X
ಹೋಮ್ ಚಲನಚಿತ್ರಗಳ ಒಳನೋಟ

ತೆರೆಮೇಲೆ ಸಾವನ್ನಪ್ಪಿದ್ರೂ ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ಉಳಿದ ಕನ್ನಡ ಸಿನಿಮಾ ಪಾತ್ರಗಳಿವು!

Author Sowmya Bairappa | Published: Sunday, October 13, 2024, 11:27 AM [IST]

ಕೆಲ ಕಲಾವಿದರಿಗೆ ಸಿನಿಮಾ ಬದುಕಿನ ಒಂದು ಭಾಗವಾಗಿದ್ರೆ, ಇನ್ನು ಕೆಲವರಿಗೆ ಸಿನಿಮಾನೇ ಬದುಕು. ಜೀವನದಲ್ಲಿ ಉತ್ಸಾಹ ಕಳೆದಕೊಂಡ ಅದೆಷ್ಟೋ ಮಂದಿಗೆ ಕೆಲ ಸಿನಿಮಾಗಳ ಪಾತ್ರಗಳು ಸ್ಫೂರ್ತಿಯಾಗಿರುವ ಉದಾಹರಣೆಗಳಿವೆ. ಸಿನಿಮಾಗಳಲ್ಲಿನ ಸ್ಫೂರ್ತಿದಾಯಕ ಪಾತ್ರಗಳಂತೆ ನಾವು ಹಾಗೆಯೇ ಎಲ್ಲವನ್ನು ಎದುರಿಸಬೇಕು ಅಂತ ಅಂದುಕೊಳ್ಳುವವರಿದ್ದಾರೆ. ಅದೇ ರೀತಿ ಕೆಲ ಸಿನಿಮಾಗಳು ಸೋತವರಿಗೆ ಧೈರ್ಯ ತುಂಬುತ್ತವೆ. ಇಲ್ಲಿ ತೆರೆಮೇಲೆ ಸಾವನ್ನಪ್ಪಿದ್ರೂ ಕನ್ನಡಿಗರ ಮನದಲ್ಲಿ ಉಳಿದ ಸಿನಿಮಾ ಪಾತ್ರಗಳಿವು.


cover image
ಕಸ್ತೂರಿ ನಿವಾಸ

ಡಾ.ರಾಜ್‌ಕುಮಾರ್ ಅಭಿನಯದ 'ಕಸ್ತೂರಿ ನಿವಾಸ' ಸಿನಿಮಾವನ್ನು ಕನ್ನಡಿಗರು ಮರೆಯಲು ಸಾಧ್ಯವಿಲ್ಲ. ಈ ಚಿತ್ರದಲ್ಲಿ ಅಣ್ಣಾವ್ರ ಪಾತ್ರ ಮಹಾಭಾರತದ ಕರ್ಣನಿಗೆ ಸವಾಲು ಎಸೆಯುವಂತಹದ್ದು. ರಾಜ್ ಕೊಡುಗೈ ದಾನಿ ರವಿವರ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ತನ್ನ ಸ್ಥಿತಿ ಏನೇ ಇರಲಿ, ಸಹಾಯ ಬೇಡಿ ಬಂದವರನ್ನು ಎಂದು ಬರಿಗೈಲಿ ಕಳಿಸದ ರಾಜ್ ಪಾತ್ರ ಸಿನಿಪ್ರೇಮಿಗಳ ಮನಸ್ಸು ಗೆದ್ದಿತ್ತು. ಈ ಚಿತ್ರದಲ್ಲಿನ ಅಣ್ಣಾವ್ರ ಅಗಲಿಗೆ ಕಂಡು ಅದೆಷ್ಟೋ ಜನ ಕಣ್ಣೀರು ಹಾಕಿದ್ದರು. ಈ ಸಿನಿಮಾದಲ್ಲಿ ರಾಜ್‌ಕುಮಾರ್ ಪಾತ್ರಕ್ಕೆ ಎಂದಿಗೂ ಸಾವಿಲ್ಲ. 


