X
ಹೋಮ್ ಚಲನಚಿತ್ರಗಳ ಒಳನೋಟ

ನಾವು ರೈತರನ್ನು ಮರೆಯಲ್ಲ, ವರ್ತೂರು ಸಂತೋಷ್ ಮುದ್ದೆ ತಿನ್ನೋ ರೈತ ಅಲ್ಲ ಅಂತ ನನಗೆ ಗೊತ್ತು: ಕಿಚ್ಚ ಸುದೀಪ್

Author Sowmya Bairappa | Published: Saturday, December 16, 2023, 11:57 AM [IST]

ಕಿಚ್ಚ ಸುದೀಪ್ ಪ್ರತಿ ಬಿಗ್‌ಬಾಸ್‌ ಸೀಸನ್‌ನಲ್ಲೂ ಸ್ಪರ್ಧಿಗಳಿಗೆ ಅಡುಗೆ ಮಾಡಿ ಕಳುಹಿಸುತ್ತಾರೆ. ಅದೇ ಈ ಬಾರಿಯೂ ತಾವೇ ಕೈಯಾರೇ ಅಡುಗೆ ಮಾಡಿ, ಕಳುಹಿಸಿ ಕೊಟ್ಟಿದ್ದಾರೆ. ಕಿಚ್ಚನ ಕೈರುಚಿ ಹಾಗೂ ಲೆಟರ್‌ನಿಂದಾಗಿ ಸ್ಪರ್ಧಿಗಳು ಟ್ರೋಫಿ ಗೆದ್ದಷ್ಟೇ ಖುಷಿಯಾಗಿದ್ದಾರೆ. ಓ ನಡುವೆ ತಮ್ಮ ಹೆಸರು ಹೇಳಲಿಲ್ಲ ಅಂತ ಬೇಜಾರು ಮಾಡಿಕೊಂಡಿದ್ದ ವರ್ತೂರು ಸಂತೋಷ್‌ ಅವರನ್ನು ಸುದೀಪ್ ಚಿಯರ್‌ಅಪ್ ಮಾಡಿದ್ದಾರೆ.


cover image
ಪ್ರತಾಪ್ ಮೇಲೆ ಉಗ್ರಾವತಾರ

ಈ ವಾರ ಮನೆಯ ಸದಸ್ಯರು ಲಕ್ಷುರಿ ಬಜೆಟ್ ಗಳಿಸುವಲ್ಲಿ ವಿಫಲರಾಗಿದ್ದರಿಂದ ಕಡಿಮೆ ವಸ್ತುಗಳನ್ನೇ ಬಳಸಿ ಅಡುಗೆ ಮಾಡಬೇಕಿತ್ತು. ಅದು ಸಾಕಾಗುತ್ತಿರಲಿಲ್ಲ. ಈ ವೇಳೆ ಡ್ರೋನ್ ಪ್ರತಾಪ್ ಹಾಗೂ ಕೆಲವರು ಮುದ್ದೆ ಮಾಡೋಣ ಎಂದರು. ಆದರೆ, ಅಂದಿನ ವಾರದ ಬಳಕೆಯ ಪಟ್ಟಿಯಲ್ಲಿರಲಿಲ್ಲ. ಆದರೂ ತುಕಾಲಿ ಸಂತು, ಕಾರ್ತಿಕ್, ಮೈಕಲ್ ಬೆಂಬಲದಿಂದ ಪ್ರತಾಪ್ ಮುದ್ದೆ ಮಾಡಿಬಿಟ್ಟಿದ್ದರು. ಇದಾದ ಬಳಿಕ ರಾತ್ರಿ ವೇಳೆ ಬಿಗ್‌ಬಾಸ್ ಗ್ಯಾಸ್ ಆಫ್ ಮಾಡಿಬಿಟ್ಟರು. ಇದರಿಂದಾಗಿ ಮನೆಯಲ್ಲಿ ಗಲಾಟೆ ಶುರುವಾಯಿತು. ವಿನಯ್ ಹಾಗೂ ನಮ್ರತಾ ಅವರು ಡ್ರೋನ್ ಪ್ರತಾಪ್ ಮೇಲೆ ಉಗ್ರಾವತಾರ ತೋರಿದರು. ಜೊತೆಗೆ ಮಾತಿನಿಂದ ಚುಚ್ಚಿದರು. 

