X
ಹೋಮ್ ಚಲನಚಿತ್ರಗಳ ಒಳನೋಟ

ಥಿಯೇಟರ್‌ನಲ್ಲಿ ಮಿಸ್ ಮಾಡಿಕೊಂಡಿರುವ ಈ ಕನ್ನಡ ಸಿನಿಮಾಗಳನ್ನು Ottಯಲ್ಲಿ ನೋಡಿ!

Author Sowmya Bairappa | Published: Saturday, September 30, 2023, 03:06 PM [IST]

ಸಿನಿಮಾಗಳು ಥಿಯೇಟರ್ ದಾಟಿಕೊಂಡು ಒಟಿಟಿಗೆ ಬಂದಾಗಲಷ್ಟೇ ಕಾದು ನೋಡುವ ಪ್ರೇಕ್ಷಕರ ವರ್ಗ ಇತ್ತೀಚೆಗೆ ಹೆಚ್ಚಾಗಿದೆ. ಅಂತೆಯೇ ಒಟಿಟಿಗಳು ಸಹ ನಾ ಮುಂದು ತಾ ಮುಂದು ಎಂದು ಸಬ್‌ಸ್ಕ್ರೈಬರ್‌ಗಳಿಗೆ ಹೊಸ-ಹೊಸ ಸಿನಿಮಾಗಳು ಹಾಗೂ ವೆಬ್‌ ಸೀರೀಸ್‌ಗಳನ್ನು ನೀಡುತ್ತಿವೆ. ಇತ್ತೀಚೆಗಂತೂ ಈ ಸ್ಪರ್ಧೆ ಹೆಚ್ಚಾಗಿದೆ. ಇದೀಗ ಮತ್ತೊಂದು ವಾರಾಂತ್ಯ ಬಂದಿದ್ದು, ಸಾಲು-ಸಾಲು ರಜೆಗಳು ಕೂಡ ಇವೆ. ಇಲ್ಲಿ ಒಟಿಟಿಯಲ್ಲಿ ಲಭ್ಯವಿರುವ ಹೊಸ ಕನ್ನಡ ಸಿನಿಮಾಗಳ ಪಟ್ಟಿಯನ್ನು ನೀಡಲಾಗಿದೆ.


cover image
ಸಪ್ತ ಸಾಗರದಾಚೆ ಎಲ್ಲೋ

ಸಿಂಪಲ್‌ ಸ್ಟಾರ್ ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಅಭಿನಯದ 'ಸಪ್ತ ಸಾಗರಾಚೆ ಎಲ್ಲೋ' ಸಿನಿಮಾ ಸೆಪ್ಟಂಬರ್ 29ರಂದು ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿದೆ. 'ಸಪ್ತ ಸಾಗರದಾಚೆ ಎಲ್ಲೋ' ಭಾವನಾತ್ಮಕ ಪ್ರೇಮಕಥೆಯಾಗಿದ್ದು, ಹೃದಯ ಭಾರ ಮಾಡಿಕೊಂಡವರು, ಹಗೂರ ಇಟ್ಟುಕೊಂಡವರು ಇಬ್ಬರಿಗೂ ತಟ್ಟುವ ಸಿನಿಮಾ. ಬಹಳ ದಿನಗಳ ಬಳಿಕ ಒಂದೊಳ್ಳೆ ಪ್ರೇಮಕಥೆ ಬಂದಿದ್ದು, ಸಿನಿರಸಿಕರಿಗೆ ಖಂಡಿತವಾಗಿಯೂ ಇಷ್ಟವಾಗುತ್ತೆ. ನೀವು ಥಿಯೇಟರ್‌ನಲ್ಲಿ ಈ ಸಿನಿಮಾ ಮಿಸ್ ಮಾಡಿಕೊಂಡಿದ್ದರೆ, ಒಟಿಟಿಯಲ್ಲಿ ನೋಡಬಹುದು. 

