Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Bombat Bhojana: ಗದಗದಲ್ಲಿ ಬೊಂಬಾಟ್ ಭೋಜನಾ, ಜೊತೆಗೊಂದಿಷ್ಟು ಮನರಂಜನೆ
ವೀಕೆಂಡ್ಗಾಗಿ ಮನರಂಜನೆ ನೀಡುವ ಚಾನೆಲ್ಗಳು ಏನಾದರೂ ಒಂದು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಇವೆ. ಈ ಬಾರಿ ಕೂಡ ಸ್ಟಾರ್ ಸುವರ್ಣ ವಿನೂತನವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಗದಗದ ಮಹಿಳೆಯರಿಗಾಗಿಯೇ ಈ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.
ಸಿಹಿ ಕಹಿ ಚಂದ್ರು ನಡೆಸಿಕೊಡುವ ಫೇಮಸ್ ಅಡುಗೆ ಕಾರ್ಯಕ್ರಮ 'ಬೊಂಬಾಟ್ ಭೋಜನಾ'. ಹೀಗಾಗಿ ಸ್ಟಾರ್ ಸುವರ್ಣ ವಿನೂತನ ಪ್ರಯತ್ನಕ್ಕೆ ಕೈ ಹಾಕಿತ್ತು. ಗದಗದ ಮಹಿಳೆಯರಿಗೆ ಒಂದು ವಿಶಿಷ್ಟವಾದ ಟಾಸ್ಕ್ ನೀಡಿತ್ತು. ಅದರಂತೆ ಮಹಿಳೆಯರು ವಿಶಿಷ್ಟವಾದ ಅಡುಗೆಯನ್ನು ಮಾಡಿ ಇಂದು ಮಧ್ಯಾಹ್ನ 2 ಗಂಟೆಯೊಳಗೆ ಒಪ್ಪಿಸುವಂತೆ ಕೇಳಿತ್ತು. ಈ ಮೂಲಕ ಸಿಹಿ ಕಹಿ ಚಂದ್ರು ಆ ಅಡುಗೆಯನ್ನು ಟೇಸ್ಟ್ ಮಾಡಿ ವೇದಿಕೆಗೆ ಆಹ್ವಾನ ನೀಡಲಿದ್ದಾರೆ ಎಂದಿದ್ದರು.
Puttakkanna Makkalu: ಸಾರಿಕಾ ರಾಜ್ ಅರಸ್ 32 ವರ್ಷಗಳ ಕಿರುತೆರೆ ಜರ್ನಿ ಬಲು ರೋಚಕ!
ಉತ್ತಮ ಅಡುಗೆ ಮಾಡಿದ ಮಹಿಳೆಯರಿಗೆ ಸನ್ಮಾನ
ಇಂದು ಸಂಜೆ 6 ಗಂಟೆಗೆ ಗದಗದ ಸ್ಟೇಷನ್ ರಸ್ತೆಯಲ್ಲಿರುವ ಮುನ್ಸಿಪಾಲ್ ಕಾಲೇಜ್ ಗ್ರೌಂಡ್ಸ್ನಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದರಲ್ಲಿ ಸ್ಟಾರ್ ಸುವರ್ಣದ ಸುಪ್ರಸಿದ್ದ ಸೀರಿಯಲ್ ನಟ-ನಟಿಯರು ಭಾಗವಹಿಸಲಿದ್ದಾರೆ. ಈ ವೇಳೆ ಬೊಂಬಾಟ್ ಆಗಿ ಅಡುಗೆ ಮಾಡಿದ ಗದಗದ ಮಹಿಳೆಯನ್ನು ವೇದಿಕೆಗೆ ಆಹ್ವಾನ ನೀಡಲಾಗುತ್ತಿದೆ.
