X
ಹೋಮ್ ಚಲನಚಿತ್ರಗಳ ಒಳನೋಟ

ಸೀತಾ ರಾಮ ಸೀರಿಯಲ್‌ನ ಪಾತ್ರಧಾರಿಗಳ ನಿಜವಾದ ಹೆಸರು, ಕಥೆ ಹಾಗೂ ಇತರ ಮಾಹಿತಿ ಇಲ್ಲಿದೆ.

Author Sowmya Bairappa | Published: Thursday, July 20, 2023, 05:29 PM [IST]

ಜುಲೈ 17ರಿಂದ ಜೀ ಕನ್ನಡ ವಾಹಿಯಲ್ಲಿ 'ಸೀತಾ ರಾಮ' ಎಂಬ ಹೊಸ ಧಾರಾವಾಹಿ ಆರಂಭವಾಗಿದೆ. ಕಳೆದ ಎರಡು ವರ್ಷಗಳಿಂದ ಈ ಧಾರವಾಹಿ ಬರುತ್ತದೆ ಎಂದು ಹೇಳುತ್ತಿದ್ದರೂ ಪ್ರಸಾರವಾಗಿರಲಿಲ್ಲ. ಇದೀಗ ಸೀರಿಯಲ್ ಪ್ರಸಾರವಾಗಿದ್ದು, ಮೊದಲ ಸಂಚಿಕೆಯಲ್ಲೇ ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ ಈ ಧಾರವಾಹಿಯ ಬಗ್ಗೆ ಬರೆದುಕೊಂಡಿದ್ದಾರೆ. ಇಲ್ಲಿ ಸೀತಾ ರಾಮ ಸೀರಿಯಲ್‌ನ ಪ್ರಮುಖ ಪಾತ್ರಧಾರಿಗಳ ಹೆಸರು, ಕಥೆ ಇನ್ನಿತರ ಮಾಹಿತಿಯನ್ನು ನೀಡಲಾಗಿದೆ.


cover image
ನಾಯಕ ಮತ್ತು ನಾಯಕಿ

ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಕರ್ನಾಟಕದ ಮನೆಮಾತಾಗಿರುವ ವೈಷ್ಣವಿ ಗೌಡ 'ಸೀತಾ ರಾಮ' ಧಾರವಾಹಿಯಲ್ಲಿ ಇದೇ ಮೊದಲ ಬಾರಿಗೆ ತಾಯಿಯ ಪಾತ್ರ ಮಾಡಿದ್ದಾರೆ. ಸೀತಾ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ. ನಾಯಕನಾಗಿ ಮಂಗಳ ಗೌರು ಧಾರವಾಹಿ ಖ್ಯಾತಿಯ ಗಗನ್ ಚಿನ್ನಪ್ಪ ಕಾಣಿಸಿಕೊಂಡಿದ್ದು, ಇದೊಂದು ವಿಭಿನ್ನ ಕಥೆ ಹೊಂದಿರುವ ಧಾರವಾಹಿ. 

 

ಸಿಹಿಯ ಪಾತ್ರದಲ್ಲಿ ಮೋಡಿ ಮಾಡಿದ ರಿತು

ಇನ್ನು ಈ ಧಾರವಾಹಿಯಲ್ಲಿ ವೈಷ್ಣವಿ ಅವರ ಮಗಳಾಗಿ ಡ್ರಾಮಾ ಜೂನಿಯರ್ಸ್ ಖ್ಯಾತಿಯ ಬೇಬಿ ಡಾಲ್ ರಿತು ಸಿಂಗ್ ಅಭಿನಯಿಸಿದ್ದಾರೆ. ಸೀರಿಯಲ್‌ನಲ್ಲಿ ರಿತುವಿನ ಕ್ಯೂಟ್ನೆಸ್, ಮುದ್ದಾದ ಮಾತುಗಳು ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿದ್ದು, ರಿತು ನಟನೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಕಥೆಯೇನು?

ಸೀತಾ ಪತಿಯಿಂದ ದೂರವಾಗಿ ಸಿಹಿಯೊಂದಿಗೆ ಒಂದು ಪುಟ್ಟ ಮನೆಯಲ್ಲಿ ವಾಸಿಸುತ್ತಿರುತ್ತಾಳೆ. ಸಿಹಿಗೆ ಒಂದು ಕಾಯಿಲೆಯಿದೆ. ಹೀಗಾಗಿ ಪ್ರತಿನಿತ್ಯ ಔಷಧಿ ತೆಗೆದುಕೊಳ್ಳಲೇಬೇಕು. ಸೀತಾ ಮಗಳು ಸಿಹಿಯನ್ನು ಕಷ್ಟುಪಟ್ಟ ಸಾಕುತ್ತಿದ್ದಾಳೆ. ಆಕೆಯ ಗಂಡ ಅವಳ ಮನೆಯನ್ನು ಅಡವಿಟ್ಟು ಸಾಲ ತೆಗೆದುಕೊಂಡಿದ್ದಾನೆ. ಇದರಿಂದ ಸೀತಾಗೆ ಸಾಲಗಾರರ ಕಾಟ ಬೇರೆ. ಇತ್ತ ರಾಮನಿಗೆ ಈಗಾಗಲೇ ಒಂದು ಬ್ರೇಕ್ ಆಗಿದೆ. ಹಳೇ ಪ್ರೀತಿ ಮರೆಯಬೇಕು ಅಂತ ರಾಮ್‌ ಇಷ್ಟುದಿನ ಮಲೇಶಿಯಾದಲ್ಲಿದ್ದು, ಈಗ ಬೆಂಗಳೂರಿಗೆ ಬಂದಿದ್ದಾನೆ. ರಾಮ್ ಆಫೀಸ್‌ನಲ್ಲೇ ಸೀತಾ ಕೆಲಸ ಮಾಡುತ್ತಿದ್ದು, ಈಗಾಗಲೇ ಇವರಿಬ್ಬರ ಭೇಟಿಯಾಗಿದೆ. ಸಿಹಿಗೆ ಅಪ್ಪ ಬೇಕು ಎಂಬ ಆಸೆ. ಸೀತಾ ಮತ್ತು ಸಿಹಿ ಬದುಕಿಗೆ ರಾಮ್ ಬಂದರೆ ಎಲ್ಲಾ ಸರಿಹೋಗಬಹುದು. ವಿಧಿ ಹೇಗೆ ಈ ಇವರಿಬ್ಬರನ್ನು ಸೇರಿಸುತ್ತದೆ ಎಂಬುದೇ ಈ ಸೀರಿಯಲ್‌ನ ಒನ್‌ಲೈನ್ ಸ್ಟೋರಿ. 

 

ದೊಡ್ಡ ತಾರಾಗಣ

ಸೀತಾ ರಾಮ ಧಾರವಾಹಿಯಲ್ಲಿ ದೊಡ್ಡ ತಾರಾಗಣವಿದೆ. ನಟಿ ಪೂಜಾ ಲೋಕೇಶ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಚಂದ್ರು ಈ ಸೀರಿಯಲ್‌ನಲ್ಲಿ ರಾಮ್ ತಾತನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿಕ್ಕಪ್ಪಂದಿರಾಗಿ ಜಯದೇ್ ಮೋಹನ್ ಹಾಗೂ ಪೂರ್ಣಚಂದ್ರ ತೇಜಸ್ವಿ ಬಣ್ಣ ಹಚ್ಚಿದ್ದಾರೆ. 

 

ಟೈಟಲ್ ಸಾಂಗ್‌ಗೆ ವೀಕ್ಷಕರ ಮೆಚ್ಚುಗೆ

ಸೀತಾ ರಾಮ ಧಾರವಾಹಿಯ ಯಾರ ಜೀವ ಯಾರನೂ ಸೇರೋದು ಬಾಳ ತೀರ್ಮಾನ. ಅದು ಮೀರಿ ಸಾಗದು ಈ ಜೀವನ. ಯಾರ ಹೆಜ್ಜೆ ಯಾರನೋ ಕಾಯೋದೇ ಸುಂದರ ಧ್ಯಾನ. ಹೃದಯ ತೆರೆದು ಕೂರಲಿ ನಿನ್ನೀ ಮನ. ಕೊನೆಯಾಗಿರೋ ಆ ದಾರಿ, ಹೊಸ ದಾರಿಗೆ ರೂವಾರಿ ಎಂಬ ಹಾಡನ್ನು ಜನರು ಸಿಕ್ಕಾಪಟ್ಟೆ ಇಷ್ಟಟ್ಟಿದ್ದಾರೆ.  

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+