X
ಹೋಮ್ ಚಲನಚಿತ್ರಗಳ ಒಳನೋಟ

ಪದೇ ಪದೇ ನಟ ದರ್ಶನ್ ಹೆಸರಿನ ಜೊತೆ ಕೇಳಿಬರುವ ಪವಿತ್ರಾ ಗೌಡ ಯಾರು? ಇವರಿಬ್ಬರ ಪರಿಚಯವಾಗಿದ್ದು ಹೇಗೆ?

Author Administrator | Published: Tuesday, June 11, 2024, 04:25 PM [IST]

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ನಡೆದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದು, ಡಿ ಬಾಸ್ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕೇಸ್‌ನಲ್ಲಿ ದರ್ಶನ್ ಗೆಳತಿ ಪವಿತ್ರಾ ಗೌಡ ಅವರನ್ನು ವಶಕ್ಕೆ ಪಡೆಯಾಗಿದೆ. ಇಲ್ಲಿ ಪದೇ ಪದೇ ದರ್ಶನ್ ಜೊತೆ ಕೇಳಿಬರುವ ಪವಿತ್ರ ಗೌಡ ಯಾರು? ಅವರ ಹಿನ್ನೆಲೆ ಏನು? ಎಂಬ ಮಾಹಿತಿ ಇಲ್ಲಿದೆ.


cover image
ಮಾಡೆಲ್ ಕಮ್ ನಟಿ

ಮೂಲತಃ ಬೆಂಗಳೂರಿನ ಜೆಪಿ ನಗರದವರಾದ ಪವಿತ್ರಾ ಗೌಡ ನಟಿ ಹಾಗೂ ಮಾಡೆಲ್. ಬಿಷಪ್ ಕಾಟನ್ ಕಾಲೇಜಿನಲ್ಲಿ ಬಿಸಿಎ ಪದವಿ ಮುಗಿಸಿರುವ ಇವರು, ಪದವಿ ಮುಗಿಯುತ್ತಿದ್ದಂತೆ ಮಾಡೆಲಿಂಗ್ ಜಗತ್ತಿಗೆ ಎಂಟ್ರಿಕೊಟ್ಟರು. ಹಲವಾರು ಚಿನ್ನಾಭರಣ ಮಳಿಗೆಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡ ಪವಿತ್ರಾ, ನಂತರ ಮಾಡೆಲ್ ಲೋಕದಲ್ಲಿ ಮಿಸ್ ಬೆಂಗಳೂರು ಆಗಿಯೂ ಹೊರಹೊಮ್ಮಿದರು. ಅಲ್ಲದೆ, ಬೆಂಗಳೂರಿನಲ್ಲಿ ನಡೆದ ಮೂರು ಫ್ಯಾಷನ್ ಶೋಗಳಲ್ಲಿ ಮೂರು ಬಾರಿ ಶೋ ಟಾಪರ್ ಪಟ್ಟ ಗಿಟ್ಟಿಸಿಕೊಂಡಿದ್ದರು. 

ಸಿನಿಮಾಗಳು

ನಂತರ ನಿರ್ದೇಶಕ ಉಮೇಶ್ ಗೌಡ ನಿರ್ದೇಶನದ  'ಅಗಮ್ಯ' ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟರು. ಒಂದು ಕಾಲದಲ್ಲಿ ಬೆಂಗಳೂರು ಭೂಗತವನ್ನ ಆಳಿದ್ದ ಎಂ.ಪಿ ಜಯರಾಜ್ ಮಗ ನಾಯಕನಾಗಿದ್ದ ಈ ಸಿನಿಮಾದಲ್ಲಿ ಪವಿತ್ರಾ ನಾಯಕಿಯಾಗಿದ್ದರು. ಇದಾದ ಬಳಿಕ ಕಾಲಿವುಡ್‌ನತ್ತ ಮುಖ ಮಾಡಿದ ಇವರು, '54312' ಹೆಸರಿನ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾದರು. ನಂತರದಲ್ಲಿ ಕೋತಿಗಳು ಸಾರ್ ಕೋತಿಗಳು,  ಸಾಗುವ ದಾರಿ, ಪ್ರೀತಿ ಕಿತಾಬು ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದರು. ಆದರೆ, ಈ ಸಿನಿಮಾಗಳು ಅವರಿಗೆ ಹೆಸರು, ಯಶಸ್ಸು ತಂದುಕೊಡಲಿಲ್ಲ. 


