X
ಹೋಮ್ ಚಲನಚಿತ್ರಗಳ ಒಳನೋಟ

Vinay Gowda: ಬಿಗ್‌ಬಾಸ್‌ ಸ್ಪರ್ಧಿ ವಿನಯ್ ಗೌಡ ನಟನೆಯ ಟಾಪ್ ಧಾರಾವಾಹಿಗಳ ಪಟ್ಟಿ!

Author Sowmya Bairappa | Updated: Friday, January 26, 2024, 11:57 AM [IST]

ಕನ್ನಡ ಕಿರುತೆರೆಯಲ್ಲಿ 'ಶಿವ' ಅಂತಲೇ ಖ್ಯಾತಿ ಪಡೆದಿದ್ದ ವಿನಯ್ ಗೌಡ, ಸದ್ಯ ಬಿಗ್‌ಬಾಸ್‌ ಸೀಸನ್ ೧೦ರ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ. ದೊಡ್ಮನೆಯಲ್ಲಿ ಅಗ್ರೆಸ್ಸಿವ್ ಆಟದಿಂದ ಆನೆ ಅಂತಲೂ ಕರೆಸಿಕೊಂಡಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು ಧಾರವಾಹಿಯಲ್ಲೂ ವಿನಯ್ ಬಣ್ಣ ಹಚ್ಚಿದ್ದಾರೆ. ಇಲ್ಲಿ ವಿನಯ್ ಅಭಿನಯದ ಧಾರವಾಹಿಗಳ ಪಟ್ಟಿಯನ್ನು ನೀಡಲಾಗಿದೆ.


cover image
ಚಿಟ್ಟೆ ಹೆಜ್ಜೆ

ವಿನಯ್ ಗೌಡ ಅಭಿನಯದ ಮೊದಲ ಧಾರವಾಹಿ 'ಚಿಟ್ಟೆ ಹೆಜ್ಜೆ'. 2010ರಲ್ಲಿ ಪ್ರಸಾರವಾಗಿದ್ದ ಈ ಧಾರಾವಾಹಿಯಲ್ಲಿ ಈಟಿವಿ ಕನ್ನಡದಲ್ಲಿ ಪ್ರಸಾರವಾಗಿತ್ತು. ಖ್ಯಾತ ಪತ್ರಕರ್ತ, ಲೇಖಕ ಗಿರೀಶ್ ರಾವ್ (ಜೋಗಿ) ಅವರ ಕಾದಂಬರಿ 'ಚಿಟ್ಟೆ ಹೆಜ್ಜೆ ದಾರಿ' ಆಧಾರವಾಗಿಟ್ಟುಕೊಂಡು   ವಿನು ಬಳಂಜ ಈ ಧಾರಾವಾಹಿ ಮಾಡಿದ್ದರು. ವಿಶೇಷವೆಂದರೆ ಈ ಸೀರಿಯಲ್‌ನಲ್ಲಿ ಅನಂತ್ ನಾಗ್ ಪರಿಸರವಾದಿಯಾಗಿ ಅಭಿನಯಿಸಿದ್ದರು.  

 

ಸಿಐಡಿ ಕರ್ನಾಟಕ

ನಂತರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಸಿಐಡಿ ಕರ್ನಾಟಕ'ದಲ್ಲಿ ಅಭಿನಯಿಸಿದರು. ಶನಿವಾರ ಹಾಗೂ ಭಾನುವಾರ ರಾತ್ರಿ 10 ಗಂಟೆಗೆ ಪ್ರಸಾರವಾಗುತ್ತಿದ್ದ 'ಸಿಐಡಿ ಕರ್ನಾಟಕ' ಕನ್ನಡದ ಮೊದಲ ತನಿಖಾ ಧಾರಾವಾಹಿಯಾಗಿತ್ತು. ಈ ಸೀರಿಯಲ್‌ನಲ್ಲಿ ವಿನಯ್ ಸಿಐಡಿ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು.   

ಅಂಬಾರಿ

ಇದಾದ ಬಳಿಕ 2014ರಲ್ಲಿ ರಂಜಿತ್ ರಾವ್ ನಿರ್ದೇಶನದ 'ಅಂಬಾರಿ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿದರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದ್ದ ಈ ಧಾರಾವಾಹಿಯಲ್ಲಿ ದಿವ್ಯಾ ಉರುಡುಗ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ವಿನಯ್ ಈ ಧಾರಾವಾಹಿಯಲ್ಲಿ 'ಪ್ರತಾಪ್ ಸೂರ್ಯವಂಶಿ' ಎಂಬ ಪಾತ್ರವನ್ನು ನಿರ್ವಹಿಸಿದ್ದರು. 

 

ಶುಭ ವಿವಾಹ

ವಿನಯ್ ಗೌಡ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಶುಭ ವಿವಾಹ' ಧಾರಾವಾಹಿಯಲ್ಲೂ ನಟಿಸಿದ್ದಾರೆ. ಆರೂರು ಜಗದೀಶ್ ನಿರ್ದೇಶನದ ಈ ಸೀರಿಯಲ್‌ನಲ್ಲಿ ಕಾವ್ಯಗೌಡ, ಕಾವ್ಯಾಶಾಸ್ತ್ರಿ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದರು.  

