X
ಹೋಮ್ ಚಲನಚಿತ್ರಗಳ ಒಳನೋಟ

Happy Birthday: ಸಾವನ್ನು ಗೆದ್ದು ಹೊಸ ಬದುಕು ಕಟ್ಟಿಕೊಂಡ ಸುಪ್ರೀಂ ಹೀರೋ ಶಶಿಕುಮಾರ್ ಅಪಘಾತದ ಬಗ್ಗೆ ನಿಮಗೆ ತಿಳಿಯದ ವಿಷಯಗಳಿವು!

Author Administrator | Updated: Monday, December 2, 2024, 12:06 PM [IST]

ತೆರೆ ಮೇಲೆ ಎಲ್ಲರನ್ನು ರಂಜಿಸುವ ಕಲಾವಿದರಿಗೆ ಮುಖದ ಸೌಂದರ್ಯ ಕೂಡ ಮುಖ್ಯವಾಗುತ್ತದೆ. ನೋಡಲು ಸುಂದರವಾಗಿದ್ದು, ಪ್ರತಿಭೆಯಿದ್ದರೆ ಆ ನಟ ಪ್ರೇಕ್ಷಕರ ಮೆಚ್ಚುಗೆ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದೇ ರೀತಿ ತನ್ನ ಸೌಂದರ್ಯ, ನಟನೆ ಮೂಲಕ ದೊಡ್ಡ ಅಭಿಮಾನಿ ಬಳಗ ಹೊಂದಿದ ಚಂದನವನದ ಚಂದದ ನಟ ಸುಪ್ರೀಂ ಹೀರೋ ಶಶಿಕುಮಾರ್. ಇಂದು ಕಾಲದಲ್ಲಿ ಸ್ಟಾರ್ ನಟರಾಗಿ ಮಿಂಚಿದ್ದ ಶಶಿಕುಮಾರ್‌ ಬಾಳಿನಲ್ಲಿ ಒಂದು ಅಪಘಾತ ಬಿರುಗಾಳಿಯಂತೆ ಏಳುತ್ತದೆ. ಇದರಿಂದಾಗಿ ಅವರು ಸಾಕಷ್ಟು ನೋವು ಹಾಗೂ ಕಷ್ಟಗಳನ್ನು ಎದುರಿಸಿದ್ದಾರೆ. ಇಲ್ಲಿ ಶಶಿಕುಮಾರ್ ಜೀವನದ ಬಗ್ಗೆ ನಿಮಗೆ ತಿಳಿದ ವಿಷಯಗಳನ್ನು ನೀಡಲಾಗಿದೆ.


cover image
ಅಪಘಾತ

ಬರೀ ಏಳೆಂಟು ವರ್ಷದಲ್ಲಿ 75 ಸಿನಿಮಾಗಳನ್ನು ಮಾಡಿದ್ದ ಶಶಿಕುಮಾರ್ ದೊಡ್ಡ ಸ್ಟಾರ್ ಆಗಿದ್ದರು. ಅವರ ಸಾಕಷ್ಟು ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. ಕನ್ನಡದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಿರುವ ನಟರಲ್ಲಿ ಪ್ರಮುಖರಾಗಿದ್ದರು. ಹೀಗೆ ಎಲ್ಲ ಚೆನ್ನಾಗಿದೆ ಎನ್ನುವಾಗಲೇ  1998ರ ಜುಲೈ 31 ರಂದು ಒಂದು ಅಪಘಾತಕ್ಕೊಳಗಾದರು. 'ಬಾರೋ ನನ್ನ ಮುದ್ದಿನ ಕೃಷ್ಣ' ಎಂಬ ಸಿನಿಮಾದ ಶೂಟಿಂಗ್ ಮುಗಿಸಿ ಬರುತ್ತಿದ್ದ ಶಶಿಕುಮಾರ್‌ಗೆ, ಮಗಳು ಐಶ್ವರ್ಯ ಫೋನ್ ಮಾಡಿ ಐಸ್ ಕ್ರೀಮ್ ತರಲು ಹೇಳಿದ್ದರಂತೆ. ಹೀಗಾಗಿ ತಮ್ಮ ಮಾರುತಿ ಕಾರಿನಲ್ಲಿ ರಾತ್ರಿ 9 ರಿಂದ 10 ಗಂಟೆ ಸಮಯದಲ್ಲಿ ಶಿವಾನಂದ ಸರ್ಕಲ್ ಬಳಿ ಹೋಗುತ್ತಿದ್ದಾಗ ಸಣ್ಣದಾಗಿ ಮಳೆ ಬೀಳುತ್ತಿತ್ತು. ಅವರ ಕಾರಿನ ಎದುರಿನಿಂದ ಅವರ ಕಣ್ಣಿಗೆ ಲೈಟ್ ಬಿತ್ತು. ಕಣ್ಣು ಬಿಡಲು ಆಗದೆ, ಮುಂದೆ ಇನ್ನೊಂದು ಗಾಡಿ ಬರುತ್ತದೆ ಎಂದು ಸ್ಟೈರಿಂಗ್ ಬಲಕ್ಕೆ ತಿರುಗಿಸಿದ್ದರಂತೆ ಆಮೇಲೆ ಕಣ್ಣು ಬಿಟ್ಟು ನೋಡಿದರೆ, ಅವರು ಆಸ್ಪತ್ರೆಯಲ್ಲಿ ಇದ್ದರಂತೆ. ಅಂದ್ಹಾಗೆ, ಶಶಿಕುಮಾರ್ ಕೇವಲ 30 ಕಿಲೋ ಮೀಟರ್ ವೇಗದಲ್ಲಿ ಬರುತ್ತಿದ್ದರು. ಈ ಬಗ್ಗೆ ಅವರು ವೀಕೆಂಡ್ ವಿತ್ ರಮೇಶ್‌ ಕಾರ್ಯಕ್ರಮದಲ್ಲಿ ಹೇಳಿದ್ದರು.

ಸತತ ಎಂಟು ಗಂಟೆ ಶಸ್ತ್ರಚಿಕಿತ್ಸೆ

ಕಾರು ಅಪಘಾತದಿಂದಾಗಿ ಶಶಿಕುಮಾರ್ ಮುಖಕ್ಕೆ ದೊಡ್ಡ ಪೆಟ್ಟು ಬಿದ್ದಿತ್ತು. ಮುಖವೆಲ್ಲಾ ರಕ್ತಮಯವಾಗಿದ್ದ ಅವರಿಗೆ ಅತತ 8 ಗಂಟೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಡಾಕ್ಟರ್ ಜಲಾನಿ ಎಂಬುವವರು ಶಶಿಕುಮಾರ್‌ಗೆ ಮರುಜೀವ ನೀಡಿದ್ದರು. ಆದರೂ ಅಪಘಾತದ ತೀವ್ರತೆಗೆ ಶಶಿಕುಮಾರ್ ಮುಖ ನೋಡಲು ಆಗದಿರುವ ಹಾಗಾಯ್ತು. ಅಲ್ಲಿಂದ ಶಶಿ ಬದುಕಿನಲ್ಲಿ ಬಿರುಗಾಳಿ ಬಂತು. ಈ ಸಂದರ್ಭ ಅವರು ಆರ್‌.ಟಿ ನಗರದ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು.

ಬದಲಾದ ಶಶಿಕುಮಾರ್ ಬದುಕು

ಅಪಘಾತದ ನಂತರ ಶಶಿಕುಮಾರ್‌ಗೆ ಡ್ಯಾನ್ಸ್ ಹಾಗೂ ನಟನೆ ಮಾಡಲಾಗಲ್ಲ ಎಂಬ ಸುದ್ದಿಗಳು ಹಬ್ಬಿದ್ದವು. ಇದರಿಂದ ಸಿನಿಮಾ ಅವಕಾಶಗಳು ಕೈತಪ್ಪಿದವು. ಸ್ಟಾರ್ ಹೀರೋ ಆಗಿದ್ದ ಅವರು ಅಪಘಾತದಿಂದಾಗಿ ಹಣವಿಲ್ಲದೇ ಸ್ನೇಹಿತರ ಬಳಿ 10 ಸಾವಿರಕ್ಕಾಗಿ ಕೈ ಚಾಚಿದರು. ಆದರೆ, ಯಾರು ಕೂಡ ಅವರ ಸಹಾಯಕ್ಕೆ ಬರಲಿಲ್ಲ. ಶಶಿಕುಮಾರ್ ಕರೆ ಮಾಡಿದ್ರೆ ಎಲ್ಲಿ ದುಡ್ಡು ಕೇಳುತ್ತಾನೋ ಅಂತ ಎಲ್ಲರೂ ದೂರವಾದರಂತೆ. ಆಗಲೇ ಅವರಿಗೆ ಪ್ರಪಂಚವೆಂದರೆ ಏನು ಎಂಬುದರ ಅರಿವಾಗಿತ್ತಂತೆ.

ಡಿಪ್ರೆಶನ್‌ಗೆ ಹೋಗಿದ್ದ ಸುಪ್ರೀಂ ಹೀರೋ

ಈ ಎಲ್ಲಾ ಘಟನೆಗಳಿಂದ ನೊಂದ ಅವರು ಡಿಪ್ರೆಶನ್ ಹೋದರಂತೆ. ಅವರು ತಮ್ಮ ಮುಖ ನೋಡಿಕೊಳ್ಳಬಾರದು ಎಂದು ಮನೆಯಲ್ಲಿ ಒಂದು ಕನ್ನಡಿಯೂ ಇರಲಿಲ್ಲವಂತೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಇರುತ್ತಿದ್ದರಂತೆ. ಈ ರೀತಿ ಇದ್ದ ಶಶಿಕುಮಾರ್ ಕ್ರಮೇಣ ಚೇತರಿಸಿಕೊಂಡರು. ಬಳಿಕ ಹಬ್ಬ ಸಿನಿಮಾದಲ್ಲಿ ನಟಿಸಲು ಜಯಶ್ರೀ ಹಾಗೂ ರಾಜೇಂದ್ರ ಬಾಬು ಅವರು ಅವಕಾಶ ನೀಡಿದರು. ಈ ಸಿನಿಮಾ ಹಿಟ್ ಆಗುವುದರ ಜೊತೆಗೆ ಅವರ ಕರಿಯರ್‌ಗೆ ಮತ್ತೊಂದು ಅವಕಾಶ ನೀಡಿತು.

ಕೃಷ್ಣಂ ಪ್ರಣಯ ಸಖಿ ಸಿನಿಮಾದಲ್ಲಿ ನಟನೆ

ಖಳನಾಯಕ, ನಾಯಕ ಹಾಗೂ ಫೋಷಕ ನಟನಾಗಿ ಅಭಿನಯಿಸಿದ್ದ ಶಶಿಕುಮಾರ್‌ ಇತ್ತೀಚಿನ ವರ್ಷಗಳಲ್ಲಿ ಅಷ್ಟಾಗಿ ಯಾವುದೇ ಸಿನಿಮಾಗಳಲ್ಲಿ ಅಭಿನಯಿಸಿರಲಿಲ್ಲ. ಆದರೆ, ಆಗಸ್ಟ್ ೧೫ರಂದು ತೆರೆಕಂಡ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಕೃಷ್ಣಂ ಪ್ರಣಯ ಸಖಿ ಸಿನಿಮಾದಲ್ಲಿ ಅವರು ನಾಯಕನ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಹಳ ವರ್ಷಗಳ ನಂತರ ಅವರನ್ನು ತೆರೆಮೇಲೆ ನೋಡಿದ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಪಟ್ಟಿದ್ದರು.



Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+