ಸುದೀಪ್ ಸರ್‌ಪ್ರೈಸ್

ರಾಗಿಮುದ್ದೆ ವಿವಾದ ಭುಗಿಲೇಳುತ್ತಿದ್ದಂತೆ ಮನೆಯ ಸದಸ್ಯರಿಗೆ ಸಂದೇಶಗಳು ಬರಲು ಆರಂಭವಾದವು. ಆ ಸಂದೇಶಗಳನ್ನು ಸ್ವತಃ ಕಿಚ್ಚ ಸುದೀಪ್ ಬರೆದು ಕಳುಹಿಸಿದ್ದರು. ಎಲ್ಲರಿಗೂ ಅವರವರ ಆಟದ ವೈಖರಿ ಆಧರಿಸಿ ಸಂದೇಶಗಳನ್ನು ನೀಡಲಾಗಿತ್ತು. ಸುದೀಪ್ ಅವರ ಸಂದೇಶಗಳು ಬರುತ್ತಿದ್ದಂತೆ ಹಸಿದ ಮನೆಯ ಸದಸ್ಯರು ಕೊಂಚ ತಣ್ಣಗಾದರು. ಬಳಿಕ ಎಲ್ಲರನ್ನೂ ಲಿವಿಂಗ್ ಏರಿಯಾದಲ್ಲಿನ ಸೋಫಾದಲ್ಲಿ ಕೂರಿಸಲಾಯಿತು. ಜೈಲಿನಲ್ಲಿದ್ದ ಪವಿಯನ್ನೂ ರಿಲೀಸ್ ಮಾಡಲು ಸೂಚಿಸಲಾಯಿತು. ಆಗ ಬಿಗ್‌ಬಾಸ್ ಮನೆಯ ಟಿವಿಯಲ್ಲಿ ಸುದೀಪ್‌ ಶೆಫ್ ರೀತಿ ಏಪ್ರನ್ ತೊಟ್ಟು ಮನೆಯವರಿಗಾಗಿ ಕೈಯಾರೆ ಅಡುಗೆ ಮಾಡಿ, ಪ್ಯಾಕ್ ಮಾಡುತ್ತಿರುವ ವಿಡಿಯೋ ಹಾಕಲಾಯಿತು. ಇದನ್ನು ನೋಡಿದ ಸ್ಪರ್ಧಿಗಳು ಖುಷಿಗೆ ಪಾರವೇ ಇರಲಿಲ್ಲ. 

 

ಲೈವ್‌ ಬಂದು ಮಾತನಾಡಿದ ಕಿಚ್ಚ

ಬಿಗ್‌ಬಾಸ್‌ ಮನೆಯ ಸದಸ್ಯರಿಗೆ ಅವರ ಆಯ್ಕೆಯ ಅನುಸಾರ ಸುದೀಪ್ ಊಟ ಕಳುಹಿಸಿದ್ದರು. ಆ ಊಟ ಕೈ ಸೇರುತ್ತಿದ್ದಂತೆ ಎಲ್ಲರೂ ಖುಷಿಯಲ್ಲಿ ಕುಡಿದಾಡುತ್ತಾ ಊಟ ಮಾಡಿದರು. ಸಂಗೀತಾ ಅಂತೂ ಊಟ ಮಾಡುತ್ತಾ ಕಣ್ಣೀರು ಹಾಕಿದರು. ಹಸಿದು ಕಂಗಾಲಾಗಿದ್ದ ಎಲ್ಲರೂ ನಗು ನಗುತ್ತಾ ಊಟ ಮಾಡಿದರು. ಇದರ ಜೊತೆಗೆ ಮತ್ತೊಂದು ವಿಶೇಷವೆಂದರೆ, ಬಿಗ್‌ಬಾಸ್ ಸ್ಪರ್ಧಿಗಳು ಊಟ ಮಾಡುವಾಗ ಸುದೀಪ್‌ ಲೈವ್ ಆಗಿ ಎಲ್ಲರನ್ನು ಮಾತನಾಡಿಸಿದ್ದು, ಇದು ಇನ್ನಷ್ಟು ಸಂತೋಷ ನೀಡಿತು.   

