X
ಹೋಮ್ ಚಲನಚಿತ್ರಗಳ ಒಳನೋಟ

ನಮ್ಮ ಟೀಂನಿಂದ ಎಲ್ಲಾ ಹೋಗಿ ಬಿಡ್ತಾರೇನೋ ಅನಿಸ್ತಿದೆ, ಹೋದವರೆಲ್ಲಾ ನಮ್ಮವರೇ: ನಮ್ರತಾ ಗೌಡ

Author Sowmya Bairappa | Published: Friday, December 15, 2023, 01:16 PM [IST]

ಬಿಗ್‌ಬಾಸ್ ಸೀಸನ್ 10ರಲ್ಲಿ ಗುಂಪುಗಾರಿಕೆ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಅದರಲ್ಲೂ ವಿನಯ್ ಗೌಡ ದೊಡ್ಡಮಟ್ಟದಲ್ಲಿ ಗುಂಪುಗಾರಿಕೆ ಮಾಡುತ್ತಿದ್ದಾರೆ ಎಂಬ ಆರೋಪಗಳು ಆಗಾಗ ಮನೆಯೊಳಗೆ ಹಾಗೂ ಆಚೆಯೂ ಕೇಳಿಬರುತ್ತಲೇ ಇರುತ್ತವೆ. ಕೆಲ ಸದಸ್ಯರನ್ನು ತಮ್ಮ ತನವನ್ನು ಬಿಟ್ಟುಕೊಟ್ಟು ಅವರೇ ಗೆಲ್ಲಬೇಕು ಎಂಬ ನಿರ್ಧಾರಕ್ಕೆ ಬಂದಂತೆ ಹೊರ ಜಗತ್ತಿಗೆ ಎದ್ದು ಕಾಣುತ್ತಿದೆ. ಈ ಕಾರಣದಿಂದಲೇ ಅವರ ಟೀಂ ಒಬ್ಬೊಬ್ಬರೇ ಎಲಿಮಿನೇಟ್ ಆಗ್ತಿದ್ದಾರೆ. ಈ ವಿಚಾರವೀಗ ನಮ್ರತಾ ಗೌಡಗೆ ಅರಿವಾಗಿದ್ದು, ಈ ಬಗ್ಗೆ ಚರ್ಚೆ ನಡೆಸಿದ್ದಾರೆ.


cover image
ಹೋದವರೆಲ್ಲಾ ನಮ್ಮ ತಂಡದವರೇ

ತುಕಾಲಿ ಸಂತೋಷ್ 'ಈ ವಾರ ಯಾರು ಹೋಗ್ತಾರೆ' ಅಂತ ನಮ್ರತಾರನ್ನು ಪ್ರಶ್ನಿಸಿದರು. ಅದಕ್ಕೆ ನಮ್ರತಾ ಅವರು ಸಿರಿ ಮ್ಯಾಮ್, ಮೈಕಲ್ ಅಥವಾ ಪವಿ ಔಟ್ ಆಗಬಹುದು ಅಂತ ಹೇಳಿದರು. ಅದಕ್ಕೆ ಸಂತು, ಮತ್ತೆ ನಿಮ್ಮ ಟೀಂಗೆ ಬಂತಲ್ಲ. ಹಾಗಿದ್ರೆ ಮತ್ತೊಂದು ಎಲಿಮಿನೇಷನ್ ನಿಮ್ಮ ಟೀಂನಿಂದಲೇ ಅಂದರು. ಅದಕ್ಕೆ ನಮ್ರತಾ, ಹೌದು ನಮ್ಮ ಟೀಂನಿಂದ ಎಲ್ಲಾ ಹೋಗಿ ಬಿಡ್ತಾರೇನೋ ಅನಿಸುತ್ತಿದೆ. ಹೋದವರೆಲ್ಲಾ ನಮ್ಮ ತಂಡದವರೇ ಅಂತ ಬೇಸರ ಮಾಡಿಕೊಂಡರು. ಅದಕ್ಕೆ ತುಕಾಲಿ ಸಂತು, ನಿಮ್ಮ ಗುಂಪಿಗೆ ಯಾರೋ ಮಾಟ ಮಾಡಿಸಿದ್ದಾರೆ ಎಂದರು. 

 

ಸಿರಿ ಫೈನಲ್‌ಗೆ ಬರ್ತಾರಾ?

ನಮ್ರತಾ ನಂತರ ನಿಮ್ಮ ಪ್ರಕಾರ ಈ ಬಾರಿ ಯಾರು ಮನೆಯಿಂದ ಹೋಗಬಹುದು ಅಂತ ಕೇಳಿದರು. ಅದಕ್ಕೆ ತುಕಾಲಿ ಸಂತು ಅವರು ಸಿರಿ ಅಂದರು. ಅದಕ್ಕೆ ನಮ್ರತಾ, ಅಯ್ಯೋ...ನಾನು ಹಾಗೆ ಅಂದುಕೊಂಡು, ಅಂದುಕೊಂಡೇ ಮೂರು ವಾರಗಳಿಂದ ಹೋಗುತ್ತಿಲ್ಲ ಎಂದರು. ಅದಕ್ಕೆ ಸಂತು ಫೈನಲ್‌ಗೆ ಬಂದು ಬಿಡ್ತಾರಾ ಅವರು? ಎಂದರು. ಅದಕ್ಕೆ ಹೀಗೆ ಆಡಿ ಆಡಿ ಬರಬಹುದು ಅಂತ ನಮ್ರತಾ ಹೇಳಿದರು. 

ಸಂಗೀತಾ ಬಗ್ಗೆ ಸಂತು-ನಮ್ರತಾ ಮಾತು

ಬಿಗ್‌ಬಾಸ್‌ ಪ್ರಾಥಮಿಕ ಶಾಲೆಯ ಟಾಸ್ಕ್‌ನಲ್ಲಿ ಆಧ್ಯಾತ್ಮದ ಶಿಕ್ಷಕಿಯಾಗಿದ್ದ ನಮ್ರತಾ, ವಿದ್ಯಾರ್ಥಿಗಳಿಗೆ ಪಾಸಿಟಿವಿಟಿ ಹಾಗೂ ನೆಗೆಟಿವಿಟಿ ಬಗ್ಗೆ ಪಾಠಚ ಮಾಡಿದ್ದರು. ಜೊತೆಗೆ ಇನ್ನೂ ಉಳಿದಿರುವು ಕೇವಲ 30 ದಿನ. ಏನೇ ಜಗಳವಾದರೂ ನಾವೆಲ್ಲಾ ಒಗ್ಗಟ್ಟಾಗಿರೋಣ ಎಂದಿದ್ದರು. ಈ ಬಗ್ಗೆ ಚರ್ಚಿಸಿದ ತುಕಾಲಿ ಸಂತು, ಎಲ್ಲರ ಜೊತೆ ಚೆನ್ನಾಗಿರುತ್ತೇನೆ ಅಂತಾರೆ. ಯಾಕೆ ಇಷ್ಟು ನಾಟಕ ಅಂತ ಪ್ರಶ್ನಿಸಿದರು. ಅದಕ್ಕೆ ನಮ್ರತಾ, ಅವರಿಗೆ ಹಾಗಿರಲು ಸಾಧ್ಯವೇ ಇಲ್ಲ. ಜಾಸ್ತಿ ನೆಗೆಟಿವಿಟಿ ತುಂಬಿಕೊಂಡಿರುವುದೇ ಅವರು. ಆಧ್ಯಾತ್ಮದ ಬಗ್ಗೆ ಅವರಿಗೆ ಹೆಚ್ಚು ಜ್ಞಾನವಿದೆ ಅಂತ ಕೊಟ್ಟಿರೋದು ಅಂದರು. 

 

ಮುದ್ದೆ ತಂದ ಆಪತ್ತು

ಬಿಗ್‌ಬಾಸ್‌ ಮನೆಯಲ್ಲಿ ಊಟಕ್ಕೆ ಇತಿಮಿತಿ ಇರುತ್ತೆ. ಎಲ್ಲರೂ ಹೊಂದಾಣಿಕೆ ಮಾಡಿಕೊಂಡು ತಿನ್ನಬೇಕು. ಈ ನಡುವೆ ಬಿಗ್‌ಬಾಸ್‌ ಮನೆಯ ಕೆಲ ಸದಸ್ಯರಿಗೆ ಮುದ್ದೆ ತಿನ್ನಬೇಕೆನಿಸಿದೆ. ಹೀಗಾಗಿ ಡ್ರೋನ್ ಪ್ರತಾಪ್ ಎಲ್ಲರಿಗೂ ಮುದ್ದೆ ಮಾಡಿಕೊಟ್ಟಿದ್ದಾರೆ. ಇದರಿಂದ ಬಹುಶಃ ಗ್ಯಾಸ್ ಅತಿಯಾಗಿ ಬಳಕೆಯಾಗಿದೆ. ಹೀಗಾಗಿ ಸಂಜೆ ಅಡುಗೆ ಮಾಡೋಕೆ ಬಿಗ್‌ಬಾಸ್ ಗ್ಯಾಸ್ ಕೊಟ್ಟಿಲ್ಲ. ಇದರಿಂದ ವಿನಯ್ ಹಾಗೂ ನಮ್ರತಾ ಕೆಂಡಾಮಂಡಲವಾಗಿದ್ದು, ಪ್ರತಾಪ್ ಮೇಕೆ ಕಿಡಿಕಾರಿದ್ದಾರೆ. ಹೀಗಾಗಿ ಎಲ್ಲರೂ ರಾಕ್ಷಸರಾಗುತ್ತಿದ್ದಾರೆ, ಗ್ಯಾಸ್ ಕೊಡಿ ಅಂತ ಸಂತೋಷ್ ಹಾಗೂ ಪ್ರತಾಪ್ ಬಿಗ್‌ಬಾಸ್ ಬಳಿ ಕೇಳಿಕೊಂಡಿದ್ದಾರೆ. 

ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಕಿಚ್ಚನ ಕೈರುಚಿ

ಪ್ರತಿ ಬಿಗ್‌ಬಾಸ್‌ ಸೀಸನ್‌ನಲ್ಲೂ ಸುದೀಪ್ ಸ್ಪರ್ಧಿಗಳಿ ಅಡುಗೆ ಮಾಡಿ ಕಳುಹಿಸುತ್ತಾರೆ. ಈ ಬಾರಿಯೂ ಅದು ಮುಂದುವರೆದಿದ್ದು, ಸುದೀಪ್ ಮಾಡಿದ ಅಡುಗೆ ದೊಡ್ಮನೆ ಸೇರಿದೆ ಅಂತ ವರದಿಯಾಗಿದೆ. ಇದು ಇಂದಿನ ಸಂಚಿಕೆಯಲ್ಲಿ (ಡಿಸೆಂಬರ್ 15) ಬಿಡುಗಡೆಯಾಗುವ ಸಾಧ್ಯತೆಯಿದೆ. ಡ್ರೋನ್ ಪ್ರತಾಪ್ ಮಧ್ಯಾಹ್ನದ ಊಟಕ್ಕೆ ಎಲ್ಲರಿಗೂ ಮುದ್ದೆ ಮಾಡಿಕೊಟ್ಟಿದ್ದು, ಇದರಿಂದಾಗಿ ರಾತ್ರಿಗೆ ಗ್ಯಾಸ್ ಬಿಟ್ಟಿಲ್ಲ. ಹೀಗಾಗಿ ಪ್ರತಾಪ್ ಅವರು ಅತಿಯಾಗಿ ಗ್ಯಾಸ್ ಬಳಕೆ ಮಾಡಿದ್ದಾರೆಂದು ಮನೆಯ ಸದಸ್ಯರು ಮುಗಿಬಿದ್ದು ಕೂಗಾಡಿದ್ದಾರೆ. ಆದರೆ, ಅಸಲಿ ಕಥೆ ಬೇರೆಯೇ ಇದ್ದು, ಸುದೀಪ್ ಅವರಿಗೆಲ್ಲಾ ಅಡುಗೆ ಮಾಡಿ ಕಳುಹಿಸಿದ್ದಾರೆ ಎನ್ನಲಾಗಿದೆ. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+