X
ಹೋಮ್ ಚಲನಚಿತ್ರಗಳ ಒಳನೋಟ

ಸತತ ಸೋಲಿನಿಂದ ಕಂಗೆಟ್ಟಿರುವ ಈ ನಟರು 2025ರಲ್ಲಿ ಕಂಬ್ಯಾಕ್ ಮಾಡಲು ರೆಡಿ!

Author Sowmya Bairappa | Updated: Monday, January 13, 2025, 09:56 AM [IST]

ಸಿನಿಮಾರಂಗದಲ್ಲಿ ಎಷ್ಟೇ ದೊಡ್ಡ ಸ್ಟಾರ್ ನಟರಾದರೂ ಕೂಡ ಏರುಪೇರುಗಳಾಗುವುದು ಖಚಿತ. ಹಲವು ಬಾರಿ ಬ್ಯಾಕ್‌ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಟರು ಕೂಡ ಸಾಲು-ಸಾಲು ಸೋಲು ಅನುಭವಿಸುವ ಸಂದರ್ಭ ಬರುತ್ತದೆ. ಯಾವುದೇ ಒಂದು ಸಿನಿಮಾದ ಯಶಸ್ಸು ಅಥವಾ ಗೆಲುವಿಗೆ ನಟರೊಬ್ಬರೇ ಕಾರಣರಾಗಿರುವುದಿಲ್ಲ. ಬದಲಾಗಿ ಕಥೆ ಬಹಳ ಮುಖ್ಯವಾಗಿರುತ್ತದೆ. ಸಿನಿಮಾ ಕಥೆ ಚೆನ್ನಾಗಿದ್ದರೆ ಪ್ರೇಕ್ಷಕರು ಕೈಹಿಡಿಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೆಲವೊಮ್ಮೆ ನಟರೇ ಉತ್ತಮ ಕಥೆ ಆಯ್ದುಕೊಳ್ಳುವಲ್ಲಿ ಎಡವಿ ಸೋಲನ್ನು ಅನುಭವಿಸುತ್ತಾರೆ. ಇಲ್ಲಿ ಸತತ ಸೋಲಿನ ಬಳಿಕ 2024ರಲ್ಲಿ ಕಂಬ್ಯಾಕ್ ಮಾಡಲು ಸಿದ್ಧರಾದ ನಟರ ಪಟ್ಟಿಯನ್ನು ನೀಡಲಾಗಿದೆ.


cover image
ಶ್ರೀನಗರ ಕಿಟ್ಟಿ
1

2005ರಲ್ಲಿ ತೆರೆಕಂಡ ಗಿರಿ ಚಿತ್ರದಿಂದ ಹೀರೋ ಆದ ಶ್ರೀನಗರ ಕಿಟ್ಟಿಯವರಿಗೆ ಕೀರ್ತಿ ತಂದುಕೊಟ್ಟ ಸಿನಿಮಾ ದುನಿಯಾ ಸೂರಿ ನಿರ್ದೇಶನದ `ಇಂತಿ ನಿನ್ನ ಪ್ರೀತಿಯ'.  ಬಳಿಕ ಕೆಲ ಹುಡುಗರು, ಸಂಜು ವೆಡ್ಸ್ ಗೀತಾ ಸೇರಿದಂತೆ ಕೆಲ ಹಿಟ್ ಸಿನಿಮಾ ನೀಡಿದ್ದರು. ಇದಾದ ಬಳಿಕ ಯಾವುದೇ ಹಿಟ್ ಸಿನಿಮಾ ನೀಡಲಿಲ್ಲ. ಸತತ ಸೋಲಿನ ಬಳಿಕ 2023ರಲ್ಲಿ ಗೌಳಿ ಸಿನಿಮಾ ಮೂಲಕ ಚಂದನವನಕ್ಕೆ ಮರಳಿದ್ದರು. ಈ ಸಿನಿಮಾ ಕೂಡ ನಿರೀಕ್ಷಿಸಿದ್ದಷ್ಟು ಯಶಸ್ಸು ಗಳಿಸಿರಲಿಲ್ಲ. ಇದೀಗ ಸಂಜು ಮತ್ತು ಗೀತಾ ೨ ಸಿನಿಮಾ ಮೂಲಕ ಕಂಬ್ಯಾಕ್ ಮಾಡಲು ಮುಂದಾಗಿದ್ದು, ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟವಾಗಲಿದ್ಯಾ? ಎಂಬುದನ್ನು ಕಾದುನೋಡಬೇಕಿದೆ. ನಿರ್ದೇಶಕ ನಾಗಶೇಖರ್ ಕೂಡ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಯಿಟ್ಟಿದ್ದಾರೆ.

ಪ್ರಜ್ವಲ್ ದೇವರಾಜ್
2

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ತಮ್ಮ ಸಿನಿಮಾ ಜೀವನದಲ್ಲಿ ಸಾಕಷ್ಟು ಏಳುಬೀಳು ಕಂಡಿದ್ದಾರೆ. ಸದ್ಯ ಅದೆಲ್ಲಾವನ್ನು ಮೀರಿ ಒಳ್ಳೆ ಸಿನಿಮಾ ನೀಡಬೇಕು ಅಂತ ಪಣ ತೊಟ್ಟಿದ್ದಾರೆ. ೨೦೨೫ರಲ್ಲಿ ಭಿನ್ನ-ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಕರಾವಳಿ, ರಾಕ್ಷಸ, ಗಣ, ಚೀತಾ, ಮಾಫಿಯಾ, ಜಠಾರ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಪೈಕಿ ಕರಾವಳಿ ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಕಂಬಳ ಓಟದ ಸುತ್ತ ಸಾಗುವ ಕಥೆ ಹೊಂದಿರುವ ಈ ಸಿನಿಮಾ ಟೀಸರ್‌ನಿಂದಲೇ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ. ಕರಾವಳಿ ಚಿತ್ರ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಸತೀಶ್ ನೀನಾಸಂ
3