ಉದ್ಯಮದತ್ತ ಮುಖ ಮಾಡಿದ ಪವಿತ್ರಾ

ಪವಿತ್ರಾ ಗೌಡ ಅವರಿಗೆ ಸಿನಿಮಾರಂಗದಲ್ಲಿ ಸಕ್ಸಸ್ ಸಿಗಲಿಲ್ಲ. ಹೀಗಾಗಿ, ಉದ್ಯಮದತ್ತ ಮುಖ ಮಾಡಿದರು. ಸದ್ಯ ಅವರು ರಾಜರಾಜೇಶ್ವರಿ ನಗರದಲ್ಲಿ ರೆಡ್ ಕಾರ್ಪೆಟ್ ಸ್ಟುಡಿಯೋ 777 ಹೆಸರಿನ ಫ್ಯಾಷನ್ ಬುಟಿಕ್ ನಡೆಸುತ್ತಿದ್ದಾರೆ. ಈ ಮೂಲಕ ಸೆಲೆಬ್ರಿಟಿಗಳಿಗೆ ಹಾಗೂ ಜನಸಾಮಾನ್ಯರಿಗೆ ಉಡುಗೆಗಳನ್ನು ಮಾರಾಟ ಮಾಡುತ್ತಾರೆ.

ಮದುವೆ

ಸಿನಿಮಾ ಇಂಡಸ್ಟರಿಗೆ ಕಾಲಿಡುವ ಮುನ್ನವೇ ಪವಿತ್ರಾ ಗೌಡ ಅವರು ಸಂಜಯ್ ಸಿಂಗ್ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಓರ್ವ ಮಗಳಿದ್ದು, ಇವರಿಬ್ಬರು ದೂರವಾಗಿದ್ದಾರೆ. ಆದರೆ, ಕೆಲ ತಿಂಗಳ ಹಿಂದಷ್ಟೇ ದರ್ಶನ್ ಜೊತೆಗಿನ ಆತ್ಮೀಯ ಫೋಟೋಗಳನ್ನು ಹಂಚಿಕೊಂಡಿದ್ದ ಪವಿತ್ರಾ, ನಮ್ಮದು ದಶಕದ ಸಂಬಂಧ ಅಂತ ಬರೆದುಕೊಂಡಿದ್ದರು. 

ದರ್ಶನ್‌ಗೆ ಪರಿಚಯವಾಗಿದ್ದು ಹೇಗೆ?

ಸಿನಿಮಾ ಕಾರ್ಯಕ್ರಮವೊಂದರಲ್ಲಿ ಕಾಮನ್ ಫ್ರೆಂಡ್ ಒಬ್ಬರಿಂದ ದರ್ಶನ್ ಹಾಗೂ ಪವಿತ್ರಾ ಗೌಡ ಪರಿಚಯವಾಗಿತ್ತು ಎನ್ನಲಾಗಿದೆ. ಹಿಂದೊಮ್ಮೆ ದರ್ಶನ್ ಸಹೋದರಿ, ತಾಯಿ ಜೊತೆಗಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ದರ್ಶನ್ ಸಿನಿಮಾಗಳ ಶೂಟಿಂಗ್ ಸೆಟ್‌ನಲ್ಲೂ ಪವಿತ್ರಾ ಕಾಣಿಸಿಕೊಂಡಿದ್ದರು. ಮೈಸೂರಿನ ಹೊಟೇಲ್ ಗಲಾಟೆ ವಿಚಾರದಲ್ಲೂ ಇವರ ಹೆಸರು ಕೇಳಿಬಂದಿತ್ತು.


ರೇಣುಕಾ ಸ್ವಾಮಿ ಕೊಲೆ ಪ್ರಕರಣ

ಸದ್ಯ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ದರ್ಶನ್ ಹಾಗೂ ಪವಿತ್ರಾ ಗೌಡರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಪವಿತ್ರಾ ಗೌಡಗೆ ರೇಣುಕಾ ಸ್ವಾಮಿ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಎನ್ನಲಾಗಿದ್ದು, ಇದೇ ಕಾರಣಕ್ಕೆ ದರ್ಶನ್ ತಮ್ಮ ಆಪ್ತರ ಮೂಲಕ ರೇಣುಕಾ ಸ್ವಾಮಿಯನ್ನ ಬೆಂಗಳೂರಿಗೆ ಕರೆಸಿ ಶೆಡ್‌ವೊಂದರಲ್ಲಿ ಕೂಡಿ ಹಾಕಿ, ಥಳಿಸಿ ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+