X
ಹೋಮ್ ಚಲನಚಿತ್ರಗಳ ಒಳನೋಟ

ಬ್ಲಾಕ್‌ ಬಸ್ಟರ್ ಕಾಂತಾರಗೆ ಒಂದು ವರ್ಷ: ರಿಷಬ್ ಶೆಟ್ಟಿ ಸಿನಿಮಾದ ಪ್ಲಸ್ ಪಾಯಿಂಟ್‌ಗಳಿವು!

Author Sowmya Bairappa | Updated: Saturday, September 30, 2023, 09:33 AM [IST]

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ' ಚಿತ್ರ ಬಿಡುಗಡೆಯಾದ ಆರಂಭದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಬ್ಬರಿಸುತ್ತದೆ ಅಂತ ಯಾರೂ ಕೂಡ ಊಹಿಸಿರಲಿಲ್ಲ. ಮೊದಲಿಗೆ ಕನ್ನಡದಲ್ಲಿ ಬಿಡುಗಡೆಯಾದ ಕಾಂತಾರ ಚಿತ್ರವನ್ನು ಕನ್ನಡ ಭಾಷೆಯಲ್ಲಿಯೇ ವೀಕ್ಷಿಸಿದ ಬೇರೆ ರಾಜ್ಯಗಳ ಸಿನಿಪ್ರೇಮಿಗಳು ಚಿತ್ರವನ್ನು ತಮ್ಮ ಭಾಷೆಗೂ ಸಹ ಡಬ್ ಮಾಡಿ, ಇಲ್ಲಿಯ ಸಿನಿರಸಿಕರೂ ಒಂದೊಳ್ಳೆ ಚಿತ್ರವನ್ನು ವೀಕ್ಷಿಸಲಿ ಎಂದು ಬೇಡಿಕೆ ಇಟ್ಟಿದ್ದರು. ಹೀಗೆ ಕಾಂತಾರ ಚಿತ್ರದ ಡಬ್ಬಿಂಗ್ ಕುರಿತು ವ್ಯಾಪಕ ಮನವಿ ಬಂದ ಕಾರಣ ಹೊಂಬಾಳೆ ಫಿಲ್ಮ್ಸ್ ಕಾಂತಾರ ಚಿತ್ರವನ್ನು ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾ‍ಗಳಲ್ಲೂ ಬಿಡುಗಡೆ ಮಾಡಿತ್ತು. ನಂತ ನಿರೀಕ್ಷೆಗೂ ಮೀರಿ ಅದ್ಭುತ ಯಶಸ್ಸು ಗಳಿಸಿದ 'ಕಾಂತಾರ' ಚಿತ್ರ ಬಾಕ್ಸಾಫೀಸ್‌ನಲ್ಲೂ ಸಖತ್ ಸದ್ದು ಮಾಡಿತ್ತು. ಕಾಂತಾರ ಚಿತ್ರದಿಂದ ರಿಷಬ್ ಶೆಟ್ಟಿ ರಾತ್ರೋರಾತ್ರಿ ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿಬಿಟ್ಟರು. 16 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಈ ಸಿನಿಮಾ 400 ಕೋಟಿಗೂ ಅಧಿಕ ಗಳಿಸುವ ಮೂಲಕ ದಾಖಲೆ ಬರೆದಿತ್ತು. ಇದೀಗ ಈ ಸಿನಿಮಾ ಬಿಡುಗಡೆಯಾಗಿ ಒಂದು ವರ್ಷ ಕಳೆದಿದೆ. ಇಲ್ಲಿ ಕಾಂತಾರ ಸಿನಿಮಾದ ಪ್ಲಸ್ ಪಾಯಿಂಟ್‌ಗಳನ್ನು ನೀಡಲಾಗಿದೆ.


cover image
1

ಜಾಗ ತಮಗೆ ಸೇರಬೇಕೆಂದು ವಾಸವಿದ್ದ ಜನರ ಗುಂಪು ಹೋರಾಡಿದರೆ, ಉಪ ವಲಯ ಅರಣ್ಯಾಧಿಕಾರಿ ಊರನ್ನು ಸರ್ಕಾರಕ್ಕೆ ಸೇರಿಸಬೇಕೆಂದು ಹೋರಾಡ್ತಾನೆ ಹಾಗೂ ಈ ಊರಿಗೆ ಓರ್ವ ಜಮೀನ್ದಾರ ಕೂಡ ಇರ್ತಾನೆ. ಹೀಗೆ ಈ ಹೋರಾಟದಲ್ಲಿ ಊರು ಯಾರ ಪಾಲಾಗಲಿದೆ ಎಂಬುದೇ ಕಾಂತಾರ ಚಿತ್ರದ ಒನ್ ಲೈನ್ ಸ್ಟೋರಿ. ಕಾಡುವಾಸಿಗಳ ಜಾಗವನ್ನು ವಶಪಡಿಸಿಕೊಳ್ಳುವುದು ಹಾಗೂ ಅದರ ವಿರುದ್ಧ ಅವರು ಹೋರಾಡುವುದು ಹೊಸತೇನಲ್ಲ. ಈ ವಿಷಯದ ಮೇಲೆ ಈಗಾಗಲೇ ಸಾಕಷ್ಟು ಸಿನಿಮಾಗಳು ಬಂದಿವೆ. ಆದರೆ, ಈ ಕತೆಯನ್ನು ಹೇಳಿರುವ ರೀತಿ ನೂತನವಾದದ್ದು ಹಾಗೂ ಪ್ರೇಕ್ಷಕರು ಮೆಚ್ಚುಕೊಳ್ಳುವಂತದ್ದು. ಈ ಕತೆಯನ್ನು ಭೂತಕೋಲದ ಜತೆ ತಳುಕು ಹಾಕಿರುವುದು ನಿರ್ದೇಶಕರ ಜಾಣ್ಮೆ ಹಾಗೂ ಕತೆ ಹೇಳಿರುವ ನೂತನ ಶೈಲಿಯೂ ಹೌದು. ಅದರಲ್ಲಿಯೂ ಚಿತ್ರದ ಗಂಭೀರ ಸಂದರ್ಭಗಳಲ್ಲಿ ಕಾಮಿಡಿ ಪಂಚ್ ಇಟ್ಟಿರುವುದು ಸಿನಿಮಾ ಎಲ್ಲಿಯೂ ಬೋರ್ ಹೊಡೆಸದೇ ರಂಜಿಸಲಿದೆ.  

2

ಕಾಂತಾರ ಸಿನಿಮಾ ದೈವ, ನಾಡು, ನುಡಿ ಆಚರಣೆಗಳನ್ನು ಒಳಗೊಂಡ ಸಿನಿಮಾ. ಇದರಲ್ಲಿ ಬಹಳಷ್ಟು ಗ್ರಾಮೀಣ ಸೊಗಡು, ಸಂಸ್ಕೃತಿಯ ಅಂಶಗಳು ಒಳಗೊಂಡಿದೆ. ರಿಷಬ್ ಶೆಟ್ಟಿ ಕರಾವಳಿ ಕಡೆಯವರು. ಅಲ್ಲಿನ ಭಾಷೆ, ಸೊಗಡು, ಆಚರಣೆಗಳು, ನಂಬಿಕೆ ಎಲ್ಲದರ ಬಗ್ಗೆಯೂ ತಿಳಿದುಕೊಂಡವರು. ಅದು ಅವರ ಸಿನಿಮಾಗಳಲ್ಲಿಯೂ ಪ್ರತಿಬಿಂಬಿತವಾಗುತ್ತಲೇ ಇರುತ್ತದೆ.  ಕರಾವಳಿ ಸಂಸ್ಕೃತಿಯ ಅನಾವರಣ ಈ ಸಿನಿಮಾದ ಪ್ರಮುಖ ಅಂಶ. ದೈವ, ಭೂತಾರಾಧನೆ, ಭೂತ ಕೋಲವನ್ನು ತೆರೆಮೇಲೆ ಅಮೋಘವಾಗಿ ತೋರಿಸುತ್ತ ಕರಾವಳಿ ಜನರ ಧಾರ್ಮಿಕ ನಂಬಿಕೆಗಳು, ಅಲ್ಲಿನ ಜನರ ಭಾವನೆಗಳನ್ನು ಅತ್ಯುತ್ತಮವಾಗಿ ತೋರಿಸುವ ಯತ್ನವನ್ನು ರಿಷಬ್ ಶೆಟ್ಟಿ ಮಾಡಿದ್ದಾರೆ.

3

ಸಾಮಾನ್ಯವಾಗಿ ಕಲಾವಿದ ಅದ್ಭುತ ಪ್ರದರ್ಶನ ನೀಡಿದರೆ, ಪರಕಾಯ ಪ್ರವೇಶ ಎನ್ನುವ ಪದವನ್ನು ಬಳಸಲಾಗುತ್ತದೆ. ಆದರೆ, 'ಕಾಂತಾರ' ಚಿತ್ರದ ಕೊನೆಯ ಹತ್ತು ನಿಮಿಷದ ರಿಷಬ್ ಶೆಟ್ಟಿಯವರ ನಟನೆಗೆ ಹೊಸ ಪದವನ್ನು ಹುಡುಕ ಬೇಕಾಗಬಹುದು. ಕಾಡು, ಕಾಡಿನ ಜನರ ಬದುಕು, ಕಂಬಳ, ಕರಾವಳಿಯ ಕೋಲದ ಸನ್ನಿವೇಶದ ಸುತ್ತ ಸಾಗುವ ಈ ಚಿತ್ರದಲ್ಲಿ ನಿರ್ದೇಶಕ ಎನ್ನುವುದಕ್ಕಿಂತ ಹೆಚ್ಚಾಗಿ ರಿಷಬ್ ಶೆಟ್ಟಿ ತನ್ನಲ್ಲಿರುವ ಕಲಾವಿದನ ತಾಕತ್ತನ್ನು ಅಕ್ಷರಶ: ಧಾರೆ ಎರೆದಿದ್ದಾರೆ. ಅದೆಂತಹ, ಪರ್ಫಾರ್ಮೆನ್ಸ್ ಅಂದರೆ 'ವಾವ್' ಎಂದರೆ ತಪ್ಪಾಗಲಾರದು. ಕೊನೆಯ 20 ನಿಮಿಷ ಯಾರೂ ಊಹಿಸಲಾರದಂತಹ ನಟನೆಯನ್ನು ಮಾಡಿದ್ದಾರೆ. ಚಿತ್ರದಲ್ಲಿ ಬರುವ ಅಚ್ಯುತ್ ಕುಮಾರ್, ಕಿಶೋರ್, ಪ್ರಮೋದ್ ಶೆಟ್ಟಿ, ಸಪ್ತಮಿ ಗೌಡ, ವಿನಯ್ ಬಿಡ್ಡಪ್ಪ, ಶೈನ್ ಶೆಟ್ಟಿ, ಉಗ್ರಂ ರವಿ, ಪ್ರಕಾಶ್ ತೂಮಿನಾಡ್ ಮುಂತಾದವರು ತಮ್ಮ ತಮ್ಮ ಪಾತ್ರಕ್ಕೆ ದಿ ಬೆಸ್ಟ್ ನ್ಯಾಯ ಸಲ್ಲಿಸಿದ್ದಾರೆ.

 

4

ತುಳು, ಕುಂದಾಪ್ರ ಕನ್ನಡ ಭಾಷೆಯಲ್ಲಿ ಸಾಗುವ ಸಿನಿಮಾ ಮಧ್ಯಂತರದ ವೇಳೆ ಪ್ರೇಕ್ಷಕರ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಚಿತ್ರ ಮೊದಲಾರ್ಧದಲ್ಲಿ ಸಾಗುವ ರೀತಿ ಒಂದು, ದ್ವಿತೀಯಾರ್ಧದಲ್ಲಿ ಸಾಗುವ ರೀತಿ ಇನ್ನೊಂದು. ಪ್ರೇಕ್ಷಕರ ಕಣ್ಣು ಪರದೆ ಬಿಟ್ಟು ಮೊಬೈಲ್ ಕಡೆಗೆ ಹೋಗದಂತೆ ನೋಡಿಕೊಳ್ಳುತ್ತೆ ಸಿನಿಮಾ. ನಿರ್ದೇಶಕರಾಗಿ ರಿಷಬ್ ಗೆಲ್ಲುವುದೇ ಇಲ್ಲಿ.  

5

ಅಜನೀಶ್ ಲೋಕನಾಥ್ ಸಂಗೀತ ಈ ಸಿನೆಮಾದ ಜೀವಾಳ. ಕರಾವಳಿಯ ಪರಿಸರದ ಜನರ ಕಥೆ ಹಾಗು ಭೂತಾರಾಧನೆಯ ನೆರಳಡಿ ಚಿತ್ರಕಥೆ ವಿಸ್ತರಿಸಿಕೊಳ್ಳುವಾಗ ಅದಕ್ಕೆ ತಕ್ಕದಾದ ಸಂಗೀತ ಸಂಯೋಜಿಸುವ ಅನಿವಾರ್ಯತೆ ಇರುತ್ತದೆ. ಕರಾವಳಿಯ ಜನಪದ ಹಾಡುಗಳ ಬಳಕೆ ಹಾಗು ಅಲ್ಲಿನ ಕಲಾ ತಂಡಗಳನ್ನು ಅಜನೀಶ್ ಬಳಸಿಕೊಂಡಿದ್ದಾರೆ. ಪ್ರಮೋದ್ ಮರವಂತೆ ರಚನೆಯ 'ಸಿಂಗಾರದ ಸಿರಿ' ಹಾಡಿನ ರಾಗ ಸಂಯೋಜನೆ ಹಾಗು ಅದರ ಚಿತ್ರೀಕರಣದ ಜೊತೆಗೆ ಒಟ್ಟಾರೆ ಸಿನೆಮಾದ ಛಾಯಾಗ್ರಹಣ ಅಚ್ಚುಕಟ್ಟಾಗಿದೆ. 

6

ಚಿತ್ರದ ಬಹುತೇಕ ಅಂಶಗಳು ಪ್ಲಸ್ ಪಾಯಿಂಟ್ ಎನಿಸುತ್ತವೆ. ಅದರಲ್ಲಿಯೂ ಛಾಯಾಗ್ರಹಣ ಹಾಗೂ ಸಂಗೀತ ಚಿತ್ರದ ದೊಡ್ಡ ಪ್ಲಸ್ ಪಾಯಿಂಟ್, ಚಿತ್ರದ ದೃಶ್ಯಗಳು ನಮ್ಮ ಕಣ್ಮುಂದೆಯೇ ನಡೆಯುತ್ತಿದ್ದೆಯೇನೋ ಎನ್ನುವಂತಿದೆ.. ಛಾಯಾಗ್ರಾಹಕ ಫೈಟಿಂಗ್ ದೃಶ್ಯಗಳನ್ನು ವಿಭಿನ್ನವಾಗಿ ಹಾಗೂ ಅಚ್ಚುಕಟ್ಟಾಗಿ ತೋರಿಸಿದ್ದಾರೆ. 

 

7

ಚಿತ್ರದ ಕಾಮಿಡಿ ಪಂಚ್‌ಗಳು ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಸಹಾಯ ಮಾಡಿವೆ. ಚಿತ್ರ ಸ್ಲೋ ಎನಿಸಲು ಆರಂಭಿಸಿದ ಸಂದರ್ಭಗಳಲ್ಲಿ ಕಾಮಿಡಿ ಪಂಚ್ ಇರಿಸಲಾಗಿದ್ದು, ಬಹಳ ಯೋಜನೆ ರೂಪಿಸಿ ಚಿತ್ರಕತೆಯನ್ನು ಬರೆಯಲಾಗಿದೆ. ಇದು ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಎನ್ನಬಹುದು. ಇನ್ನು ಪಾತ್ರಗಳಿಗೆ ಸಂಪೂರ್ಣವಾಗಿ ಫಿಟ್ ಆಗಬಲ್ಲ ಕಲಾವಿದರನ್ನು ಆಯ್ಕೆ ಮಾಡಿರುವುದು ಚಿತ್ರದ ಮತ್ತೊಂದು ದೊಡ್ಡ ಪ್ಲಸ್ ಪಾಯಿಂಟ್.  ಛಾಯಾಗ್ರಾಹಕ ಅರವಿಂದ್ ಕಶ್ಯಪ್, ವಸ್ತ್ರ ವಿನ್ಯಾಸ ಮಾಡಿರುವ ಪ್ರಗತಿ ರಿಷಬ್ ಶೆಟ್ಟಿ ಅಭಿನಂದನಾರ್ಹರು.

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+