X
ಹೋಮ್ ಚಲನಚಿತ್ರಗಳ ಒಳನೋಟ

ಸೂಪರ್ ಹಿಟ್ ಸಿನಿಮಾ ಕೊಟ್ಟು ನಟನೆಯಿಂದ ದೂರವಾದ ಸ್ಯಾಂಡಲ್‌ವುಡ್ ನಟರಿವರು!

Author Sowmya Bairappa | Published: Monday, May 27, 2024, 11:06 AM [IST]

ಕನ್ನಡ ಚಿತ್ರರಂಗದಲ್ಲಿ ಮೊದಲ ಸಿನಿಮಾ ಬಳಿಕ ಒಳ್ಳೆಯ ಆಫರ್ ಪಡೆಯಬೇಕೆಂದರೆ ಆ ನಟ ಉತ್ತಮವಾಗಿ ನಟಿಸುತ್ತಾನೆ ಎಂಬ ನಂಬಿಕೆ ನಿರ್ದೇಶಕರಲ್ಲಿ ಇರಬೇಕು. ಆಗ ಮಾತ್ರ ಮುಂದುವರೆಯಲು ಸಾಧ್ಯ. ಒಂದು ಸಿನಿಮಾಗೆ ಕಥೆ ಬಹಳ ಮುಖ್ಯವಾಗಿರುತ್ತದೆ. ಕಥೆ ಚೆನ್ನಾಗಿದ್ದರೆ ಪ್ರೇಕ್ಷಕರು ಕೈ ಹಿಡಿಯುತ್ತಾರೆ. ಹೀಗಾಗಿ, ಕಥೆ ಆಯ್ದುಕೊಳ್ಳುವಾಗ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಕನ್ನಡ ಚಿತ್ರರಂಗದಲ್ಲಿ ಹಲವಾರು ಸವಾಲುಗಳನ್ನು ಎದುರಿಸಿ ಅವಕಾಶ ಗಿಟ್ಟಿಸಿಕೊಂಡ ಅನೇಕ ನಟ-ನಟಿಯರು ನಂತರದ ದಿನಗಳಲ್ಲಿ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಎಡವಿ ಸೋತಿದ್ದಾರೆ. ಇಲ್ಲಿ ಸೂಪರ್ ಹಿಟ್ ಸಿನಿಮಾ ಕೊಟ್ಟು ನಟನೆಯಿಂದ ದೂರವಾದ ಸ್ಯಾಂಡಲ್‌ವುಡ್ ನಟರ ಪಟ್ಟಿಯನ್ನು ನೀಡಲಾಗಿದೆ.


cover image
ತರುಣ್ ಚಂದ್ರ

ಬೆಂಗಳೂರಿನಲ್ಲಿ ಜನಿಸಿದ ತರುಣ್ ಚಂದ್ರ ಮುಂಬೈನ ಅಂಧೇರಿಯಲ್ಲಿರುವ ಪ್ರಸಿದ್ಧ `ಕಿಶೋರ್ ನಮಿತ್ ಕಪೂರ್ ಆಕ್ಟಿಂಗ್ ಇನಸ್ಟಿಟ್ಯೂಟ್‌ನಲ್ಲಿ ಮೂರು ತಿಂಗಳ ನಟನಾ ತರಬೇತಿ ಪಡೆದು 2003ರಲ್ಲಿತೆರೆಕಂಡ `ಖುಷಿ' ಚಿತ್ರದಿಂದ ಕನ್ನಡ ಸಿನಿರಂಗ ಪ್ರವೇಶಿಸಿದರು. ನಂತರ ಗೆಳೆಯ ಸಿನಿಮಾದಲ್ಲಿ ನಟಿಸುವ ಮೂಲಕ ಅಭಿಮಾನಿಗಳ ಮನಗೆದ್ದರು. ಖುಷಿ ಹಾಗೂ ಗೆಳೆಯ ಸಿನಿಮಾ ಬಾಕ್ಸಾಫೀಸ್ ಹಿಟ್ ಕೂಡ ಆಗಿದ್ದವು. ಬಳಿಕ ಲವ್ ಗುರು, ಪರಿಚಯ ಹಾಗೂ ಹನಿಹನಿ ಸಿನಿಮಾಗಳ ಮೂಲಕ ಯುವತಿಯರ ಮನಗೆದ್ದರು. ಆದರೆ, ಈ ಸಿನಿಮಾಗಳು ಅಷ್ಟೇನೂ ಹಿಟ್ ಆಗಲಿಲ್ಲ. ನಂತರ ದಿನಗಳಲ್ಲಿ ಕೆಲ ಸಿನಿಮಾಗಳಲ್ಲಿ ನಟಿಸಿದರಾದರೂ ಯಶಸ್ವಿಯಾಗಲಿಲ್ಲ. ೨೦೧೫ರ ನಂತರ ಅವರು ಚಿತ್ರರಂಗದಲ್ಲಿ ಆಕ್ಟಿವ್ ಆಗಿಲ್ಲ. ಯಾವ ಚಿತ್ರವನ್ನೂ ಮಾಡ್ತಿಲ್ಲ. 


