X
ಹೋಮ್ ಚಲನಚಿತ್ರಗಳ ಒಳನೋಟ

ಮುಂಗಾರು ಮಳೆ ಸಿನಿಮಾದ ಟಾಪ್‌ 10 ಹಿಟ್‌ ಡೈಲಾಗ್‌ಗಳ ಪಟ್ಟಿ ಇಲ್ಲಿವೆ: ನಿಮ್ಮ ಫೇವರಿಟ್ ಯಾವುದು?

Author Sowmya Bairappa | Updated: Thursday, August 3, 2023, 05:12 PM [IST]

2006ರಲ್ಲಿ ಬಿಡುಗಡೆಯಾದ ಯೋಗರಾಜ್ ಭಟ್ ನಿರ್ದೇಶನದ 'ಮುಂಗಾರು ಮಳೆ' ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿತ್ತು. ಈ ಸಿನಿಮಾವು ಒಂದು ವರ್ಷ ಪ್ರದರ್ಶನಗೊಳ್ಳುವ ಮೂಲಕ ದಾಖಲೆ ಬರೆಯಿತು. ಕೇವಲ 70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ 75 ಕೋಟಿ ಬಾಚಿಕೊಂಡಿತ್ತು. ಈ ಚಿತ್ರ ಗೋಲ್ಡನ್ ಸ್ಟಾರ್ ಗಣೇಶ್ ಸಿನಿಜೀವನಕ್ಕೆ ದೊಡ್ಡ ಬ್ರೇಕ್ ನೀಡಿತ್ತು. ಅನೇಕ ಸಿನಿಮಾಗಳಲ್ಲಿ ಹಾಸ್ಯ ನಟರಾಗಿ ಗುರುತಿಸಿಕೊಂಡಿದ್ದ ಗಣೇಶ್, ಚೆಲ್ಲಾಟ ಸಿನಿಮಾ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸಿದ್ದರು. ಆದರೆ, ಅವರಿಗೆ ಸ್ಟಾರ್ ಇಮೇಜ್ ಕೊಟ್ಟ ಸಿನಿಮಾ ಮುಂಗಾರು ಮಳೆ. ಈ ಸಿನಿಮಾ ಮೂಲಕ ನಟಿ ಪೂಜಾ ಗಾಂಧಿ ಸ್ಯಾಂಡಲ್‌ವುಡ್‌ಗೆ ಪರಿಚಿತರಾದರು. ಅವರ ಮತ್ತು ಗಣೇಶ್‌ ಜೋಡಿಯು ಜನರಿಗೆ ಸಖತ್‌ ಇಷ್ಟವಾಯಿತು. ಇಬ್ಬರ ಕೆಮಿಸ್ಟ್ರಿ ತುಂಬ ಚೆನ್ನಾಗಿ ಮೂಡಿಬಂದಿತ್ತು. ಈ ಸಿನಿಮಾದ ಹಾಡುಗಳು ಹಾಗೂ ಡೈಲಾಗ್‌ಗಳು ಇಂದಿಗೂ ಪ್ರಸ್ತುತ. ಇಲ್ಲಿ ಮುಂಗಾರು ಮಳೆ ಸಿನಿಮಾದ ಟಾಪ್ 10 ಹಿಟ್ ಡೈಲಾಗ್‌ಗಳನ್ನು ನೀಡಲಾಗಿದೆ.


cover image

ರೀ ಮನುಷ್ಯಂಗೆ ಕೆಟ್ಟ ಸಮಯ ಶುರು ಆದರೆ, ತಲೆ ಕೆರೆದುಕೊಂಡು, ತಲೆಲಿ ಗಾಯ ಆಗಿ, ಅದು ಕ್ಯಾನ್ಸರ್ ಆಗಿ, ಡಾಕ್ಟರ್ ತಲೆ ತೆಗಿಬೇಕು ಅಂತಾರೆ. ಅಂತಹದರಲ್ಲಿ ನಾನು ಈ ದಿಲ್, ಹೃದಯ... ಅದೇ ಹಾರ್ಟ್ ಅಂತರಲ್ಲ ಅದಕ್ಕೆ ಕೈ ಹಾಕಿ 'ಪರ ಪರ ' ಅಂತ ಕೆರಕ್ಕೋಬಿಟ್ಟಿದ್ದೀನಿ ಕಣ್ರೀ. ಗಣೇಶ್ ಮಳೆಯಲ್ಲಿ ನೆನೆಯುತ್ತಾ ಹೇಳುವ ಈ ಡೈಲಾಗ್ ಸಿಕ್ಕಾಪಟ್ಟೆ ಫೇಮಸ್. 

 

ನಿಮ್ಮ  ನಗು, ನಿಮ್ ಬ್ಯೂಟಿ, ನಿಮ್ಮ  ವಾಯ್ಸ್, ನಿಮ್ಮ ಕೂದಲು, ನಿಮ್ಮ ನೋಟ, ಈ ಬಿಕನಾಸಿ ಮಳೆ, ನಿಮ್ಮ ಗೆಜ್ಜೆ ಸದ್ದು, ಆ ವಾಚು, ಆ ರಾಸ್ಕಲ್ ದೇವದಾಸ್ ಗಂಟೆ ಸದ್ದು ಎಲ್ಲಾ ಮಿಕ್ಸ್ ಆಗಿ ನನ್ನ ಲೈಪ್‌ನಲ್ಲಿ ರಿಪೇರಿ ಮಾಡೋಕೆ ಆಗದೇ ಇರುವಷ್ಟು ಗಾಯ ಮಾಡಿದೆ ಕಣ್ರೀ ಈ ಡೈಲಾಗ್ ಅಂತೂ ಹುಡುಗರ ಫೇವರಿಟ್  ಅಂದರೆ ತಪ್ಪಾಗಲ್ಲ. 

ಮುಂಗಾರು ಮಳೆ ಸಿನಿಮಾದಲ್ಲಿ ಗಣೇಶ್  ಒಂದು ಮುದ್ದಾದ ಮೊಲವನ್ನು ಸಾಕಿರುತ್ತಾರೆ. ಅದರ ಹೆಸರು ದೇವದಾಸ. ತಮಗೆ ಏನೇ ಸಂತೋಷವಾದರೂ ಹಾಗೂ ದುಃಖವಾದರೂ ಅದರ ಬಳಿ ಹೇಳಿಕೊಳ್ಳುತ್ತಿರುತ್ತಾರೆ. ಹೀಗೆ ದುಃಖದಲ್ಲಿ ಹೇಳುವ 'ಈ ಮುಂಗಾರು ಮಳೆಯಲ್ಲಿ ಇಷ್ಟೊಂದು ಬೆಂಕಿಯಿದೆ ಅಂತ ಗೊತ್ತಿರಲಿಲ್ಲ ದೇವದಾಸ' ಎಂಬ ಡೈಲಾಗ್ ಇಂದಿಗೂ ಕೆಲ ಭಗ್ನ ಪ್ರೇಮಿಗಳ ಬಾಯಲ್ಲಿ ಕೇಳುತ್ತಿರುತ್ತೇವೆ. 

ಮುಂಗಾರು ಮಳೆ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅನಂತ್ ನಾಗ್ ಅವರಿಗೆ ಹೇಳುವ 'ಅಂಕಲ್, ಮನುಷ್ಯ ಎಷ್ಟೇ ದೊಡ್ಡವನಾದರೂ ಚಿಕ್ಕ ಮಗು ತರಹ ಇರಬೇಕು ಅಂತ ನಮ್ಮ ಅಪ್ಪ-ಅಮ್ಮ ಹೇಳಿಕೊಟ್ಟಿದ್ದಾರೆ ಅಂಕಲ್' ಎಂಬ ಡೈಲಾಗ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಸದ್ದು ಮಾಡುತ್ತಿರುತ್ತದೆ. 

ನನಗೆ ಗೊತ್ತಾಗೋಯ್ತು ಕಣ್ರೀ... ನೀವು ನನಗೆ ಸಿಗೋದಿಲ್ಲ ಅಂತ. ಬಿಟ್ಟುಕೊಟ್ಟು ಬಿಟ್ಟೆ ಕಣ್ರೀ. ನಿಮ್ಮನ್ನ ಪಟಾಯಿಸಿ ಲೋಫರ್ ಅನ್ನಿಸಿಕೊಳ್ಳುವುದಕ್ಕಿಂತ ಒಬ್ಬ ಡಿಸೆಂಟ್ ಹುಡುಗನಾಗಿ ಇದ್ದು ಬಿಟ್ಟರೆ ಸಾಕು ಅನಿಸಿಬಿಟ್ಟಿದೆ ಕಣ್ರೀ ಎಂಬ ಗಣೇಶ್ ಪೂಜಾಗಾಂಧಿಗೆ ಹೇಳುವ ಈ ಡೈಲಾಗ್ ಕೂಡ ಸಖತ್ ಹಿಟ್. 

ಲೈಫ್‌ನಲ್ಲಿ ಈ ಲೆವೆಲ್‌ಗೆ ಕನ್‌ಫ್ಯೂಸ್ ಆಗಿದ್ದು ಇದೇ ಮೊದ್ಲು... ಎಲ್ಲಾ ನಿಮ್ಮ ಆರ್ಶೀವಾದ ಹಾಗೂ ಮೆಂಟಲ್ ಹಾಸ್ಪಿಟಲ್ ಗೊತ್ತಾ? ಅಯ್ಯೋ ಅದು ಒಂಥರಾ ನಮ್ಮ ತವರುಮನೆ ಇದ್ದಾಗೆ ಬಿಡಿ. ಹೋಗೋಗೆ ಟೈಲ್ ಆಗ್ಲಿಲ್ಲ ಎಂಬ ಈ ಎರಡು ಡೈಲಾಗ್ ಕೂಡ ರೀಲ್ಸ್ ವಿಡಿಯೋಗಳಲ್ಲಿ ನೋಡುತ್ತಿರುತ್ತೇವೆ.

ಥ್ಯಾಂಕ್ಸ್ ... ಕಣ್ರೀ ನಂದಿನಿ... ಪ್ರೀತಿ ವಿಷಯದಲ್ಲಿ ನನ್ನ ಕಣ್ಣು ತೆರೆಸಿದ ದೇವತೆ ನೀವು... ಈ ಕಣ್ಣು ಕ್ಲೋಸ್ ಆಗಿ ಮಣ್ಣು ಸೇರಿದ ಮೇಲೂ ನಾನು ಈ ಉಪಕಾರನಾ ಮರೆಯಲ್ಲ ಕಣ್ರೀ.  ಇದು ಕೂಡ ಅನೇಕರ ಫೇವರಿಟ್ ಡೈಲಾಗ್. 

ಆ ವಾಚಲ್ಲಿ ಕೋಟಿ ನೆನಪುಗಳಿದೆ ಹಾಗೂ ಅರ್ಥ ಆಗಿಲ್ಲ, ಅರ್ಥ ಆಗೋದು ಇಲ್ಲ ಬಿಡಿ ಈ ಎರಡು ಡೈಲಾಗ್ ಕೂಡ ಮುಂಗಾರು ಮಳೆ ಸಿನಿಮಾದ ಫೇಮಸ್ ಡೈಲಾಗ್‌ಗಳೇ. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+