ಕಥೆ: ಬಡ ಮಧ್ಯಮ ವರ್ಗದ ಇಬ್ಬರು ಪ್ರೇಮಿಗಳು ಸುಂದರ ಬದುಕು ಕಟ್ಟಿಕೊಳ್ಳುವ ಕನಸು ಕಾಣುತ್ತಾರೆ. ಸುಮುದ್ರದ ತೀರದಲ್ಲಿ ಸುಂದರವಾದ ಮನೆ ಕಟ್ಟಿಕೊಳ್ಳಬೇಕು ಅನ್ನೋ ಆಸೆ. ಆ ಕನಸಿಗೆ ಅದರದ್ದೇ ಆದ ಬೆಲೆ ಇರುತ್ತೆ. ಅದನ್ನು ಸಂಪಾಧಿಸಲು ಹೋದ ಹೀರೊ ಸಂಕಷ್ಟಕ್ಕೆ ಸಿಲುಕುತ್ತಾನೆ. ಜೈಲು, ಪ್ರೀತಿ, ರೋಧನೆ, ವೇದನೆ, ಭಾವುಕತೆ ಪ್ರೇಮಿಗಳಿಬ್ಬ ಬಾಳಲ್ಲಿ ಹೆಣೆದುಕೊಳ್ಳುತ್ತಾ ಸಾಗುತ್ತೆ. ಮುಂದೇನಾಗುತ್ತೆ? ಪ್ರೇಮಿಗಳ ಪಾಡೇನು? ಈ ಕಥೆಯ ವಿಲನ್ ಯಾರು? ಎಂಬುದೇ ಸಿನಿಮಾದ ಒನ್‌ಲೈನ್ ಕಥೆ. 

ಕೌಸಲ್ಯಾ ಸುಪ್ರಜಾ ರಾಮ

ಶಶಾಂಕ್ ನಿರ್ದೇಶನದ ಕೌಸಲ್ಯಾ ಸುಪ್ರಜಾ ರಾಮ ಸಿನಿಮಾ ಕೂಡ ಒಟಿಟಿಯಲ್ಲಿ ಲಭ್ಯವಿದೆ. ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ಬೃಂದಾ ಆಚಾರ್ಯ ಹಾಗೂ ಮಿಲನಾ ನಾಗರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಅಮೇಜಾನ್ ಪ್ರೈಮ್‌ನಲ್ಲಿ ಸೆಪ್ಟಂಬರ್ 15ರಂದು ಬಿಡುಗಡೆಯಾಗಿದೆ. 

ಕಥೆ: ನಾಯಕ ರಾಮ್ ತನ್ನ ತಂದೆ ಹೇಳಿಕೊಟ್ಟಂತೆ ಗಂಡು ಎಂಬ ಅಹಂನೊಂದಿಗೆ ಕಾಲೇಜು ಜೀವನದವರೆಗೂ ಬಂದಿರುತ್ತಾನೆ. ಆ ವೇಳೆ ಆಗುವ ನಾಯಕಿ ಶಿವಾನಿ ಪರಿಚಯದಿಂದ ಹುಡುಗಿಯರೆಂದರೆ ಆಗದ ನಾಯಕ ರಾಮ್ ಪ್ರೀತಿಯಲ್ಲಿ ಬೀಳುತ್ತಾನೆ. ಈ ಪ್ರೀತಿಯೂ ಸಹ ನಾಯಕನ ನಾನು ಗಂಡು ಎಂಬ ಅಹಂಕಾರಕ್ಕೆ ಸಿಲುಕಿ ಹಾಳಾಗುತ್ತೆ. ಬಳಿಕ ನಾಯಕ ತನ್ನ ತಂದೆ - ತಾಯಿ ಆರಿಸಿದ ಹುಡುಗಿಯನ್ನೇ ಮದುವೆಯಾಗ್ತಾನೆ. ಹೀಗೆ ಒಲ್ಲದ ಮನಸ್ಸಿನಿಂದ ನಿರ್ದಿಷ್ಟ ಕಾರಣವೊಂದಕ್ಕೆ, ಅಹಂ ಪಕ್ಕಕ್ಕಿಟ್ಟು ಮದುವೆಯಾಗುವ ನಾಯಕನ ಜೀವನ ಸರಿ ಹೋಗುತ್ತಾ ಅಥವಾ ಮತ್ತೆ ತನ್ನ ಅಹಂ ಅನ್ನು ಮುಂದುವರೆಸುತ್ತಾನಾ ಎಂಬುದೇ ಚಿತ್ರದ ಕಥೆ.

ಆಚಾರ್ & ಕೋ

ಸಿಂಧು ಶ್ರೀನಿವಾಸಮೂರ್ತಿ ನಿರ್ದೇಶನದ 'ಆಚಾರ್ & ಕೋ' ಸಿನಿಮಾ ಕೂಡ ಅಮೇಜಾನ್ ಪ್ರೈಮ್‌ನಲ್ಲಿ ಲಭ್ಯವಿದೆ. ಈ ಸಿನಿಮಾವನ್ನು ಪಿಆರ್‌ಕೆ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ನಿರ್ಮಿಸಿದ್ದು, ಪ್ರೇಕ್ಷಕರಿಂದ ಮೆಚ್ಚಗೆ ಗಳಿಸಿತ್ತು. 

ಕಥೆ: 60 ದಶಕದ ಕಥೆ ಚಿತ್ರದಲ್ಲಿ ಇದ್ದರೂ ಎಲ್ಲಾ ಕಾಲಕ್ಕೂ 'ಆಚಾರ್ & ಕೋ' ಸಿನಿಮಾ ಸಲ್ಲುವಂತದ್ದು. ಅಂದಿಗೂ ಇಂದಿಗೂ ಎಂದಿಗೂ ಇರುವಂತಹ ಕೆಲ ಸಮಸ್ಯೆಗಳ ಬಗ್ಗೆ ಚಿತ್ರದಲ್ಲಿ ಚರ್ಚಿಸಲಾಗಿದೆ. ಎಲ್ಲೂ ಬೋರ್ ಹೊಡೆಸದಂತೆ, ಭಾಷಣದಂತೆಯೂ ಭಾಸವಾಗದಂತೆ ಮನರಂಜನೆ ಜೊತೆ ಜೊತೆಗೆ ಚರ್ಚಿಸುವಂತಹ ವಿಷಯಗಳಿವೆ. ಇನ್ನು ಸ್ತ್ರೀಶಕ್ತಿಯ ಸಬಲೀಕರಣದ ವಿಚಾರವೂ ಚಿತ್ರವನ್ನು ಚಿತ್ರದಲ್ಲಿ ಚರ್ಚಿಸಲಾಗಿದೆ. 60 ವರ್ಷ ಹಿಂದೆ ಹೋಗಿ ಅಂದಿನ ಸಮಾಜ, ಜನ, ರೀತಿ ರಿವಾಜು, ಕಟ್ಟುಪಾಡು ಎಲ್ಲವನ್ನು ಕೆದಕಿ ನೋಡುವ ಪ್ರಯತ್ನ ಮಾಡಲಾಗಿದೆ.

ಟೋಬಿ

ರಾಜ್‌ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಟೋಬಿ' ಸಿನಿಮಾ ಕೂಡ ಸದ್ಯದಲ್ಲೇ ಒಟಿಟಿಗೆ ಬರಲಿದೆ. ರಾಜ್ ಬಿ ಶೆಟ್ಟಿ ಜೀವನದಲ್ಲಿ ನಡೆದ ಕೆಲ ಘಟನೆಗಳನ್ನೇ ಸ್ಪೂರ್ತಿ ಪಡೆದು ಪಡೆದಿರುವ ಈ ಸಿನಿಮಾ ಸದ್ಯದಲ್ಲೇ ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ.  

ಕಥೆ: ಹರಕೆಯ ಕುರಿ ಕಾಣೆಯಾಗಿದೆ ಎಂಬುದರಿಂದ ಸಿನಿಮಾ ಆರಂಭವಾಗುತ್ತದೆ. ಆ ಕಾಣೆಯಾದ ಕುರಿ ವಾಪಸ್ ಬಂದರೆ ಮಾರಿಯಾಗಿರುತ್ತದೆ ಎಂಬುದು ಪೂಜಾರಿ ಹೇಳುವ ಮಾತು. ಅಂದರೆ ಇಲ್ಲಿ ಹರಕೆಯ ಕುರಿ ಯಾರು, ಮೂಗುತಿ ಮಾರಿಯಾಗಲು ಕಾರಣವೇನು ಎಂಬುದೆ ಸಿನಿಮಾ ಕಥೆ. ಹೆಸರಿಲ್ಲದ ಅನಾಥ, ಮೂಕ ವಿಲಕ್ಷಣ ವ್ಯಕ್ತಿಯೊಬ್ಬ ಮತ್ತೊಂದು ಅನಾಥ ಹೆಣ್ಣು ಮಗುವನ್ನು ಸಾಕುವ, ಮನೆ ಕಟ್ಟಲು, ಜೀವನ ಸಾಗಿಸಲು ಉಳ್ಳವರಿಗೆ ಹರಕೆಯ ಕುರಿಯಾಗುವ ಆತನ ಜೀವನದಲ್ಲಿ ನಡೆಯುವ ಘಟನೆಗಳೇ ಟೋಬಿ. 

ಡೇರ್ ಡೆವಿಲ್ ಮುಸ್ತಾಫಾ


ಶಶಾಂಕ್ ಸೊಘಲ್ ನಿರ್ದೇಶನದ ಕಾಮಿಡಿ ಎಂಟರ್ಟೈನರ್ ಚಿತ್ರ ಡೇರ್ ಡೆವಿಲ್ ಮುಸ್ತಾಫಾಕೂಡ ಒಟಿಟಿಯಲ್ಲಿ ಲಭ್ಯವಿದೆ. ಪುಸ್ತಕ ಓದುವ ಹವ್ಯಾಸ ಇದ್ದವರಿಗೂ ಪೂರ್ಣಚಂದ್ರ ತೇಜಸ್ವಿ ಅವರ ಪುಸ್ತಕದ ಪರಿಚಯವಿದ್ದೆ ಇರುತ್ತದೆ. ಅವರಿಗೆ ಅಷ್ಟು ಅಭಿಮಾನಿಗಳಿದ್ದಾರೆ. ತೇಜಸ್ವಿ ಅವರು ಬರೆದ ಪುಸ್ತಕದಲ್ಲಿ ಡೇರ್ ಡೆವಿಲ್ ಮುಸ್ತಫಾ ಕೂಡ ಒಂದು. ಈ ಪುಸ್ತಕವೇ ಸಿನಿಮಾವಾಗಿ ಬಂದಿದ್ದು, ಅಮೇಜಾನ್ ಪ್ರೈಮ್‌ನಲ್ಲಿ ಲಭ್ಯವಿದೆ. 

