X
ಹೋಮ್ ಚಲನಚಿತ್ರಗಳ ಒಳನೋಟ

ಬೆಳ್ಳಿತೆರೆಯಲ್ಲಿ ಮುಗ್ಧ ಪಾತ್ರದ ಮೂಲಕ ಕಮಾಲ್ ಮಾಡಿದ ಸ್ಯಾಂಡಲ್‌ವುಡ್ ನಟರಿವರು!

Author Sowmya Bairappa | Updated: Friday, April 25, 2025, 05:42 AM [IST]

ಓರ್ವ ಕಲಾವಿದ ಸ್ಟಾರ್ ನಟನಾಗಿ ಬೆಳೆಯಬೇಕಾದರೆ ಅದಕ್ಕೆ ಸಾಕಷ್ಟು ಕಷ್ಟಪಡಬೇಕಾಗುತ್ತದೆ. ಜೊತೆಗೆ ಸಿನಿಮಾ ಪಾತ್ರಗಳ ಆಯ್ಕೆ ವಿಚಾರದಲ್ಲೂ ಸಿಕ್ಕಾಪಟ್ಟೆ ಜಾಗರೂಕತೆ ವಹಿಸಬೇಕಾಗುತ್ತದೆ. ಯಾಕೆಂದರೆ, ಒಂದು ಪಾತ್ರಕ್ಕೆ ನಟರ ಇಮೇಜ್ ಅನ್ನೇ ಬದಲಾಯಿಸಿ ಬಿಡುವ ಶಕ್ತಿಯಿದೆ. ನಮ್ಮ ಸ್ಯಾಂಡಲ್‌ವುಡ್‌ ನಟರು ಭಿನ್ನ-ಭಿನ್ನ ಪಾತ್ರಗಳಲ್ಲಿ ಅಭಿನಯಿಸಿಸಿ ಸೈ ಎನಿಸಿಕೊಂಡಿದ್ದಾರೆ. ಈ ಪೈಕಿ ಕೆಲವರು ತೆರೆ ಮೇಲೆ ಮುಗ್ಧ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಅಂತಹ ನಟರ ಪಟ್ಟಿ ಇಲ್ಲಿದೆ.


cover image
ದರ್ಶನ್
1

ಆರಂಭದ ದಿನಗಳಲ್ಲಿ ರೌಡಿಸಂ ಹಾಗೂ ಲವರ್ ಬಾಯ್ ಪಾತ್ರಗಳಲ್ಲಿ ಮಿಂಚಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್, ನನ್ನ ಪ್ರೀತಿಯ ರಾಮು ಸಿನಿಮಾದಲ್ಲಿ ಮುಗ್ಧ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಮಲಯಾಳಂ ರಿಮೇಕ್ ಆಗಿದ್ದ ಈ ಚಿತ್ರದಲ್ಲಿ ಕುರುಡನಾಗಿ ಬಹಳ ಅದ್ಭುತವಾಗಿ ನಟಿಸಿದ್ದರು. ಈ ಚಿತ್ರ ಬಾಕ್ಸಾಫೀಸ್​​ನಲ್ಲಿ ಸದ್ದು ಮಾಡದಿದ್ರೂ ದರ್ಶನ್ ಅಭಿನಯಕ್ಕೆ ಎಲ್ಲರಿಂದ ಪ್ರಶಂಸೆ ದೊರೆತ್ತಿತ್ತು.

ಸುದೀಪ್
2

ವೃತ್ತಿ ಜೀವನದ ಆರಂಭದಲ್ಲಿಯೇ 'ಮಾಸ್ ಹೀರೋ' ಇಮೇಜಿಗೆ ವಿರುದ್ಧವಾದ ಸಿನಿಮಾಗಳಲ್ಲಿ ನಟಿಸಿದ್ದ ಕಿಚ್ಚ ಸುದೀಪ್, 'ಸ್ವಾತಿ ಮುತ್ತು' ಸಿನಿಮಾದಲ್ಲಿ ಅರೆಬುದ್ಧಿಮಾಂದ್ಯನ ಪಾತ್ರದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ರೌಡಿಸಂ ಕತೆಗಳೇ ರಾರಾಜಿಸುತ್ತಿದ್ದ ಆ ಕಾಲದಲ್ಲಿ ಎಲ್ಲರೂ ನಡೆಯುವ ಹಾದಿ ತನ್ನದಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದರು. ಈ ಸಿನಿಮಾ ಆರ್ಥಿಕವಾಗಿ ದೊಡ್ಡದಾಗಿ ಕೈ ಹಿಡಿಯದಿದ್ದರೂ ಸುದೀಪ್ ಎಂಥಹ ವರ್ಸಟೈಲ್ ನಟ ಎಂಬುದನ್ನು ಸಾಬೀತುಪಡಿಸಿತ್ತು. ಈ ಸಿನಿಮಾ ಮೂಲಕ ಸುದೀಪ್ ಕನ್ನಡದ ಕಮಲ್ ಹಾಸನ್ ಎನಿಸಿಕೊಂಡರು.

