X
ಹೋಮ್ ಚಲನಚಿತ್ರಗಳ ಒಳನೋಟ

ಸ್ಯಾಂಡಲ್‌ವುಡ್ ಸ್ಟಾರ್ ನಟರಿಗಿರುವ ಬಿರುದುಗಳು ಯಾವವು & ಅದನ್ನು ಕೊಟ್ಟಿದ್ಯಾರು ಗೊತ್ತಾ?

Author Sowmya Bairappa | Published: Wednesday, July 17, 2024, 03:55 PM [IST]

ಸಿನಿಮಾ ನಟ-ನಟಿಯರಿಗೆ ಸಾಕಷ್ಟು ಬಿರುದುಗಳಿರುತ್ತವೆ. ಓರ್ವ ನಟ ಒಂದೆರಡು ಹಿಟ್ ಸಿನಿಮಾಗಳನ್ನ ನೀಡಿದ್ರೆ, ಆ ನಟನ ಹೆಸರಿನ ಮುಂದೆ ಬಿರುದೊಂದನ್ನ ಕೊಟ್ಟು ಆ ಟೈಟಲ್ ಮೂಲಕ ಅವರು ಫೇಮಸ್ ಆಗುವಂತೆ ಮಾಡಲಾಗತ್ತೆ. ಅದೇ ರೀತಿ ನಮ್ಮ ಸ್ಯಾಂಡಲ್‌ವುಡ್ ನಟರು ಅನೇಕ ವಿಭಿನ್ನ ಬಿರುದುಗಳನ್ನು ಪಡೆದುಕೊಂಡಿದ್ದಾರೆ. ಇಲ್ಲಿ ಚಂದನವನದ ಸ್ಟಾರ್ ನಟರಿಗಿರುವ ಬಿರುದುಗಳು, ಅದನ್ನು ಯಾಕೆ ಅವರಿಗೆ ನೀಡಲಾಗಿದೆ ಎಂಬ ಮಾಹಿತಿಯನ್ನು ನೀಡಲಾಗಿದೆ.


cover image
ಶಿವ ರಾಜ್‌ಕುಮಾರ್

ಶಿವರಾಜ್‌ಕುಮಾರ್ ಅವರಿಗೆ ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್, ಕರುನಾಡ ಚಕ್ರವರ್ತಿ ಎಂಬ ಬಿರುದುಗಳಿವೆ. ಈ ಪೈಕಿ ಹ್ಯಾಟ್ರಿಕ್ ಹೀರೋ ಎಂಬ ಟೈಟಲ್ ಅನ್ನು ಅವರ ಸಿನಿಕರಿಯರ್ ಆರಂಭದಲ್ಲಿ ನಟಿಸಿದ ಆನಂದ್, ರಥಸಪ್ತಮಿ, ಮನಮೆಚ್ಚಿದ ಹುಡುಗಿ ಚಿತ್ರಗಳು ಬ್ಲಾಕ್‌ಬಸ್ಟರ್ ಆಗಿದ್ದರಿಂದ ಹಾಗೂ ಚೊಚ್ಚಲ ಸಿನಿಮಾಗಳಲ್ಲೇ ಹಿಟ್ ಕೊಟ್ಟಿದ್ದರಿಂದ 'ಹ್ಯಾಟ್ರಿಕ್ ಹೀರೋ' ಎಂಬ ಬಿರುದು ನೀಡಲಾಯಿತು. ಆ ನಂತರ ಚಂದನವನದಲ್ಲಿ ನಾಯಕನಾಗಿ 100 ಸಿನಿಮಾ ಪೂರೈಸಿದ್ದಕ್ಕಾಗಿ ಸೆಂಚುರಿ ಸ್ಟಾರ್ ಬಿರುದು ನೀಡಲಾಯಿತು. ಬಳಿಕ ಶಿವಣ್ಣನ 51ನೇ ವರ್ಷದ ಹುಟ್ಟುಹಬ್ಬ ಸಂದರ್ಭದಲ್ಲಿ  ಹರ್ಷ ಅವರು 'ಭಜರಂಗಿ' ಸಿನಿಮಾದ ಫಸ್ಟ್ ಲುಕ್ ರಿವೀಲ್ ಮಾಡಿ 'ಕರುನಾಡ ಚಕ್ರವರ್ತಿ' ಅಂತ ಬಿರುದು ನೀಡಿದ್ದರು.

