X
ಹೋಮ್ ಚಲನಚಿತ್ರಗಳ ಒಳನೋಟ

ಶ್ರೀನಗರ ಕಿಟ್ಟಿ ನಟನೆಯ 'ಗೌಳಿ' ಸಿನಿಮಾದ ಪ್ರಮುಖ ಅಂಶಗಳಿವು!

Author Sowmya Bairappa | Published: Friday, February 24, 2023, 07:05 PM [IST]

ನಟ ಶ್ರೀನಗರ ಕಿಟ್ಟಿ ಆರು ವರ್ಷಗಳ ಬಳಿಕ 'ಗೌಳಿ' ಸಿನಿಮಾ ಮೂಲಕ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಸತತ ಸೋಲಿನ ಬಳಿಕ ಶ್ರೀನಗರ ಕಿಟ್ಟಿ ಚಿತ್ರರಂಗಕ್ಕೆ ಮರಳಿದ್ದಾರೆ. ಸೂರ ನಿರ್ದೇಶನದ 'ಗೌಳಿ' ಚಿತ್ರವನ್ನು ರಘು ಸಿಂಗಂ ನಿರ್ಮಾಣ ಮಾಡಿದ್ದಾರೆ. ಪಾವನಾ ಗೌಡ ನಾಯಕಿಯಾಗಿ ನಟಿಸಿದ್ದು ರಂಗಾಯಣ ರಘು, ಶರತ್ ಲೋಹಿತಾಶ್ವ, ಕಾಕ್ರೋಚ್ ಸುಧಿ, ಯಶ್ ಶೆಟ್ಟಿ, ಗೋಪಾಲ ದೇಶಪಾಂಡೆ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. 'ಗೌಳಿ' ಸಿನಿಮಾ ಮೇಕಿಂಗ್, ಬಿಜಿಎಂ ಎಲ್ಲವೂ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಒಂದೊಳ್ಳೆ ಬ್ರೇಕ್‌ಗಾಗಿ ಕಾಯುತ್ತಿರುವ ಶ್ರೀನಗರ ಕಿಟ್ಟಿ ಈ ಚಿತ್ರದ ಮೇಲೆ ಬಹಳ ನಂಬಿಕೆ ಇಟ್ಟುಕೊಂಡಿದ್ದಾರೆ. ಸದ್ಯ ಈ ಸಿನಿಮಾ ಬಿಡುಗಡೆಯಾಗಿದ್ದು, ಚಿತ್ರದ ಕಥೆ ಸೇರಿದಂತೆ ಪ್ರಮುಖ ಅಂಶಗಳು ಇಲ್ಲಿವೆ.


cover image
1

ಗೌಳಿ (ಶ್ರೀನಗರ ಕಿಟ್ಟಿ), ಗಿರಿಜಾ (ಪಾವನಾ ಗೌಡ) ಮತ್ತು ದಂಪತಿಯ ಮಗಳಾದ ಪುಟ್ಟವ್ವ ಒಂದು ಹಳ್ಳಿಯಲ್ಲಿ ಕುರಿ, ಹಸು ಸಾಕಿಕೊಂಡು ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿರುತ್ತಾರೆ. ಅದು ತುಂಬಾ ಹಿಂದುಳಿದ ಹಳ್ಳಿಯಾದ್ದರಿಂದ ನಾಯಕಿಯೇ ಅಲ್ಲಿನ ಮಕ್ಕಳಿಗೆ ಕೆಲ ಸಮಯ ಪಾಠ ಹೇಳಿಕೊಡುತ್ತಿರುತ್ತಾರೆ. ಅಲ್ಲಿನ ಪೊಲೀಸ್ (ಶರತ್ ಲೋಹಿತಾಶ್ವ) ಕ್ರೂರಿಯಾಗಿರುತ್ತಾನೆ. ಖಳನಾಯಕನ ಕೋರಿಕೆಯ ಮೇಲೆ ಅದೇ ಊರಿನ ಬಾಲಕಿಯೊಬ್ಬಳನ್ನು ಅಪರಿಸಲು ಒಪ್ಪಿಕೊಳ್ಳುತ್ತಾನೆ. ಇದಕ್ಕೆ ಅದೇ ಊರಿನ ಮೂವರು ಕಿಡಿಗೇಡಿಗಳ ಸಹಾಯವನ್ನು ಪಡೆಯುತ್ತಾನೆ. ನಾಯಕಿಯೂ ಪಾಠ ಹೇಳಿಕೊಡುವ ಮಕ್ಕಳ ಗುಂಪಿನ ಓರ್ವ ಬಾಲಕಿಯ ಅಪಹಣವೂ ಆಗುತ್ತದೆ.  ಬಾಲಕಿಯ ಅಪಹರಣವಾದ ಕಾರಣ ಪೊಲೀಸ್ ನಾಯಕಿಯ ವಿಚಾರಣೆ ಮಾಡುವ ನೆಪದಲ್ಲಿ ಆಕೆಯ ಮೇಲೆ ತನ್ನ ವಕ್ರಧೃಷ್ಟಿ ಬಿರುತ್ತಾನೆ. ಇದು ಪೊಲೀಸ್ ಮತ್ತು ಗೌಳಿಯ ನಡುವಿನ ಕಲಹಕ್ಕೆ ಕಾರಣವಾಗುತ್ತೆ.  ಹೇಗೆ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವ ಗೌಳಿ ಕುಟುಂಬ ಆ ಸಮಸ್ಯೆ ಹೇಗೆ ಹೊರಬರುತ್ತೆ ಎನ್ನುವುದೇ ಚಿತ್ರದ ಕತೆ.  

 

2

ಗೌಳಿ ಚಿತ್ರ ಸಂಪೂರ್ಣವಾಗಿ ಹಳ್ಳಿ ಹಾಗೂ ಕಾಡಿನಲ್ಲಿಯೇ ನಡೆಯಲಿದೆ. ಚಿತ್ರದ ಹಲವು ದೃಶ್ಯಗಳಲ್ಲಿ ಪಕ್ಕ ಹಳ್ಳಿ ಜನರನ್ನೇ ಉಪಯೋಗಿಸಿಕೊಳ್ಳಲಾಗಿದೆ. ಇದರ ಜೊತೆಗೆ ಶ್ರೀನಗರ ಕಿಟ್ಟಿ, ಪಾವನ ಹಾಗೂ ಕಿಟ್ಟಿಯ ಚಿಕ್ಕಪ್ಪ ರಂಗಾಯಣ ರಘು ಪಕ್ಕಾ ಹಳ್ಳಿ ಜನರ ಹಾಗೆಯೇ ನಟಿಸಿರುವುದು ಗೌಳಿ ಸಿನಿಮಾದ ಪ್ಲಸ್ ಪಾಯಿಂಟ್. ಛಾಯಾಗ್ರಹಣ ಕೂಡ ಈ ಸಿನಿಮಾದ ಪ್ಲಸ್ ಪಾಯಿಂಟ್ ಆಗಿದೆ. ನಟ ಶ್ರೀನಗರ ಕಿಟ್ಟಿ ಇಲ್ಲಿಯವರೆಗೂ ಕಾಣಿಸಿಕೊಳ್ಳದೆ ಇರುವಷ್ಟು ರೌದ್ರಾವತಾರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಕ್ರೂರತ್ವವಿರುವ ಪೊಲೀಸ್ ಪಾತ್ರದಲ್ಲಿ ಶರತ್ ಲೋಹಿತಾಶ್ವ ನಟನೆ ಕೂಡ ಮೆಚ್ಚುವಂತಹದ್ದು.  

3

ಗೌಳಿ ಸಿನಿಮಾದಲ್ಲಿ ನಟ  ಸಖತ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾಗಾಗಿ ಉದ್ದನೆಯ ಗಡ್ಡ ಹಾಗೂ ಕೂದಲು ಬಿಟ್ಟಿದ್ದರು. ಗೌಳಿಯಲ್ಲಿ ಹಿಂದೆಂದೂ ಕಾಣಿಸಿಕೊಳ್ಳದ ಪಾತ್ರದಲ್ಲಿ  ಕಾಣಿಸಿಕೊಂಡಿದ್ದಾರೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಶ್ರೀನಗರ ಕಿಟ್ಟಿ 'ಗೌಳಿ' ಮೂಲಕ ಗೆಲ್ಲುವ ಭರವಸೆಯಲ್ಲಿದ್ದು, ಇದು ತಮಗೆ ಪರ್ಫೆಕ್ಟ್ ಕಂಬ್ಯಾಕ್ ಎಂದುಕೊಂಡಿದ್ದಾರೆ.  

4

ರಾಜ್ಯದ ಉತ್ತರಕನ್ನಡ, ಧಾರವಾಡ, ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಗೌಳಿ ಸಮುದಾಯದ ಜನ ವಾಸಿಸುತ್ತಾರೆ. ಗೌಳಿ ಜನನಾಂಗದ ಕಷ್ಟ, ಆ ಜನಾಂಗಕ್ಕೆ ಕಂಟಕವಾಗುವ ಮಾಫಿಯಾ ಎಲ್ಲವನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಚಿತ್ರದಲ್ಲಿ ನಾಯಕನಷ್ಟೇ ಎದುರಾಳಿ ಪಾತ್ರಗಳನ್ನು ಕಟ್ಟಿಕೊಡಲಾಗಿದೆ. ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಶರತ್‌ ಲೋಹಿತಾಶ್ವ, ಕಾಕ್ರೋಚ್ ಸುಧಿ ಸಖತ್ ಆಗಿ ಅಭಿನಯಿಸಿದ್ದಾರೆ.  

5

ಹಲವೆಡೆ ಗೌಳಿ ಚಿತ್ರ ಒಳ್ಳೆಯ ಓಪನಿಂಗ್ ಪಡೆದುಕೊಂಡಿದ್ದರೆ, ಇನ್ನೂ ಕೆಲವು ಕಡೆ ಸಾಧಾರಣ ಓಪನಿಂಗ್ ಪಡೆದುಕೊಂಡಿದೆ. ಚಿತ್ರ ವೀಕ್ಷಿಸಿ ಚಿತ್ರ ಹೇಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸುತ್ತಿರುವ ಸಿನಿರಸಿಕರ ಸಂಖ್ಯೆ ಬೆರಳಿಕೆಯಷ್ಟೇ ಇದ್ದು, ಚಿತ್ರಮಂದಿರದಿಂದ ಹೊರಬಂದು ಯುಟ್ಯೂಬ್ ಚಾನೆಲ್‌ಗಳ ಕ್ಯಾಮೆರಾ ಎದುರಿಸಿದ ಸಿನಿ ರಸಿಕರು ಚಿತ್ರ ಚೆನ್ನಾಗಿದೆ, ಒಮ್ಮೆ ನೋಡಬಹುದು ಎಂದು ಹೇಳುತ್ತಿದ್ದಾರೆ.

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+