ಹೌದು.. ಇಂದು ಮಧ್ಯಾಹ್ನ 2 ಗಂಟೆಯೊಳಗೆ ಗದಗದ ಮಹಿಳೆಯರು ತಾವೇ ಕೈಯ್ಯಾರೆ ಮಾಡಿದ ವಿಶೇಷವಾದ ಅಡುಗೆಯನ್ನು ಸ್ಟಾರ್ ಸುವರ್ಣ ತಂಡಕ್ಕೆ ನೀಡಲಾಗಿತ್ತು. ಇವರಲ್ಲಿ ರುಚಿಕರವಾಗಿ ಅಡುಗೆ ಮಾಡಿದವರನ್ನು ಸಂಜೆ ನಡೆಯಲಿರುವ ಕಾರ್ಯಕ್ರಮದಲ್ಲಿ ವೇದಿಕೆಗೆ ಕರೆದು ಚರ್ಚೆ ಮಾಡಲಿದ್ದಾರೆ.
Jenugudu Serial: ಮಾಯಾ ಎಂಟ್ರಿಯಿಂದ ತಿರುವು ಪಡೆಯುತ್ತಾ ದಿಯಾ-ಶಶಾಂಕ್ ಮ್ಯಾರೇಜ್ ಸ್ಟೋರಿ?
ಬೊಂಬಾಟ್ ಭೋಜನಾ ಜೊತೆ ಜೇನುಗೂಡು ತಂಡ
ಬೊಂಬಾಟ್ ಭೋಜನಾದ ಸಿಹಿ ಕಹಿ ಚಂದ್ರು ವೇದಿಕೆ ಉಪಸ್ಥಿತಿ ಇರುತ್ತೆ. ಇದರೊಂದಿಗೆ 'ಕಾಮಿಡಿ ಗ್ಯಾಂಗ್' ತಂಡ ಕೂಡ ವೇದಿಕೆ ಮೇಲೆ ಇರುತ್ತೆ. ಇಂದು ಸಂಜೆಯಿಂದ ಹಾಸ್ಯ ಮನರಂಜನಾ ಕಾರ್ಯಕ್ರಮ 'ಕಾಮಿಡಿ ಗ್ಯಾಂಗ್' ತಂಡ ಗದಗದ ಜನರಿಗೆ ಸಖತ್ ಮನರಂಜನೆ ನೀಡಲಿದೆ. ಈ ಕಾರ್ಯಕ್ರಮದ ಜಡ್ಜ್ಗಳಾಗಿ ಮುಖ್ಯಮಂತ್ರಿ ಚಂದ್ರು, ಶ್ರುತಿ ಹರಿಹರನ್, ಶಿವು ಕೆಆರ್ ಪೇಟೆ, ಕುರಿ ಪ್ರತಾಪ್ ಕಾಣಿಸಿಕೊಳ್ಳಲಿದ್ದಾರೆ.
'ಕಾಮಿಡಿ ಗ್ಯಾಂಗ್' ಜೊತೆ ಸ್ಟಾರ್ ಸುವರ್ಣದ ಧಾರಾವಾಹಿ 'ಜೇನುಗೂಡು' ತಂಡ ಕೂಡ ಭಾಗವಹಿಸಲಿದೆ. ಗದಗದ ಜನರಿಗೆ ಸಖತ್ ಮನರಂಜನೆ ನೀಡಲು ವೇದಿಕೆ ಸಜ್ಜಾಗಿದೆ. ಒಂದ್ಕಡೆ ಬೊಂಬಾಟ್ ಭೋಜನಾದ ಸಿಹಿ ಕಹಿ ಚಂದ್ರು ಬೊಂಬಾಟ್ ಮಾತು. ಇನ್ನೊಂದು ಕಡೆ ಕಾಮಿಡಿ ಗ್ಯಾಂಗ್ ಹಾಗೂ ಜೇನುಗೂಡು ಧಾರಾವಾಹಿಯಿಂದ ಸಖತ್ ಮನರಂಜನೆ ಸಿಗಲಿದೆ.