ಕಥೆ: ಟೈಟಲ್ ಮತ್ತು ಸಬ್ ಟೈಟಲ್ ಹೇಳುವಂತೆ ಮುಸ್ತಫಾ ಮತ್ತೆ ರಾಮಾನುಜ ಅಯ್ಯಂಗಾರಿ ಪಟಾಲಂ ನಡುವೆ ಯುದ್ಧವೇ ನಡೆಯುತ್ತಿರುತ್ತೆ. ಅಯ್ಯಂಗಾರಿ ಮನೆಯಲ್ಲಿ ನಡೆದ ಒಂದೇ ಒಂದು ಘಟನೆಯಿಂದ ಮುಸ್ತಫಾ ಒಳ್ಳೆಯವನಾದರೂ ಕೆಟ್ಟವನಾಗಿಯೇ ಕಾಣುತ್ತಾನೆ. ಇನ್ನು ಅಯ್ಯಾಂಗಾರಿ ಗ್ಯಾಂಗ್ ಕೂಡ ಕಾಲೇಜು ಶುರುವಾದಾಗಿನಿಂದ ಮುಸ್ತಫಾಗೆ ತೊಂದರೆ ಕೊಡುತ್ತಲೇ ಬರುತ್ತದೆ. ಅದರಿಂದ ಅಯ್ಯಂಗಾರಿ ಎಲ್ಲವನ್ನು ಕಳೆದುಕೊಳ್ಳುತ್ತಾನೆ. ಮುಸ್ತಫಾ ಪಡೆದುಕೊಳ್ಳುತ್ತಾ ಬರುತ್ತಾನೆ. ಕಾಲೇಜಿನಲ್ಲೂ ಹೀರೊ ಆಗಿ ಬಿಡುತ್ತಾನೆ. ಹೀಗೆ ಇಬ್ಬರು ಹುಡುಗರ ನಡುವಿನ ಕಿತ್ತಾಟ ಸಿನಿಮಾದಲ್ಲಿದೆ. 

ಶಿವಾಜಿ ಸುರತ್ಕಲ್ 2

ರಮೇಶ್ ಅರವಿಂದ್ ಮತ್ತು ರಾಧಿಕಾ ಚೇತನ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಶಿವಾಜಿ ಸುರತ್ಕಲ್ ಭಾಗ ೨ ಅನ್ನು ನೀವು ಇನ್ನು ನೋಡಿಲ್ಲವಾದರೆ ಒಟಿಟಿಯಲ್ಲಿ ವೀಕ್ಷಿಸಬಹುದು. ಶ್ರೀವತ್ಸ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ ಜೀ೫ನಲ್ಲಿ ಲಭ್ಯವಿದೆ. 

ಕಥೆ: ಉಡುಪಿಯಲ್ಲಿ ನಡೆಯುವ ಒಂದು ಹತ್ಯೆಯಿಂದ ಶಿವಾಜಿ ಮಾಯಾವಿ ಕೇಸ್‌ನ ಹಿಂದೆ ಬೀಳ್ತಾನೆ. ಅಲ್ಲಿಂದ ಮುಂದೆ ಮತ್ತೆ 3 ಕೊಲೆಗಳು ನಡೆಯುತ್ತವೆ. ಪ್ರತಿ ಕೊಲೆಯನ್ನು ಹಂತಕ ಸುಳಿವು ಕೊಡುತ್ತಾ ಹೋಗುತ್ತಾನೆ, ಜೊತೆಗೆ ಶಿವಾಜಿ ಸುರತ್ಕಲ್‌ಗೆ ಸವಾಲಾಗುತ್ತಾ ಸಾಗುತ್ತಾನೆ. ಶಿವಾಜಿ ಕೊಲೆಗಾರನ ಸಮೀಪಕ್ಕೆ ಹೋಗುತ್ತಿದ್ದಂತೆ ಆತ ಚಾಣಾಕ್ಷತನದಿಂದ ತಪ್ಪಿಸಿಕೊಳ್ಳುತ್ತಾನೆ. ಆದರೆ ಈ ಕಳ್ಳ ಪೊಲೀಸ್ ಆಟದಲ್ಲಿ 5ನೇ ಕೊಲೆ ಆಗುವುದಕ್ಕು ಮುನ್ನ ಶಿವಾಜಿ ಹಂತಕನ ಮುಂದೆ ನಿಂತಿರುತ್ತಾನೆ. ಅದು ಹೇಗೆ ಎಂಬುದೇ ಚಿತ್ರದ ಒನ್‌ಲೈನ್ ಕಥೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+