ನಾಗರಹಾವು

ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ನಟನೆಯ ನಾಗರಹಾವು ಸಿನಿಮಾದ 'ರಾಮಾಚಾರಿ' ಪಾತ್ರವೂ ಇದೇ ಸಾಲಿಗೆ ಸೇರಿರುತ್ತದೆ. ಚಿತ್ರದುರ್ಗ ಕೋಟೆ ಜನಪ್ರಿಯವಾಗಲು ಈ ಸಿನಿಮಾ ಕೂಡ ಕಾರಣ ಅಂದರೆ ತಪ್ಪಾಗಲ್ಲ. ಚಿತ್ರದಲ್ಲಿನ ಚಾಮಯ್ಯ ಮೇಸ್ಟ್ರು ಹಾಗೂ ರಾಮಾಚಾರಿಯ ಗುರು-ಶಿಷ್ಯ ಸಂಬಂಧ ಇಂದಿಗೂ ಅದೆಷ್ಟೋ ಜನರಿಗೆ ಸ್ಫೂರ್ತಿ. ಈ ಸಿನಿಮಾ ನೋಡಿದ ಹಲವರಿಗೆ ಕೊನೆಯಲ್ಲಿ ನಾಯಕ ತನ್ನ ಪ್ರೇಯಸಿಯೊಂದಿಗೆ ಬೆಟ್ಟದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಅರಗಿಸಿಕೊಳ್ಳುವುದಕ್ಕೆ ಕಷ್ಟವಾಗಿತ್ತು. 

ದುನಿಯಾ

ಕನ್ನಡ ಚಿತ್ರರಂಗ ಖ್ಯಾತ ನಿರ್ದೇಶಕ ಸುಕ್ಕಾ ಸೂರಿ ನಿರ್ದೇಶನದ ಚೊಚ್ಚಲ ಸಿನಿಮಾ 'ದುನಿಯಾ'. ಈ ಸಿನಿಮಾದಿಂದ ಹಲವು ಕಲಾವಿದರ ಸಿನಿಕರಿಯರ್‌ಗೆ ಬ್ರೇಕ್ ಸಿಕ್ಕಿತ್ತು.  'ಯಾರ ಘೋರಿ ಮೇಲೂ ಯಾರು ಯಾಕೆ ಸತ್ತರು ಅಂತ ಬರೆಯಲ್ಲ' ಎಂಬ ಟ್ಯಾಗ್‌ಲೈನ್‌ನೊಂದಿಗೆ ತೆರೆಕಂಡ ಈ ಚಿತ್ರ ಅನಾಥ ಪ್ರೇಮಿಗಳಿಬ್ಬರು  ಪ್ರೀತಿ ಮತ್ತು ಭೂಗತ ಜಗತ್ತಿನ ಛಾಯೆಯಲ್ಲಿ ಕಮರಿ ಹೋಗುವ ಕಥೆಯನ್ನು ಕಟ್ಟಿ ಕೊಟ್ಟಿತ್ತು. ಚಿತ್ರದಲ್ಲಿ ಒಂದು ಸುಂದರವಾದ ಜೀವನ ಕಟ್ಟಿಕೊಳ್ಳಬೇಕು ಅಂತಿದ್ದ್ ಶಿವಲಿಂಗು ಹಾಗೂ ಪೂರ್ಣಿ ಕೊನೆಯಲ್ಲಿ ಸಾಯಬಾರದಿತ್ತು ಅಂತ ಹಲವರು ಅಂಅದುಕೊಂಡಿದ್ದರು. ದುನಿಯಾ ಸಿನಿಮಾದಲ್ಲಿನ ವಿಜಯ್ ಪಾತ್ರವನ್ನು ಕೂಡ ಎಂದೂ ಮರೆಯಲು ಸಾಧ್ಯವಿಲ್ಲ. 


