ಕಮಲ್ ಹಾಸನ್ ಅಭಿಮಾನಿಯೊಬ್ಬ ರಜನಿಕಾಂತ್ ಕಾಲಿಗೆ ಬಿದ್ದ ಘಟನೆ.. ಏನಿದು ಅಭಿಮಾನಿಯ ಕಥೆ?
ಸೂಪರ್ಸ್ಟಾರ್ ರಜನಿಕಾಂತ್ ಅನ್ನು ಹತ್ತಿರದಿಂದ ಬಲ್ಲವರು ಒಂದೊಂದು ಇಂಟ್ರೆಸ್ಟಿಂಗ್ ಸ್ಟೋರಿಯನ್ನು ಹೇಳುತ್ತಾರೆ. ರಜನಿ ತನ್ನ ಅಭಿಮಾನಿಗಳಿಗೆ, ಆತ್ಮೀಯರಿಗೆ ಮಾಡಿದ ಸಹಾಯ ಅದ್ಯಾವಾಗೋ ಯಾವುದೋ ಒಂದು ಸಂದರ್ಭದಲ್ಲಿ ರಿವೀಲ್ ಆಗುತ್ತೆ. ಅದಕ್ಕೆ ಸಿನಿಮಾದ ಹೊರತಾಗಿಯೂ ರಜನಿ ಅಭಿಮಾನಿಗಳಿಗೆ ಇಷ್ಟ ಆಗುತ್ತಾರೆ.
ರಜನಿಕಾಂತ್ ಈಗ 'ಜೈಲರ್' ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸಿದ ಈ ಸಿನಿಮಾ ನೋಡುವುದಕ್ಕೆ ಜನರು ತುದಿಗಾಲಲ್ಲಿ ನಿಂತಿದ್ದಾರೆ. ಇಂದು (ಜುಲೈ 28) 'ಜೈಲರ್' ಸಿನಿಮಾದ ಆಡಿಯೋ ಪಾರ್ಟಿಯನ್ನು ಆಯೋಜನೆ ಮಾಡಲಾಗಿದೆ.

'ಜೈಲರ್' ಸಿನಿಮಾ ಮತ್ತೆ ರಜನಿಕಾಂತ್ ಕರಿಯರ್ಗೆ 'ಬಾದ್ಷಾ'ದಂತಹ ಸೂಪರ್ ಹಿಟ್ ಸಿನಿಮಾ ಕೊಡುತ್ತೆ ಅನ್ನೋ ನಿರೀಕ್ಷೆಯಿದೆ. ಇದೇ ಸಂದರ್ಭದಲ್ಲಿ ಬಾದ್ಷಾ ಸಂದರ್ಭದಲ್ಲಿ ರಜನಿಕಾಂತ್ಗೂ ಕಮಲ್ ಹಾಸನ್ ಅವರ ಅಭಿಮಾನಿ ಮಧ್ಯೆ ನಡೆದ ಘಟನೆಯೊಂದು ರಿವೀಲ್ ಆಗಿದೆ. ಸಂಗೀತ ನಿರ್ದೇಶಕ ದೇವ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
'ಜೈಲರ್' ಪಾರ್ಟಿಗೆ ರಜನಿ ರೆಡಿ
ಸೂಪರ್ಸ್ಟಾರ್ ರಜನಿಕಾಂತ್ ಚಿಕ್ಕದೊಂದು ಬ್ರೇಕ್ನ ಬಳಿಕ ಮತ್ತೆ ಅಬ್ಬರಿಸಲು ರೆಡಿಯಾಗಿದ್ದಾರೆ. 'ಜೈಲರ್' ಸಿನಿಮಾ ಮೂಲಕ ತನ್ನ ಅಭಿಮಾನಿಗಳನ್ನು ರಂಜಿಸಲು ಬರುತ್ತಿದ್ದಾರೆ. ಸನ್ ಪಿಕ್ಚರ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಇಂದು (ಜುಲೈ 28) ಮ್ಯೂಸಿಕ್ ಲಾಂಚ್ ಪಾರ್ಟಿ ನಡೆಯಲಿದೆ. ಇದರಲ್ಲಿ ಸೂಪರ್ಸ್ಟಾರ್ ರಜನಿಕಾಂತ್ ಕೂಡ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾರೆ. ಈ ವೇಳೆ 'ಜೈಲರ್' ಸಿನಿಮಾ ಬಗ್ಗೆ ಇಂಟ್ರೆಸ್ಟಿಂಗ್ ವಿಷಯಗಳನ್ನು ಸೂಪರ್ಸ್ಟಾರ್ ಹೊರಹಾಕುವ ಸಾಧ್ಯಯಿದೆ. ಆದರೆ, ಇದೇ ವೇಳೆ ಬಾದ್ಷಾ ಶೂಟಿಂಗ್ ವೇಳೆ ನಡೆದ ಘಟನೆಯೊಂದು ರಿವೀಲ್ ಆಗಿದೆ.

