X
ಹೋಮ್ ಚಲನಚಿತ್ರಗಳ ಒಳನೋಟ

ಕರ್ನಾಟಕದಿಂದ ಉಡುಗೊರೆ ಪಡೆದ ಟಾಪ್ ತಮಿಳು ನಟರ ಪಟ್ಟಿ ಇಲ್ಲಿದೆ.

Author Sowmya Bairappa | Published: Tuesday, April 11, 2023, 02:51 PM [IST]

ಕರ್ನಾಟಕದಲ್ಲಿ ಹುಟ್ಟಿದ ಅನೇಕ ನಟ-ನಟಿಯರು ಇಂದು ಬೇರೆ ಭಾಷೆಯ ಚಿತ್ರರಂಗದಲ್ಲಿ ಹೆಸರು ಗಳಿಸಿದ್ದಾರೆ. ಐಶ್ವರ್ಯ ರೈ, ದೀಪಿಕಾ ಪಡುಕೋಣೆ, ಶಿಲ್ಪಾ ಶೆಟ್ಟಿ, ರಜನಿಕಾಂತ್, ಪ್ರಕಾಶ್ ರೈ, ಸುನೀಲ್ ಶೆಟ್ಟಿ, ರಶ್ಮಿಕಾ ಮಂದಣ್ಣ ಸೇರಿಂದಂತೆ ಹಲವರು ಬಾಲಿವುಡ್ ಹಾಗೂ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಸಖತ್ ಫೇಮಸ್ ಆಗಿದ್ದಾರೆ. ಹೀಗೆ ಕರ್ನಾಟಕದಲ್ಲಿ ಹುಟ್ಟಿ ಕಾಲಿವುಡ್‌ನಲ್ಲಿ ಹೆಸರು ಪಡೆದ ಟಾಪ್ ನಟರು ಯಾರು ಎಂಬ ಮಾಹಿತಿ ಇಲ್ಲಿದೆ.


cover image
ರಜನಿಕಾಂತ್
1

ಸೂಪರ್ ಸ್ಟಾರ್ ರಜನಿಕಾಂತ್ ತಮಿಳು ಚಿತ್ರರಂಗಕ್ಕೆ ಕರ್ನಾಟಕ ನೀಡಿದ ಗ್ರೇಟೆಸ್ಟ್ ಗಿಫ್ಟ್ ಅಂತಾನೆ ಹೇಳಬಹುದು.  ತಮ್ಮ ವಿಭಿನ್ನ ಸ್ಟೈಲ್ ಮತ್ತು ಮ್ಯಾನರಿಸಂನಿಂದ ಖ್ಯಾತರಾಗಿರುವ ರಜನಿಕಾಂತ್, ಭಾರತ ಮಾತ್ರವಲ್ಲದೇ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇವರು ಜನಿಸಿದ್ದು, ಶಿಕ್ಷಣ ಪಡೆದಿರುವುದು ಎಲ್ಲಾ ಬೆಂಗಳೂರಿನಲ್ಲಿಯೇ. ಇವರ ಬಾಲ್ಯದ ಹೆಸರು ಶಿವಾಜಿರಾವ್ ಗಾಯಕವಾಡ್. ಚಿತ್ರರಂಗಕ್ಕೆ ಕಾಲಿಡುವ ಮುನ್ನ ಬಸ್‌ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ರಜನಿಕಾಂತ್, ತಮಿಳಿನ ಖ್ಯಾತ ನಿರ್ದೇಶಕ ಕೆ.ಬಿ.ಬಾಲಚಂದರ್ ನಿರ್ದೇಶನದ ಚಿತ್ರದ ಮೂಲಕ ಖಳನಟನಾಗಿ ಸಿನಿರಂಗ ಪ್ರವೇಶಿಸಿದರು. ನಂತರ ಕೆಲ ಚಿತ್ರಗಳಲ್ಲಿ ಖಳನಾಗಿ ನಟಿಸಿ, ಮುಂದೆ ನಾಯಕನಾಗಿ ಬಡ್ತಿ ಪಡೆದರು. ಕನ್ನಡದಲ್ಲಿಯೂ ಸುಮಾರು 11 ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರರಂಗದಲ್ಲಿನ ಸೇವೆಗಾಗಿ ಪದ್ಮ ವಿಭೂಷಣ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿರುವ ಇವರು, 2019ರಲ್ಲಿ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಸುವರ್ಣ ಮಹೋತ್ಸವದಲ್ಲಿ ಐಕಾನ್ ಆಫ್ ಗೋಲ್ಡನ್ ಜುಬ್ಲಿ ಜೀವಮಾನ ಸಾಧನೆ ಪ್ರಶಸ್ತಿ ಪಡೆದರು.

 

ಅರ್ಜುನ್ ಸರ್ಜಾ
2

ಮೈಸೂರಿನಲ್ಲಿ ಜನಿಸಿದ ಅರ್ಜುನ್ ಸರ್ಜಾ, ತಮಿಳು ಚಿತ್ರರಂಗದಲ್ಲಿ ಪ್ರಸಿದ್ಧ ನಟರಾಗಿ ಗುರುತಿಸಿಕೊಂಡಿದ್ದಾರೆ. ಇವರು ಪ್ರಸಿದ್ಧ ಕಲಾವಿದರಾದ ಶಕ್ತಿ ಪ್ರಸಾದ್ ಅವರ ಮಗ. ಕನ್ನಡ ಚಿತ್ರರಂಗದಲ್ಲಿ ಬಾಲನಟ, ನಾಯಕ ನಟರಾಗಿಯೂ ಅಭಿನಯಿಸಿದ್ದಾರೆ. 1981ರಲ್ಲಿ 'ಸಿಂಹದ ಮರಿ ಸೈನ್ಯ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಅರ್ಜುನ್ ಜನ್ಯ, ತಮಿಳು ಚಿತ್ರರಂಗದಲ್ಲಿ ಹೆಚ್ಚಾಗಿ ದೊರೆತ ಕಾರಣ ಅಲ್ಲೇ ನೆಲೆ ಕಂಡುಕೊಂಡರು. ಇವರು ಕಾಲಿವುಡ್‌ನಲ್ಲಿ ಜನಪ್ರಿಯ ನಾಯಕನಟ, ನಿರ್ದೇಶಕ, ನಿರ್ಮಪಕರಾಗಿ ಹೆಸರು ಗಳಿಸಿದ್ದಾರೆ. ಇವರು ಕನ್ನಡ, ಮಲಯಾಳಂ, ತೆಲುಗು, ತಮಿಳು, ಹಿಂದಿ ಹೀಗೆ ಹಲವಾರು ಭಾಷೆಗಳಲ್ಲಿ ನಟಿಸಿದ್ದಾರೆ.

 

ಕೋಕಿಲಾ ಮೋಹನ್
3

ಕರ್ನಾಟಕದಲ್ಲಿ ಹುಟ್ಟಿ ಬೆಳೆದ ಮೋಹನ್, ಕೋಕಿಲಾ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದರು. ಆ ಕಾಲದಲ್ಲಿ ಮೋಹನ್ ಹೆಸರಿನ ಅನೇಕ ನಟರು ಇದ್ದುದರಿಂದ ಇವರನ್ನು ಕೋಕಿಲಾ ಮೋಹನ್ ಎಂದೇ ಕರೆಯಲಾಗುತ್ತಿತ್ತು. ಬಳಿಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ಇವರು, ಸಂಗೀತದ ಥೀಮ್‌ ಇರುವ ಸಿನಿಮಾಗಳನ್ನೆ ಮಾಡುತ್ತಿದ್ದರು. ಗಾಯಕರಾಗಿಯೂ ಗುರುತಿಸಿಕೊಂಡಿದ್ದಾರೆ. ಇವರನ್ನು ಅಭಿಮಾನಿಗಳು ಪ್ರೀತಿಯಿಂದ ಮೈಕ್ ಮೋಹನ್ ಎಂದೇ ಕರೆಯುತ್ತಾರೆ. 

 

ಮುರಳಿ
4

ಕನ್ನಡದ ಖ್ಯಾತ ನಿರ್ಮಾಪಕ ಸಿದ್ದಲಿಂಗಯ್ಯನವರ ಮಗನಾದ ನಟ ಮುರಳಿ ಜನಿಸಿದ್ದು ಬೆಂಗಳೂರಿನಲ್ಲಿ. ತಮ್ಮ ತಂದೆ ನಿರ್ದೇಶನದ ಗೆಲುವಿನ ಹೆಜ್ಜೆ, ಪ್ರೇಮಾ ಪರ್ವ, ಬಿಳಿ ಗುಲಾಬಿ ಸೇರಿದಂತೆ ಕೆಲ ಕನ್ನಡ ಸಿನಿಮಾಗಳಲ್ಲಿ ನಟಿಸಿದರು. ನಂತರ ಪೂವಿಲಂಗು ಸಿನಿಮಾ ಮೂಲಕ ಕಾಲಿವುಡ್‌ಗೆ ಎಂಟ್ರಿಕೊಟ್ಟರು. ಮಣಿರತ್ನಂ ನಿರ್ದೇಶನದ ಪಾಗಲ್ ನಿಲವು ಸಿನಿಮಾವು ಅವರಿಗೆ ಬಿಗ್ ಬ್ರೇಕ್ ನೀಡಿತು. ಇವರು ಬಹುತೇಕ ಸಿನಿಮಾಗಳಲ್ಲಿ ಕಾಲೇಜು ವಿದ್ಯಾರ್ಥಿಯ ಪಾತ್ರ ನಿರ್ವಹಿಸಿದ್ದಾರೆ. 

ಪ್ರಕಾಶ್ ರಾಜ್
5

ಪ್ರಕಾಶ್ ರೈ 1965ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಇವರ ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ಬೆಂಗಳೂರಿನಲ್ಲಿಯೇ. ಮೊದಲು ಇವರು ಕನ್ನಡದ ದೂರದರ್ಶನ ಚಾನೆಲ್‌ನಲ್ಲಿ ಮೂಡಿಬರುತ್ತಿದ್ದ 'ಬಿಸಿಲು ಕುದುರೆ' ಎಂಬ ಧಾರಾವಾಹಿಲ್ಲಿ ಕಾಣಿಸಿಕೊಂಡರು. ನಂತರ ಕನ್ನಡ ಸೇರಿದಂತೆ ತುಳು ಧಾರಾವಾಹಿಗಳಲ್ಲೂ ನಟಿ ಸೈ ಎನಿಸಿಕೊಂಡಿರು. ತಮಿಳು ಚಿತ್ರರಂಗದ ನಿರ್ದೇಶಕ ಕೆ. ಬಾಲಚಂದ್ರ ಇವರನ್ನು ಗುರುತಿಸಿ, ಚಿತ್ರರಂಗಕ್ಕೆ ಕರೆತಂದು, ಪ್ರಕಾಶ್ ರಾಜ್ ಇದ್ದ ಹೆಸರನ್ನು ಪ್ರಕಾಶ್ ರೈ ಎಂದು ಬದಲಾಹಿಸಿದರು. ಅಂದಿನಿಂದ ಇವರು ಪ್ರಕಾಶ್ ರೈ ಎಂದೇ ಚಿರಪರಿಚಿತರಾದರು. ಪ್ರಕಾಶ್ ರಾಜ್ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಚಿತ್ರಗಳಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದಲ್ಲದೆ ಅನೇಕ ಚಿತ್ರಗಳನ್ನೂ ನಿರ್ದೇಶಿಸಿ, ಕೆಲವು ಚಿತ್ರಗಳಿಗೆ ನಿರ್ಮಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ.  ಹೀಗೆ ಪ್ರಕಾಶ್ ರಾಜ್ ಅಲಿಯಾಸ್ ಪ್ರಕಾಶ್ ರೈ ಅವರು ಎಲ್ಲಾ ಭಾಷೆಯ ಚಿತ್ರರಂಗದಲ್ಲೂ ತಮ್ಮದೆಯಾದ ಛಾಪು ಮೂಡಿಸಿದ್ದಾರೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+