X
ಹೋಮ್ ಚಲನಚಿತ್ರಗಳ ಒಳನೋಟ

ಜಗ್ಗೇಶ್ ಟು ದರ್ಶನ್: ಸಿನಿಮಾಗಳಲ್ಲಿ ಚೆಫ್ ಪಾತ್ರ ಮಾಡಿರುವ ಸ್ಯಾಂಡಲ್‌ವುಡ್ ನಟರಿವರು!

Author Sowmya Bairappa | Published: Friday, June 14, 2024, 05:55 PM [IST]

ಅಡುಗೆಮನೆ ಕೇವಲ ಸ್ತ್ರೀಯರ ಸಾಮ್ರಾಜ್ಯ ಎನ್ನುವ ಕಾಲವೊಂದಿತ್ತು. ಆದ್ರೀಗ ಕಾಲ ಬದಲಾಗಿದೆ. ದೊಡ್ಡ-ದೊಡ್ಡ ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಪುರುಷರೇ ತಮ್ಮ ಕೈರುಚಿ ಪ್ರದರ್ಶಿಸುತ್ತಿದ್ದಾರೆ. ಇನ್ನೂ ಸಿನಿಮಾ ವಿಷಯಕ್ಕೆ ಬಂದರೆ ಆಗೊಮ್ಮೆ, ಈಗೊಮ್ಮೆ ಅಡುಗೆ ಭಟ್ಟನ ಪಾತ್ರವನ್ನು ನಾಯಕನಿಗೆ ಕೊಟ್ಟಿರುವ ಉದಾಹರಣೆಗಳಿವೆ. ಇತ್ತೀಚೆಗೆ ಈ ಟ್ರೆಂಡ್ ಹೆಚ್ಚಾಗುತ್ತಿದೆ. ಸ್ಟಾರ್ ನಟರು ಕೂಡ ಇಂತಹ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ಅಡುಗೆ ಭಟ್ಟ (ಶೆಫ್) ಆಗಿ ಕಾಣಿಸಿಕೊಂಡಿರುವ ನಟರ ಪಟ್ಟಿ ಇಲ್ಲಿದೆ.


cover image
ದರ್ಶನ್

2024ರಲ್ಲಿ ತೆರೆಗೆ ಬಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ರಾಬರ್ಟ್' ಸಿನಿಮಾ ಸೂಪರ್ ಹಿಟ್ ಆಗಿದ್ದು ಗೊತ್ತೇಯಿದೆ. ಈ ಚಿತ್ರದ ಫಸ್ಟ್ ಹಾಫ್ ಕಥೆ ಲಖ್ನೋದಲ್ಲಿ ನಡೆಯುತ್ತದೆ. ಅಲ್ಲಿ ರಾಘವನಾಗಿ ಹಳೆಯದನ್ನೆಲ್ಲಾ ಮರೆತು 'ರಾಬರ್ಟ್‌' ಅಡುಗೆ ಕ್ಯಾಟರಿಂಗ್ ನಡೆಸುತ್ತಿರುತ್ತಾನೆ. ಚಿತ್ರದಲ್ಲಿ ದರ್ಶನ್ ಅಡುಗೆ ಭಟ್ಟನಾಗಿ ಸೌಟು ಹಿಡಿದಿದ್ದರು. ತರುಣ್ ಸುಧೀರ್ ನಿರ್ದೇಶನದ ಈ ಚಿತ್ರ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿತ್ತು. 

ಜಗ್ಗೇಶ್

ನವರಸ ನಾಯಕ ಜಗ್ಗೇಶ್ ತಮ್ಮ ಸಿನಿಜೀವನದಲ್ಲಿ ತರಹೇವಾರಿ ಪಾತ್ರಗಳನ್ನು ನಿಭಾಯಿಸಿದ್ದಾರೆ. ಸಂತೋಷ್ ಆನಂದ್‌ರಾಮ್ ನಿರ್ದೇಶನದ 'ರಾಘವೇಂದ್ರ ಸ್ಟೋರ್ಸ್' ಚಿತ್ರದಲ್ಲಿ ಅಡುಗೆ ಭಟ್ಟ ಹಯವದನ ಆಗಿ ಕಾಣಿಸಿಕೊಂಡಿದ್ದರು. ವಯಸ್ಸು 40 ದಾಟಿದ ಹಯವದನನ ಮದುವೆ ಹಾಗೂ ಸಂಸಾರದ ಸುತ್ತಾ ಈ ಸಿನಿಮಾ ಕಥೆ ಸಾಗುತ್ತದೆ. ಜೊತೆಗೆ ಈ ಚಿತ್ರದಲ್ಲಿ ಊಟವನ್ನು ಹಾಳು ಮಾಡಬಾರದು. ಕಷ್ಟದಲ್ಲಿ ಇರುವವರಿಗೆ ಹೇಗೆ ಸಹಾಯ ಮಾಡಬೇಕು ಅನ್ನೋ ಸಂದೇಶ ಕೂಡ ಇತ್ತು.


