X
ಹೋಮ್ ಚಲನಚಿತ್ರಗಳ ಒಳನೋಟ

ಬೆಳ್ಳಿತೆರೆಯ ಕನಸು ಕಾಣದೇ ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ನಟಿಯರಿವರು!

Author Sowmya Bairappa | Published: Wednesday, June 12, 2024, 05:39 PM [IST]

ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಬಹುತೇಕ ಕಲಾವಿದರು ಸಿನಿಮಾದಲ್ಲಿ ಅವಕಾಶ ಸಿಗ್ತಿದ್ದಂತೆ ಇತ್ತ ಮುಖ ಮಾಡುವುದಿಲ್ಲ. ಆದರೆ, ಕೆಲವರು ಮಾತ್ರ ನಮಗೆಗೆ ಬೆಳ್ಳಿತೆರೆ ಬೇಡ, ಕಿರತೆರೆಯಲ್ಲೇ ಮುಂದುವರೆಯುತ್ತೇವೆ ಎನ್ನುತ್ತೇವೆ. ಅಂತಹ ಕೆಲ ನಟಿಯರಿಗೆ ಕಿರುತೆರೆಯಲ್ಲೇ ಒಂದಾದ ಮೇಲೊಂದು ಪ್ರಾಜೆಕ್ಟ್‌ಗಳು ಸಿಗುತ್ತವೆ. ಬೆಳ್ಳಿತೆರೆಯ ಕನಸು ಕಾಣದ ಅವರು ಕಿರುತೆರೆಯಲ್ಲೇ ಹೆಸರು ಮಾಡಿ ಪ್ರೇಕ್ಷಕರ ಮನಗೆದ್ದಿದ್ದಾರೆ. ಅಂತಹ ನಟಿಯರ ಪಟ್ಟಿ ಇಲ್ಲಿದೆ.


cover image
ಅಮೂಲ್ಯ ಗೌಡ

ಸ್ವಾತಿಮುತ್ತು ಸೀರಿಯಲ್ ಮೂಲಕ ಕಿರುತೆರೆ ಪ್ರವೇಶಿಸಿದ ಅಮೂಲ್ಯ ಗೌಡ, ಪುನರ್ ವಿವಾಹ, ಅರಮನೆ ಧಾರಾವಾಹಿಗಳಲ್ಲಿ ನಟಿಸಿದ್ದರು. ಆದರೆ, ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿದ್ದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗ್ತಿದ್ದ ಕಮಲಿ ಧಾರಾವಾಹಿ. ನಂತರ ಬಿಗ್‌ಬಾಸ್‌ನಲ್ಲೂ ಮಿಂಚಿದ್ದ ಈ ಚೆಲುವೆ ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀಗೌರಿ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಕಿರುತೆರೆಯಲ್ಲೇ ಇವರಿಗೆ ಸಾಕಷ್ಟು ಅವಕಾಶಗಳು ಸಿಗುತ್ತಿವೆ.

ಕಾವ್ಯ ಮಹಾದೇವ್

ಚರಣದಾಸಿ ಧಾರಾವಾಹಿಯ ದೀಪಾ ಆಗಿ ಬಣ್ಣದ ಲೋಕಕ್ಕೆ ಬಂದ ಮಲೆನಾಡಿನ ಸುಂದರಿ ಕಾವ್ಯ ಮಹಾದೇವ್, ಮಂದೆ ನಾ ನಿನ್ನ ಬಿಡಲಾರೆ ಸೀರಿಯಲ್‌ನಲ್ಲಿ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದರು. ಆನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಸೂಪರ್ ಹಿಟ್ ಸೀರಿಯಲ್ 'ನಮ್ಮನೆ ಯುವರಾಣಿ'ಯಲ್ಲಿ ಅಹಲ್ಯಾ ಪಾತ್ರದ ಮೂಲಕ ಸಿಕ್ಕಾಪಟ್ಟೆ ಖ್ಯಾತಿ ಗಳಿಸಿದರು. ಪತಿಯೊಂದಿಗೆ ರಾಜಾ-ರಾಣಿ ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದರು.


