ಕೋಟೆ ನಾಡು ಚಿತ್ರದುರ್ಗದಲ್ಲಿ 'ಲಕ್ಷ್ಮಿ ನಿವಾಸ' ತಂಡದಿಂದ 'ಜೀ಼ ಗಣೇಶ ಉತ್ಸವ'; ಅಲ್ಲಿನ ಜನರೊಂದಿಗೆ ಸಂಭ್ರಮ

ಗಣೇಶ್ ಹಬ್ಬ ಹತ್ತಿರ ಬರುತ್ತಿದ್ದಂತೆ ಕಿರುತೆರೆಯಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಪ್ಲಾನ್ ಮಾಡಲಾಗುತ್ತಿದೆ. ಮನರಂಜನಾ ಕಾರ್ಯಕ್ರಮಗಳು, ರಿಯಾಲಿಟಿ ಶೋಗಳನ್ನು ಗಣೇಶ್ ಚತುರ್ಥಿಯ ಥೀಮ್‌ನಲ್ಲಿಯೇ ವಿಶೇಷವಾಗಿ ಚಿತ್ರೀಕರಣ ಮಾಡುತ್ತಿದ್ದಾರೆ. ಜೀ ಕನ್ನಡ ವಾಹಿನಿ ಕೂಡ ಒಂದು ವಾರಕ್ಕೂ ಮುನ್ನವೇ ಈ ಸಂಭ್ರಮದಲ್ಲಿ ತೊಡಗಿದೆ. ತಂಡದೊಂದಿಗೆ ಕೋಟೆ ನಾಡು ಚಿತ್ರದುರ್ಗಕ್ಕೆ ಪಯಣ ಬೆಳೆಸುವುದಕ್ಕೆ ಮುಂದಾಗಿದೆ.

ಜೀ ಕನ್ನಡ ತನ್ನ ವಾಹಿಯನ್ನು ವೀಕ್ಷಿಸುತ್ತಿರುವವರಿಗೆ ಧನ್ಯವಾದಗಳನ್ನು ಅರ್ಪಿಸುವುದಕ್ಕೆ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ. ತಮ್ಮ ವೀಕ್ಷಕರೊಂದಿಗೆ ಗಣೇಶ್ ಚತುರ್ಥಿಯನ್ನು ಆವರಿಸುವುದಕ್ಕೆ ಮುಂದಾಗಿದೆ. ಈ ಸಂಬಂಧ ಈ ಬಾರಿ ಹಬ್ಬವನ್ನು ಕೋಟೆ ನಾಡು ಚಿತ್ರದುರ್ಗದ ಜನರೊಂದಿಗೆ ಆಚರಣೆ ಮಾಡುವುದಕ್ಕೆ ಮುಂದಾಗಿದೆ. ಜೀ ಕನ್ನಡದ ಜನಪ್ರಿಯ ಧಾರಾವಾಹಿ 'ಲಕ್ಷ್ಮಿ ನಿವಾಸ'ದ ತಂಡದೊಂದಿಗೆ ಅಲ್ಲಿನ ಜನತೆ ಹಬ್ಬವನ್ನು ಆಚರಿಸಬಹುದು.

Zee Kannada celebrating Ganesh festival in chitradurga with Lakshmi Nivasa serial team

ಹೌದು, ಚಿತ್ರದುರ್ಗದಲ್ಲಿ ಇದೇ ಸೆಪ್ಟೆಂಬರ್ 1 ರಂದು ಭಾನುವಾರ ಮಧ್ಯಾಹ್ನ 3 ಗಂಟೆಗೆ 'ಲಕ್ಷ್ಮೀ ನಿವಾಸ' ತಂಡದ ಜೊತೆ 'ಜೀ ಗಣೇಶ ಉತ್ಸವ' ಕಾರ್ಯಕ್ರಮವನ್ನು ಜೀ ಕನ್ನಡ ಆಯೋಜಿಸಿದೆ. 'ಲಕ್ಷ್ಮೀ ನಿವಾಸ' ಧಾರಾವಾಹಿ ಶುರುವಾದ ದಿನದಿಂದಲೂ ವೀಕ್ಷಕರ ಮನಗೆದ್ದಿದೆ. ಕನ್ನಡಿಗರ ಮನೆ ಮನಗಳಲ್ಲಿ ಈ ಧಾರಾವಾಹಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮಧ್ಯಮ ವರ್ಗದ ಕುಟುಂಬದ ಜನರ ಕಷ್ಟ, ಸುಖ, ಬಾಂಧವ್ಯ, ಸಮಸ್ಯೆಯನ್ನು ಕಿರುತೆರೆ ವೀಕ್ಷಕರ ಮುಂದೆ ಇಡುತ್ತಿದೆ.