ರಂಗಾಯಣ ರಘು

ಸಂದೀಪ್ ಸುಂಕದ್ ನಿರ್ದೇಶನದ 'ಶಾಖಾಹಾರಿ' ಸಿನಿಮಾ 2024ರಲ್ಲಿ 16ರಂದು ಬಿಡುಗಡೆಯಾಗಿ ವೀಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿತ್ತು. ಚಿತ್ರದಲ್ಲಿ ದುರ್ಗಾ ಪ್ರಸನ್ನ ಹೋಟೆಲ್ ಮಾಲೀಕ ಕಂ ಬಾಣಸಿಗನಾಗಿ ರಂಗಾಯಣ ರಘು ಕಾಣಿಸಿಕೊಂಡಿದ್ದರು. ಆ ಪಾತ್ರದ ಸುತ್ತವೇ ಸಿನಿಮಾ ಸಾಗುತ್ತದೆ. 'ಶಾಖಾಹಾರಿ' ಹೋಟೆಲ್ ಸುಬ್ಬಣ್ಣ ಆಕಸ್ಮಿಕವಾಗಿ ಅಪರಾಧ ಮಾಡುವ ಕಥೆ ಹೊಂದಿದ್ದ ಈ ಸಿನಿಮಾದಲ್ಲಿ ಪ್ರೇಮಿಯಾಗಿ, ವಿರಹಿಯಾಗಿ, ಒಂಟಿತನದಲ್ಲಿ ಒದ್ದಾಡುವ ಮಧ್ಯವಯಸ್ಕನಾಗಿ, ಮತ್ತೊಬ್ಬರ ಸಂಕಷ್ಟಕ್ಕೆ ಮರಗುವ ಜೀವಿಯಾಗಿ ರಂಗಾಯಣ ರಘು ಪಾತ್ರದಲ್ಲಿ ಜೀವಿಸಿದ್ದರು.

ಸುದೀಪ್

ನಿಜ ಜೀವನದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಹಳ ಇಷ್ಟಪಟ್ಟು ಅಡುಗೆ ಮಾಡುತ್ತಾರೆ. ಇವರ ಕೈರುಚಿ ಸವಿದವರು ಸೂಪರ್ ಎನ್ನುತ್ತಾರೆ. ಸಿನಿಮಾ ವಿಷಯಕ್ಕೆ ಬರುವುದಾದರೆ, ಸುದೀಪ್ 'No 72, ಶಾಂತಿ ನಿವಾಸ' ಚಿತ್ರದಲ್ಲಿ ಅಡುಗೆ ಭಟ್ಟನ ಪಾತ್ರ ಮಾಡಿದ್ದರು. ಈ ಚಿತ್ರದಲ್ಲಿ ಸುದೀಪ್ ನಟನೆ, ನಿರ್ದೇಶನದೊಂದಿಗೆ ನಿರ್ಮಾಣ ಕೂಡ ಮಾಡಿದರು. ಸಿನಿಮಾದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ವಿಶೇಷ ಪಾತ್ರದಲ್ಲಿ ನಟಿಸಿದ್ದರೆ, ಶಿವರಾಜಕುಮಾರ್ ನಿರೂಪಣೆ ಧ್ವನಿ ನೀಡಿದ್ದರು.


ಅನಿರುದ್ಧ್ ಜಟ್ಕರ್

ಎಂ. ಆನಂದರಾಜ್ ನಿರ್ದೇಶನದ 'chef ಚಿದಂಬರ' ಸಿನಿಮಾ ಜೂನ್ 14ರಂದು ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಅನಿರುದ್ಧ್ ಜತ್ಕರ್ ಹೀರೋ ಆಗಿ ನಟಿಸಿದ್ದು, ಬಾಣಸಿಗನ ಪಾತ್ರ ನಿರ್ವಹಿಸಿದ್ದಾರೆ‌. ಚೆಫ್ ಚಿದಂಬರ ಚಿತ್ರದ ಕಥೆಯು ಅಪರಾಧ, ಕೊಲೆ ಮತ್ತು ನಿಗೂಢತೆಯ ಅಂಶಗಳನ್ನು ಒಳಗೊಂಡಿದೆ. ನಾಯಕನ ಆಂತರಿಕ ಸಂಘರ್ಷ, ಆತ ಅದರಲ್ಲಿ ಸಿಲುಕಿಕೊಳ್ಳುವುದು ಮತ್ತು ಆತ ಸಂಕಟದಿಂದ ಹೊರಬರಲು ಮಾಡುವ ತಂತ್ರಗಳ ಸುತ್ತ ಕಥೆ ಸುತ್ತುತ್ತದೆ.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+