ದರ್ಶನ್

ದರ್ಶನ್ ಅವರಿಗೆ ಚಾಲೆಂಜಿಂಗ್ ಸ್ಟಾರ್ ಹಾಗೂ ಬಾಕ್ಸಾಫೀಸ್  ಸುಲ್ತಾನ್ ಎಂಬ ಬಿರುದುಗಳಿದ್ದು, ಅಭಿಮಾನಿಗಳು ಪ್ರೀತಿಯಿಂದ ಡಿ ಬಾಸ್ ಮತ್ತು ದಾಸ ಎಂದೇ ಕರೀತಾರೆ. ಮೆಜಿಸ್ಟಿಕ್ ಸಿನಿಮಾ ಹಿಟ್ ಆಗುತ್ತಿದ್ದಂತೆ ದರ್ಶನ್ ಆಪ್ತ ಅಭಿಮಾನಿ ಹುಕ್ಕಳಿಯ ಗೌಡ ಅವರು 'ಚಾಲೆಂಜಿಂಗ್ ಹೀರೋ' ಎಂಬ ಬಿರುದು ನೀಡಿದ್ರು. ಕಾಲಕ್ರಮೇಣ ಇದು 'ಚಾಲೆಂಜಿಂಗ್ ಸ್ಟಾರ್' ಎಂದು ಬದಲಾಯಿತು. ಇನ್ನೂ ಬಾಕ್ಸಾಫೀಸ್ ಸುಲ್ತಾನ್ ಎಂಬ ಬಿರುದನ್ನು ಖ್ಯಾತ ಫೋಷಕ ನಟ ವಿಜಯ್ ಸಾರಥಿಯವರು ನೀಡಿದ್ದರು. ಇದು ದರ್ಶನ್ ಸಿನಿಮಾಗಳಿಗೆ ಇರುತ್ತಿದ್ದ ಕ್ರೇಜ್ ಹಾಗೂ ಕಲೆಕ್ಷನ್ ನೋಡಿ ಕೊಟ್ಟಿರುವ ಬಿರುದಾಗಿದೆ.

ಪುನೀತ್ ರಾಜ್‌ಕುಮಾರ್

ಪುನೀತ್ ರಾಜ್‌ಕುಮಾರ್ ಅವರಿಗೆ ಪವರ್ ಸ್ಟಾರ್ ಹಾಗೂ ಕರ್ನಾಟಕ ರತ್ನ ಎಂಬ ಎರಡು ಬಿರುದುಗಳಿವೆ. ಸಾಕಷ್ಟು ಸಿನಿಮಾಗಳಲ್ಲಿ ಬಾಲನಟನಾಗಿ ಅಭಿನಯಿಸಿದ್ದ ಪುನೀತ್, ಅಪ್ಪು ಚಿತ್ರದ ಮೂಲಕ ನಾಯಕನಾಗಿ ಎಂಟ್ರಿಕೊಟ್ಟರು. ಮೊದಲ ಸಿನಿಮಾದಲ್ಲೇ ಸೂಪರ್ ಸಕ್ಸಸ್ ಕಂಡರು. ಆನಂತರ ಬಂದ ಅಭಿ ಹಾಗೂ ವೀರ ಕನ್ನಡಿಗ ಚಿತ್ರಗಳು ಬ್ಯಾಕ್ ಟು ಬ್ಯಾಕ್ ಹಿಟ್ ಆದವು. ವೀರ ಕನ್ನಡಿಗ ಸಿನಿಮಾದ ಸಕ್ಸಸ್ ಮೀಟ್ ಸಮಯದಲ್ಲಿ ಶಿವರಾಜ್‌ಕುಮಾರ್ ಅಪ್ಪು ಅವರಿಗೆ ಪವರ್ ಸ್ಟಾರ್ ಟೈಟಲ್ ಕೊಡಲು ಸಲಹೆ ನೀಡುತ್ತಾರೆ. ಆ ಬಳಿಕ ಅವರಿಗೆ ಪವರ್ ಸ್ಟಾರ್ ಎಂಬ ಬಿರುದು ನೀಡಲಾಯಿತು. ನಂತರ ಎಲ್ಲರಿಗೂ ತಿಳಿದಿರುವಂತೆ, ಅಪ್ಪು ಅವರು ಸಿನಿಮಾ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಹಾಗೂ ಸಾಮಾಜಿಕ ಸೇವೆ ಕಂಡ ಕರ್ನಾಟಕ ಸರ್ಕಾರವೂ 2022ರ ನವೆಂಬರ್ 1ರಂದು ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿತು. 

ಉಪೇಂದ್ರ

ಉಪೇಂದ್ರ ಅವರಿಗೆ ರಿಯಲ್ ಸ್ಟಾರ್ ಹಾಗೂ ಸೂಪರ್ ಸ್ಟಾರ್ ಎಂಬ ಬಿರುದುಗಳಿವೆ. ಉಪ್ಪಿಯವರು ದಿನನಿತ್ಯ ನಡೆಯುವ ನೈಜ ಘಟನೆಗಳು ಹಾಗೂ ಜನರ ಆಲೋಚನೆಗೆ ತಕ್ಕಂತೆ ಕಥೆಗಳನ್ನು ಮಾಡಿ, ರಿಯಾಲಿಟಿಗೆ ತಕ್ಕಂತೆ ಡೈಲಾಗ್‌ಗಳನ್ನು ಬರೆದು ಆ ಮೂಲಕ ಮೆಸೇಜ್‌ವೊಂದನ್ನು ನೀಡುತ್ತಾರೆ. ಇದೇ ಕಾರಣಕ್ಕಾಗಿ ಉಪೇಂದ್ರ ಅವರಿಗೆ ರಿಯಲ್ ಸ್ಟಾರ್ ಹಾಗೂ ಸೂಪರ್ ಸ್ಟಾರ್ ಎಂಬ ಬಿರುದುಗಳನ್ನು ನೀಡಲಾಗಿದೆ. 

ಸುದೀಪ್

ಸುದೀಪ್ ಅವರಿಗೆ ಅಭಿನಯ ಚಕ್ರವರ್ತಿ, ಬಾದ್‌ಷಾ ಎಂಬ ಬಿರುದಗಳಿದ್ದು, ಹುಚ್ಚ ಚಿತ್ರದ ಬಳಿಕ ಅಭಿಮಾನಿಗಳು ಪ್ರೀತಿಯಿಂದ ಕಿಚ್ಚ ಅಂತಲೇ ಕರೀತಾರೆ. ಸುದೀಪ್ ಸಿನಿಮಾರಂಗದಲ್ಲಿ ಸಲ್ಲಿಸಿರುವ ಸೇವೆಗಾಗಿ ಕರ್ನಾಟಕ ರಕ್ಷಣಾ ವೇದಿಕೆಯು ಪುಟ್ಟಣ್ಣ ಚೆಟ್ಟಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ 'ಅಭಿನಯ ಚಕ್ರವರ್ತಿ' ಎಂಬ ಬಿರುದು ನೀಡಲಾಯಿತು. ಬಾದ್‌ಷಾ ಎಂಬ ಬಿರುದನ್ನು ನಿರ್ದೇಶಕ ಎಸ್ ಕೃಷ್ಣ ಅವರು ಫೈಲ್ವಾನ್ ಚಿತ್ರದ ಪೋಸ್ಟರ್ ಬಿಡುಗಡೆ ಸಂದರ್ಭದಲ್ಲಿ ನೀಡಿದರು. 