ನಾವು ರೈತರನ್ನು ಮರೆಯಲ್ಲ

ಸುದೀಪ್‌ ಲೈವ್‌ ಬಂದು ಎಲ್ಲರ ಹೆಸರನ್ನು ಕರೆದು ಮಾತನಾಡಿಸಿದರು. ಕಿಚ್ಚ ಎಲ್ಲವನ್ನು ಹೇಳಿದ ಮೇಲೆ ವರ್ತೂರು ಸಂತೋಷ್‌ಗೆ ತಮ್ಮ ಹೆಸರನ್ನು ಕರೆದೇ ಇಲ್ಲ ಎಂಬ ಅನುಮಾನ ಮೂಡಿತು. ಮನೆಯ ಸದಸ್ಯರು ಕರೆದರು ಅಂತ ಹೇಳಿದರೂ ಅವರು ನಂಬದೇ ಬೇಸರ ಮಾಡಿಕೊಂಡಿದ್ದರು. ಇದಾಗುತ್ತಿದ್ದಂತೆ ಸುದೀಪ್‌ 'ವರ್ತೂರು ಅವರೇ' ಎಂದರು. ನಾವು ರೈತರನ್ನು ಮರೆಯಲ್ಲ. ಮುದ್ದೆ ಕಳುಹಿಸಿಲ್ಲ ಅಂತ ಬೇಸರಗೊಳ್ಳಬೇಡಿ. ನೀವು ಮುದ್ದೆ ತಿನ್ನೋ ರೈತ ಅಲ್ಲ ಅನ್ನೋದು ನನಗೆ ಗೊತ್ತು ಅಂತ ಹೇಳಿದರು. ಇದನ್ನು ಕೇಳಿದ ಮನಮಂದಿ ಜೋರಾಗಿ ನಕ್ಕರು. 

 

ಈ ವಾರದ ಕಳಪೆ ಹಾಗೂ ಉತ್ತಮ

ಪ್ರತಿವಾರದ ಕೊನೆಯಲ್ಲಿ ಬಿಗ್‌ಬಾಸ್‌ ಮನೆಯಲ್ಲಿ ಕಳಪೆ ಮತ್ತು ಉತ್ತಮದ ಆಯ್ಕೆ ನಡೆಯುತ್ತದೆ. ಈ ವಾರ ಸ್ಪರ್ಧಿಗಳಿಗೆ ತುಸು ಲಘುವಾದ ಟಾಸ್ಕಗಳನ್ನು ನೀಡಲಾಗಿದ್ದು, ಬಿಗ್‌ಮನೆ ಪಾಠ ಶಾಲೆಯಾಗಿ ಬದಲಾಗಿತ್ತು. ಈ ಟಾಸ್ಕಗಳಲ್ಲಿ ತರಲೆ, ತುಂಟಾಟ ಮಾಡುತ್ತಾ ಎಲ್ಲರನ್ನು ಮನೋರಂಜಿಸಿದ್ದ ತುಕಾಲಿ ಸಂತೋಷ್‌ಗೆ ಉತ್ತಮ ನೀಡಲಾಯಿತು. ಟಾಸ್ಕ್‌ನಲ್ಲಿ ಉತ್ತಮ ಪ್ರದರ್ಶನ್ ನೀಡದ ಪವಿಗೆ ಕಳಪೆ ನೀಡಲಾಯಿತು. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+