ನಾಗ ಕಿರಣ್

ನಟ ನಾಗ ಕಿರಣ್ ಅವರು ಮಸ್ತ್ ಮಜಾ ಮಾಡಿ, ವಸಂತ ಕಾಲ, ಮಳೆ ಬರಲಿ ಮಂಜು ಇರಲಿ ಸೇರಿದಂತೆ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು. ಮಹಾನದಿ ಎಂಬ ಸೀರಿಯಲ್‌ನಲ್ಲಿ ಕೂಡ ಬಣ್ಣ ಹಚ್ಚಿದ್ದರು. 2018ರ ಬಳಿಕ ಅವರು ಯಾವುದೇ ಸಿನಿಮಾ, ಸೀರಿಯಲ್‌ನಲ್ಲಿಯೂ ನಟಿಸುತ್ತಿಲ್ಲ. 

ನಾಗ ಕಿರಣ್

ನಟ ನಾಗ ಕಿರಣ್ ಅವರು ಮಸ್ತ್ ಮಜಾ ಮಾಡಿ, ವಸಂತ ಕಾಲ, ಮಳೆ ಬರಲಿ ಮಂಜು ಇರಲಿ ಸೇರಿದಂತೆ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು. ಮಹಾನದಿ ಎಂಬ ಸೀರಿಯಲ್‌ನಲ್ಲಿ ಕೂಡ ಬಣ್ಣ ಹಚ್ಚಿದ್ದರು. 2018ರ ಬಳಿಕ ಅವರು ಯಾವುದೇ ಸಿನಿಮಾ, ಸೀರಿಯಲ್‌ನಲ್ಲಿಯೂ ನಟಿಸುತ್ತಿಲ್ಲ. 

ಸಮೀರ್ ದಟ್ಟಣಿ -[ಧ್ಯಾನ್]