ನಮ್ರತಾ ಗೌಡ

ಕನ್ನಡ ಕಿರುತೆರೆ ಗ್ಲಾಮರಸ್ ಡಾಲ್ ನಮ್ರತಾ ಗೌಡ ಬಾಲಕಲಾವಿದೆಯಾಗಿ ಕೆಲ ಸಿನಿಮಾಗಳಲ್ಲಿ ನಟಿಸಿದರು. 2011ರಲ್ಲಿ ಪ್ರಸಾರವಾದ ಕೃಷ್ಣ ರುಕ್ಮಿಣಿ ಸೀರಿಯಲ್ ಮೂಲಕ ಕಿರುತೆರೆ ಜರ್ನಿ ಆರಂಭಿಸಿದ ನಮ್ರತಾ, ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ 'ಹಿಮಾ' ಪಾತ್ರದ ಮೂಲಕ ಪ್ರೇಕ್ಷಕರ ಮನದಲ್ಲಿ ಶಾಶ್ವತ ಸ್ಥಾನ ಪಡೆದರು. ಬಳಿಕ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಾಗಿಣಿ 2 ಧಾರಾವಾಹಿಯ ಶಿವಾನಿ ಪಾತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದ್ದರು. ಆನಂತರ ಬಿಗ್‌ಬಾಸ್‌ ಸೀಸನ್ ೧೦ರಲ್ಲಿ ಭಾಗವಹಿಸಿದ್ದ ಈ ನಟಿ, ಇವರೆಗೂ ನಾಯಕಿಯಾಗಿ ಚಂದನವನಕ್ಕೆ ಎಂಟ್ರಿಕೊಟ್ಟಿಲ್ಲ. 

ದೀಪಿಕಾ

 ನಟಿ ದೀಪಿಕಾ ಕುಲವಧು ಸೀರಿಯಲ್‌ನಲ್ಲಿ ಧನ್ಯಾ ಪಾತ್ರದ ಮೂಲಕ ಮೊದಲ ಧಾರಾವಾಹಿಯಲ್ಲೇ ಪ್ರೇಕ್ಷಕರ ಮನಗೆದ್ದಿದ್ದರು. ಆನಂತರ ಆರತಿಗೊಬ್ಬ ಕೀರ್ತಿಗೊಬ್ಬ ಸೀರಿಯಲ್‌ನಲ್ಲಿ ಆರತಿಯಾಗಿ ನಟಿಸುವ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದರು. ಆದರೆ, ಕಾರಣಾಂತರಗಳಿಂದ ಆ ಧಾರಾವಾಹಿ ನಿಂತುಹೋಯ್ತು. ಮತ್ತೆ 'ಸೇವಂತಿ' ಧಾರಾವಾಹಿಯ ಮೂಲಕ ಹೆಚ್ಚ್ಉ ಜನಪ್ರಿಯತೆ ಗಳಿಸಿದರು.  

ಅಮೃತಾ ರಾಮಮೂರ್ತಿ

ಸರಸ್ವತಿ ಲಕ್ಷ್ಮೀ ಪ್ರಿಯೆ ಸೀರಿಯಲ್‌ನಲ್ಲಿ ಲಕ್ಷ್ಮೀಯಾಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಅಮೃತಾ ರಾಮಮೂರ್ತಿ, ಮೇಘ ಮಯೂರಿ ಧಾರಾವಾಹಿಯಾ ಮಯೂರಿಯಾಗಿ ಮಿಂಚಿದರು. ಅಲ್ಲಿಂದ ಮಿಸ್ಟರ್ ಆಂಡ್ ಮಿಸೆಸ್ ರಂಗೇಗೌಡ ಧಾರಾವಾಹಿಯಲ್ಲಿ ಐಶ್ವರ್ಯಾಳಾಗಿ ಕಾಣಿಸಿಕೊಂಡರು. ಮುಂದೆ ಕುಲವಧು ಸೀರಿಯಲ್‌ನಲ್ಲಿ ವಚನಾಳಾಗಿ ಮಿಂಚಿದರು. ಈ ನಡುವೆ 'ಸೈಕೋ ಶಂಕ್ರ' ಸಿನಿಮಾದಲ್ಲಿ ನಟಿಸಿದ ಇವರು, ಮತ್ತೆ ಕಿರುತೆರೆಗೆ ಮರಳಿದರು. ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕೆಂಪಸಂಪಿಗೆ'ಯ ಸಾಧನಾ ಎಂಬ ನೆಗೆಟಿವ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.



Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+