ಅಭಿನಯ ಚತುರ ಎಂದೇ ಖ್ಯಾತಿಗಳಿಸಿರುವ ಸತೀಶ್ ನೀನಾಸಂ,೦೧೩ರಲ್ಲಿ ಲೂಸಿಯಾ ಸಿನಿಮಾ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ಮೊದಲ ಸಿನಿಮಾದಲ್ಲೇ ಸೂಪರ್ ಸಕ್ಸಸ್ ಕಂಡರು. ಬಳಿಕ ಬ್ಯೂಟಿಫುಲ್ ಮನಸುಗಳು, ಚಂಬಲ್, ಅಯೋಗ್ಯ ಸೇರಿದಂತೆ ಕೆಲ ಹಿಟ್ ಸಿನಿಮಾಗಳನ್ನು ನೀಡದ ಅವರು, ನಂತರ ಬಂದ ತೆರೆಕಂಡ ಚಿತ್ರಗಳಲ್ಲಿ ಸೋಲನುಭವಿಸಿದರು. ಸದ್ಯ ಅವರು ಕಮ್‌ಬ್ಯಾಕ್ ಮಾಡಲು ತಯಾರಿ ನಡೆಸುತ್ತಿದ್ದು, ಅಶೋಕ ಬ್ಲೇಡ್, ದಸರಾ ಸೇರಿದಂತೆ ಕೆಲ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಪೈಕಿ ಅಶೋಕ ಬ್ಲೇಡ್ ಪ್ಯಾನ್ ಇಂಡಿಯಾ ಸಿನಿಮಾವಾಗಿದೆ.

ಯೋಗೇಶ್
4

ನಂದ ಲವ್ಸ್ ನಂದಿತಾ ಸಿನಿಮಾ ಮೂಲಕ ನಾಯಕನಾದ ಲೂಸ್‌ ಮಾದ ಯೋಗಿ, ಚೊಚ್ಚಲ ಚಿತ್ರದಲ್ಲೇ ಯಶಸ್ಸು ಗಳಿಸಿದರು. ನಂತರ ಅಂಬಾರಿ, ಸಿದ್ಲಿಂಗು, ಹುಡುಗರು, ಯಾರೇ ಕೂಗಾಡಲಿ ಹೀಗೆ ಕೆಲ ಹಿಟ್ ಚಿತ್ರಗಳನ್ನು ನೀಡಿದರು. ಯಾರೇ ಕೂಗಾಡಲಿ ಸಿನಿಮಾ ಬಳಿಕ ತೆರೆಕಂಡ ಯೋಗೇಶ್ ಸಿನಿಮಾಗಳು ಅಷ್ಟೊಂದು ಸದ್ದು ಮಾಡಿಲ್ಲ. ಇದೀಗ ಯೋಗೇಶ್ ಒಳ್ಳೆಯ ಕಥೆಯೊಂದಿಗೆ ಕಮ್‌ಬ್ಯಾಕ್ ಮಾಡಲು ಸಾಕಷ್ಟು ತಯಾರಿ ನಡೆಸುತ್ತಿದ್ದು, ಈ ವರ್ಷ ಅವರ ಸಿದ್ಲಿಂಗು ೨ ಹಾಗೂ ರೋಜಿ ಚಿತ್ರಗಳು ತೆರೆಗೆ ಬರಲಿವೆ.

ದಿಗಂತ್
5

ಕನ್ನಡ ಚಿತ್ರರಂಗದಲ್ಲಿ ದೂದ್ ಪೇಡ ಎಂದೇ ಖ್ಯಾತಿಗಳಿಸಿರುವ ದಿಗಂತ್, 2009ರಲ್ಲಿ ತೆರೆಕಂಡ ಮನಸಾರೆ ಸಿನಿಮಾ ಮೂಲಕ ಹೀರೋ ಆದರು. ಜೊತೆಗೆ ಮೊದಲ ಸಿನಿಮಾದಲ್ಲೇ ಯಶಸ್ಸು ಗಳಿಸಿದರು. ಬಳಿಕ  ಲೈಫು ಇಷ್ಟೇನೆ, ಪಾರಿಜಾತ, ಗಾಳಿಪಟ ಹೀಗೆ ಹಲವು ಹಿಟ್‌ ಸಿನಿಮಾಗಳನ್ನು ನೀಡಿದರು. ಆದರೆ, ಆನಂತರದಲ್ಲಿ ಬಂದ ದಿಗಂತ್ ಸಿನಿಮಾಗಳನ್ನು ಸಿನಿರಸಿಕರ ಮನಗೆಲ್ಲುವಲ್ಲಿ ಸೋತಿವೆ. ಈ ವರ್ಷ ದಿಗಂತ್ ಅಭಿನಯದ ಎಡಗೈ ಅಪಘಾತಕ್ಕೆ ಕಾರಣ ಸಿನಿಮಾ ತೆರೆಗೆ ಬರಲು ಸಾಧ್ಯತೆಯಿದ್ದು, ಈ ಸಿನಿಮಾ ಮೂಲಕ ಕಂಬ್ಯಾಕ್ ಮಾಡುವ ನಿರೀಕ್ಷೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+