ತಾಜ್ ಮಹಲ್

ಆರ್ ಚಂದ್ರು ನಿರ್ದೇಶನದ ಮೊದಲ ಸಿನಿಮಾ 'ತಾಜ್‌ಮಹಲ್'. ಅಜಯ್ ರಾವ್ ಸಿನಿಕರಿಯರ್‌ನಲ್ಲೇ ಬಿಗ್ಗೆಸ್ಟ್ ಹಿಟ್ ಸಿನಿಮಾ. ಚಿತ್ರದಲ್ಲಿ ಶಿಕ್ಷಣಕ್ಕಾಗಿ ಹಳ್ಳಿಯಿಂದ ಸಿಟಿಗೆ ಬರುವ  ಓರ್ವ ಹುಡುಗ, ಒಂದು ಹುಡುಗಿಯನ್ನ ಎಷ್ಟು ಪ್ರೀತಿಸುತ್ತಾನೆ. ಅದಕ್ಕಾಗಿ ಏನೆಲ್ಲಾ ಮಾಡ್ತಾನೆ ಎಂಬುದು ಇದರ ಸಾರಾಂಶ. ಸಿನಿಮಾದ ಕೊನೆಯಲ್ಲಿ ತನ್ನ ತಪ್ಪನ್ನು ಅರಿತು, ತಂದೆ-ತಾಯಿಯ ಬೆಲೆ ತಿಳಿದು ವಾಪಾಸ್ ತನ್ನ ಹಳ್ಲಿಗೆ ಬಂದು ಇನ್ನೇನು ಹೊಸಜೀವನ ಆರಂಭಿಸಬೇಕು ಅನ್ನುವಷ್ಟರಲ್ಲಿ ಲಾರಿಗೆ ಸಿಲುಕಿ ಸಾಯ್ತಾನೆ. ಈ ಸಿನಿಮಾ ನೋಡಿದ ಹಲವರು ಯಾರ ಜೀವನದಲ್ಲೂ ಈ ರೀತಿ ಆಗಬಾರದೆಂದು ಭಾಹುಕರಾಗಿದಂತೂ ಸತ್ಯ. 

 ಮಿಂಚಿನ ಓಟ

ಕನ್ನಡ ಚಿತ್ರರಂಗದ ದಂತಕಥೆ ಶಂಕರ್ ನಾಗ್ ನಿರ್ದೇಶನದ ಮೊದಲ ಚಿತ್ರ ಮಿಂಚಿನ ಓಟ. ಇದರಲ್ಲಿ ಅನಂತ್‌ ನಾಗ್ ಮತ್ತು ಶಂಕರ್‌ ನಾಗ್ ಸಹೋದರರು ಒಟ್ಟಿಗೆ ನಟಿಸಿದ್ದರು. ಸಿನಿಮಾದಲ್ಲಿ ಹಣದ ಆಸೆಗೆ ಬಿದ್ದು, ಕಾರು ಕಳ್ಳತನ ಮಾಡಿ, ಊರೂರು ಸುತ್ತಿ ಕೊನೆಗೆ ಪೊಲೀಸರ ಕೈಗೆ ಸಿಕ್ಕಿ ಬಿದ್ದು ಜೈಲು ಪಾಲಾಗುತ್ತಾರೆ. ಕೊನೆಗೆ ಅಲ್ಲಿಂದಲೂ ತಪ್ಪಿಸಿಕೊಳ್ಳು ಪ್ರಯತ್ನಿಸಿದಾಗ ಪೊಲೀಸರು ಅವರನ್ನು ಚೇಸ್ ಮಾಡಿ, ಶೂಟ್ ಮಾಡಿ ಇಬ್ಬರು ನಾಯಕರನ್ನು ಕೊಲ್ಲುತ್ತಾರೆ. ಈ ದೃಶ್ಯ ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸಿತ್ತು. ಮಿಂಚಿನ ಓಟ ಚಿತ್ರ ಬರೋಬ್ಬರಿ ಎಂಟು ರಾಜ್ಯ ಪ್ರಶಸ್ತಿ ಮತ್ತು ಫಿಲ್ಮಫೇರ್ ಪ್ರಶಸ್ತಿ ಪಡೆದಿದೆ. 


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+