗದಲ್ಲಿ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಾಗಿ ಗುರುತಿಸಿಕೊಂಡಿದ್ದಾರೆ.

ಧರ್ಮ ಕೀರ್ತಿರಾಜ್
2

ಸುಮಾರು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ವಿಲನ್ ಪಾತ್ರಗಳಲ್ಲಿ ನಟಿಸಿರುವ ಖ್ಯಾತ ಖಳನಟ ಕೀರ್ತಿರಾಜ್ ಮಗ ಧರ್ಮ ಕೀರ್ತಿರಾಜ್ ಕನ್ನಡ ಚಿತ್ರರಂಗದಲ್ಲಿ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ನವಗ್ರಹ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ ಇವರು, 2009ರಲ್ಲಿ ತೆರೆಕಂಡ `ಒಲವೇ ವಿಸ್ಮಯ' ಚಿತ್ರದ ಮೂಲಕ ಪೂರ್ಣಪ್ರಮಾಣದ ನಾಯಕನಾದರು. ಬಳಿಕ ಹಣೆಬರಹ, ಮುಮ್ತಾಜ್, ಬಿಂದಾಸ್ ಗೂಗ್ಲಿ, ಓ ಮನಸೇ, ಖಡಕ್, ರೋನಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಪ್ರಜ್ವಲ್ ದೇವರಾಜ್
3

ಡೈನಾಮಿಕ್ ಹೀರೋ ದೇವರಾಜ್ '27 ಮಾವಳ್ಳಿ ಸರ್ಕಲ್' ಚಿತ್ರದಲ್ಲಿ ವಿಲನ್ ಆಗಿ ನಟಿಸುವ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದರು. ನಂತರ ಹಲವು ಚಿತ್ರಗಳಲ್ಲಿ ಖಳನಾಯಕನಾಗಿ ನಟಿಸಿದ ಇವರು, ತಮ್ಮ ಕಂಚಿನ ಕಂಠ ಮತ್ತು ಖಡಕ್ ಅಭಿನಯದಿಂದ ಬಹುಬೇಗನೆ ಗುರುತಿಸಿಕೊಂಡರು. ನಂತರದಲ್ಲಿ ಹೀರೋ ಆಗಿಯೂ ಹಲವು ಸಿನಿಮಾಗಳಲ್ಲಿ ಅಭಿನಯಿಸಿದರು. ಇವರ ಮಗ ಪ್ರಜ್ವಲ್ ದೇವರಾಜ್ ಕೂಡ ಚಂದನವನದಲ್ಲಿ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.  ಸಿಕ್ಸರ್ ಸಿನಿಮಾದಿಂದ ನಾಯಕರಾಗಿಯೇ ಬಣ್ಣ ಹಚ್ಚಿದ ಪ್ರಜ್ವಲ್, ಇಲ್ಲಿಯ ತನಕ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಮುರಳಿ ಮೀಟ್ಸ್ ಮೀರಾ, ಭದ್ರದಲ್ಲಿನ ಇವರ ನಟನೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

ಅಧ್ವಯ್ ಶಂಕರ್
4

2011ರಲ್ಲಿ 'ಕೋಟೆ' ಸಿನಿಮಾದ ಮೂಲಕ ಖಳನಾಯಕನಾಗಿ ಕನ್ನಡಕ್ಕೆ ಕಾಲಿಟ್ಟ ರವಿಶಂಕರ್, ಎರಡನೇ ಚಿತ್ರವಾದ 'ಕೆಂಪೇಗೌಡ' ಮೂಲಕ ದೊಡ್ಡ ಜನಪ್ರಿಯತೆ ಪಡೆದರು. ಆದಾದ ಬಳಿಕ ಇಂದಿನವರೆಗೆ ರವಿಶಂಕರ್ ಹಿಂದೆ ತಿರುಗಿ ನೋಡೆ ಇಲ್ಲ. ತಮ್ಮ ಖಡಕ್ ವಾಯ್ಸ್, ಬೆಚ್ಚಿಬೀಳಿಸುವ ನಟನೆಯಿಂದ ಸ್ಯಾಂಡಲ್‌ವುಡ್‌ನ ಟಾಪ್ ವಿಲನ್ ಆಗಿ ಗುರುತಿಸಿಕೊಂಡಿದ್ದಾರೆ. ಇವರ ಮಗ ಅಧ್ವಯ್ ಶಂಕರ್ 'ಸುಬ್ರಮಣ್ಯ' ಸಿನಿಮಾ ಮೂಲಕ ನಾಯಕನಾಗಿ ಚಂದನವನ ಪ್ರವೇಶಿಸುತ್ತಿದ್ದಾರೆ.

ವಿನೋದ್ ರಾಜ್
5

ತಮ್ಮ ಬಲಾಢ್ಯ ದೇಹ, ವಿಶಿಷ್ಟ ಕಂಗ್ಲಿಷ್ ಭಾಷೆಯಿಂದ ಅಪಾರ ಖ್ಯಾತಿ ಹೊಂದಿದ್ದ ಟೈಗರ್ ಪ್ರಭಾಕರ್, ಕನ್ನಡ ಮಾತ್ರವಲ್ಲದೇ ತಮಿಳು, ತೆಲಗು ಮತ್ತು ಹಿಂದಿ ಚಿತ್ರಗಳಲ್ಲೂ ಕೂಡ ಖಳನಟರಾಗಿ ಮಿಂಚಿದ್ದರು. ನಂತರ ನಾಯಕನಾಗಿ ಹೆಚ್ಚು ಖ್ಯಾತಿ ಪಡೆದ ನಂತರ ಕೆಲ ಚಿತ್ರಗಳನ್ನು ನಿರ್ಮಿಸಿ ನಿರ್ದೇಶನ ಕೂಡ ಮಾಡಿದ್ದಾರೆ. ಇವರ ಪುತ್ರ ವಿನೋದ್ ರಾಜ್ ಚಂದನವನದಲ್ಲಿ ನಾಯಕರಾಗಿ ಸಕ್ರಿಯವಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+