ರಜನಿ ಪಾದ ಮುಟ್ಟಿದ ಕಮಲ್ ಅಭಿಮಾನಿ
'ಬಾದ್ಷಾ' ಸಿನಿಮಾದ ಚಿತ್ರೀಕರಣದ ವೇಳೆ ನಡೆದ ಘಟನೆಯೊಂದನ್ನು ಸಂಗೀತ ನಿರ್ದೇಶಕ ದೇವಾ ರಿವೀಲ್ ಮಾಡಿದ್ದಾರೆ. ಇದು ರಜನಿಕಾಂತ್ ಹಾಗೂ ಕಮಲ್ ಹಾಸನ್ ಅಭಿಮಾನಿ ಮಧ್ಯೆ ನಡೆದ ಘಟನೆ. ಕಮಲ್ ಹಾಸನ್ ಅಭಿಮಾನಿಯೊಬ್ಬ ಸೂಪರ್ಸ್ಟಾರ್ ರಜನಿಕಾಂತ್ ಕಾಲು ಮುಟ್ಟಿ ನಮಸ್ಕರಿಸಿದ್ದ ಘಟನೆಯದು. ಹಿರಿಯ ಸಂಗೀತ ನಿರ್ದೇಶಕ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಕಮಲ್ ಫ್ಯಾನ್ ರಜನಿಗೆ ಬಿದ್ದ ಘಟನೆಯನ್ನು ವಿವರಿಸಿದ್ದಾರೆ.
'ಬಾದ್ಷಾ' ವೇಳೆ ನಡೆದ ಘಟನೆಯೇನು?
'ಬಾದ್ಷಾ' ಸಿನಿಮಾ ದೇವಾ ಸಂಗೀತ ಸಂಯೋಜನೆ ಮಾಡುತ್ತಿದ್ದರು. ಈ ವೇಳೆ ರಜನಿಕಾಂತ್ 'ಬಾದ್ಷಾ' ಚಿತ್ರದ ಹಾಡಿನ ಚಿತ್ರೀಕರಣದ ವೇಳೆ ಸ್ಟುಡಿಯೋಗೆ ಹೋಗಿದ್ದರು. ಆ ವೇಳೆ ಆಟೋ ಡ್ರೈವರ್ ಒಬ್ಬ ರಜನಿಕಾಂತ್ಗಾಗಿ ಬೆಳಗ್ಗೆಯಿಂದ ಸ್ಟುಡಿಯೋ ಬಳಿ ಕಾಯುತ್ತಿದ್ದ. ರಜನಿಕಾಂತ್ ಹಿಂತಿರುಗುವಾಗ ಅವರನ್ನು ಭೇಟಿಯಾಗಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ. ಆದರೆ, ಆತ ರಜನಿ ಅಭಿಮಾನಿಯಾಗಿರಲಿಲ್ಲ. ಕಮಲ್ ಹಾಸನ್ ಅಭಿಮಾನಿಯಾಗಿದ್ದ.
ಕಮಲ್ ಫ್ಯಾನ್ ಬಗ್ಗೆ ರಜನಿ ಹೇಳಿದ್ದೇನು?
ಈ ದೃಶ್ಯವನ್ನು ಕಣ್ಣಾರೆ ಕಂಡಿದ್ದ ಸಂಗೀತ ನಿರ್ದೇಶಕ ದೇವ, ರಜನಿಯನ್ನು ಕರೆದು " ಯಾರದು ಆಟೋ ಡ್ರೈವರ್.. ನಿಮ್ಮ ಅಭಿಮಾನಿಯೇ" ಎಂದು ಕೇಳಿದ್ದರು. ಆಗ ರಜನಿ "ಇಲ್ಲ ಕಮಲ್ ಹಾಸನ್ ಅವರ ಅಭಿಮಾನಿ" ಎಂದಿದ್ದರು. ವಿಷಯ ಏನಂದ್ರೆ, ರಜನಿ ಅವಕಾಶ ಹುಡುಕಿಕೊಂಡು ಅಂದಿನ ಮದ್ರಾಸ್ಗೆ ಬಂದಾಗ, ಪಕ್ಕದ ರೂಮ್ನಲ್ಲಿ ಆಟೋ ಡ್ರೈವರ್ ಇದ್ದ. ಆಗಲೇ ಕಮಲ್ ಹಾಸನ್ ರಜನಿಗಿಂತ ದೊಡ್ಡ ಸ್ಟಾರ್ ಆಗಿದ್ದರು. ಹೀಗಾಗಿ ಆತನೂ ಕಮಲ್ಗೆ ದೊಡ್ಡ ಫ್ಯಾನ್ ಆಗಿದ್ದ. ಆದರೆ ಬಾಡಿಗೆ ಪಡೆದ ಆಟೋ ಓಡಿಸುತ್ತಾ ಬದುಕಲು ಪರದಾಡುತ್ತಿದ್ದ. ಆಗ 'ಮುಳ್ಳುಂ ಮಲರುಂ' ಸಿನಿಮಾ ಸಿಕ್ಕಾಗ ಅದರಿಂದ ಬಂದ ಹಣದಿಂದ ಅವರಿಗೆ ರಜನಿ ಕಾರು ಕೊಡಿಸಿದ್ದರು. ಅಂದಿನಿಂದ ಆಟೋ ಡ್ರೈವರ್ ರಜನಿ ಆಶೀರ್ವಾದ ಪಡೆಯುತ್ತಾರೆ.


Click it and Unblock the Notifications










