X
ಹೋಮ್ ಚಲನಚಿತ್ರಗಳ ಒಳನೋಟ

ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ಯಜಮಾನ ಚಿತ್ರದ ಇಂಟರೆಸ್ಟಿಂಗ್ ಸಂಗತಿಗಳು

Author Administrator | Updated: Wednesday, May 25, 2022, 03:11 PM [IST]

ಸಾಹಸಸಿಂಹ ವಿಷ್ಣುವರ್ಧನ್ ತಮ್ಮ ವಿಭಿನ್ನ ವಿನೂತನ ಪಾತ್ರಗಳ ಮೂಲಕ ಕನ್ನಡ ಕಲಾ ರಸಿಕರಲ್ಲಿ ಅಚ್ಚಳಿಯದ ಮುದ್ರೆಯನ್ನೊತ್ತಿದ್ದಾರೆ. ಸುಮಾರು ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ದ್ವಿಪಾತ್ರಗಳಲ್ಲಿ ನಟಿಸಿದ್ದಾರೆ. ಅವುಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವುದೆಂದರೆ ಯಜಮಾನ ಚಿತ್ರ. ಸಹೋದರರ ಬಾಂಧವ್ಯ ಮತ್ತು ಕೌಟುಂಬಿಕ ಮೌಲ್ಯಗಳನ್ನು ಎತ್ತಿ ಹಿಡಿದಿದ್ದ ಈ ಚಿತ್ರ ಅಭೂತಪೂರ್ವ ಯಶಸ್ಸು ಗಳಸಿತು. ಈ ಚಿತ್ರದ ಕೆಲ ಇಂಟರೆಸ್ಟಿಂಗ್ ಸಂಗತಿಗಳನ್ನು ನೀಡಲಾಗಿದೆ.


cover image
Yajamana Remake Rights
1

ಯಜಮಾನ ಚಿತ್ರದ ಕಥೆ ಹುಟ್ಟಿದ್ದು ಒಂದು ಕುತೂಹಲಕಾರಿ ಕಥೆ. ನಿರ್ಮಾಪಕ ರೆಹಮಾನ್ ವಿಷ್ಣುವರ್ಧನ್ ಗೆ ಧಣಿ ಚಿತ್ರ ಮಾಡಿದಾಗಿನಿಂದಲೂ ಪರಿಚಯ. ವಿಷ್ಣುವರ್ಧನ್ ಜೊತೆ `ಯುಗಾದಿ' ಎಂಬ ಚಿತ್ರವನ್ನು ನಿರ್ಮಿಸುವುದಾಗಿ ಪೈನಲ್ ಮಾಡಿ ನಾಯಕಿಯಾಗಿ ಖುಷ್ಬು ಅವರ ಕಾಲ್ ಶೀಟ್ ಪಡೆಯಲು ರೆಹಮಾನ್ ಮದ್ರಾಸ್ ಗೆ ಹೋಗಿದ್ದರು. ಅಲ್ಲಿ ಖುಷ್ಬು ಅವರ ಜೊತೆ ಒಂದು ಸುತ್ತಿನ ಮಾತುಕತೆ ಮುಗಿಸಿ ಹೋಟೆಲ್ ನಲ್ಲಿ ತಂಗಿದ್ದಾಗ, ಪೊಂಗಲ್ ಗೆ ರೀಲೀಸ್ ಆದ ವಿಜಯಕಾಂತ್ ನಟನೆಯ `ವಾನತೈಪೋಲ' ಚಿತ್ರವನ್ನು ನೋಡುತ್ತಾರೆ. ಆ ಚಿತ್ರವನ್ನು ನೋಡಿ ವಿಷ್ಣುವರ್ಧನ್ ರಿಗೆ ಈ ಚಿತ್ರ ಹೇಳಿ ಮಾಡಿಸಿದ ಹಾಗೇ ಇದೆ ಎಂದು ನಿರ್ಧರಿಸಿ ಆ ಚಿತ್ರದ ರಿಮೇಕ್ ರೈಟ್ ನ್ನು 11 ಲಕ್ಷಕ್ಕೆ ಆಸ್ಕರ್ ರವಿಚಂದ್ರನ್ ರ ಹತ್ತಿರ ಕಷ್ಟಪಟ್ಟು ಪಡೆಯುತ್ತಾರೆ. 

Another Suryavamsha
2

ನಂತರ ರೆಹಮಾನ್ ರವರು ಬೆಂಗಳೂರಿಗೆ ಬಂದು ವಿಷ್ಣುವರ್ಧನ್ ರಿಗೆ ವಿಷಯ ತಿಳಿಸಿದಾಗ, ವಿಷ್ಣುವರ್ಧನ್ ರವರು `ಕಳೆದ ವರ್ಷವೇ ಮೀಸೆ ಪಂಚೆ ಹಾಕಿ ಸೂರ್ಯವಂಶದಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದೇನೆ, ಈಗ ಹಾಗೇ ಮತ್ತೊಂದು ಸಿನಿಮಾ ಮಾಡಿದರೆ ನೋಡುತ್ತಾರಾ ಎಂದು ಅನುಮಾನ ವ್ಯಕ್ತಪಡಿಸಿ ನಂತರ ಒಪ್ಪಿದರು.

