Don't Miss!
- News Heavy Rain: ಸಕ್ಕರೆ ನಾಡಿನಲ್ಲಿ ವರ್ಷದ ಮೊದಲ ಮಳೆ: ಧರೆಗುರುಳಿದ ಮರ, ಕಮಾನುಗಳು
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Sports PBKS vs MI IPL 2024: ಸೂರ್ಯಕುಮಾರ್ ಶೈನಿಂಗ್; ಪಂಜಾಬ್ಗೆ ಸವಾಲಿನ ಗುರಿ ನೀಡಿದ ಮುಂಬೈ
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮಹಿಳೆಯರಿಗೆ ಅಗೌರವ ತೋರಿದರೆ ತಲೆ ಕತ್ತರಿಸುತ್ತೇನೆ': ಶಾರುಖ್
ಬಾಲಿವುಡ್ ಹೊಸ ವರ್ಷದ ದಿನದಂದು ಬೆಂಗಳೂರಿನಲ್ಲಿ ನಡೆದ ಸಾಮೂಹಿಕ ಲೈಂಗಿಕ ಕಿರುಕುಳ ಘಟನೆಗಳಿಗೆ ನೊಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ ' ಪೋಷಕರು, ತಮ್ಮ ಗಂಡು ಮಕ್ಕಳಿಗೆ ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಎಂಬುದನ್ನು ಕಲಿಸಬೇಕು' ಎಂದು ಹೇಳಿದ್ದರು. ಮಹಿಳೆಯರ ಗೌರವಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುವ ಶಾರುಖ್, ಈಗ ತಮ್ಮ ಮಕ್ಕಳಿಗೆ ಮೊತ್ತೊಮ್ಮೆ ವಿಶೇಷ ಎಚ್ಚರಿಕೆ ಕೊಟ್ಟಿದ್ದಾರೆ.[ಬೆಂಗಳೂರಿನ ದೌರ್ಜನ್ಯ ಘಟನೆಗಳಿಗೆ ಬಾಲಿವುಡ್ ಬಾದ್ ಶಾ ಹೇಳಿದ್ದೇನು?]
ಫೆಮಿನಾಗೆ ನೀಡಿರುವ ಸಂದರ್ಶನದಲ್ಲಿ, ಬೆಂಗಳೂರಿನಲ್ಲಿ ನಡೆದ ಮಹಿಳೆಯರ ಮೇಲಿನ ದೌರ್ಜನ್ಯ ಕುರಿತು ಪ್ರತಿಕ್ರಿಯೆ ನೀಡಿ "ನನ್ನ ಮಕ್ಕಳಾದ ಆರ್ಯನ್ ಮತ್ತು ಅಬ್ರಾಂಗೆ ಮಹಿಳೆಯರನ್ನು ಎಂದಿಗೂ ನೋಯಿಸಬೇಡಿ. ಅಗೌರವ ನೀಡಿದಲ್ಲಿ ನಿಮ್ಮ ತಲೆ ಕತ್ತರಿಸುತ್ತೇನೆ. ಸಮಯ ಇನ್ನೂ ಬದಲಾಗಿಲ್ಲ. ಹುಡುಗಿಯೊಬ್ಬಳು ನಿಮ್ಮ ಚಡ್ಡಿ-ಬಡ್ಡಿ ಅಲ್ಲ. ಸೋ ಗೌರವ ನೀಡಿ" ಎಂದು ಹೇಳಿರುವುದಾಗಿ ಉತ್ತರಿಸಿದ್ದಾರೆ.
ಪ್ರತಿಯೊಬ್ಬರೂ ಮಹಿಳೆಯರಿಗೆ ಗೌರವ ಕೊಡಬೇಕು. ನನ್ನ ಮಕ್ಕಳ ವಿಚಾರ ಬಂದರೂ ಸರಿ ನನ್ನ ಮಕ್ಕಳು ಮಹಿಳೆಯರಿಗೆ ಅಗೌರವ ತೋರಿದ್ದೇ ಆದರೆ, ಅವರ ತಲೆಯನ್ನೂ ಕತ್ತರಿಸುತ್ತೇನೆ ಎಂದು ವಾರ್ನ್ ಮಾಡಿದ್ದಾರೆ.[ಬೆಂಗಳೂರಿನ ಘಟನೆಗೆ ಬಾಲಿವುಡ್ ನವರು ಹೀಗೆಲ್ಲಾ ಹೇಳಿದರು..]
ಮಹಿಳಾ ದೌರ್ಜನ್ಯ ಕುರಿತಂತೆ ಬಾಲಿವುಡ್ ಸೆಲೆಬ್ರಿಟಿಗಳಾದ ನಟಿ ಅನುಷ್ಕಾ ಶರ್ಮಾ, ಅಕ್ಷಯ್ ಕುಮಾರ್, ಅಮಿರ್ ಖಾನ್ ಸೇರಿದಂತೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು.