X
ಹೋಮ್ ಚಲನಚಿತ್ರಗಳ ಒಳನೋಟ

ಪ್ರತಾಪ್ ಸಿಂಪಥಿಯಿಂದಲೇ ಇಲ್ಲಿವರೆಗೂ ಬಂದಿದ್ದಾನೆ, ಇದು ಆಡಿಯನ್ಸ್‌ಗೆ ಗೊತ್ತಾಗಬೇಕು: ಮೈಕಲ್

Author Sowmya Bairappa | Published: Wednesday, December 20, 2023, 11:14 AM [IST]

ದಿನ ಕಳೆದಂತೆ ಬಿಗ್‌ಬಾಸ್ ಸ್ಪರ್ಧಿಗಳ ನಡುವಿನ ಜಿದ್ದಾಜಿದ್ದಿ ಕಾವೇರುತ್ತಿದೆ. ಕಳೆದ ವಾರದ ಬಿಗ್‌ಬಾಸ್ ಫನ್ ಟಾಸ್ಕ್‌ ನೀಡಿದ್ದರು. ಇದರಿಂದ ಬಿಗ್‌ಬಾಸ್‌ ಮನೆಯಲ್ಲಿ ಕೊಂಚ ಶಾಂತಿ ನೆಲೆಸಿತ್ತು. ಆದ್ರೆ, ಈ ವಾರ ಹಾಗಿರೋದಿಲ್ಲ ಅಂತ ಕಿಚ್ಚ ಸುದೀಪ್ ಮೊದಲೇ ಸುಳಿವು ನೀಡಿದ್ದರು. ಅದರಂತೆಯೇ ನಾಮಿನೇಷನ್ ಪ್ರಕ್ರಿಯೆ ಕೂಡ ವಿಭಿನ್ನವಾಗಿ ನಡೆದಿದೆ.


cover image
ವಿಭಿನ್ನ ನಾಮಿನೇಷನ್ ಪ್ರಕ್ರಿಯೆ

ಬಿಗ್‌ಬಾಸ್ ಗಾರ್ಡನ್ ಏರಿಯಾದಲ್ಲಿ ಮರದ ಪೆಟ್ಟಿಗೆಯೊಂದನ್ನು ಮಾಡಿ, ಅದರ ಮಧ್ಯೆ ಕುರ್ಚಿ ಹಾಕಲಾಗಿತ್ತು. ಅದರಲ್ಲಿ ಒಬ್ಬೊಬ್ಬರಾಗಿ ಪ್ರತಿ ಸದಸ್ಯರು ಕೂರಬೇಕಿತ್ತು. ಅವರನ್ನು ನಾಮಿನೇಟ್ ಮಾಡಿದವರು ಕುರ್ಚಿಯಲ್ಲಿ ಕೂತ ವ್ಯಕ್ತಿಯ ಮೇಲೆ ಕಪ್ಪು ಬಣ್ಣದ ನೀರು ಸುರಿಯಬೇಕಿತ್ತು. ಈ ಸಂದರ್ಭ ನಮ್ರತಾ ಅವರನ್ನು ಹೊರತುಪಡಿಸಿ ಬಹುತೇಕ ಮನೆಯ ಸದಸ್ಯರು ಒಬ್ಬರಲ್ಲ, ಒಬ್ಬರಿಂದ ನಾಮಿನೇಟ್ ಆಗಿ ಕಪ್ಪು ನೀರು ಸುರಿಸಿಕೊಂಡರು.    

ಅಧಿಕಾರ ಕಳೆದುಕೊಂಡ ವರ್ತೂರು-ಸಂಗೀತಾ

ಈ ವಾರ ಕೇವಲ ಎಂಟು ಮಂದಿಗೆ ಮಾತ್ರ ನಾಮಿನೇಷನ್ ಮಾಡುವ ಅಧಿಕಾರವಿತ್ತು. ವಿಶೇಷ ಸವಲತ್ತು ಪಡೆದಿದ್ದ ಕಾರ್ತಿಕ್ ಹಾಗೂ ತುಕಾಲಿ ಸಂತು ಮೂವರನ್ನು ನಾಮಿನೇಷನ್ ಅಧಿಕಾರದಿಂದ ಹೊಗಿಟ್ಟರು. ಮೊದಲು ಸಂಗೀತಾ ಅವರನ್ನು ತುಕಾಲಿ ಸಂತು ಹೊರಗಿಟ್ಟರು. ನಂತರ ಕಾರ್ತಿಕ್ ಅವರು ವರ್ತೂರು ಸಂತೋಷ್ ಅವರನ್ನು ನಾಮಿನೇಷನ್‌ನಿಂದ ಹೊರಗಿಟ್ಟರು. ಕೊನೆಗೆ ಇಬ್ಬರು ಸೇರಿ ಅವಿನಾಶ್ ಅವರ ಅಧಿಕಾರ ಕಸಿದುಕೊಂಡರು.   

'ಸಿಂಪಥಿಯಿಂದಲೇ ಇಲ್ಲಿವರೆಗೂ ಬಂದಿದ್ದಾನೆ'

ನಾಮಿನೇಷನ್ ಪ್ರಕ್ರಿಯೆಯಲ್ಲಿ ಡ್ರೋನ್ ಪ್ರತಾಪ್ ಅವರನ್ನು ತುಕಾಲಿ ಸಂತು, ಮೈಕಲ್ ಹಾಗೂ ವಿನಯ್ ನಾಮಿನೇಟ್ ಮಾಡಿದರು. ಪ್ರತಾಪ್ ಹಳ್ಳಿ ಕಾರ್ಡ್‌ ಪ್ಲೇ ಮಾಡುತ್ತಾರೆ ಅಂತ ವಿನಯ್ ಹೇಳಿದರು. ನಂತರ ಬಂದ ಮೈಕಲ್, ಸಿಂಪಥಿ ವಿಚಾರ ತೆಗೆದರು. ಪ್ರತಾಪ್‌ಗೆ ಇಲ್ಲಿ ಗೊತ್ತಿರೋದು ಒಂದೇ. ಸಿಂಪತಿ ಕ್ರಿಯೇಟ್ ಮಾಡಿಕೊಳ್ಳೋದು. ಅದರಿಂದಲೇ ಅವನು ಇಲ್ಲಿಯವರೆಗೆ ಬಂದಿದ್ದಾನೆ. ಇದು ಆಡಿಯೆನ್ಸ್‌ಗೆ ಗೊತ್ತಾಗಬೇಕು. ಅವನು ನಾಮಿನೆಟ್‌ ಆಗಿ ಹೊರಹೋಗಬೇಕು ಎಂದರು. 

 

ಟಾರ್ಗೆಟ್ ಆದ ಸ್ಪರ್ಧಿಗಳು

ಸಂಗೀತಾ ಅವರನ್ನು ನಮ್ರತಾ, ವಿನಯ್, ಮೈಕಲ್ ಹಾಗೂ ತುಕಾಲಿ ಸಂತು ನಾಮಿನೇಟ್ ಮಾಡಿದರು. ಸಂಗೀತಾ ಮೇಲೆ ವಿನಯ್ ಕಪ್ಪು ಬಣ್ಣದ ನೀರು ಸುರಿದರು. ಆಟ ಚುರುಕಾಗಿಲ್ಲ, ಎಫರ್ಟ್ ಕಾಣಿಸುತ್ತಿಲ್ಲ ಅಂತ ಅವಿನಾಶ್ ಶೆಟ್ಟಿಯವರನ್ನು ಕಾರ್ತಿಕ್, ನಮ್ರತಾ, ಸಿರಿ ಹಾಗೂ ತನಿಷಾ ಅವರು ನಾಮಿನೇಟ್ ಮಾಡಿದರು. ಸಿರಿಯವರನ್ನು ಮೈಕಲ್ ಹಾಗೂ ವಿನಯ್ ನಾಮಿನೇಟ್ ಮಾಡಿದರು. ಇನ್ನು ಮೈಕಲ್ ಅವರನ್ನು ಕಾರ್ತಿಕ್, ಡ್ರೋನ್ ಪ್ರತಾಪ್, ಸಿರಿ ಹಾಗೂ ತನಿಷಾ ಡೇಂಜರ್‌ ಝೋನ್‌ಗೆ ತಳ್ಳಿದರು. ಮೈಕಲ್ ಸರಿಯಾದ ಕಾರಣಗಳನ್ನು ಕೊಡಲ್ಲ. ಕಾರಣವೇ ಇಲ್ಲದೆ ಅಭಿಪ್ರಾಯ ಹೇರುತ್ತಿದ್ದಾರೆ. ತೂಕವಿಲ್ಲದ ಮಾತುಗಳನ್ನು ಆಡುತ್ತಿದ್ದಾರೆ ಅಂತ ಕಾರ್ತಿಕ್ & ತನಿಷಾ ದೂರಿದ್ದಾರೆ. 

ನೇರವಾಗಿ ನಾಮಿನೇಟ್ ಆದ ವರ್ತೂರು ಸಂತೋಷ್

ನಮ್ರತಾ ತಮಗೆ ಸಿಕ್ಕ ವಿಶೇಷ ಅಧಿಕಾರವನ್ನು ಬಳಸಿಕೊಂಡು ವರ್ತೂರು ಸಂತೋಷ್ ಅವರನ್ನು ನೇರವಾಗಿ ನಾಮಿನೇಟ್ ಮಾಡಿದರು. ಟಾಸ್ಕ್ ಸೇರಿದಂತೆ ಎಲ್ಲಾ ವಿಚಾರಗಳಲ್ಲೂ ಬೇರೆಯವರಿಗೆ ಹೋಲಿಸಿದರೆ ವರ್ತೂರು ಸಂತೋಷ್ ಅವರ ಕಾಂಟ್ರಿಬ್ಯೂಷನ್ ಕಡಿಮೆಯಿದೆ. ಮಾತು, ಕೆಲಸ, ಟಾಸ್ಕ್, ಪರ್ಫಾಮೆನ್ಸ್‌ನಲ್ಲೂ ಅವರು ಕಡಿಮೆ ಎಫರ್ಟ್ಸ್ ಹಾಕುತ್ತಿದ್ದಾರೆ. ಟ್ರಿಗರ್ ಮಾಡಿದಾಗ ಮಾತ್ರ ಆಡುತ್ತಾರೆ ಎಂದರು. 

 

ಈ ವಾರ ಹೋಗೋದ್ಯಾರು?

ಈ ವಾರ ಬಿಗ್‌ಬಾಸ್‌ ಮನೆಯಿಂದ ಹೊರಹೋಗಲು ಮೈಕಲ್, ಅವಿನಾಶ್ ಶೆಟ್ಟಿ, ಸಂಗೀತಾ, ಡ್ರೋನ್ ಪ್ರತಾಪ್ ಹಾಗೂ ವರ್ತೂರು ಸಂತೋಷ್ ನಾಮಿನೇಟ್ ಆಗಿದ್ದಾರೆ. ಈ ಪೈಕಿ ಮೈಕಲ್, ಅವಿನಾಶ್ ಹಾಗೂ ಸಿರಿ ಡೇಂಜರ್‌ ಝೋನ್‌ನಲ್ಲಿದ್ದಾರೆ. ಅದರಲ್ಲೂ ಅವಿನಾಶ್ ಶೆಟ್ಟಿಗೆ ಕಡಿಮೆ ವೋಟ್ಸ್ ಬೀಳುವ ಸಾಧ್ಯತೆಯಿದೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+