Don't Miss!
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- News ಉಚಿತ ಉಪಹಾರದಿಂದ ಉಚಿತ ದಂತ ತಪಾಸಣೆವರೆಗೆ; ಮತದಾನ ಮಾಡಿದವರಿಗೆ ಭರ್ಜರಿ ಆಫರ್ ಕೊಟ್ಟ ಮೈಸೂರು ವ್ಯಾಪಾರಸ್ಥರು
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡ ಶಾಲೆಗಳ ನೆರವಿಗೆ 'ಎರಡನೇ ಸಲ' ಚಿತ್ರತಂಡ
ಬೆಳ್ಳಿತೆರೆಯ ಸ್ಪೆಷಲ್ ಸ್ಟಾರ್ ಧನಂಜಯ್ ಅಭಿನಯದ 'ಎರಡನೇ ಸಲ' ನಾಳೆ(ಮಾರ್ಚ್ 3) ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ತಾಯಿ-ಮಗನ ಬಾಂಧವ್ಯದ ಈ ಸಿನಿಮಾ ನೋಡಲು ಬಹುಮುಖ್ಯ ಕಾರಣವೊಂದಿದೆ.['ಎರಡನೇ ಸಲ' ಟ್ರೈಲರ್ ನೋಡಿದ್ರೆ, ಇನ್ಮುಂದೆ 'ಕಾಫಿ'ನೇ ಕುಡಿಯಲ್ಲಾ!]
ಒಂದು ಕಡೆ 'ಡೈರೆಕ್ಟರ್ ಸ್ಪೆಷಲ್', 'ಮಠ', 'ಎದ್ದೇಳು ಮಂಜುನಾಥ' ಅಂತಹ ಡಿಫರೆಂಟ್ ಸಿನಿಮಾ ಗಳಿಗೆ ಆಕ್ಷನ್ ಕಟ್ ಹೇಳಿರುವ ಗುರುಪ್ರಸಾದ್ ನಿರ್ದೇಶನದ ಚಿತ್ರ ಎಂಬ ಕಾರಣಕ್ಕೆ ಸಿನಿಮಾ ನೋಡಬೇಕು ಎಂದುಕೊಂಡರೆ, ಇನ್ನೊಂದು ಕಡೆ ಸಂಭಾಷಣೆ, ಸಖತ್ ಕಾಮಿಡಿ, ಡಬಲ್ ಮೀನಿಂಗ್ ಡೈಲಾಗ್ ಗಳು ಇರುತ್ತವೆ ಎಂಬುದರಿಂದ 'ಎರಡನೇ ಸಲ' ಚಿತ್ರ ನೋಡಬಕು ಎಂದು ನೀವೆಲ್ಲಾ ಪ್ಲಾನ್ ಮಾಡಿರುತ್ತೀರಿ. ಆದರೆ ಇವೆರಡು ಕಾರಣಗಳಿಗಿಂತ ಇಂಪಾರ್ಟೆಂಟ್ ರೀಸನ್ ಒಂದಿದೆ.
ಅದೇನಂದ್ರೆ 'ಎರಡನೇ ಸಲ' ಸಿನಿಮಾದ ಆದಾಯವನ್ನು ರಾಜ್ಯದ 25 ಕನ್ನಡ ಶಾಲೆಗಳ ಅಭಿವೃದ್ದಿಗೆ ವಿನಿಯೋಗಿಸಲಾಗುತ್ತದೆಯಂತೆ. ಕಿರಿಕ್ ಕೀರ್ತಿ ಜತೆ ಕೈ ಜೋಡಿಸಿ 'ಎರಡನೇ ಸಲ' ಚಿತ್ರತಂಡ ಕನ್ನಡ ಶಾಲೆಗಳ ಡೆವಲಪ್ ಮೆಂಟ್ ಮಾಡುವ ಮಹತ್ತರ ನಿರ್ಧಾರವನ್ನು ಕೈಗೊಂಡಿಯಂತೆ. ಈ ಮಾಹಿತಿ ಇರುವ ಪೋಸ್ಟರ್ 'ಎರಡನೇ ಸಲ' ಚಿತ್ರದ ಅಫೀಶಿಯಲ್ ಟ್ವಿಟರ್ ಪೇಜ್ ನಲ್ಲಿ ಅಪ್ ಲೋಡ್ ಆಗಿದೆ.[ಈ ವಾರ ಹಾಟ್ & ಸ್ವೀಟ್ ಆಗಿರುವ 3 ಸಿನಿಮಾಗಳು ಬಿಡುಗಡೆ]
ಸಕ್ಸಸ್ ಆದ ಸಿನಿಮಾ ತಂಡದವರೆಲ್ಲಾ ಈ ರೀತಿ ತಮ್ಮ ಲಾಭದಲ್ಲಿ ಕನ್ನಡ ಶಾಲೆಗಳಿಗೆ, ಬಡವರ ಮಕ್ಕಳಿಗೆ ಸಹಾಯ ಮಾಡಲಿ, ಕನ್ನಡ ಚಿತ್ರರಂಗ ಇನ್ನೂ ದೊಡ್ಡ ಮಟ್ಟದಲ್ಲಿ ಬೆಳೆಯಲಿ ಹಾಗೂ ಇತರೆ ಚಿತ್ರರಂಗಗಳಿಗೆ ಮಾದರಿ ಆಗಲಿ.