ಶಿವ ರಾಜ್‌ಕುಮಾರ್
3

ತಮ್ಮ ಸಿನಿಜೀವನದಲ್ಲಿ 125ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿವಿಧ ಪಾತ್ರಗಳಿಗೆ ಜೀವ ತುಂಬಿರುವ  ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್,  'ಕವಚ' ಚಿತ್ರದಲ್ಲಿ ವಿಶಿಷ್ಟ ಹಾಗೂ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮಲೆಯಾಳಂನ 'ಒಪ್ಪಂ' ಸಿನಿಮಾದ ರಿಮೇಕಾಗಿದ್ದ ಈ ಚಿತ್ರ, ಅಂಧನಾಗಿ ಶಿವಣ್ಣನ ನಟನಾ ಸಾಮರ್ಥ್ಯವನ್ನು ತೋರಿಸಿತ್ತು.  ಹ್ಯಾಟ್ರಿಕ್ ಹೀರೋ ಲಾಂಗು, ಮಚ್ಚು, ಲವ್ವು ಎಲ್ಲದರಿಂದ ಹೊರಬಂದು ಈ ಸಿನಿಮಾದಲ್ಲಿ ಕುರುಡನಾಗಿ ಕಾಣಿಸಿಕೊಂಡಿದ್ದರು.   
 

ಉಪೇಂದ್ರ
4

ವಿಭಿನ್ನ ಕತೆ, ವಿಶಿಷ್ಟ ಸಂಭಾಷಣೆ, ವಿಶೇಷ ಹಾಡುಗಳಿಂದ ಪ್ರೇಕ್ಷಕರನ್ನು ರಂಜಿಸುವ ಉಪೇಂದ್ರ ಅವರು 'ಅನಾಥರು' ಸಿನಿಮಾದಲ್ಲಿ ಹುಚ್ಚ ರುದ್ರನ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿನ ಅವರ ಅಭಿನಯಕ್ಕೆ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದು ತಮಿಳಿನ ರಿಮೇಕ್ ಆಗಿದ್ದು, ಮೂಲ ಚಿತ್ರದಲ್ಲಿ ಚಿಯಾನ್ ವಿಕ್ರಂ ಹಾಗೂ ಸೂರ್ಯ ಮಾಡಿದ್ದ ಪಾತ್ರಗಳನ್ನು ಕನ್ನಡದಲ್ಲಿ ಉಪೇಂದ್ರ ಹಾಗೂ ದರ್ಶನ್ ನಿಭಾಯಿಸಿದ್ದರು. ಇಬ್ಬರ ಅಭಿನಯಕ್ಕೆ ಕನ್ನಡ ಸಿನಿರಸಿಕರು ಫಿದಾ ಆಗಿ ಹೋಗಿದ್ದರು. ರುದ್ರ ಆಗಿ ಉಪೇಂದ್ರ, ಸತ್ಯ ಪ್ರಕಾಶ್ ಆಗಿ ದರ್ಶನ್ ಇಬ್ಬರು ಪೈಪೋಟಿಗೆ ಬಿದ್ದು ನಟಿಸಿದ್ದರು.

ರಮೇಶ್ ಅರವಿಂದ್
5

ಕನ್ನಡ ಚಿತ್ರರಂಗ ಎವರ್‌ಗ್ರೀನ್ ಹೀರೋ ರಮೇಶ್. ಕನ್ನಡ ಚಿತ್ರರಂಗದಲ್ಲಿ ತ್ಯಾಗರಾಜ ಅಂತಲೇ ಜನಪ್ರಿಯರಾಗಿರುವ ಇವರು, 'ಪುಷ್ಪಕ ವಿಮಾನ' ಸಿನಿಮಾದಲ್ಲಿ ಬುದ್ಧಿಮಾಂಧ್ಯ ಅಪ್ಪನ ಪಾತ್ರದಲ್ಲಿ ಬಹಳ ಅದ್ಭುತವಾಗಿ ನಟಿಸುವ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೊಂದು ಅಪ್ಪಟ ತಂದೆ-ಮಗಳ ಬಾಂಧವ್ಯದ ಕಥೆಯಾಗಿದ್ದು, ಸಿನಿಮಾದ ಭಾವನಾತ್ಮಕ ದೃಶ್ಯಗಳು ಕಣ್ಣಲ್ಲಿ ನೀರು ತರಿಸುವಂತಿದ್ದವು. ಚಿತ್ರದಲ್ಲಿ ರಮೇಶ್ ಮುಗ್ಧ ಅಪ್ಪನ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದರು.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+