X
ಹೋಮ್ ಚಲನಚಿತ್ರಗಳ ಒಳನೋಟ

ರಾಕ್ಷಸರ ಅಟ್ಟಹಾಸಕ್ಕೆ ಸುಸ್ತಾಗಿ ಆಡಲ್ಲ ಎಂದ ಗಂಧರ್ವರು: ಅವಳು ಯಾವ ಸೀಮೆ ರಾಣಿ ಗುರು, ಹೇಡಿಗಳು ಅಂತ ಕಿರುಚಾಡಿದ ನಮ್ರತಾ

Author Sowmya Bairappa | Published: Thursday, December 7, 2023, 12:56 PM [IST]

ಸದ್ಯ ವರ್ತೂರು ಸಂತೋಷ್ ತಂಡ ರಾಕ್ಷಸರಾಗಿದ್ದು, ಇಡೀ ಬಿಗ್‌ಬಾಸ್‌ ಮನೆ ರಣರಂಗವಾಗಿದೆ. ರಾಕ್ಷಸರು ಹಾಗೂ ಗಂಧರ್ವರು ಟಾಸ್ಕ್‌ನಲ್ಲಿ ಎರಡು ತಂಡಗಳ ನಡುವೆ ತೀವ್ರ ಜಗಳವಾಗುತ್ತಿದ್ದು, ರಾಕ್ಷಸರ ಕಾಟಕ್ಕೆ ಬೇಸತ್ತು ಸಂಗೀತಾ ತಂಡ ಆಡಲ್ಲ ಎಂದಿದೆ. ಇದರಿಂದ ರೊಚ್ಚಿಗೆದ್ದ ನಮ್ರತಾ, ಅವಳು ಯಾವ ಸೀಮೆ ರಾಣಿ ಗುರು? ಹೇಡಿಗಳು ಅಂತ ಕಿರುಚಾಡಿದ್ದಾರೆ.


cover image
ರೊಚ್ಚಿಗೆದ್ದ ನಮ್ರತಾ

ಇಂದಿನ ಸಂಚಿಕೆಯಲ್ಲಿ ಬಿಗ್‌ಬಾಸ್‌ ಮನೆ ರಣರಂಗವಾಗಿ ಮಾರ್ಪಟ್ಟಿದೆ. ಇತ್ತೀಚೆಗೆ ತಮ್ಮ ಆಟ ಚುರುಕಗೊಳಿಸಿರುವ ನಮ್ರತಾ, ಟಾಸ್ಕ್ ವಿಚಾರವಾಗಿ ಸಂಗೀತಾರನ್ನು ಎದುರು ಹಾಕಿಕೊಂಡಿದ್ದಾರೆ. ಸಂಗೀತಾ ತನಿಷಾ ಬಳಿ ನಾವು ಏಂಜಲ್ಸ್, ಸೇವಕರಲ್ಲ. ಪನಿಷ್‌ಮೆಂಟ್ ನಾವು ತೆಗೆದುಕೊಳ್ಳಬೇಕು ಅಂತ ಎಲ್ಲೂ ಬರೆದಿಲ್ಲ. ನಾವು ಮಾಡಲ್ಲ ಅಂತ ಹೇಳೋಣ ಎಂದಿದ್ದಾರೆ. ಇದರಿಂದ ರೊಚ್ಚಿಗೆದ್ದ ನಮ್ರತಾ, ಈಗಲೇ ಆಚೆ ಬರಬೇಕು. ಅವಳು (ಸಂಗೀತಾ) ಹೇಳಿಕೊಟ್ಟಿರೋದಂತೆ. ಅವಳು ಯಾವ ಸೀಮೆ ರಾಣಿ ಗುರು? ತಲೆಲಿ ಬುದ್ದಿ ಇಲ್ವಾ. ನೀವು ಇಂಡಿವಿಷ್ಯುವಲ್ ಗೇಮ್ ಆಡೋಕೆ ತಾನೇ ಬಂದಿರೋದು. ಹೇಡಿಗಳು ಅಂತ ಕೂಗಾಡಿದ್ದಾರೆ. ಇತ್ತ ಸಂಗೀತಾ ಟಾಸ್ಕ್ ವಿಚಾರಕ್ಕೆ ಕಣ್ಣೀರಿಟ್ಟಿದ್ದಾರೆ. 

'ಹುಚ್ಚ ನಾಯಿ ಆಟ ಆಡಿಸಬೇಕು'

ತುಕಾಲಿ ಸಂತೋಷ್ ತಾವು ಗಂಧರ್ವರಾಗಿದ್ದಾಗ ರಾಕ್ಷಸರ ಆಟ ಕಂಡು, ಇದಾದ್ಮೇಲೆ ಹುಚ್ಚ ನಾಯಿ ಆಟ ಆಡಿಸಬೇಕು ಎಂದಿದ್ದರು. ಅದಕ್ಕೆ ವಿನಯ್, ನನಗಿರುವ ಟೆನ್ಷನ್‌ಗಿಂತಲಾ ನಿಮಗೆ? ಹುಚ್ಚು ಏಟುಗಳೇ ಹೊಡೆಯೋದು. ಬಿಗ್‌ಬಾಸ್‌ ಹೇಳಿದ ಮೇಲೆ ಬರ್ತೀನಿ. ಹೇಗೆ ಬರ್ತೀನಿ ಅಂದ್ರೆ? ಪಾಪ ಅವರು.. ನನಗೆ ಈಗಲೇ ಬೇಜಾರಾಗುತ್ತೆ ಅವರ ಬಗ್ಗೆ ನೆನಸಿಕೊಂಡರೆ ಎಂದಿದ್ದರು.  

 

ಕಾರ್ತಿಕ್‌ಗೆ ಬೋಡಾ, ಸಂಗೀತಾ ಜೂಲಿ

ವರ್ತೂರು ಸಂತೋಷ್ ತಂಡ ರಾಕ್ಷಸರಾಗುತ್ತಿದ್ದಂತೆ ಎದುರಾಳಿ ತಂಡಕ್ಕೆ ಕಾಟ ಕೊಡಲು ಆರಂಭಿಸಿದರು. ಟಾಸ್ಕ್‌ ಮುಗಿಯುವರೆಗೂ ನಿನ್ನ ಹೆಸರು ಟಾಮಿ ಅಂತ ಅವಿನಾಶ್ ಶೆಟ್ಟಿಗೆ ನಮ್ರತಾ-ಮೈಕಲ್ ಹೇಳಿದರು. ಸಂಗೀತಾ ಅವರನ್ನು ನಮ್ರತಾ ಜೂಲಿ ಅಂತ ಕರೆದರು. ಮೂಗು ನೆಲಕ್ಕೆ ತಾಗುವಂತೆ ನಡೆಯಬೇಕು ಎಂದು ಅವಿನಾಶ್ ಹಾಗೂ ಸಂಗೀತಾಗೆ ಸೂಚಿಸಿದರು. ಕಾರ್ತಿಕ್‌ ಅವರನ್ನು ಬೇಕಂತಲೇ ಬೋಡಾ ಅಂತ ಕರೆಯುತ್ತಿದ್ದರು. 

ನಾನೊಬ್ಬ ದಡ್ಡ, ಗುಲಾಮ ಎಂದ ಕಾರ್ತಿಕ್

ರಾಕ್ಷಸರಾಗುತ್ತಿದ್ದಂತೆ ವಿನಯ್, ಆನೆಯನ್ನು ಕಸದ ಬುಟ್ಟಿಗೆ ಹಾಕಿದ್ದರಿಂದ ಕಾರ್ತಿಕ್ ಬಳಿ ಕ್ಷೇಮೆ ಕೇಳಿಸಿದರು. ಮಂಡಿ ಕಾಲಲ್ಲಿ ಹೋಗಿ, ಮಾರ್ಯಾದೆಯಿಂದ ಆನೆಯನ್ನು ತಗೊಂಡು ಬಂದು ಆನೆಗೆ ಕೈಮುಗಿದು ಕ್ಷೇಮೆ ಕೇಳುವಂತೆ ಸೂಚಸಿದ್ದಾರೆ. ಇದಕ್ಕೊಪ್ಪದ ಕಾರ್ತಿಕ್‌, ಅಭಿಮಾನಿಗಳು ನೀಡಿದ ಈ ಆನೆಯನ್ನು ನಾನು ಡಸ್ಟ್ ಬಿನ್‌ಗೆ ಹಾಕಿದ್ದಕ್ಕೆ ಕರ್ನಾಟಕದ ಅಭಿಮಾನಿಗಳಲ್ಲಿ ಕ್ಷೇಮೆ ಕೇಳುತ್ತಿದ್ದೇನೆ. ನಾನೊಬ್ಬ ದಡ್ಡ, ನಾನೊಬ್ಬ ಗುಲಾಮ ಎಂದಿದ್ದಾರೆ.

 

ಸಂಗೀತಾರಿಂದಲೂ ಕ್ಷೇಮೆ

ಸಂಗೀತಾಗೆ ನಾನು ಒಬ್ಬರು ಮಾತನಾಡಿರೋ ಮಾತನ್ನ ಮಾನಿಮ್ಯುಲೆಟ್ ಮಾಡಿ ನೆಗೆಟಿವ್ ಆಗಿ ತೋರಿಸ್ತೀನಿ ..ಕ್ಷಮೆ ಇರಲಿ ಎಂಬ ಸಾಲನ್ನು ವಿನಯ್ ಹೇಳಿಸಿದರು. ನಮ್ರತಾ, ನಾನು ಸಂಗೀತಾ..ನಾನು ಲೂಸರ್ ಅಂತ ಹೇಳಿಸಿದರು.ನಂತರ ವರ್ತೂರು ಸಂತೋಷ್, ನಾನು ಇವರಿಬ್ಬರಿಗೂ (ಸಂಗೀತಾ-ಕಾರ್ತಿಕ್) ಬೇಕಾದ ಹಾಗೆ ಮಾತುಗಳನ್ನು ತಿರುಚಿ ಹೇಳುತ್ತೇನೆ. ನಾನೊಬ್ಬಳು ಬಾಯ್ಬಡುಕಿ. ಜಗಳಗಂಟಿ ಅಂತ ತನಿಷಾರಿಂದ ಹೇಳಿಸಿದರು. ನಾನು ಮಾವುತ ಅಲ್ಲ, ಹುಚ್ಚು ಕುದುರೆ ಅಂತ ಅವಿನಾಶ್ ಬಾಯಿಂದ ವಿನಯ್ ಹೇಳಿಸಿದರು. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+