ಬಿಗ್ಬಾಸ್ ಸೀಸನ್ 10ರಲ್ಲಿ ಗುಂಪುಗಾರಿಕೆ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಅದರಲ್ಲೂ ವಿನಯ್ ಗೌಡ ದೊಡ್ಡಮಟ್ಟದಲ್ಲಿ ಗುಂಪುಗಾರಿಕೆ ಮಾಡುತ್ತಿದ್ದಾರೆ ಎಂಬ ಆರೋಪಗಳು ಆಗಾಗ ಮನೆಯೊಳಗೆ ಹಾಗೂ ಆಚೆಯೂ ಕೇಳಿಬರುತ್ತಲೇ ಇರುತ್ತವೆ. ಕೆಲ ಸದಸ್ಯರನ್ನು ತಮ್ಮ ತನವನ್ನು ಬಿಟ್ಟುಕೊಟ್ಟು ಅವರೇ ಗೆಲ್ಲಬೇಕು ಎಂಬ ನಿರ್ಧಾರಕ್ಕೆ ಬಂದಂತೆ ಹೊರ ಜಗತ್ತಿಗೆ ಎದ್ದು ಕಾಣುತ್ತಿದೆ. ಈ ಕಾರಣದಿಂದಲೇ ಅವರ ಟೀಂ ಒಬ್ಬೊಬ್ಬರೇ ಎಲಿಮಿನೇಟ್ ಆಗ್ತಿದ್ದಾರೆ. ಈ ವಿಚಾರವೀಗ ನಮ್ರತಾ ಗೌಡಗೆ ಅರಿವಾಗಿದ್ದು, ಈ ಬಗ್ಗೆ ಚರ್ಚೆ ನಡೆಸಿದ್ದಾರೆ.