X
ಹೋಮ್ ಚಲನಚಿತ್ರಗಳ ಒಳನೋಟ

ಗಟ್ಟಿಮೇಳ ಟು ಬೃಂದಾವನ: ಇತ್ತೀಚೆಗೆ ಮುಕ್ತಾಯಗೊಂಡ ಕನ್ನಡ ಸೀರಿಯಲ್‌ಗಳ ಪಟ್ಟಿ ಇಲ್ಲಿದೆ.

Author Sowmya Bairappa | Published: Wednesday, June 5, 2024, 02:51 PM [IST]

ಕನ್ನಡ ಕಿರುತೆರೆಯಲ್ಲಿ ಸದ್ಯ ಭಿನ್ನ-ವಿಭಿನ್ನ ಕಥೆಯುಳ್ಳ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಹಿಂದೆಲ್ಲಾ ಒಂದು ಸೀರಿಯಲ್ ಆರಂಭವಾದರೆ, ನಾಲ್ಕೈದು ವರ್ಷಗಳ ಕಾಲ ಪ್ರಸಾರವಾಗುತ್ತಿತ್ತು. ಈಗ ಹಾಗಲ್ಲ, ಹೊಸ ಧಾರಾವಾಹಿಗಳು ಕೂಡ ಬಹುಬೇಗ ಮುಕ್ತಾಯಗೊಳ್ಳುತ್ತಿವೆ. ಅದಕ್ಕೆ ಕಾರಣ ಏನೆಂಬುದು ಯಾರಿಗೂ ಗೊತ್ತಿಲ್ಲ. ಇಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಕನ್ನಡ ಸೀರಿಯಲ್‌ಗಳ ಪಟ್ಟಿಯನ್ನು ನೀಡಲಾಗಿದೆ.


cover image
ಬೃಂದಾವನ

2023ರ ಅಕ್ಟೋಬರ್ 23ರಂದು ಬಹು ತಾರಾಗಣವಿರುವ 'ಬೃಂದಾವನ' ಎಂಬ ಧಾರಾವಾಹಿ ಆರಂಭವಾಗಿತ್ತು. ಕನ್ನಡ ಕಿರುತೆರೆಗೆ ಹಲವು ಸೂಪರ್ ಹಿಟ್ ಧಾರಾವಾಹಿಗಳನ್ನು ತಂದ ರಾಮ್‌ ಜಿ ನಿರ್ದೇಶನದ ಬೃಂದಾವನ 2024ರ ಮೇ 24ರಂದು ಅಂತಿಮ ಸಂಚಿಕೆ ಪ್ರಸಾರ ಕಂಡಿತು. ಅಮೂಲ್ಯ ಭಾರಧ್ವಾಜ್ ಹಾಗೂ ವರುಣ್ ಆರಾಧ್ಯ ಮುಖ್ಯಭೂಮಿಕೆಯಲ್ಲಿದ್ದ ಈ ಸಿರಿಯಲ್ 167 ಸಂಚಿಕೆಗಳನ್ನು ಪೂರೈಸಿತ್ತು. ಒಂದು ವರ್ಷದೊಳಗೆ ಈ ಧಾರಾವಾಹಿ ಮುಕ್ತಾಯವಾಗಲು ಟೆಕ್ನಿಕಲ್ ಸಮಸ್ಯೆಗಳಿವೆ ಎಂದು ನಿರ್ದೇಶಕರು ಹೇಳಿದ್ದಾರೆ.

ಹಿಟ್ಲರ್ ಕಲ್ಯಾಣ

ಎಡವಟ್ಟು ರಾಣಿ ಲೀಲಾ ಹಾಗೂ ಬ್ಯುಸಿನೆಸ್ ಮ್ಯಾನ್ ಎಜೆ ಮದುವೆ ಕಥೆಯಿಂದ ಆರಂಭವಾಗಿದ್ದ 'ಹಿಟ್ಲರ್ ಕಲ್ಯಾಣ' ಧಾರಾವಾಹಿ ಕೂಡ ಕೆಲ ತಿಂಗಳ ಹಿಂದೆ ಮುಕ್ತಾಯಗೊಂಡಿದೆ. ಸುಮಾರು ಎರಡೂವರೆ ವರ್ಷಗಳಿಂದ ಪ್ರಸಾರವಾಗುತ್ತಿದ್ದ ಈ ಸೀರಿಯಲ್ ಕಥೆ ಮತ್ತು ಪಾತ್ರಗಳಿಂದ ಅಪಾರ ಜನಪ್ರಿಯತೆ ಪಡೆದುಕೊಂಡಿತ್ತು. ನಟ ದಿಲೀಪ್ ರಾಜ್ ಹಾಗೂ ಮಲೈಕಾ ವಸುಪಾಲ್ ಮುಖ್ಯ ಭೂಮಿಕೆಯಲ್ಲಿ  ಹಿಟ್ಲರ್ ಕಲ್ಯಾಣ 694 ಸಂಚಿಕೆ ಪೂರೈಸಿತ್ತು. ಆದರೆ, ಕಳೆದ ಎರಡು ತಿಂಗಳ ಹಿಂದೆ ಈ ಧಾರಾವಾಹಿಯನ್ನು ತರಾತುರಿಯಲ್ಲಿ ಮುಕ್ತಾಯಗೊಳಿಸಿದ್ದು, ಪ್ರೇಕ್ಷಕರಿಗೆ ಕ್ಲೈಮ್ಯಾಕ್ಸ್‌ ಬಗ್ಗೆ ಅಸಮಾಧಾನವಿತ್ತು.

ಗಟ್ಟಿಮೇಳ

ಜೀ ಕನ್ನಡ ವಾಹಿಯಲ್ಲಿ ಪ್ರಸಾರವಾದ ಮತ್ತೊಂದು ಜನಪ್ರಿಯ ಧಾರಾವಾಹಿ ಗಟ್ಟಿಮೇಳ. ಈ ಸೀರಿಯಲ್‌ನಲ್ಲಿನ ವೇದಾಂತ್ ಹಾಗೂ ಅಮೂಲ್ಯ ಪಾತ್ರಗಳು ಸಿಕ್ಕಾಪಟ್ಟೆ ಫೇಮಸ್ ಆಗಿದ್ದವು.  ಕನ್ನಡ ಕಿರುತೆರೆಯಲ್ಲಿ ದೀರ್ಘಾವಧಿಯಿಂದ ಪ್ರಸಾರವಾಗುತ್ತಿದ್ದ ಸೀರಿಯಲ್‌ಗಳಲ್ಲಿ ಒಂದಾಗಿದ್ದ 'ಗಟ್ಟಿಮೇಳ' 2024ರ ಜನವರಿ ತಿಂಗಳಲ್ಲಿ ಮುಕ್ತಾಯಗೊಂಡಿತು. ಸದ್ಯ ಕಿರುತೆರೆ ಪ್ರೇಕ್ಷಕರು ವೇದಾಂತ್ ಹಾಗೂ ಅಮೂಲ್ಯ ಜೋಡಿಯನ್ನು ಸಿಕ್ಕಾಪಟ್ಟೆ ಮಿಸ್ ಮಾಡಿಕೊಳ್ಳುತ್ತಿದ್ದಾರೆ.

ಗೀತಾ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಮನೋರಂಜನೆ ನೀಡುತ್ತಿದ್ದ 'ಗೀತಾ' ಧಾರಾವಾಹಿ ಮಾರ್ಚ್ ತಿಂಗಳಲ್ಲಿ ಮುಕ್ತಾಯಗೊಂಡಿದೆ. 2020ರಲ್ಲಿ ಆರಂಭವಾಗಿದ್ದ ಈ ಸೀರಿಯಲ್ 1107 ಸಂಚಿಕೆಗಳನ್ನು ಪೂರೈಸಿತ್ತು. ಗೀತಾ ಧಾರಾವಾಹಿಯಲ್ಲಿ ಭವ್ಯಾ ಗೌಡ ಹಾಗೂ ಧನುಷ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಆರಂಭದಲ್ಲಿ ಹೂ ಮಾರುವ ಹುಡುಗಿ ಗೀತಾ ಮತ್ತು ಮಂತ್ರಿಯೊಬ್ಬರ ಸೊಕ್ಕಿನ ಮಗ ವಿಜಯ್ ಪರಸ್ಪರ ದ್ವೇಷ, ಗಲಾಟೆ, ಜಗಳದಿಂದಲೇ ಆರಂಭವಾಗಿ, ಬಳಿಕ ವಿಜಯ್ ಬದಲಾಗುವ ಕಥೆಯಿತ್ತು. ಜೊತೆಗೆ ಆರಂಭದಿಂದಲೂ ಹಲವು ಟ್ವಿಸ್ಟ್‌ಗಳನ್ನು ಹೊತ್ತು ತಂದಿತ್ತು.

ಪಾರು

ಕಳೆದ ಆರು ವರ್ಷಗಳಿಂದ ಕನ್ನಡ ಕಿರುತೆರೆ ವೀಕ್ಷಕರಿಗೆ ಭರಪೂರ ಮನೋರಂಜನೆ ನೀಡಿದ್ದ 'ಪಾರು' ಸೀರಿಯಲ್ 2024ರ ಮಾರ್ಚ್‌ ತಿಂಗಳಲ್ಲಿ ಮುಕ್ತಾಯಗೊಂಡಿದೆ.  2018ರಲ್ಲಿ ಆರಂಭವಾಗಿದ್ದ ಈ ಧಾರಾವಾಹಿ, ಉತ್ತಮ ಕಥೆ, ಚಿತ್ರಕಥೆ, ಟ್ವಿಸ್ಟ್ ಹಾಗೂ ಪಾತ್ರಧಾರಿಗಳ ಮೂಲಕ ಸಿಕ್ಕಾಪಟ್ಟೆ ಗಮನ ಸೆಳೆದಿತ್ತು. ಮೋಕ್ಷಿತಾ ಪೈ 'ಪಾರು' ಪಾತ್ರದಲ್ಲಿ ನಟಿಸಿದ್ದ ಈ ಧಾರಾವಾಹಿಯಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟಿ ವಿನಯ ಪ್ರಸಾದ್ 'ಅಖಿಲಾಂಡೇಶ್ವರಿ' ಎಂಬ ಮಾತ್ರದ ಮೂಲಕ ಮೋಡಿ ಮಾಡಿದ್ದರು. ಉಳಿದಂತೆ ಶರತ್ ಪದ್ಮನಾಭ್, ಸಿದ್ದು ಮೂಲಿಮನಿ, ಪವಿತ್ರಾ ನಾಯ್ಕ್, ನಾಗೇಂದ್ರ ಶಾ, ನಾಗೇಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+