Raj Kidnap Effect on Last Song Shoot
3

ಇದೇ ಚಿತ್ರದ ವಿಷ್ಣುವರ್ಧನ್ ರ ಒಂದು ಗೀತೆ ಮತ್ತು ಶಶಿಕುಮಾರ್ ರ ಒಂದು ಗೀತೆಯ ಶೂಟಿಂಗ್ ಗೆ ಚಿತ್ರತಂಡ ನೇಪಾಳ್ ಗೆ ಹೋಗಿತ್ತು. ವಿಷ್ಣುವರ್ಧನ್ ರ ಗೀತೆ ಮುಗಿದು ಇನ್ನೇನು ಒಂದು ದಿನದ ಶೂಟಿಂಗ್ ಬಾಕಿಯಿದ್ದು, ಶಶಿಕುಮಾರ್ ರ ನವಿಲೇ ಪಂಚರಂಗಿ ನವಿಲೇ ಗೀತೆ ಶುರುವಾಗಬೇಕು ಎನ್ನುವಷ್ಟರಲ್ಲಿ ಡಾ.ರಾಜಕುಮಾರ್ ಅಪಹರಣವಾಗಿ ಚಿತ್ರದ ಚಿತ್ರೀಕರಣ ಸ್ಥಗಿತವಾಗಿತು. ರಾಜ್ ರ ಅಪಹರಣದಿಂದ 108 ದಿನಗಳ ಕಾಲ ಕನ್ನಡ ಚಿತ್ರರಂಗ ಸ್ಥಬ್ದವಾಗಿತ್ತು. ನಂತರ ಚಲನಚಿತ್ರ ವಾಣಿಜ್ಯ ಮಂಡಳಿ ಒಂದೆರೆಡು ದಿನಗಳಷ್ಟು ಚಿತ್ರೀಕರಣ ಬಾಕಿಯಿರುವ ಚಿತ್ರಗಳ ಶೂಟಿಂಗ್ ಗೆ ಅನುಮತಿ ನೀಡಿದಾಗ ಚೆನ್ನೈನ ಮರೀನಾ ಬೀಚ್ ನಲ್ಲಿ ಶಶಿಕುಮಾರ್ ಗೀತೆ ಚಿತ್ರೀಕರಣವಾಯಿತು. ಅದೇ ದಿನ ಡಾ, ರಾಜಕುಮಾರ್ ವೀರಪ್ಪನ್ ನಿಂದ ಬಿಡುಗಡೆಯಾದರು.

Diggajaru Effect
4

ಯಜಮಾನ ಚಿತ್ರ ಬಿಡುಗಡೆಯಾದಾಗ ಮೊದಲ ಕೆಲ ದಿನಗಳಲ್ಲಿ ನೀರಸ ಪ್ರದರ್ಶನ ಕಾಣುತ್ತಿತ್ತು. ಯಜಮಾನ ಚಿತ್ರದ ಬಿಡುಗಡೆಯಾಗಿ ಒಂದುವರೆ ತಿಂಗಳಿನಲ್ಲಿ ದಿಗ್ಗಜರು ಚಿತ್ರ ಬಿಡುಗಡೆಗೆ ಸಿದ್ಧವಾಗಿತ್ತು. ವಿಷ್ಣುವರ್ಧನ್ ಕೂಡ ದಿಗ್ಗಜರು ಚಿತ್ರ ತೆರೆಕಂಡರೆ ಯಜಮಾನದ ಚಿತ್ರಮಂದಿರಗಳಲ್ಲಿನ ಪ್ರದರ್ಶನ ಸಂಫೂರ್ಣ ಕಡಿಮೆಯಾಗುತ್ತದೆ ಎಂದೇ ಭಾವಿಸಿದ್ದರು. ಆದರೆ ಚಿತ್ರ ಬಾಯಿ ಮಾತಿನ ಪ್ರಚಾರದಿಂದ ಒಂದುವರೆ ತಿಂಗಳ ನಂತರ ಅಭೂತಪೂರ್ವ ಪ್ರದರ್ಶನ ಕಂಡು ಬಾಕ್ಸಾಫೀಸಿನಲ್ಲಿ ಹಿಂದಿನ ಎಲ್ಲಾ ಚಿತ್ರಗಳ ದಾಖಲೆ ಮುರಿಯಿತು. ಹಲವಾರು ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಆಚರಿಸಿತು.

Audio Rights
5

ಚಿತ್ರದ ಆಡಿಯೋ ಹಕ್ಕನ್ನು ಮಾರಲು ನಿರ್ಮಾಪಕರು ಒಂದೆರೆಡು ಕ್ಯಾಸೆಟ್ ಕಂಪನಿಗಳಿಗೆ ಆಡ್ಡಾಡಿ ಹಿಂತುರಿಗಿದ್ದರು. 5 ಲಕ್ಷಕ್ಕೆ ಆಡಿಯೋ ಹಕ್ಕು ಮಾರಲು ಪ್ರಯತ್ನಿಸಿ ನಿರ್ಮಾಪಕರು ನಿರಾಸೆಯಿಂದ ಕೊನೆಗೆ ಆಗತಾನೇ ಆರಂಭವಾಗಿದ್ದ ಆನಂದ್ ಆಡಿಯೋ ಕಂಪನಿಯತ್ತ ಮುಖ ಮಾಡಿದರು. ಆನಂದ್ ಆಡಿಯೋ ಮಾಲೀಕರು ಒಂದೆರೆಡು ಬಾರಿ ಪೂರ್ಣವಾಗಿ ಹಾಡುಗಳನ್ನು ಕೇಳಿ 9 ಲಕ್ಷಕ್ಕೆ ಚಿತ್ರದ ಆಡಿಯೋ ಹಕ್ಕು ಪಡೆದರು. ನಂತರ ಯಜಮಾನ ಚಿತ್ರದ ಗೀತೆಗಳಿಂದ ಆನಂದ ಆಡಿಯೋ ಕಂಪನಿ ಸುಮಾರು ಒಂಭತ್ತು ಕೋಟಿಗೂ ಅಧಿಕ ಹಣ ಗಳಿಸಿತು.

Runtime Records
6

ಅಪರ್ಣಾ ಟಾಕೀಸ್ ಚಿತ್ರದ ಮುಖ್ಯ ಚಿತ್ರಮಂದಿರವಾಗಿತ್ತು. ಮೇನ್ ಥೀಯೇಟರ್ ಗಳಿಗಿಂತ ಸೈಡ್ ಥಿಯೇಟರ್ ಗಳಲ್ಲಿ ಹೆಚ್ಚು ಕಲೆಕ್ಷನ್ ಮಾಡಿತು. ರಾಜ್ಯದಲ್ಲೆಡೆ ಶತದಿನೋತ್ಸವ ಆಚರಿಸಿದ ಚಿತ್ರಮಂದಿರಗಳಿಗೆ ವಿಷ್ಣು ನೇತೃತ್ವದ ಚಿತ್ರತಂಡ ಭೇಟಿಯಾಯಿತು. ಚಿತ್ರತಂಡ ಭೇಟಿಯ ನಂತರ ಚಿತ್ರದ ಕಲೆಕ್ಷನ್ ಮತ್ತಷ್ಟು ಹೆಚ್ಚಾಯಿತು. ಉಡುಪಿಯಲ್ಲಿ ಮೊತ್ತಮೊದಲ ಬಾರಿಗೆ ಕನ್ನಡ ಚಿತ್ರವೊಂದು ಒಂದುವರೆ ವರ್ಷ ಪ್ರದರ್ಶನ ಕಂಡಿತು. ತೆಲುಗು ಚಿತ್ರಗಳ ಅಬ್ಬರಗಳಿಂದ ತುಂಬಿದ್ದ ಬಳ್ಳಾರಿಯಲ್ಲಿ ಮೊತ್ತ ಮೊದಲ ಬಾರಿಗೆ ಕನ್ನಡ ಚಿತ್ರವೊಂದು 175 ದಿನಗಳ ಕಾಲ ಪ್ರದರ್ಶನ ಕಂಡಿತು. ಚಿತ್ರದ ಬ್ಲ್ಯಾಕ್ ಟಿಕೇಟ್ ಮಾರಿ ಹಲವು ಜನ ಮನೆ ಜಾಗ ತೆಗೆದುಕೊಳ್ಳುವಷ್ಟು ಹಣ ಗಳಿಸಿದರು.

Appreciation From Dr Rajkumar
7

ಯಜಮಾನ ಚಿತ್ರದ ಮೆಚ್ಚುಗೆ ಕೇಳಿದ ಡಾ. ರಾಜಕುಮಾರ್ ಚಿತ್ರವನ್ನು ನೋಡುವ ಆಸೆಯಿಂದ ನಿರ್ಮಾಪಕ ರಹಮಾನ್ ರವರಿಗೆ ಫೋನ್ ಮಾಡಿ ವಿಚಾರಿಸಿದರು. ನಂತರ ರಾಜ್ ಸಂಪೂರ್ಣ ಕುಟುಂಬದೊಂದಿಗೆ ಚಿತ್ರವನ್ನು ನೋಡಿ ಆನಂದಪಟ್ಟರು. ಚಿತ್ರ ನೋಡಿ ಭಾವುಕರಾಗಿದ್ದ ರಾಜಕುಮಾರ್ ರವರು ವಿಷ್ಣುವರ್ದನ್ ರವರಿಗೆ ಕರೆಮಾಡಿ ಅಭಿನಂದಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+