ಯಶ್

ಯಶ್ ಅವರು ರಾಕಿಂಗ್ ಸ್ಟಾರ್ ಎಂಬ ಬಿರುದನ್ನು ಅಭಿಮಾನಿಗಳು ನೀಡಿದ್ದಾರೆ. ಯಶ್ ವೃತ್ತಿ ಜೀವನದ ಏಳಿಗೆಗೆ ಶ್ರಮಿಸಿದ ಪರಿ, ಯಾವುದೇ ಪಾತ್ರವಾದರೂ ಜೀವ ತುಂಬುವ ಪರಿ ಜೊತೆಗೆ ಬ್ಯಾಕ್ ಟು ಬ್ಯಾಕ್ ಕಮರ್ಷಿಯಲ್ ಹಿಟ್ ಸಿನಿಮಾಗಳನ್ನ ನೀಡಿದ್ದಕ್ಕಾಗಿ ಫ್ಯಾನ್ಸ್ ಈ ಬಿರುದು ನೀಡಿದ್ದಾರೆ.  ಕೆಜಿಎಫ್ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿರುವ ಯಶ್, ರಾಕಿಭಾಯ್ ಅಂತಲೇ ಖ್ಯಾತಿ ಗಳಿಸಿದ್ದಾರೆ. 


ಯಶ್

ಯಶ್ ಅವರು ರಾಕಿಂಗ್ ಸ್ಟಾರ್ ಎಂಬ ಬಿರುದನ್ನು ಅಭಿಮಾನಿಗಳು ನೀಡಿದ್ದಾರೆ. ಯಶ್ ವೃತ್ತಿ ಜೀವನದ ಏಳಿಗೆಗೆ ಶ್ರಮಿಸಿದ ಪರಿ, ಯಾವುದೇ ಪಾತ್ರವಾದರೂ ಜೀವ ತುಂಬುವ ಪರಿ ಜೊತೆಗೆ ಬ್ಯಾಕ್ ಟು ಬ್ಯಾಕ್ ಕಮರ್ಷಿಯಲ್ ಹಿಟ್ ಸಿನಿಮಾಗಳನ್ನ ನೀಡಿದ್ದಕ್ಕಾಗಿ ಫ್ಯಾನ್ಸ್ ಈ ಬಿರುದು ನೀಡಿದ್ದಾರೆ.  ಕೆಜಿಎಫ್ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿರುವ ಯಶ್, ರಾಕಿಭಾಯ್ ಅಂತಲೇ ಖ್ಯಾತಿ ಗಳಿಸಿದ್ದಾರೆ. 


ರಿ‍ಷಭ್ ಶೆಟ್ಟಿ

ನಮ್ ಏರಿಯಾದಲ್ಲಿ ಒಂದಿನ, ತುಗಲಕ್ ಅಟ್ಟಹಾಸ, ಲೂಸಿಯಾ, ಉಳಿದವರು ಕಂಡಂತೆ. ರಿಕ್ಕಿ, ಅಂಬಿ ನಿಂಗ್‌ ವಯಸ್ಸಾಯ್ತೋ ಚಿತ್ರದಲ್ಲಿ ಸಹನಟನಾಗಿ ಅಭಿನಯಿಸಿದ್ದ ರಿಷಭ್, 2019ರಲ್ಲಿ ಕಥಾನಾಯಕ ಸಿನಿಮಾ ಮೂಲಕ ಹೀರೋ ಆಗಿ ಎಂಟ್ರಿಕೊಟ್ಟರು. ಇದಾದ ಬಳಿಕ ಕೆಲ ಸಿನಿಮಾಗಳಲ್ಲಿ ನಟಿಸಿದ ರಿಷಭ್, ಕಾಂತಾರ ಚಿತ್ರದ ಬಳಿಕ ಡಿವೈನ್ ಸ್ಟಾರ್ ಎಂಬ ಬಿರುದು ಪಡೆದರು. 

