ಸುದೀಪ್ ನಟನೆ, ನಿರ್ದೇಶನದಲ್ಲಿ ರವಿಚಂದ್ರನ್ ಅವರಿಗೆ ಯಾವುದು ಇಷ್ಟ.?
ನಟನೆ ಮತ್ತು ನಿರ್ದೇಶನ... ಎರಡು ವಿಭಾಗದಲ್ಲಿ ಕಿಚ್ಚ ಸುದೀಪ್ ಗುರುತಿಸಿಕೊಂಡಿದ್ದಾರೆ. ಸುದೀಪ್ ನಟನೆ ಕೆಲವರಿಗೆ ಇಷ್ಟ ಆದರೆ ಇನ್ನೂ ಕೆಲವರಿಗೆ ಅವರು ನಿರ್ದೇಶನ ಮಾಡುವುದು ಇಷ್ಟ. ಇದೇ ರೀತಿ ರವಿಚಂದ್ರನ್ ಸಹ ಸುದೀಪ್ ಅವರ ನಟನೆ ಮತ್ತು ನಿರ್ದೇಶನದಲ್ಲಿ ತಮಗೆ ಯಾವುದು ಇಷ್ಟ ಅಂತ ಹೇಳಿದ್ದಾರೆ.
ಸೂಪರ್ ಕಲರ್ಸ್ ವಾಹಿನಿಯ 'ಸೂಪರ್ ಟಾಕ್ ಟೈಂ' ಕಾರ್ಯಕ್ರಮದಲ್ಲಿ ಅಕುಲ್ 'ಸುದೀಪ್ ಅವರ ನಿರ್ದೇಶನ ನಿಮಗೆ ಇಷ್ಟನಾ? ಅಥವಾ ನಟನೆ ಇಷ್ಟನಾ?' ಅಂತ ರವಿಚಂದ್ರನ್ ಗೆ ಪ್ರಶ್ನಿಸಿದರು. ಆಗ ರವಿಚಂದ್ರನ್ ಸುದೀಪ್ ಒಬ್ಬ ನಿರ್ದೇಶಕನಾಗಿ ನೋಡುವುದಕ್ಕಿಂತ ಒಬ್ಬ ನಟನಾಗಿ ನೋಡುವುದಕ್ಕೆ ತುಂಬ ಇಷ್ಟ ಅಂತ ಉತ್ತರಿಸಿದರು.
[ರವಿಚಂದ್ರನ್ ಅವರಿಂದ ಕೇಸ್ ಹಾಕಿಸಿಕೊಂಡಿದ್ದ ಹೀರೋಯಿನ್ ಇವರೇ.!]

ಅಂದಹಾಗೆ, ರವಿಚಂದ್ರನ್ ಮತ್ತು ಸುದೀಪ್ ಇಬ್ಬರು ಎರಡು ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಸುದೀಪ್ ನಿರ್ದೇಶನದ 'ಮಾಣಿಕ್ಯ' ಮತ್ತು ಸುದೀಪ್ ನಟನೆಯ 'ಹೆಬ್ಬುಲಿ' ಸಿನಿಮಾದಲ್ಲಿ ರವಿಚಂದ್ರನ್ ಕಾಣಿಸಿಕೊಂಡಿದ್ದರು. ಅಷ್ಟೆ ಅಲ್ಲದೆ ರವಿಚಂದ್ರನ್ ನಿರ್ದೇಶನದ 'ಅಪೂರ್ವ' ಸಿನಿಮಾದಲ್ಲಿ ಸುದೀಪ್ ವಿಶೇಷ ಪಾತ್ರವನ್ನು ನಿರ್ವಹಿಸಿದ್ದರು.
['ಹೆಬ್ಬುಲಿ' ಕಟೌಟ್ ವಿವಾದ: ಅಭಿಮಾನಿಗಳ ಪರವಾಗಿ ಮಾತು ಕೊಟ್ಟ ಕ್ರೇಜಿಸ್ಟಾರ್]


Click it and Unblock the Notifications