ಸೂಪರ್ ಹಿಟ್ ಸಿನಿಮಾ ಕೊಟ್ಟು ನಟನೆಯಿಂದ ದೂರವಾದ ನಟರ ಪೈಕಿ ಸಮೀರ್ ದತ್ತನಿ ಅಕಾ ಧ್ಯಾನ್ ಕೂಡ ಒಬ್ಬರು. ಗುಜರಾತಿ ಕುಟುಂಬದಲ್ಲಿ ಜನಿಸಿದ ಧ್ಯಾನ್, ಕನ್ನಡ, ಹಿಂದಿ ಹಾಗೂ ತಮಿಳು ಚಿತ್ರರಂಗದಲ್ಲಿ ನಟಿಸಿದ್ದಾರೆ. ಧ್ಯಾನ್ ರಾಜ್ ಶ್ರೀ ಪ್ರೊಡಕ್ಷನ್ನ ಉಫ್ತ್ ಕ್ಯಾ ಜಾದೂ ಮೊಹಬ್ಬತ್ ಹೇ ಎಂಬ ಹಿಂದಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ ನನ್ನ ಪ್ರೀತಿಯ ಹುಡುಗಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಈ ಸಿನಿಮಾಗೆ ಬೆಸ್ಟ್ ಡೆಬ್ಯುಟ್ ಅವಾರ್ಡ್ ಕೂಡ ಪಡೆದರು. ಬಳಿಕ ಮೊನಾಲಿಸಾ, ಜೂಜಾಟ ಹಾಗೂ ಅಮೃತಧಾರೆ ಸಿನಿಮಾ ಮೂಲಕ ಕನ್ನಡಿಗರ ಮನಗೆದ್ದರು. ಅಮೃತಧಾರೆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಸಿನಿಮಾಗಳ ಮೂಲಕ ಧ್ಯಾನ್ ವಿಶೇಷವಾಗಿ ಮಾಹಿಳಾ ಅಭಿಮಾನಿಗಳ ಮನ ಗೆದ್ದಿದ್ದರು.  ೨೦೧೫ರಲ್ಲಿ ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ, ಲವ್ ಯೂ ಆಲಿಯಾ ಸಿನಿಮಾಗಳಲ್ಲಿ ಅತಿಥಿ ಪಾತ್ರ ಮಾಡಿದ್ದರು. ಆ ಬಳಿಕ ಯಾವ ಭಾಷೆಯ ಸಿನಿಮಾವನ್ನೂ ಕೂಡ ಮಾಡಿಲ್ಲ.

ಶ್ರೀಕಾಂತ್

ಮನದ ಮಳೆಯಲ್ಲಿ , ಸೆಂಟ್ರಲ್ ಜೈಲ್ , ಒಲವೇ ಮುಂದಾರ, ಮಾವಳ್ಳಿ, ಬರ್ತ ಸೇರಿದಂತೆ ಕೆಲ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದ ನಟ ಶ್ರೀಕಾಂತ್ ಅಲಿಯಾಸ್ ಶ್ರೀಕಿ, ಸದ್ಯ ನಟನೆಯಿಂದ ದೂರ ಉಳಿದಿದ್ದಾರೆ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಅವರು, ಕೃಷಿಯಲ್ಲಿ ಖುಷಿ ಕಂಡುಕೊಂಡಿರುವುದಾಗಿ ಹೇಳಿದ್ದಾರೆ. 

ಸೌರವ್

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಗಜ, ನವಗ್ರಹ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬಣ್ಣಹಚ್ಚಿದ್ದ ನಟ ಸೌರವ್, ಸದ್ಯ ಯಾವುದೇ ಸಿನಿಮಾಗಳನ್ನು ಮಾಡುತ್ತಲ್ಲ. ಅವರೀಗ ಚಿತ್ರರಂಗದಿಂದ ದೂರ ಉಳಿದಿದ್ದಾರೆ.

ಮಯೂರ್ ಪಟೇಲ್

ಮಯೂರ್ ಪಟೇಲ್ ನಾಯಕನಾಗಿ ನಟಿಸಿದ ಮೊದಲ ಸಿನಿಮಾ ಮಣಿ. ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ನಂತರ ಲವ್ ಸ್ಟೋರಿ ಸಿನಿಮಾದಲ್ಲಿ ನಟಿಸಿದರು. ನಂತರ ಬಂದ ಮಯೂರ್ ಪಟೇಲ್ ಸಿನಿಮಾಗಳು ಅಷ್ಟೇನೂ ಅಷ್ಟಕಷ್ಟೇ. ಬಳಿಕ  2014ರಲ್ಲಿ ಮಯೂರ್ ಬಿಗ್ ಬಾಸ್ ಕನ್ನಡ ಸೀಸನ್ 2ರಲ್ಲಿ ಭಾವಹಿಸಿದ್ದರು. ಹಲವು ವರ್ಷಗಳ ಬಳಿಕ ೨೦೨೦ರಲ್ಲಿ ರಾಜೀವ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದರು. ಆದರೆ, ಈ ಸಿನಿಮಾ ಕೂಡ ಯಶಸ್ವಿಯಾಗಲಿಲ್ಲ.  ಸದ್ಯ ಅವರು ಯಾವುದೇ ಸಿನಿಮಾ ಮಾಡ್ತಿಲ್ಲ. 



Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+