X
ಹೋಮ್ ಚಲನಚಿತ್ರಗಳ ಒಳನೋಟ

ಬಿಗ್‌ ಬಾಸ್ ಕನ್ನಡದ ಮರೆಯಲಾಗದ ಪ್ರಮುಖ ವಿವಾದಗಳ ಪಟ್ಟಿ ಇಲ್ಲಿದೆ.

Author Sowmya Bairappa | Published: Friday, September 29, 2023, 01:19 PM [IST]

ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ೧೦ಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿವೆ. ಪ್ರತಿ ಬಾರಿಯಂತೆ ಈ ಬಾರಿಯೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರೇ ಬಿಗ್ ಬಾಸ್ ನಿರೂಪಣೆ ಮಾಡಲಿದ್ದು, ಅಕ್ಟೋಬರ್ ೮ರಂದು ಶೋ ಆರಂಭವಾಗಲಿದೆ. ಈ ಹಿಂದಿನ ಸೀಸನ್‌ನ್‌ಗಳಲ್ಲಿ ಸ್ಪರ್ಧಿಗಳ ನಡುವೆ ಸಾಕಷ್ಟು ನಡೆದಿವೆ. ಇಲ್ಲಿ ಬಿಗ್‌ಬಾಸ್ ಕನ್ನಡದ ಪ್ರಮುಖ ವಿವಾದಗಳ ಪಟ್ಟಿಯನ್ನು ನೀಡಲಾಗಿದೆ.


cover image
ರವಿ ಮರೂರಿಗೆ ಹೊಡೆದಿದ್ದ ಹುಚ್ಚ ವೆಂಕಟ್

ಬಿಗ್‌ ಬಾಸ್ ಕನ್ನಡ ಸೀಸನ್ 3ರಲ್ಲಿ ಹುಚ್ಚ ವೆಂಕಟ್ ಹಾಗೂ ಗಾಯಕ ರವಿ ಮೂರೂರು ನಡುವೆ ವಾಕ್ಸಮರ ಏರ್ಪಟ್ಟಿತ್ತು. ಈ ವೇಳೆ ಸಿಟ್ಟಿಗೆದ್ದ ಹುಚ್ಚ ವೆಂಕಟ್ ಅವರು ದೊಡ್ಮನೆಯ ನಿಯಮಗಳನ್ನು ಮೀರಿ, ರವಿ ಮೂರೂರು ಅವರಿಗೆ ಹೊಡೆದಿದ್ದರು. ಬಳಿಕ ಅವರನ್ನು ಬಿಗ್‌ ಬಾಸ್ ಮನೆಯಿಂದ ಹೊರಹಾಕಲಾಗಿತ್ತು. 

ಹುಚ್ಚ ವೆಂಕಟ್ ಮತ್ತು ಪ್ರಥಮ್ ಗಲಾಟೆ

ಬಿಗ್‌ ಬಾಸ್ ಕನ್ನಡ ಸೀಸನ್ ನಾಲ್ಕಕ್ಕೂ ಹುಚ್ಚ ವೆಂಕಟ್ ಅವರನ್ನು ಆಹ್ವಾನಿಸಲಾಗಿತ್ತು. ಇದೇ ಸೀಸನ್‌ನಲ್ಲಿ ಒಳ್ಳೆ ಹುಡುಗ ಪ್ರಥಮ್ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಈ ಸಂದರ್ಭ ಪ್ರಥಮ್ ಮಾತು ಕಿರಿಕಿರಿ ಉಂಟುಮಾಡಿದ್ದರಿಂದ ಹುಚ್ಚ ವೆಂಕಟ್‌, ಪ್ರಥಮ್ ಮೇಲೆ ಕೂಡ ಕೈ  ಮಾಡಿದ್ದರು ಎನ್ನಲಾಗಿದೆ. 

ಸಂಯುಕ್ತಾ ಹೆಗ್ಡೆ & ಸಮೀರ್ ಆಚಾರ್ಯ

ಕಿರಿಕ್ ಬೆಡಗಿ ಸಂಯುಕ್ತಾ ಹೆಗ್ಡೆ ಬಿಗ್‌ ಬಾಸ್ ಕನ್ನಡ ಸೀಸನ್‌ 5ರಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಸ್ಪರ್ಧಿಯಾಗಿದ್ದ ಸಮೀರ್ ಆಚಾರ್ಯ ಅವರು, ಆಟ ಆಡುವಾಗ ತಮ್ಮ ಜೊತೆ ಅನುಚಿತವಾಗಿ ನಡೆದುಕೊಂಡಿದ್ದಾರೆ ಅಂತ ಆರೋಪಿಸಿದ್ದರು. ಜೊತೆಗೆ ಹಲ್ಲೆ ಮಾಡಿದ್ದರು. ಇದಾದ ಬಳಿಕ ಸಮೀರ್, ನಾನು ತಪ್ಪು ಮಾಡಿದ್ದೇ ಆದರೆ ಈಗಲೇ ದೊಡ್ಮನೆ ಬಿಟ್ಟು ಹೊರಗಡೆ ಹೋಗುವೆ ಎಂದು ಸವಾಲು ಹಾಕಿದ್ದರು. ನಂತರ ಸಂಯುಕ್ತಾ ತಾವು ಸಮೀರ್ ವಿರುದ್ಧ ಆರೋಪ ಮಾಡಿದ್ದು ತಪ್ಪು ಅಂತ ಕ್ಷಮೆ ಕೇಳಿದ್ದರು. ಈ ಘಟನೆ ಬಳಿಕ ಬಿಗ್‌ಬಾಸ್ ಸಂಯುಕ್ತಾ ಅವರನ್ನು ಮನೆಯಿಂದ ಆಚೆ ಕಳುಹಿಸಿದ್ದರು.  

ಪ್ರಿಯಾಂಕಾ ಮತ್ತು ಚಕ್ರವರ್ತಿ ಚಂದ್ರಚೂಡ್

ಸಹ ಸ್ಪರ್ಧಿ ಪ್ರಿಯಾಂಕಾ ತಿಮ್ಮೇಶ್ ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಹೋಗುವಾಗ ಚಕ್ರವರ್ತಿ ಚಂದ್ರಚೂಡ್ ಅವರನ್ನು ನಾಮಿನೇಟ್ ಮಾಡಿದ್ದರು. ಇದರಿಂದ ಸಿಟ್ಟಾದ ಚಂದ್ರಚೂಡ್, ಅವರಿಗೆ ಮಧ್ಯದ ಬೆರಳು ತೋರಿಸಿದ್ದರು. ಇದು ಕೂಡ ಸಾಕಷ್ಟು ವಿವಾದ ಹುಟ್ಟುಹಾಕಿತ್ತು. 

ಪ್ರಶಾಂತ್ ಸಂಬರಗಿ ಹಾಗೂ ರೂಪೇಶ್ ರಾಜಣ್ಣ

ಬಿಗ್‌ ಬಾಸ್ ಕನ್ನಡ ಸೀಸನ್ 9ರಲ್ಲಿ ಪ್ರಶಾಂತ್ ಸಂಬರಗಿ ಹಾಗೂ ರೂಪೇಶ್ ರಾಜಣ್ಣ ಯಾವುದಾದರೂ ಒಂದು ವಿಷಯಕ್ಕೆ ಪದೇ ಪದೇ ಜಗಳವಾಡುತ್ತಿದ್ದರು. ಒಂದು ದಿನ ಟಾಸ್ಕ್ ಆಡುವಾ ಪ್ರಶಾಂತ್ ಸಂಬರಗಿ, ಕನ್ನಡಪರ ಹೋರಾಟಗಾರರು ರೋಲ್‌ ಕಾಲ್ ಗಿರಾಕಿಗಳು. ಬರೀ ದುಡ್ಡು ಮಾಡ್ತಾರೆ ಎಂದಿದ್ದರು. ಇದರಿಂದ ಸಿಟ್ಟಾದ ಕನ್ನಡಪರ ಹೋರಾಟಗಾರರು, ದೊಡ್ಮನೆ ಮುಂದೆ ಪ್ರತಿಭಟನೆ ನಡೆಸಿದ್ದರು. ಬಳಿಕ ಪ್ರಶಾಂತ್ ಸಂಬರಗಿ ಕನ್ನಡಪರ ಹೋರಾಟಗಾರರ ಕ್ಷಮೆ ಕೇಳಿದ್ದರು. 

ರೂಪೇಶ್ ಶೆಟ್ಟಿ

ಮಂಗಳೂರಿನ ಪ್ರಸಿದ್ಧ ರೇಡಿಯೋ ಜಾಕಿ, ಗಾಯಕ ಮತ್ತು ಮಾಡೆಲ್ ಆಗಿದ್ದ ರೂಪೇಶ್ ಶೆಟ್ಟಿ ಬಿಗ್‌ಬಾಸ್ ಒಟಿಟಿಯಲ್ಲಿ ಪಾಲ್ಗೊಂಡು ನಂತರ ಸೀಸನ್‌ 9ಕ್ಕೆ ಎಂಟ್ರಿಕೊಟ್ಟಿದ್ದರು. ಈ ವೇಳೆ 'ನಾನು ಗಡಿನಾಡು ಕನ್ನಡಿಗ' ಅಂತ ಹೇಳಿಕೊಂಡಿದ್ದರು. ಇದು ಹಲವರ ವಿರೋಧಕ್ಕೆ ಕಾರಣವಾಗಿತ್ತು. ಇದೇ ವಿಚಾರಕ್ಕೆ ಸಿಟ್ಟಾದ ಕೆಲವರು ರೂಪೇಶ್ ಕುಟುಂಬಕ್ಕೆ ಬೆದರಿಕೆ ಹಾಕಿದ್ದರು. ನಂತರ ರೂಪೇಶ್ ಶೆಟ್ಟಿ ಕುಟುಂಬ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. 

 

ಭುವನ್ ಪೊನ್ನಣ್ಣ -ಪ್ರಥಮ್

ಬಿಗ್‌ಬಾಸ್ ಕನ್ನಡ ಸೀಸನ್ ನಾಲ್ಕರಲ್ಲಿ ಭುವನ್ ಪೊನ್ನಣ್ಣ ಹಾಗೂ ಒಳ್ಳೆ ಹುಡುಗ ಪ್ರಥಮ್ ಸಾಕಷ್ಟು ಜಗಳವಾಡಿಕೊಂಡಿದ್ದರು. ದೊಡ್ಮನೆಯಿಂದ ಹೊರಬಂದ ಬಳಿಕ ಒಂದೇ ಧಾರಾವಾಹಿಯಲ್ಲಿ ನಟಿಸಿದ್ದ ಇವರಿಬ್ಬರು ಅಲ್ಲಿಯೂ ಕಿರಿಕ್ ಮಾಡಿಕೊಂಡಿದ್ದರು. ಬಳಿಕ ಪ್ರಥಮ್ ವಿರುದ್ಧ ಭುವನ್ ದೂರು ಕೂಡ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+