ಕನ್ನಡ ಕಿರುತೆರೆಯ ಜನಪ್ರಿಯವಾದ ವೀಕೆಂಡ್ ವಿತ್ ರಮೇಶ್ಗೆ ಪ್ರತಿ ವಾರ ಒಬ್ಬರು ಇಲ್ಲವೇ ಇಬ್ಬರು ಸಾಧಕರನ್ನು ಕರೆಸಲಾಗುತ್ತಿದೆ. ಈಗಾಗಲೇ ಮೋಹಕತಾರೆ ರಮ್ಯಾ, ಪ್ರಭುದೇವ, ಢಾ.ಸಿ.ಎನ್.ಮಂಜುನಾಥ್, ದತ್ತಣ್ಣ, ಡಾಲಿ ಧನಂಜಯ್, ಅವಿನಾಶ್, ಮಂಡ್ಯ ರಮೇಶ್, ಡಾ. ಗುರುರಾಜ್ ಕರಜಗಿ, ಸಿಹಿಕಹಿ ಚಂದ್ರು, ನಟ ಪ್ರೇಮ್, ಚಿನ್ನಿ ಪ್ರಕಾಶ್, ಡಾ. ನಾ ಸೋಮೇಶ್ವರ್ ಆಗಮಿಸಿ ತಮ್ಮ ಜೀವನದ ಕುರಿತು ತಿಳಿಸಿದ್ದರು. ಈ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಓರ್ವ ಸಾಧಕರು ಆಗಮಿಸುತ್ತಿದ್ದಾರೆ. ಅವರು ಯಾರು ಎಂಬ ಮಾಹಿತಿ ಇಲ್ಲಿದೆ.