 

ನಂದಿನಿ

ಕನ್ನಡ ಕಿರುತೆರೆಯಲ್ಲಿ ಅದ್ಭುತ ಹೆಸರು ಮಾಡಿದ 'ನಂದಿನಿ' ಧಾರಾವಾಹಿಯಲ್ಲಿ ನಾಯಕ 'ವಿರಾಟ್' ಪಾತ್ರವನ್ನು ನಿರ್ವಹಿಸಿದ್ದರು. ಪ್ರೀತಿ ಇಂದ ಬಂದರೆ ಪ್ರಾಣ ಬೇಕಾದರೂ ಕೊಡುವ, ಕೆಣಕಿದರೆ ಕೆಂಡಾಮಂಡಲ ಆಗಿಬಿಡುವ ಪಾತ್ರ ಈ ವಿರಟ್‌ನದ್ದು. ಉದಯ ವಾಹಿನಿಯಲ್ಲಿ ಪ್ರಸಾರವಾಗಿದ್ದ ಈ ಧಾರಾವಾಹಿಗೆ ಲಕ್ಷಾಂತರ ಅಭಿಮಾನಿಗಳಿದ್ದರು.  

ಜೈ ಹನುಮಾನ್

ಖ್ಯಾತ ನಿರ್ದೇಶಕ ಬುಕ್ಕಾಪಟ್ಟಣ ವಾಸು ನಿರ್ದೇಶನದ 'ಜೈ ಹನುಮಾನ್' ಧಾರಾವಾಹಿಯಲ್ಲಿ ವಿನಯ್‌ ಗೌಡ ರಾವಣನ ಪಾತ್ರ ಮಾಡಿದ್ದರು. ರಾವಣನ ಪಾತ್ರಕ್ಕೆ ಮೈ ಬೆಳೆಸಿಕೊಂಡು 120 ಕೆ.ಜಿ ತೂಕವಿದ್ದ ಇವರು, ಈಗ ಈ ಪಾತ್ರಕ್ಕೆ ಸರಿಯಾಗಿ 20 ಕೆ.ಜಿ. ಇಳಿಸಿಕೊಂಡಿದ್ದರು. 

ಹರಹರ ಮಹಾದೇವ

ಹರಹರ ಮಹಾದೇವ ಧಾರವಾಹಿಯಲ್ಲಿ ವಿನಯ್ ಗೌಡ ಅವರುವ 'ಶಿವನ' ಪಾತ್ರ ಮಾಡುವ ಮೂಲಕ ಕರ್ನಾಟಕದಾದ್ಯಂತ ಜನಪ್ರಿಯರಾದರು. ಜೊತೆಗೆ ಕನ್ನಡ ಕಿರುತೆರೆಯಲ್ಲಿ 'ಶಿವ' ಅಂತಲೇ ಖ್ಯಾತಿ ಪಡೆದರು. ಸಂಗೀತಾ ಶೃಂಗೇರಿ ಅವರು ಈ ಧಾರಾವಾಹಿಯಲ್ಲಿ ಸತಿಯ ಪಾತ್ರ ನಿರ್ವಹಿಸಿದ್ದರು. 

 

ಬಯಸದೆ ಬಳಿ ಬಂದೆ

'ಬಯಸದೆ ಬಳಿ ಬಂದೆ' ಧಾರಾವಾಹಿಯಲ್ಲಿ ವಿನಯ್ ಗೌಡ ಅವರು ಸಿನಿಮಾ ನಿರ್ಮಾಪಕ 'ಜೀವ' ಎಂಬ ಪಾತ್ರ ಮಾಡಿದ್ದರು. ಮಿಲನಾ ಸೀರಿಯಲ್ ಖ್ಯಾತಿಯ ರಕ್ಷಾ ಹೊಳ್ಳ ನಾಯಕಿಯಾಗಿ ಕಾಣಿಸಿಕೊಂಡಿದ್ದರು. 2019ರಲ್ಲಿ ಆರಂಭಗೊಂಡಿದ್ದ ಈ ಧಾರಾವಾಹಿ,  ಲಾಕ್‌ಡೌನ್‌ನಲ್ಲಿ ಟಿಆರ್‌ಪಿ ಕಡಿಮೆ ಇರೋದಿಕ್ಕೆ ಈ ಸೀರಿಯಲ್ ಅಂತ್ಯವಾಗಿತ್ತು. 

ಯಡಿಯೂರು ಸಿದ್ದಲಿಂಗೇಶ್ವರ

ಯಡಿಯೂರು ಸಿದ್ದಲಿಂಗೇಶ್ವರ ಧಾರಾವಾಹಿಯಲ್ಲೂ ಕೂಡ ವಿನಯ್ 'ಶಿವನ' ಪಾತ್ರ ಮಾಡಿದ್ದರು. ನವೀನ್ ಕೃಷ್ಣ ನಿರ್ದೇಶನದ ಈ ಧಾರಾವಾಹಿಯಲ್ಲಿ ಹದಿನಾರನೇ ಶತಮಾನದ ಮಹಾ ಶರಣ ಯಡಿಯೂರು ಶ್ರೀ ಸಿದ್ದಲಿಂಗೇಶ್ವರರ ಬದುಕು ಹಾಗೂ ಆಧ್ಯಾತ್ಮ ಸೇರಿದಂತೆ ಅವರ ಜೀವನದ ಸಂಪೂರ್ಣ ಮಾಹಿತಿ ಅನಾವರಣಗೊಂಡಿತ್ತು.

ನಮ್ಮ ಲಚ್ಚಿ

ಬಿಗ್‌ಬಾಸ್‌ ಕನ್ನಡ ಸೀಸನ್ 10ರಲ್ಲಿ ಭಾಗವಹಿಸುವುದಕ್ಕೂ ಮುನ್ನ ವಿನಯ್ ಗೌಡ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಮ್ಮ ಲಚ್ಚಿ' ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದರು. ಈ ಧಾರಾವಾಹಿಯಲ್ಲಿ ರ್ಯಾಪರ್ ಬದ್ರಿನಾಥ್ ಚಿನ್ನಿ ಎಂಬ ನೆಗೆಟಿವ್ ಪಾತ್ರ ಮಾಡುತ್ತಿದ್ದರು. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+