Don't Miss!
- News Rameshwar Cafe: ರಾಮೇಶ್ವರ ಕೆಫೆ ಬಾಂಬ್ ಸ್ಪೋಟ ಪ್ರಕರಣ: ದಾಳಿಗೆ ಸಹಾಯ ಮಾಡಿದ ವ್ಯಕ್ತಿ ಬಂಧನ- ತೀರ್ಥಹಳ್ಳಿ ಉಗ್ರನೊಂದಿಗೆ ಸಂಪರ್
- Lifestyle 2024: ಮದುವೆ, ಗಾಡಿ ಖರೀದಿ, ಗೃಹ ಪ್ರವೇಶ ಹೀಗೆ ಶುಭ ಕಾರ್ಯಕ್ಕೆ ಏಪ್ರಿಲ್ನಲ್ಲಿರುವ ಶುಭ ದಿನಾಂಕಗಳಿವು
- Finance 2023 ಡಿಸೆಂಬರ್ ವೇಳೆಗೆ 160 ಲಕ್ಷ ಕೋಟಿ ರೂ. ದಾಟಿದ ಸರ್ಕಾರದ ಸಾಲ!
- Automobiles Vande Bharat: ವಂದೇ ಭಾರತ್ ಸ್ಲೀಪರ್ ವಿಶೇಷತೆಗಳು: ಇಂಟೀರಿಯರ್ಗೆ ಫಿದಾ ಆಗ್ತೀರ!
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲಕ್ಷ್ಮಿ ಸಾರಥ್ಯದ 'ನೀನಾ ನಾನಾ' ಕಾರ್ಯಕ್ರಮಕ್ಕೆ ಈವಾರ ತೆರೆ
ಅಂತಿಮ ಸಂಚಿಕೆಯು ವಿಶಿಷ್ಟ ರೀತಿಯಲ್ಲಿ ಮೂಡಿಬರಲಿದೆ. ಹಿರಿಯ ನಟಿಯರಾದ ಬಿ ಸರೋಜಾದೇವಿ ಮತ್ತು ಜಯಮಾಲ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮವನ್ನು ನಟ ಮತ್ತು ನಿರೂಪಕ ಸೃಜನ್ ಲೋಕೇಶ್ ನಡೆಸಿಕೊಡಲಿದ್ದಾರೆ.
ಇಷು ದಿನ ನಟಿ ಲಕ್ಷ್ಮಿಯವರು ಇತರರಿಗೆ ಪ್ರಶ್ತ್ನೆ ಕೇಳುತ್ತಿದ್ದರು. ಆದರೆ ಅಂತಿಮ ಸಂಚಿಕೆಯಲ್ಲಿ ಪ್ರೇಕ್ಷಕರೇ ಲಕ್ಷ್ಮಿ ಅವರಿಗೆ ಅವರ ವೈಯಕ್ತಿಕ ಜೀವನ ಮತ್ತು ಈ ಕಾರ್ಯಕ್ರಮದ ಅನುಭದ ಕುರಿತು ಪ್ರಶ್ತ್ನೆ ಗಳನ್ನು ಕೇಳಲಿದ್ದಾರೆ.
ಇದುವರೆಗೆ ನೀನಾ ? ನಾನಾ? ಕಾರ್ಯಕ್ರಮ 104 ಸಂಚಿಕೆಗಳನ್ನು ಕಂಡಿದೆ. ಪ್ರತಿ ಸಂಚಿಕೆಯಲ್ಲಿ ಬೇರೆ ಬೇರೆ ವಿಷಯಗಳ ಕುರಿತು ಸುಮಾರು 4600 ಮಂದಿ ಭಾಗವಹಿಸಿದ್ದರು. ವಾರಾಂತ್ಯದಲ್ಲಿ ಪ್ರಸಾರವಾಗುತ್ತಿದ್ದ ಈ ಕಾರ್ಯಕ್ರಮ ಉತ್ತಮ ಜನಪ್ರಿಯತೆಯನ್ನು ಗಳಿಸಿತ್ತು.
ಸ್ವಾಮೀಜಿಗಳು, ಪ್ರಗತಿಪರ ಹೋರಾಟಗಾರರು ಹೆಚ್ಚಿನ ಸಂಚಿಕೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾಗಿದ್ದಾರೆ. ನಿರೂಪಕಿ ಲಕ್ಷ್ಮಿ ಪ್ರತಿ ಕಾರ್ಯಕ್ರಮದಲ್ಲಿ 44ಜನರ ವಾದವಿವಾದಗಳನ್ನು ಆಲಿಸಿ ಸಮತೋಲನದ ಮಾತು ಮತ್ತು ನಿರೂಪಣೆ ನಡೆಸಿಕೊಟ್ಟಿದ್ದರು.
ಒಂದು ಹೊಸ ಸಮಾಜದ ಆಲೋಚನೆಗಳಿಗೆ ನೀನಾ ನಾನಾ ಕಾರ್ಯಕ್ರಮ ಇಂಬು ಕೊಟ್ಟಿದ್ದರೆ ನಮ್ಮೆಲ್ಲರ ಶ್ರಮ ಸಾರ್ಥಕ. ಈ ಕಾರ್ಯಕ್ರಮ ಸರಳ ವಿವಾಹಗಳಿಗೆ ಸ್ಪೂರ್ತಿಯಾಗಿದೆ. ಮೂಢ ನಂಬಿಕೆಗಳನ್ನು ದೂರಮಾಡಿದೆ. ಯಾವುದೇ ಗೊಂದಲವಿಲ್ಲದೆ ಸಂಚಿಕೆ ಮುಗಿಸಲಾಗುತ್ತಿತ್ತು. ಅದಕ್ಕಾಗಿ ಪ್ರತ್ಯೇಕ ರಿಸರ್ಚ್ ಟೀಮ್ ಇತ್ತು ಎನ್ನುತ್ತಾರೆ ವಾಹಿನಿಯ ಮುಖ್ಯಸ್ಥ ಅನೂಪ್ ಚಂದ್ರಶೇಖರ್.