'ಲಕ್ಷ್ಮಿ ನಿವಾಸ' ಧಾರಾವಾಹಿಯ ಕಥೆಯಲ್ಲಿ ಹಲವು ಆಯಾಮಗಳಿವೆ. ಪ್ರತಿ ದಿನ ವೀಕ್ಷಕರಲ್ಲಿ ಈ ಧಾರಾವಾಹಿ ಕುತೂಹಲ ಹೆಚ್ಚಿಸುತ್ತಿದ್ದು, ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಮುನ್ನುಗ್ಗುತ್ತಲೇ ಇದೆ. ಇದೇ ಧಾರಾವಾಹಿ ತಂಡದ ಕಲಾವಿದರೊಂದಿಗೆ ಜೀ಼ ಕನ್ನಡ ವಾಹಿನಿಯು 'ಗಣೇಶ ಉತ್ಸವ'ವನ್ನು ಚಿತ್ರದುರ್ಗದಲ್ಲಿ ಆಚರಿಸುತ್ತಿದೆ. ಅಲ್ಲಿನ ಜನತೆಯನ್ನು ಸೇರಿಸಿಕೊಂಡು ಕಾರ್ಯಕ್ರಮಕ್ಕೆ ಹೊಸ ಮೆರುಗು ನೀಡುವುದಕ್ಕೆ ಮುಂದಾಗಿದೆ. ಈ ಕಾರ್ಯಕ್ರಮವನ್ನು ಮಾಸ್ಟರ್ ಆನಂದ್ ನಡೆಸಿಕೊಡುತ್ತಿದ್ದಾರೆ.

Zee Kannada celebrating Ganesh festival in chitradurga with Lakshmi Nivasa serial team

ಇಷ್ಟೇ ಅಲ್ಲ. ಈ ಧಾರಾವಾಹಿಯ ನಟ-ನಟಿಯರೊಂದಿಗೆ ನೇರವಾಗಿ ಮಾತನಾಡುವ ಅವಕಾವನ್ನು ಕಲ್ಪಿಸಿಕೊಡಲಾಗಿದೆ. ಜೀ ಕನ್ನಡದ ಈ ಮನರಂಜನೆಯ ಮಹಾ ಉತ್ಸವದಲ್ಲಿ ಇಡೀ 'ಲಕ್ಷೀ ನಿವಾಸ' ಧಾರಾವಾಹಿ ಭಾಗವಹಿಸುತ್ತಿದೆ. ಚಿತ್ರದುರ್ಗದ ಕಿರುತೆರೆ ವೀಕ್ಷಕರನ್ನು ನೇರವಾಗಿ ಭೇಟಿ ಇವರೆಲ್ಲರೂ ಭೇಟಿ ಮಾಡಲಿದ್ದಾರೆ.

ಸೆಪ್ಟೆಂಬರ್ 1 ರಂದು ಭಾನುವಾರ 'ಲಕ್ಷ್ಮೀ ನಿವಾಸ' ತಂಡ ಚಿತ್ರದುರ್ಗದ ಅನುಭವ ಮಂಟಪ, ಮುರುಘಮಠ ಆವರಣ, ಚಿತ್ರದುರ್ಗದಲ್ಲಿ ಮಧ್ಯಾಹ್ನ 3:00 ಗಂಟೆಗೆ
'ಜೀ ಗಣೇಶ ಉತ್ಸವ' ಕಾರ್ಯಕ್ರಮವನ್ನು ಆಚರಿಸುತ್ತಿದೆ. ಚಿತ್ರದುರ್ಗದ ಜನತೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಈ ಕಾರ್ಯಕ್ರಮದ ಪರಿಸರದ ಬಗ್ಗೆ ಜಾಗೃತಿಯನ್ನು ಮೂಡಿಸುತ್ತೆ. ಪರಿಸರ ಸ್ನೇಹಿ ಗಣೇಶನನ್ನು ಉಪಯೋಗಿಸುವಂತೆ ಜಾಗೃತಿಯನ್ನು ಮೂಡಿಸಲಿದೆ.

More from Filmibeat

English summary
Zee Kannada is planning to celebrate Ganesh festival in chitradurga with Lakshmi Nivasa serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X