ರವಿಚಂದ್ರನ್

ರವಿಚಂದ್ರನ್ ಅವರಿಗೆ ಕ್ರೇಜಿ ಸ್ಟಾರ್ ಎಂಬ ಬಿರುದು ಇದೆ. ಇವರು ಕನ್ನಡ ಚಿತ್ರರಂಗದ ಮಾರುಕಟ್ಟೆ ಬಗ್ಗೆ ಲೆಕ್ಕಿಸದೇ ಸಿನಿಮಾಗಳಿಗೆ ಅತಿ ದುಬಾರಿ ಸೆಟ್‌ಗಳನ್ನು ಹಾಕುತ್ತಿದ್ದರು. ಇವರಿಗೆ ಸಿನಿಮಾ ಮೇಲಿರುವ ಕ್ರೇಜ್ ನೋಡಿ 'ಕ್ರೇಜಿಸ್ಟಾರ್' ಎಂಬ ಬಿರುದು ನೀಡಲಾಯಿತು.  

ಧ್ರುವ ಸರ್ಜಾ

ಧ್ರುವಾ ಸರ್ಜಾ ಅವರಿಗೆ ಆಕ್ಷನ್ ಫ್ರಿನ್ಸ್ ಎಂಬ ಬಿರುದು ಇದೆ. ಇವರು ನಟಿಸಿದ ಮೊದಲ ಸಿನಿಮಾ 'ಅದ್ಧೂರಿ'ಯಲ್ಲಿ ಡ್ಯೂಪ್ ಇಲ್ಲದೇ ಫೈಟ್ ಸೀನ್‌ಗಳನ್ನು ರಿಯಲ್ ಆಗಿ ಮಾಡಿರುವುದರಿಂದ, ಚೊಚ್ಚಲ ಸಿನಿಮಾ ಸಕ್ಸಸ್ ನಂತರ 'ಆಕ್ಷನ್ ಫ್ರಿನ್ಸ್' ಎಂಬ ಬಿರುದು ನೀಡಲಾಯಿತು.


ದುನಿಯಾ ವಿಜಯ್

ದುನಿಯಾ ಸಿನಿಮಾ ಬಳಿಕ ವಿಜಯ್ ಅವರು 'ದುನಿಯಾ ವಿಜಯ್' ಅಂತಲೇ ಖ್ಯಾತಿ ಗಳಿಸಿದರು. ಇವರಿಗೆ ಬ್ಲ್ಯಾಕ್ ಕೋಬ್ರಾ ಅಂತ ಬಿರುದು ಇದ್ದು, ಇವರ ನಟಿಸಿದ ರಜನಿಕಾಂತ ಚಿತ್ರತಂಡವೂ ಈ ಬಿರುದು ನೀಡಿದೆ. 

ಗಣೇಶ್

ಗಣೇಶ್ ಅವರಿಗೆ ಗೋಲ್ಡನ್ ಸ್ಟಾರ್ ಎಂಬ ಬಿರುದು ಇದೆ. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಕಾಮಿಡಿ ಟೈಮ್' ಕಾರ್ಯಕ್ರಮದಲ್ಲಿ ನಿರೂಪಕರಾಗಿದ್ದ ಗಣೇಶ್, `ಟಪೋರಿ' ಎಂಬ ಚಿತ್ರದಲ್ಲಿ ಖಳನಾಯಕನಾಗಿ ಅಭಿನಯಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದರು. ಗಣೇಶ್ ಅವರನ್ನು ರಾತ್ರೋರಾತ್ರಿ ಸೂಪರ್ ಸ್ಟಾರ್ ಮಾಡಿದ್ದು ಮುಂಗಾರುಮಳೆ ಸಿನಿಮಾ. ಇದಾದ ಬಳಿಕ ಬಂದ ಸಿನಿಮಾಗಳೆಲವೂ ಹಿಟ್ ಆಗಿದ್ದರಿಂದ ಅವರಿಗೆ 'ಗೋಲ್ಡನ್ ಸ್ಟಾರ್' ಅಂತ ಬಿರುದು ನೀಡಲಾಯಿತು. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+