Don't Miss!
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- News Namma Metro Purple Line: ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ, ಕಾರಣಗಳೇನು?
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡಿಕೆಡಿ 6 ವಿಶೇಷ ಪ್ರತಿಭೆಗಳಿಗೆ 1 ಲಕ್ಷ ಬಹುಮಾನ ನೀಡಿದ ತೋತಾಪುರಿ ಟೀಮ್!
ಜೀ ಕನ್ನಡದ ರಿಯಾಲಿಟಿ ಶೋ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 6 ನೋಡಿ ಇಡೀ ಕರ್ನಾಟಕವೇ ಮೆಚ್ಚಿಕೊಂಡಿದೆ. ಡಿಕೆಡಿಯ ಡ್ಯಾನ್ಸಿಂಗ್ ಮಹಾಗುರು ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಸಾರಥ್ಯದಲ್ಲಿ ಈ ಸೀಸನ್ ಯಶಸ್ವಿಗೊಂಡಿದೆ. ಈ ಕಾರ್ಯಕ್ರಮ ಕಳೆದ ಶನಿವಾರ (ಸೆಪ್ಟೆಂಬರ್ 24)ದಂದು ಭರ್ಜರಿಯಾಗಿ ಫಿನಾಲೆ ಮುಗಿಸಿದೆ. ಈ ಸೀಸನ್ನ ಆರಂಭದಿಂದಲೂ ಕರ್ನಾಟಕದ ಪ್ರತಿಭೆಗಳು ವೀಕ್ಷಕರ ಮನ ಗೆದಿದ್ದರು.
ಡ್ಯಾನ್ ಕರ್ನಾಟಕ ಡ್ಯಾನ್ಸ್ ಶೋ ಕೊನೆಯ ಹಂತದಲ್ಲೂ ಎಲ್ಲಾ ಪ್ರತಿಭೆಗಳು ಆ ಜೋಷ್ ಅನ್ನು ಮುಂದುವರೆಸಿಕೊಂಡು ಹೋಗಿದ್ದರು. ಮನರಂಜನೆ ಜೊತೆ ಜೊತೆಗೆ ಈ ರಿಯಾಲಿಟಿ ಶೋ ಅನ್ನು ಯಾರು ಗೆಲ್ಲುತ್ತಾರೆ ಅನ್ನೋ ಕುತೂಹಲ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಲೇ ಇತ್ತು.
ಎಜೆ ಸೊಸೆ ದುರ್ಗಾ ನ್ಯೂ ಲುಕ್ಗೆ ಫಿದಾ ಆದ ಫಾಲೋವರ್ಸ್ : ನೀವು ಇಲ್ಲಿರಬೇಕಾದವರಲ್ಲ ಅಂದಿದ್ಯಾಕೆ..?
ಈ ಬಾರಿಯ ಡ್ಯಾನ್ ಕರ್ನಾಟಕ ಡ್ಯಾನ್ ಕಾರ್ಯಕ್ರಮದ ಮತ್ತೊಂದು ವಿಶೇಷವೆಂದರೆ 'ಪವರ್ ಸ್ಟಾರ್ ಟ್ರೋಫಿ'. ಈ ಟ್ರೋಫಿ ಇಡೀ ರಾಜ್ಯದಾದ್ಯಂತ ಸಂಚರಿಸಿ ಅಭಿಮಾನಿಗಳ ಅಪ್ಪುಗೆ ಪಡೆದು ಬಂದಿತ್ತು. ಈ ಮೂಲಕ ಪ್ರತಿಭೆಗಳು ಅಪ್ಪು ಅವರ ಆಶೀರ್ವಾದವನ್ನು ಪಡೆದಂತಾಗಿದೆ. ಡಿಕೆಡಿ ಈ ಸೀಸನ್ ಅನ್ನು ಸ್ಪರ್ಧಿಗಳಾದ ಸಧ್ವಿನ್ - ಶಾರಿಕಾ ಜೋಡಿ ಪಡೆದುಕೊಂಡಿದೆ. ಶಿವಣ್ಣ ಕೈಯಿಂದ ಈ ಪ್ರಶಸ್ತಿಯನ್ನು ಪಡೆದು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 6ರ ವಿಜೇತರಾಗಿದ್ದಾರೆ.
ಡಿಕೆಡಿ ಫಿನಾಲೆ ಕಾರ್ಯಕ್ರಮದಲ್ಲಿ 'ತೋತಾಪುರಿ' ಟೀಮ್ ಮತ್ತಷ್ಟು ಕಳೆಕಟ್ಟಿತ್ತು. ಇದೇ ಸೆಪ್ಟೆಂಬರ್ 30 ರಂದು ಈ ಸಿನಿಮಾ ಬಿಡುಗಡೆಯಾಗುತ್ತಿದ್ದು, ನವರಸನಾಯಕ ಜಗ್ಗೇಶ್, ಅದಿತಿ ಪ್ರಭುದೇವ ಹಾಗೂ ನಿರ್ಮಾಪಕ ಸುರೇಶ್ ಡಿಕೆಡಿ ವೇದಿಕೆಗೆ ಬಂದಿದ್ದರು.
ಫಿನಾಲೆ ಕಾರ್ಯಕ್ರಮದ ವೇದಿಕೆಯಲ್ಲೊಂದು ಸಾರ್ಥಕ ಕ್ಷಣಕ್ಕೆ 'ತೋತಾಪುರಿ'ತಂಡ ಕಾರಣವಾಗಿದೆ. ನಿರ್ಮಾಪಕ ಸುರೇಶ್ ಹಾಗೂ ತಂಡ, ನವರಸ ನಾಯಕ ಜಗ್ಗೇಶ್ ಮತ್ತು ಡಾ . ಶಿವರಾಜ್ ಕುಮಾರ್ ಹಾಗೂ 'ತೋತಾಪುರಿ' ಚಿತ್ರತಂಡದ ಸಮ್ಮುಖದಲ್ಲಿ ಡಿಕೆಡಿ -6 ಕಾರ್ಯಕ್ರಮದ ವಿಶೇಷ ಪ್ರತಿಭೆಗಳಾದ ಹೃಷಿಕೇಶ್ ಮತ್ತು ಸಹನಾ ಜೋಡಿಗೆ ತಲಾ 1 ಲಕ್ಷ ರೂ ವನ್ನು ಬಹುಮಾನವಾಗಿ ನೀಡಿ ಪ್ರೋತ್ಸಾಹಿಸಿದ್ದಾರೆ.
'ತೋತಾಪುರಿ' ಸಿನಿಮಾ ಇದೇ ಸೆಪ್ಟೆಂಬರ್ 30 ಕ್ಕೆ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಜಗ್ಗೇಶ್, ಅದಿತಿ ಪ್ರಭುದೇವ ಹಾಗೂ ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಿದೆ.